ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆ ಸೇರಿದಂತೆ 4 ಮಸೂದೆಗೆ ಲೋಕಸಭೆ ಅಂಗೀಕಾರ

ಈ ಮೂರು ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ-1860, ಕ್ರಿಮಿನಲ್ ಪ್ರೊಸೀಜರ್ ಆಕ್ಟ್-1898 ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಬದಲಿಸುತ್ತವೆ. ಸಮಾಲೋಚನೆಯ ನಂತರ ಮಸೂದೆಗಳನ್ನು ರೂಪಿಸಲಾಗಿದೆ ಎಂದು ಶಾ ಹೇಳಿದ್ದಾರೆ. ಲೋಕಸಭೆಯಲ್ಲಿ ಮಂಡನೆಯಾಗುವ ಮೊದಲು ಇದನ್ನು ಕೂಲಂಕಷವಾಗಿ ಪರಿಶೀಲಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆ ಸೇರಿದಂತೆ 4 ಮಸೂದೆಗೆ ಲೋಕಸಭೆ ಅಂಗೀಕಾರ
ಲೋಕಸಭೆಯಲ್ಲಿ ಅಮಿತ್ ಶಾ
Follow us
|

Updated on: Dec 20, 2023 | 8:38 PM

ದೆಹಲಿ ಡಿಸೆಂಬರ್ 20 : ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು (Criminal Laws) ಬದಲಿಸುವ ಮೂರು ಮಸೂದೆಗಳನ್ನು ಲೋಕಸಭೆ (Lok sabha) ಬುಧವಾರ ಧ್ವನಿ ಮತದ ಮೂಲಕ ಅಂಗೀಕರಿಸಿದೆ. ಮೂರು ಮಸೂದೆಗಳನ್ನು ಗೃಹ ಸಚಿವ ಅಮಿತ್ ಶಾ (Amit Shah) ಅವರು ಕಳೆದ ವಾರ ಮಂಡನೆ ಮಾಡಿದ್ದರು. ಪುನರ್ ರಚಿಸಲಾದ ಮಸೂದೆಗಳೆಂದರೆ ಭಾರತೀಯ ನ್ಯಾಯ (ಎರಡನೇ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ (ಎರಡನೇ) ಮಸೂದೆ. ಲೋಕಸಭೆಯು ದೂರಸಂಪರ್ಕ ಮಸೂದೆ, 2023 ಅನ್ನು ಧ್ವನಿ ಮತದೊಂದಿಗೆ ಅಂಗೀಕರಿಸಿತು.

ಕಳೆದ ವಾರದಿಂದ ಅನುಚಿತ ವರ್ತನೆ ಮತ್ತು ಅಶಿಸ್ತಿನ ವರ್ತನೆಯಿಂದ ಅಮಾನತುಗೊಂಡಿದ್ದ 97 ಪ್ರತಿಪಕ್ಷಗಳ ಸಂಸದರ ಅನುಪಸ್ಥಿತಿಯಲ್ಲಿ ಕಲಾಪಗಳು ನಡೆದಿದೆ.

ಈ ಮೂರು ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ-1860, ಕ್ರಿಮಿನಲ್ ಪ್ರೊಸೀಜರ್ ಆಕ್ಟ್-1898 ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಬದಲಿಸುತ್ತವೆ. ಸಮಾಲೋಚನೆಯ ನಂತರ ಮಸೂದೆಗಳನ್ನು ರೂಪಿಸಲಾಗಿದೆ ಎಂದು ಶಾ ಹೇಳಿದ್ದಾರೆ. ಲೋಕಸಭೆಯಲ್ಲಿ ಮಂಡನೆಯಾಗುವ ಮೊದಲು ಇದನ್ನು ಕೂಲಂಕಷವಾಗಿ ಪರಿಶೀಲಿಸಿರುವುದಾಗಿ ಅವರು ಹೇಳಿದ್ದಾರೆ.

ಮೂರು ಮಸೂದೆಗಳು ಭಾರತೀಯ ಚಿಂತನೆಯ ಆಧಾರದ ಮೇಲೆ ನ್ಯಾಯ ವ್ಯವಸ್ಥೆಯನ್ನು ಸ್ಥಾಪಿಸುತ್ತವೆ ಎಂದು ಅವರು ಹೇಳಿದರು. ಅಸ್ತಿತ್ವದಲ್ಲಿರುವ ಕಾನೂನುಗಳು ಅಪರಾಧಕ್ಕೆ ಶಿಕ್ಷೆ ವಿಧಿಸುವ ಆದರೆ ನ್ಯಾಯವನ್ನು ನೀಡದ ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು. ಮೂರು ಪ್ರಸ್ತಾವಿತ ಕ್ರಿಮಿನಲ್ ಕಾನೂನುಗಳು ಜನರನ್ನು ವಸಾಹತುಶಾಹಿ ಮನಸ್ಥಿತಿಯಿಂದ ಮತ್ತು ಅದರ ಸಂಕೇತಗಳಿಂದ ಮುಕ್ತಗೊಳಿಸುತ್ತವೆ ಎಂದು ಶಾ ಹೇಳಿದರು.

ಮಸೂದೆಗಳು ತಂದ ಬದಲಾವಣೆಗಳ ಬಗ್ಗೆ ವಿವರಿಸಿದ ಶಾ, ಗೈರುಹಾಜರಿಯಲ್ಲಿ ವಿಚಾರಣೆಗೆ ನಿಬಂಧನೆಯನ್ನು ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಪರಿಚಯಿಸಲಾಗಿದೆ ಎಂದು ಹೇಳಿದರು.

“ಅಬ್ಸೆಂಟಿಯಾದಲ್ಲಿ ವಿಚಾರಣೆಗೆ ನಿಬಂಧನೆಯನ್ನು ಪರಿಚಯಿಸಲಾಗಿದೆ. ಮುಂಬೈ ಬಾಂಬ್ ಸ್ಫೋಟ ಅಥವಾ ಇನ್ನಾವುದೇ ಆಗಿರಲಿ ದೇಶದಲ್ಲಿನ ಅನೇಕ ಪ್ರಕರಣಗಳು ನಮ್ಮನ್ನು ಬೆಚ್ಚಿಬೀಳಿಸಿದೆ. ಆ ಜನರು ಬೇರೆ ದೇಶಗಳಲ್ಲಿ ಅಡಗಿಕೊಂಡಿದ್ದಾರೆ ಮತ್ತು ವಿಚಾರಣೆಗಳು ನಡೆಯುತ್ತಿಲ್ಲ. ಅವರು ಬರುವ ಅಗತ್ಯವಿಲ್ಲ. ಇಲ್ಲಿ ಈಗ ಅವರು 90 ದಿನಗಳೊಳಗೆ ನ್ಯಾಯಾಲಯದ ಮುಂದೆ ಹಾಜರಾಗದಿದ್ದರೆ ಅವರ ಅನುಪಸ್ಥಿತಿಯಲ್ಲಿ ವಿಚಾರಣೆ ಮುಂದುವರಿಯುತ್ತದೆ. ಅವರ ಪ್ರಾಸಿಕ್ಯೂಷನ್‌ಗಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸಲಾಗುತ್ತದೆ ಅವರನ್ನು ಗಲ್ಲಿಗೇರಿಸಲಾಗುತ್ತದೆ. ಇದು ಅವರನ್ನು ಬೇಗನೆ ವಾಪಸ್ ತರುವಂತೆ ಮಾಡುತ್ತದೆ. ಅವರು ವಿಚಾರಣೆಗೆ ಒಳಗಾದಾಗ ಅವರು ಶೀಘ್ರವಾಗಿ ಹಿಂತಿರುಗುತ್ತಾರೆ ಎಂದು ಹೇಳಿದ್ದಾರೆ.

ಮಸೂದೆ ಕಾನೂನಾಗಿ ರೂಪುಗೊಂಡ ನಂತರ 120 ದಿನಗಳಲ್ಲಿ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಹೇಳಿದರು. “ಆರೋಪಿಗಳಿಗೆ ಈಗ ಖುಲಾಸೆಗಾಗಿ ಮನವಿ ಸಲ್ಲಿಸಲು ಏಳು ದಿನಗಳ ಕಾಲಾವಕಾಶವಿದೆ.ನ್ಯಾಯಾಧೀಶರು ಆ ಏಳು ದಿನಗಳಲ್ಲಿ ವಿಚಾರಣೆಯನ್ನು ನಡೆಸಬೇಕು ಮತ್ತು ಗರಿಷ್ಠ 120 ದಿನಗಳಲ್ಲಿ ಪ್ರಕರಣವು ವಿಚಾರಣೆಗೆ ಬರಲಿದೆ. ಈ ಮೊದಲು ಮನವಿ ಚೌಕಾಸಿಗೆ ಸಮಯ ಮಿತಿ ಇರಲಿಲ್ಲ. ಈಗ ಅಪರಾಧ ನಡೆದ 30 ದಿನಗಳೊಳಗೆ ಒಬ್ಬರು ತಮ್ಮ ಅಪರಾಧವನ್ನು ಒಪ್ಪಿಕೊಂಡರೆ ಶಿಕ್ಷೆಯು ಕಡಿಮೆ ಇರುತ್ತದೆ.

ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಗುಂಪು ಹತ್ಯೆಯ ಅಪರಾಧಕ್ಕೆ ಮರಣದಂಡನೆ: ಅಮಿತ್ ಶಾ

ವಿಚಾರಣೆಯ ಸಮಯದಲ್ಲಿ ದಾಖಲೆಗಳನ್ನು ಪ್ರಸ್ತುತಪಡಿಸಲು ಯಾವುದೇ ಅವಕಾಶವಿರಲಿಲ್ಲ. 30 ದಿನಗಳೊಳಗೆ ಎಲ್ಲಾ ದಾಖಲೆಗಳನ್ನು ಹಾಜರುಪಡಿಸುವುದನ್ನು ನಾವು ಕಡ್ಡಾಯಗೊಳಿಸಿದ್ದೇವೆ. ಇದರಲ್ಲಿ ಯಾವುದೇ ವಿಳಂಬ ಮಾಡಲಾಗುವುದಿಲ್ಲ ಎಂದು ಶಾ ಹೇಳಿದರು. “ಬಡವರಿಗೆ, ನ್ಯಾಯ ಪಡೆಯುವ ದೊಡ್ಡ ಸವಾಲೆಂದರೆ ಆರ್ಥಿಕ ಸವಾಲು… ವರ್ಷಗಳಿಂದ ‘ತಾರೀಖ್ ಪೇ ತಾರೀಖ್’ ಮುಂದುವರಿಯುತ್ತದೆ. ಪೊಲೀಸರು ನ್ಯಾಯಾಂಗ ವ್ಯವಸ್ಥೆಯನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಸರ್ಕಾರವು ಪೊಲೀಸ್ ಮತ್ತು ನ್ಯಾಯಾಂಗವನ್ನು ಹೊಣೆ ಮಾಡುತ್ತದೆ. ಪೊಲೀಸರು ಮತ್ತು ನ್ಯಾಯಾಂಗವು ವಿಳಂಬಕ್ಕೆ ಸರ್ಕಾರವನ್ನು ಹೊಣೆ ಮಾಡುತ್ತದೆ. ಈಗ, ನಾವು ಹೊಸ ಕಾನೂನುಗಳಲ್ಲಿ ಅನೇಕ ವಿಷಯಗಳನ್ನು ಸ್ಪಷ್ಟಪಡಿಸಿದ್ದೇವೆ, ”ಎಂದು ಅವರು ಹೇಳಿದರು.

ಸಿಆರ್‌ಪಿಸಿಯಲ್ಲಿ 484 ವಿಭಾಗಗಳಿವೆ. ಈ ಮಸೂದೆಗಳೊಂದಿಗೆ, ಈಗ 531 ಇರುತ್ತದೆ. “177 ವಿಭಾಗಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು 9 ಹೊಸ ವಿಭಾಗಗಳನ್ನು ಸೇರಿಸಲಾಗಿದೆ. 39 ಹೊಸ ಉಪವಿಭಾಗಗಳನ್ನು ಸೇರಿಸಲಾಗಿದೆ. 44 ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ