AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಶ್ರೀಕಾಕುಳಂನಲ್ಲಿ ನಡುರಾತ್ರಿ ಜ್ಯುವೆಲ್ಲರಿ ಶಾಪ್​​ ದರೋಡೆ.. ಅಸಲಿಗೆ ಅವರಿಗೆ ಪಿಸ್ತೂಲು ಎಲ್ಲಿಂದ ಬಂತು?

ದರೋಡೆ ಮಾಡಿದ ವ್ಯಕ್ತಿಗೆ ಪಿಸ್ತೂಲ್ ಎಲ್ಲಿಂದ ಬಂತು? ಪಿಸ್ತೂಲ್ ಹಿಡಿದುಕೊಂಡು ಬಂದು ಕಳ್ಳತನ ಮಾಡುತ್ತಿದ್ದಾರೆ ಎಂದರೆ ಅವರು ನಿಜಕ್ಕೂ ವೃತ್ತಿಪರ ದರೋಡೆಕೋರರು ಇರಬೇಕು ಎಂದು ಪೊಲೀಸರು ಈಗ ಆಲೋಚಿಸುತ್ತಿದ್ದಾರೆ. ಇದು ನಿಜಕ್ಕೂ ನಿಜವಾದ ಪಿಸ್ತೂಲೋ ಅಥವಾ ಯಾರನ್ನಾದರೂ ಹೆದರಿಸಲು ತಂದ ಡಮ್ಮಿ ಪಿಸ್ತೂಲಾ ಎಂಬುದರ ಬಗ್ಗೆಯೂ ತನಿಖೆ ನಡೆದಿದೆ.

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 21, 2024 | 10:17 AM

Share

ಅಪರಾಧಗಳ ವಿಷಯದಲ್ಲಿ ಶ್ರೀಕಾಕುಳಂ ಸ್ವಲ್ಪ ಶಾಂತಿಯುತ ಜಿಲ್ಲೆಯಾಗಿದೆ. ಆದರೆ ಶ್ರೀಕಾಕುಳಂ ಜಿಲ್ಲೆಯಲ್ಲಿಯೂ ಇತ್ತೀಚೆಗೆ ಅಂತಹ ಗಂಭೀರ ಅಪರಾಧಗಳು ಹೆಚ್ಚುತ್ತಿವೆ. ಜಿಲ್ಲೆಯ ಸರುಬುಜ್ಜಿಲಿ ಮಂಡಲ ಕೇಂದ್ರಕ್ಕೆ ಭಾನುವಾರ ಬೆಳಗಿನ ಜಾವ 2:30ರ ಸುಮಾರಿಗೆ ಕಳ್ಳರು ನುಗ್ಗಿದ್ದರು. ಬುಜ್ಜಿಲಿಯ ಶ್ರೀ ಲಕ್ಷ್ಮಿ ಜ್ಯುವೆಲ್ಲರಿ ಅಂಗಡಿಯಲ್ಲಿ ( jewellery shop in Srikakulam) ದರೋಡೆ ನಡೆದಿದೆ. ಮಧ್ಯರಾತ್ರಿ ಇಬ್ಬರು ಕಳ್ಳರು (Looters) ಅಂಗಡಿಗೆ ಹಿಂಬದಿಯಿಂದ ನುಗ್ಗಿ ಎಲ್ಲ ಆಭರಣಗಳನ್ನು ಕದ್ದೊಯ್ದಿದ್ದಾರೆ. ಅಂಗಡಿಯಲ್ಲಿ ಕೈಗೆ ಸಿಕ್ಕಿದ ಬೆಳ್ಳಿ ವಸ್ತುಗಳನ್ನೆಲ್ಲ ಚಿಕ್ಕ ಗೋಣಿ ಚೀಲದಲ್ಲಿ ತುರುಕಿಕೊಂಡು ಪರಾರಿಯಾಗುವುದು ಕಂಡು ಬಂದಿದೆ. ಆದರೆ, ಅಂಗಡಿಯಲ್ಲಿ ಭದ್ರತೆ ಇಲ್ಲದಿರುವುದನ್ನು ಮನಗಂಡ ಅಂಗಡಿ ಮಾಲೀಕರು, ಕೆಲ ದಿನಗಳಿಂದ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ರಾತ್ರಿಯಿಡೀ ಇಡುತ್ತಿಲ್ಲ. ಇದರಿಂದ ಬೆಳ್ಳಿ ಆಭರಣಗಳಷ್ಟೇ ಕದ್ದೊಯ್ದಿದ್ದು, ಕಳ್ಳರು ಅಷ್ಟಕ್ಕೇ ತೃಪ್ತಿಪಟ್ಟುಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಆಭರಣ ಮಳಿಗೆ ಮಾಲೀಕರು ಅಂಗಡಿಯಲ್ಲಿ ಕಳ್ಳತನವಾಗಿರುವುದನ್ನು ಅರಿತು ಪೊಲೀಸರಿಗೆ ದೂರು ನೀಡಿದ್ದರು. 35 ಕೆಜಿ ಬೆಳ್ಳಿ ಆಭರಣ ಕಳ್ಳತನವಾಗಿರುವುದನ್ನು ಅಂಗಡಿ ಮಾಲೀಕರು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪಿಸ್ತೂಲ್ ಸಮೇತ ಬಂದು ಕಳ್ಳತನ ಮಾಡಿದ್ದಾರೆ… ಚಿನ್ನದ ಅಂಗಡಿಯಲ್ಲಿ ಕಳ್ಳತನ ನಡೆಯುವುದು ಸಾಮಾನ್ಯವೇ ಎಂದು ಪೊಲೀಸರು ಪರಿಭಾವಿಸುತ್ತಾರೆ. ಆದರೆ ಸದರಿ ಕಳ್ಳತನ ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಅಂಗಡಿಯಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಅವರಿಗೆ ಆಶ್ಚರ್ಯವಾಗಿದೆ. ದರೋಡೆ ಮಾಡಲು ಬಂದಿದ್ದ ಇಬ್ಬರಲ್ಲಿ ಒಬ್ಬ ಪ್ಯಾಂಟ್​ ಹಿಂಬದಿ ಪಾಕೆಟ್​​ನಲ್ಲಿ ಪಿಸ್ತೂಲ್ ಸಿಕ್ಕಿಸಿಕೊಂಡಿರುವುದನ್ನು ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಮೂಲಕ ಪೊಲೀಸರು ಗುರುತಿಸಿದ್ದಾರೆ. ಕಳ್ಳತನದಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳು ಸ್ಕಲ್ ಕ್ಯಾಪ್ ಧರಿಸಿ ಯಾರ ಗಮನಕ್ಕೂ ಬರಬಾರದೆಂದು ಅಂಗಡಿಗೆ ನುಗ್ಗಿದ್ದಾರೆ. ಆದರೆ, ಒಬ್ಬ ದರೋಡೆಕೋರ ಪಿಸ್ತೂಲ್ ಹಿಡಿದಿರುವುದು ಕ್ಯಾಮರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಹೀಗಾಗಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ದರೋಡೆ ಮಾಡಿದ ವ್ಯಕ್ತಿಗೆ ಪಿಸ್ತೂಲ್ ಎಲ್ಲಿಂದ ಬಂತು? ಪಿಸ್ತೂಲ್ ಹಿಡಿದುಕೊಂಡು ಬಂದು ಕಳ್ಳತನ ಮಾಡುತ್ತಿದ್ದಾರೆ ಎಂದರೆ ಅವರು ನಿಜಕ್ಕೂ ವೃತ್ತಿಪರ ದರೋಡೆಕೋರರು ಇರಬೇಕು ಎಂದು ಪೊಲೀಸರು ಈಗ ಆಲೋಚಿಸುತ್ತಿದ್ದಾರೆ. ಇದು ನಿಜಕ್ಕೂ ನಿಜವಾದ ಪಿಸ್ತೂಲೋ ಅಥವಾ ಯಾರನ್ನಾದರೂ ಹೆದರಿಸಲು ತಂದ ಡಮ್ಮಿ ಪಿಸ್ತೂಲಾ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪಿಸ್ತೂಲ್ ಹಿಡಿದು ಓಡಾಡುತ್ತಿರುವ ಇಂತಹ ಕಳ್ಳರ ಬಗ್ಗೆ ಜನ ತೀವ್ರವಾಗಿ ಭಯಭೀತರಾಗಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಇಂತಹ ಬಂದೂಕು ಸಂಸ್ಕೃತಿ ಇರಲಿಲ್ಲ ಎಂಬುದು ಅವರ ಆತಂಕಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:14 am, Wed, 21 February 24

Follow Us
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ
LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ
ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ
ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಈ ಬಗ್ಗೆ ಗೃಹ ಸಚಿವ ಹೇಳಿದ್ದೇನು?
ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಈ ಬಗ್ಗೆ ಗೃಹ ಸಚಿವ ಹೇಳಿದ್ದೇನು?
ನೂತನ ಸಚಿವ ಕೆ.ಎಸ್. ಬಸವಂತಪ್ಪ ಅಭಯ
ನೂತನ ಸಚಿವ ಕೆ.ಎಸ್. ಬಸವಂತಪ್ಪ ಅಭಯ
‘ಟಾಕ್ಸಿಕ್’ ಟ್ರೈಲರ್​​ಗೆ ಕ್ಷಣಗಣನೆ, ಹೇಗಿದೆ ಸಿದ್ಧತೆ: ವಿಡಿಯೋ ನೋಡಿ
‘ಟಾಕ್ಸಿಕ್’ ಟ್ರೈಲರ್​​ಗೆ ಕ್ಷಣಗಣನೆ, ಹೇಗಿದೆ ಸಿದ್ಧತೆ: ವಿಡಿಯೋ ನೋಡಿ