AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ತಾರಸಿಯಲ್ಲಿ ನಿಂತು ಹಿಂದೂಗಳ ಮೆರವಣಿಗೆ ಮೇಲೆ ಉಗುಳಿದ್ದ ಮುಸ್ಲಿಂ ಯುವಕ ಮನೆಯನ್ನೇ ಕಳೆದುಕೊಂಡ

ಮನೆಯ ತಾರಸಿಯಲ್ಲಿ ನಿಂತು  ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ಎಂಜಿಲು ಉಗುಳಿದ್ದ ಮುಸ್ಲಿಂ ಯುವಕ ಈಗ ಮನೆಯನ್ನೂ ಕಳೆದುಕೊಂಡಿದ್ದಾನೆ. ಉಜ್ಜಿಯಿನಿಯಲ್ಲಿ ನಡೆಯುತ್ತಿದ್ದ ಹಿಂದೂ ಮೆರವಣಿಗೆಯ ಮೇಲೆ ಯುವಕ ಅದ್ನಾನ್ ಮನ್ಸೂರಿ ಉಗುಳಿದ್ದ.

ಮನೆಯ ತಾರಸಿಯಲ್ಲಿ ನಿಂತು ಹಿಂದೂಗಳ ಮೆರವಣಿಗೆ ಮೇಲೆ ಉಗುಳಿದ್ದ ಮುಸ್ಲಿಂ ಯುವಕ ಮನೆಯನ್ನೇ ಕಳೆದುಕೊಂಡ
Image Credit source: NDTV
ನಯನಾ ರಾಜೀವ್
|

Updated on: Jan 18, 2024 | 3:07 PM

Share

ಮನೆಯ ತಾರಸಿಯಲ್ಲಿ ನಿಂತು  ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ಎಂಜಿಲು ಉಗುಳಿದ್ದ ಮುಸ್ಲಿಂ ಯುವಕ ಈಗ ಮನೆಯನ್ನೂ ಕಳೆದುಕೊಂಡಿದ್ದಾನೆ. ಉಜ್ಜಿಯಿನಿಯಲ್ಲಿ ನಡೆಯುತ್ತಿದ್ದ ಹಿಂದೂ ಮೆರವಣಿಗೆಯ ಮೇಲೆ ಯುವಕ ಅದ್ನಾನ್ ಮನ್ಸೂರಿ ಉಗುಳಿದ್ದ.

ಆತನನ್ನು 151 ದಿನಗಳ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು, ಘಟನೆಯ ಬಳಿಕ ಅವರ ಮನೆಯನ್ನು ಅತಿಕ್ರಮಣ ಎಂದು ಉಲ್ಲೇಖಿಸಿ ಕೆಡವಲಾಗಿದ್ದು, ಕುಟುಂಬವು ಉಳಿದುಕೊಳ್ಳಲು ಬಾಡಿಗೆ ಮನೆಯನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಐದು ತಿಂಗಳ ಜೈಲು ವಾಸ ಅನುಭವಿಸಿರುವ ಯುವಕ ಜಾಮೀನಿನ ಮೇಲೆ ಹೊರಗಿದ್ದಾನೆ. ಆತನ ಸಹೋದರ ಸೇರಿದಂತೆ ಇತರೆ ಇಬ್ಬರು ಆರೋಪಿಗಳಿಗೆ ಈ ಮೊದಲೇ ಜಾಮೀನು ನೀಡಲಾಗಿತ್ತು.

ಜುಲೈ 17 ರಂದು ಅದ್ನಾನ್ ಹಾಗೂ ಅವರ ಇಬ್ಬರು ಸಹೋದರರು ತಾರಸಿ ಮೇಲಿದ್ದರು, ಭಗವಾನ್ ಮಹಾಕಾಲ್ ಅಂದರೆ ಶಿವ ಮೆರವಣಿಗೆಯು ಅವರ ಮನೆಯ ಮುಂದೆ ಸಾಗುತ್ತಿತ್ತು. ಆದರೆ ಮೂವರು ಮೆರವಣಿಗೆಯ ಮೇಲೆ ಎಂಜಿಲು ಉಗುಳಿದ್ದರು. ಬಳಿಕ ಮೂವರನ್ನು ವಶಕ್ಕೆ ಪಡೆಯಲಾಗಿತ್ತು.

ಮತ್ತಷ್ಟು ಓದಿ: ಸಹಸ್ರಾರು ಜನರ ಮಧ್ಯೆ ಹಿಂದೂ ಮಹಾಗಣಪತಿ ಶೋಭಾ ಯಾತ್ರೆ: ಡಿಜೆ ಸೌಂಡಿಗೆ ಮೈಮರೆತು ಹೆಜ್ಜೆ ಹಾಕಿದ ಯುವಸಮೂಹ

ಇದೀಗ ಅವರ ಮನೆಯನ್ನು ಕೆಡವಲಾಗಿದೆ, ಸ್ಥಳೀಯ ಆಡಳಿತ ಅತಿಕ್ರಮಣ ಮಾಡಿದೆ ಎಂದು ಹೇಳಿದೆ. ಬುಲ್ಡೋಜರ್ ತೆರಳಿ ಮನೆಯನ್ನು ಕೆಡವಿತ್ತು, ಬಳಿಕ ಧ್ವನಿ ವರ್ಧಕಗಳು ಮೊಳಗಿದವು, ಡೋಲುಗಳನ್ನು ಬಾರಿಸಲಾಯಿತು, ಈ ಕುರಿತು ಬಿಜೆಪಿ ವಕ್ತಾರ ಆಶಿಶ್ ಅಗರ್ವಾಲ್ ಮಾತನಾಡಿ, ಶಿವನನ್ನು ಅವಮಾನಿಸುವವರು ಶಿವತಾಂಡವವನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.

ಸೋಮವಾರ, ಇಂದೋರ್‌ನ ಮಧ್ಯಪ್ರದೇಶ ಹೈಕೋರ್ಟ್‌ನ ಏಕಸದಸ್ಯ ಪೀಠವು ಅದ್ನಾನ್‌ಗೆ ಜಾಮೀನು ನೀಡಿತು. ಅದ್ನಾನ್ ತಂದೆ ಮಾತನಾಡಿ, ಮಕ್ಕಳು ಹಿಂದಿರುಗಿರುವುದಕ್ಕೆ ಸಂತೋಷವಿದೆ, ನನಗೆ ಯಾರಿಂದಲೂ ಏನೂ ಬೇಡ, ಮಕ್ಕಳನ್ನು ದೋಷಮುಕ್ತಗೊಳಿಸಬೇಕು, ಏನಾಗಿದೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಲುವುದಿಲ್ಲ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್