Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲೆ ಮೀರಿದ ಪ್ರೀತಿ-ಪ್ರೇಮ! ಶ್ರೀಲಂಕಾ ಯುವತಿ, ತೆಲಂಗಾಣ ಯುವಕ ನಡುವೆ ಕಂಕಣಭಾಗ್ಯ

ಕರೀಂನಗರ ನಿವಾಸಿ ಅರುಣ್ ಕುಮಾರ್ ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಅಲ್ಲಿ 2014ರಲ್ಲಿ ಎಂಬಿಎ ಓದುತ್ತಿದ್ದ ಶ್ರೀಲಂಕಾದ ಅಜ್ಜುರಾ ಎಂಬ ಹುಡುಗಿ ಅರುಣ್ ಗೆ ಪರಿಚಯವಾಗಿತ್ತು.

ಎಲ್ಲೆ ಮೀರಿದ ಪ್ರೀತಿ-ಪ್ರೇಮ! ಶ್ರೀಲಂಕಾ ಯುವತಿ, ತೆಲಂಗಾಣ ಯುವಕ ನಡುವೆ ಕಂಕಣಭಾಗ್ಯ
ಶ್ರೀಲಂಕಾ ಯುವತಿ, ತೆಲಂಗಾಣ ಯುವಕ ನಡುವೆ ಕಂಕಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 22, 2023 | 11:24 AM

ಅಲಗುನೂರು, ಡಿಸೆಂಬರ್ 22: ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದ ತೆಲಂಗಾಣ ಯುವಕ ಅಲ್ಲಿನ ಹುಡುಗಿಯ ಪ್ರೇಮ ಪಾಶದಲ್ಲಿ ಸಿಲುಕಿದ. ಬಳಿಕ ಎರಡೂ ಕುಟುಂಬದ ಹಿರಿಯರ ಮನವೊಲಿಸಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡ. ವಿವರಕ್ಕೆ ಹೋಗುವುದಾರೆ… ತೆಲಂಗಾಣದ ಕರೀಂನಗರದ ನಗರ ಸಭೆ ವ್ಯಾಪ್ತಿಯ ಅಲಗುನೂರಿನ ನಿವಾಸಿ ಅರುಣ್ ಕುಮಾರ್ ಸ್ಥಳೀಯವಾಗಿ ಪದವಿವರೆಗೆ ಓದಿದ್ದರು. ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋದರು. ಅಲ್ಲಿ 2014ರಲ್ಲಿ ಎಂಬಿಎ ಓದುತ್ತಿದ್ದ ಶ್ರೀಲಂಕಾದ ಅಜ್ಜುರಾ ಎಂಬ ಹುಡುಗಿಯೊಂದಿಗೆ ಅರುಣ್ ಗೆ ಪರಿಚಯವಾಗಿತ್ತು. ಅವರ ಪರಿಚಯ ತ್ವರಿತವಾಗಿ ಪ್ರೀತಿಗೆ ತಿರುಗಿತು. ಇತ್ತೀಚೆಗಷ್ಟೇ ಮದುವೆಯಾಗಲು ನಿರ್ಧರಿಸಿದ ಜೋಡಿ, ಕುಟುಂಬದ ಹಿರಿಯರಲ್ಲಿ ತಮ್ಮ ಪ್ರೀತಿ ವ್ಯವಹಾರ ವ್ಯಕ್ತಪಡಿಸಿದ್ದರು. ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಗುರುವಾರ ಅಲಗುನೂರಿನ ಅರುಣ್ ಕುಮಾರ್ ಅವರ ಮನೆಯಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿತು. ತೆಲಂಗಾಣ ಹುಡುಗ ಶ್ರೀಲಂಕಾದ ಹುಡುಗಿಯನ್ನು ಮದುವೆಯಾಗುತ್ತಿದ್ದಾನೆ ಎಂದು ಅದ ನೋಡಲು ಸ್ಥಳೀಯರು ಭಾರೀ ಪ್ರಮಾಣದಲ್ಲಿ ಜಮಾಯಿಸಿದ್ದರು.

ಮತ್ತೊಂದು ಘಟನೆ… ಗೋದಾವರಿಗೆ ಹಾರಿದ ನವದಂಪತಿ! ಶವವಾಗಿ ತೇಲಿಬಂದ ನವವಿವಾಹಿತ ವಧು

ನವದಂಪತಿ ಗೋದಾವರಿಯಲ್ಲಿ ಧುಮುಕಿದ ಘಟನೆ ಪೋದೂರಿನ ಪೆನುಗೊಂಡ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ದಡದಲ್ಲಿ ಮೀನುಗಾರರಿಗೆ ಯುವತಿಯ ಮೃತದೇಹ ಪತ್ತೆಯಾಗಿದೆ. ರಾಮರಾವ್ ಅವರ ಮೊಮ್ಮಗಳು ಸತ್ಯವಾಣಿ (19) ಅವರನ್ನು ಐದು ದಿನಗಳ ಹಿಂದೆ ಶಿವರಾಮಕೃಷ್ಣ ಅವರನ್ನು ವಿವಾಹವಾಗಿದ್ದರು. ಡಿಸೆಂಬರ್ 15 ರಂದು ಹಿರಿಯರು ವಿವಾಹ ಏರ್ಪಡಿಸಿದ್ದರು. ಆದರೆ ಏನಾಯಿತೋ ಗೊತ್ತಿಲ್ಲ, ಮಂಗಳವಾರ ದಂಪತಿ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಶಿವರಾಮಕೃಷ್ಣ ಈಜಿ ದಡಕ್ಕೆ ಬಂದಿದ್ದಾರೆ. ಗುರುವಾರ ಶವ ಪತ್ತೆಯಾದ ನಂತರ, ಪತಿ ಶಿವರಾಮಕೃಷ್ಣನೇ ಸತ್ಯವಾಣಿಯನ್ನು ಸಾಯಿಸಿದ್ದಾನೆ ಎಂದು ಸಂಬಂಧಿಕರು ನ್ಯಾಯಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ವಾಹನಗಳು ನಿಂತಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರೆ ಸತ್ಯಾಂಶ ಗೊತ್ತಾಗಲಿದ್ದು, ಪತಿ ಶಿವರಾಮಕೃಷ್ಣ ತಮ್ಮ ವಶದಲ್ಲಿರುವುದರಿಂದ ಅವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವುದಾಗಿ ಎಸ್ ಐ ನಾಗೇಶ್ವರ ರಾವ್, ಎಸ್ ಐ ರಮೇಶ್ ಭರವಸೆ ನೀಡಿದ್ದಾರೆ. ಮೃತನ ತಂದೆ ಮೆಳ್ಳು ರಾಮರಾವ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಎಸ್ಸೈ ರಮೇಶ್ ತಿಳಿಸಿದ್ದಾರೆ.

Also Read: ವಿವಾಹಿತ ಮಹಿಳೆಯೊಂದಿಗೆ ಯುವಕನ ಸಲುಗೆಯ ಫೋಟೋ ವೈರಲ್; ಇಬ್ಬರೂ ಆತ್ಮಹತ್ಯೆಗೆ ಶರಣು

ಪೊಲೀಸರ ತನಿಖೆಯಲ್ಲಿ ಶಿವರಾಮ ಕೃಷ್ಣ ಹೇಳಿದಂತೆ ಯುವತಿಗೆ ಈ ಮದುವೆ ಇಷ್ಟವಿರಲಿಲ್ಲ, ಯುವತಿ ದಾಂಪತ್ಯಕ್ಕೆ ಸಹಕರಿಸಲಿಲ್ಲ ಎಂದು ತಿಳಿದುಬಂದಿದೆ. ಅದಕ್ಕಾಗಿಯೇ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದರಂತೆ. ಸೇತುವೆಯಿಂದ ನವ ಜೋಡಿ ಜಿಗಿದಿದ್ದರು. ಆದರೆ ಶಿವರಾಮಕೃಷ್ಣ ನದಿಯಲ್ಲಿ ಸುಮಾರು ಒಂದು ಕಿಲೋ ಮೀಟರ್‌ ಗೂ ಹೆಚ್ಚು ದೂರ ಈಜಾಡಿಕೊಂಡು ಬಂದು ದಡ ಸೇರಿದ್ದಾರೆ. ಅದು ಹೇಗೆ ಸಾಧ್ಯವಾಯಿತು? ವಧುವಿನ ಪಾದರಕ್ಷೆಗಳು ದಡದಲ್ಲಿ ಪತ್ತೆಯಾಗಿವೆ. ಆದರೆ ಮೃತದೇಹದ ಮೇಲಿದ್ದ ಚಿನ್ನಾಭರಣಗಳು ಏನಾದವು? ಹೀಗೆ ಹಲವಾರು ಪ್ರಶ್ನೆಗಳನ್ನು ಯುವತಿಯ ಪೋಷಕರು ಎತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:24 am, Fri, 22 December 23

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್