AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಷೇಧಿತ ಸಂಘಟನೆ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಬದುಕಿದ್ದಾನೆ: ನೆಡುಮಾರನ್

ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಬಗ್ಗೆ ನಾನು ಕೆಲವು ಸತ್ಯಗಳನ್ನು ಬಹಿರಂಗಪಡಿಸಲು ಬಯಸುತ್ತೇನೆ. ಪ್ರಭಾಕರನ್ ಬಗ್ಗೆ ಇರುವ ಅನುಮಾನಗಳನ್ನು ಹೋಗಲಾಡಿಸುವ ಸತ್ಯವನ್ನು ಬಹಿರಂಗಪಡಿಸಲು ನನಗೆ ಸಂತೋಷವಾಗಿದೆ. ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಆರೋಗ್ಯವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ ಎಂದು ನಾವು ಎಲ್ಲಾ ತಮಿಳು ಜನರಿಗೆ ಹೇಳಲು ಬಯಸುತ್ತೇವೆ ಎಂದು ನೆಡುಮಾರನ್ ಹೇಳಿದ್ದಾರೆ.

ನಿಷೇಧಿತ ಸಂಘಟನೆ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಬದುಕಿದ್ದಾನೆ: ನೆಡುಮಾರನ್
ಪ್ರಭಾಕರನ್
ರಶ್ಮಿ ಕಲ್ಲಕಟ್ಟ
|

Updated on: Feb 13, 2023 | 5:28 PM

Share

ನಿಷೇಧಿತ ಸಂಘಟನೆಯಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ನಾಯಕ ವೇಲುಪಿಳ್ಳೈ ಪ್ರಭಾಕರನ್ (Velupillai Prabhakaran) “ಆರೋಗ್ಯವಾಗಿ, ಚೆನ್ನಾಗಿದ್ದಾರೆ”. ಶೀಘ್ರದಲ್ಲೇ ಅವರು “ತಮಿಳು ಜನಾಂಗದ ವಿಮೋಚನೆಗಾಗಿ ಯೋಜನೆಯನ್ನು ಪ್ರಕಟಿಸಲಿದ್ದಾರೆ” ಎಂದು ತಮಿಳು ನ್ಯಾಶನಲಿಸ್ಟ್ ಮೂವ್‌ಮೆಂಟ್ ನಾಯಕ ಪಜಾ ನೆಡುಮಾರನ್ (Pazha Nedumaran) ಸೋಮವಾರ ಹೇಳಿದ್ದಾರೆ. ತಂಜಾವೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೆಡುಮಾರನ್, ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿ ಮತ್ತು ಶ್ರೀಲಂಕಾದ ರಾಜಕೀಯ ಬಿಕ್ಕಟ್ಟು ರಾಜಪಕ್ಸೆ ಸರ್ಕಾರವನ್ನು ತೆಗೆದುಹಾಕುವುದು ಸೇರಿದಂತೆ ಎಲ್‌ಟಿಟಿಇ ಮುಖ್ಯಸ್ಥರಿಗೆ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸಿತು ಎಂದು ಹೇಳಿದರು.

ವಿಶ್ವ ತಮಿಳು ಒಕ್ಕೂಟದ ತಮಿಳು ಅಧ್ಯಕ್ಷರಾದ ನೆಡುಮಾರನ್ ‘ತಮಿಳ್ ದೇಸಿಯ ತಲೈವರ್’ (ತಮಿಳು ರಾಷ್ಟ್ರೀಯವಾದಿ ನಾಯಕ) ಪ್ರಭಾಕರನ್ ಅವರ ಸಾವಿನ ಬಗ್ಗೆ “ವದಂತಿಗಳಿಗೆ” ಅಂತ್ಯ ಹಾಡುವ ಸಮಯ ಬಂದಿದೆ ಎಂದು ಹೇಳಿದರು. ಪ್ರಭಾಕರನ್ ಶೀಘ್ರದಲ್ಲೇ ತಮಿಳು ಜನಾಂಗದ ವಿಮೋಚನೆಗಾಗಿ ಯೋಜನೆಯನ್ನು ಘೋಷಿಸಲಿದ್ದಾರೆ ಎಂದು ನಾನು ನಿಮಗೆ ತಿಳಿಸುತ್ತೇನೆ. ಪ್ರಪಂಚದ ಎಲ್ಲಾ ತಮಿಳು ಜನರು ಒಟ್ಟಾಗಿ ಅವರನ್ನು ಬೆಂಬಲಿಸಬೇಕು” ಎಂದು ನೆಡುಮಾರನ್ ಹೇಳಿದರು.

ತಮಿಳು ಈಳಂ ಒಂದು ಪ್ರಸ್ತಾವಿತ ಸ್ವತಂತ್ರ ರಾಜ್ಯವಾಗಿದ್ದು, ಶ್ರೀಲಂಕಾದಲ್ಲಿ ಅನೇಕ ತಮಿಳರು ಮತ್ತು ಶ್ರೀಲಂಕಾದ ತಮಿಳು ಡಯಾಸ್ಪೊರಾ ಶ್ರೀಲಂಕಾದ ಉತ್ತರ ಮತ್ತು ಪೂರ್ವದಲ್ಲಿ ಇದನ್ನು ರಚಿಸಲು ಬಯಸುತ್ತಾರೆ.

ಹೂಡಿಕೆ ಯೋಜನೆಗಳ ಮೂಲಕ ಚೀನಾ ಶ್ರೀಲಂಕಾದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ.ಭಾರತವನ್ನು ಶ್ರೀಲಂಕಾದ ಶತ್ರು ಎಂದು ಬಿಂಬಿಸುತ್ತಿದೆ ಎಂದು ಸೂಚಿಸಿದ ಅವರು, ದ್ವೀಪ ರಾಷ್ಟ್ರದಲ್ಲಿ ಚೀನಾ ತನ್ನ ಅಸ್ತಿತ್ವವನ್ನು ದೃಢಪಡಿಸುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಪ್ರಾರಂಭಿಸಲು ಭಾರತ ಸರ್ಕಾರವನ್ನು ಒತ್ತಾಯಿಸಿದರು.

ಎಲ್‌ಟಿಟಿಇ ಪ್ರಬಲವಾಗಿದ್ದಾಗ ಭಾರತವನ್ನು ವಿರೋಧಿಸುವ ಯಾವುದೇ ದೇಶವನ್ನು ಶ್ರೀಲಂಕಾಕ್ಕೆ ಕಾಲಿಡಲು ಅವರು ಎಂದಿಗೂ ಅವಕಾಶ ನೀಡಲಿಲ್ಲ ಎಂದು ನೆಡುಮಾರನ್ ನೆನಪಿಸಿಕೊಂಡರು.

ಇದನ್ನೂ ಓದಿ: Chitra Ramkrishna: ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಜಾಮೀನು ರದ್ದು ಮಾಡಲು ಸುಪ್ರೀಂ ನಕಾರ

ಎಲ್‌ಟಿಟಿಇ ಇದರ ವಿರುದ್ಧ ಹೋರಾಡಿದೆ. ಯಾವುದೇ ಪರಿಸ್ಥಿತಿಯಲ್ಲಿ, ಎಲ್‌ಟಿಟಿಇ ಭಾರತದ ವಿರುದ್ಧ ಇರುವ ದೇಶಗಳಿಂದ ಯಾವುದೇ ಸಹಾಯವನ್ನು ಕೇಳಲಿಲ್ಲ. ಚೀನಾ ಶ್ರೀಲಂಕಾಕ್ಕೆ ಕಾಲಿಟ್ಟಿದೆ ಮತ್ತು ಭಾರತವನ್ನು ಶ್ರೀಲಂಕಾದ ಶತ್ರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ” ಎಂದು ಪಜಾ ನೆಡುಮಾರನ್ ಹೇಳಿದ್ದಾರೆ.

ಹಿಂದೂ ಮಹಾಸಾಗರದಲ್ಲೂ ಚೀನಾ ತನ್ನ ಪ್ರಾಬಲ್ಯವನ್ನು ವಿಸ್ತರಿಸಿದೆ ಎಂದು ನೆಡುಮಾರನ್ ಕಳವಳ ವ್ಯಕ್ತಪಡಿಸಿದರು. “ಚೀನಾವನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಭಾರತ ಸರ್ಕಾರವನ್ನು ವಿನಂತಿಸುತ್ತೇವೆ” ಎಂದು ಅವರು ಹೇಳಿದರು. “ಈ ಸಂದಿಗ್ಧ ಸಮಯದಲ್ಲಿ, ತಮಿಳುನಾಡು ಸರ್ಕಾರ, ತಮಿಳು ರಾಜಕಾರಣಿಗಳು ಮತ್ತು ತಮಿಳು ಈಳಂ ಜನರು ಪ್ರಭಾಕರನ್ ಅವರೊಂದಿಗೆ ನಿಲ್ಲಲು ನಾವು ಒಗ್ಗಟ್ಟಿನಿಂದ ವಿನಂತಿಸುತ್ತೇವೆ” ಎಂದಿದ್ದಾರೆ ನೆಡುಮಾರನ್.

ನೀವು ಪ್ರಭಾಕರನ್ ಅವರನ್ನು ಸಂಪರ್ಕಿಸಿದ್ದೀರಾ ಎಂದು ಕೇಳಿದಾಗ, ನೆಡುಮಾರನ್, ಪ್ರಭಾಕರನ್ ಅವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಅವರು ಪಡೆದ ಮಾಹಿತಿಯ ಆಧಾರದ ಮೇಲೆ “ಅವರ ಅನುಮೋದನೆಯ ಆಧಾರದ ಮೇಲೆ ಇದನ್ನು ಬಿಡುಗಡೆ ಮಾಡುತ್ತಿದ್ದೇನೆ” ಎಂದು ಹೇಳಿದರು.

ಶ್ರೀಲಂಕಾ ಸರ್ಕಾರವು ಸತ್ತಿದೆ ಎಂದು ಘೋಷಿಸಿದ ಎಲ್‌ಟಿಟಿಇ ನಾಯಕ ನೆಡುಮಾರನ್‌ನಿಂದ ಬದುಕುಳಿಯುವಲ್ಲಿ ಹೇಗೆ ಯಶಸ್ವಿಯಾದರು ಎಂದು ಪ್ರಶ್ನಿಸಿದಾಗ, “ನಾನು ಸೇರಿದಂತೆ ಎಲ್ಲರೂ ಅವನು ಎಲ್ಲಿದ್ದಾನೆಂದು ತಿಳಿಯಲು ಬಯಸುವುದರಲ್ಲಿ ಸಂದೇಹವಿಲ್ಲ. ಆದರೆ ಅವನು ಶೀಘ್ರದಲ್ಲೇ ಮುನ್ನೆಲೆಗೆ ಬರುತ್ತಾನೆ ಮತ್ತು ಜಗತ್ತಿಗೆ ಅದರ ಬಗ್ಗೆ ತಿಳಿಯುತ್ತದೆ ಎಂದಿದ್ದಾರೆ ಅವರು.

ಮೇ 18, 2009 ರಂದು ದ್ವೀಪ ರಾಷ್ಟ್ರದ ಉತ್ತರ ಮುಲ್ಲೈಥಿವು ಜಿಲ್ಲೆಯ ಮುಲ್ಲೈವೈಕ್ಕಲ್‌ನಲ್ಲಿ ಶ್ರೀಲಂಕಾ ಸರ್ಕಾರದ ಪಡೆಗಳಿಂದ ಪ್ರಭಾಕರನ್ ಕೊಲ್ಲಲ್ಪಟ್ಟರು ಎಂದು ಘೋಷಿಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ