ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​​ರನ್ನು ಅರೆಸ್ಟ್ ಮಾಡಿದ ಇ ಡಿ ಅಧಿಕಾರಿಗಳು; ಪರಮ್​ ಬೀರ್​ ಸಿಂಗ್​ ಎಲ್ಲಿ?

Anil Deshmukh: ತಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಎಂದು ಅನಿಲ್​ ದೇಶ್​ಮುಖ್​ ಹೇಳುತ್ತಲೇ ಬಂದಿದ್ದಾರೆ. ನಿನ್ನೆ ಕೂಡ ಇದನ್ನೇ  ಹೇಳಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​​ರನ್ನು ಅರೆಸ್ಟ್ ಮಾಡಿದ ಇ ಡಿ ಅಧಿಕಾರಿಗಳು; ಪರಮ್​ ಬೀರ್​ ಸಿಂಗ್​ ಎಲ್ಲಿ?
ಅನಿಲ್​ ದೇಶ್​ಮುಖ್​
Follow us
| Updated By: Digi Tech Desk

Updated on:Nov 02, 2021 | 10:49 AM

ಮುಂಬೈ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್(Anil Deshmukh)​​ರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯ (ED) ಬಂಧಿಸಿದೆ. ಸುಮಾರು 12 ತಾಸುಗಳ ಕಾಲ ತಮ್ಮ ಕಚೇರಿಯಲ್ಲಿ ಅನಿಲ್​ ದೇಶ್​ಮುಖರ್​​ನ್ನು ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಕೊನೆಯಲ್ಲಿ ಅವರನ್ನು ಬಂಧಿಸಿ ಕರೆದುಕೊಂಡು ಹೋಗಿವೆ.  ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಅನಿಲ್​ ದೇಶ್​ಮುಖ್​ ಸರಿಯಾಗಿ ಉತ್ತರಿಸಲಿಲ್ಲ..ಅವರಿಗೆ ಸಹಕಾರ ನೀಡಲು ಹಿಂದೇಟು ಹಾಕಿದ್ದೇ ಬಂಧನಕ್ಕೆ ಕಾರಣ ಎನ್ನಲಾಗಿದೆ. ಅನಿಲ್​ ದೇಶ್​ಮುಖ್​ ವಿರುದ್ಧ ಲಂಚ ಪಡೆದ ಆರೋಪ ಇದೆ. ಇದೇ ಕಾರಣಕ್ಕೆ ಈ ವರ್ಷದ ಪ್ರಾರಂಭದಲ್ಲಿ ಅವರು ತಮ್ಮ ಸಚಿವ ಸ್ಥಾನದಿಂದ ಕೆಳಗೆ ಇಳಿದಿದ್ದರು. ಇಡಿ ತಮಗೆ ನೀಡಿರುವ ಸಮನ್ಸ್​​ನ್ನು ರದ್ದುಗೊಳಿಸಬೇಕು ಎಂದು ಅನಿಲ್​ ದೇಶ್​ಮುಖ್​​ ಬಾಂಬೆ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ಕೋರ್ಟ್​​ ಪುರಸ್ಕರಿಸಲಿಲ್ಲ.  ಈ ಅನಿಲ್​ ದೇಶ್​​ಮುಖ್​ ವಿರುದ್ಧ ಮುಂಬೈನ ಮಾಜಿ ಪೊಲೀಸ್​ ಉನ್ನತಾಧಿಕಾರಿ ಪರಮ್​ ಬೀರ್​ ಸಿಂಗ್​ ಭ್ರಷ್ಟಾಚಾರ ಮತ್ತು ಸುಲಿಗೆ ಆರೋಪ ಮಾಡಿದ್ದರು. ಸಿಎಂ ಉದ್ಧವ್​ ಠಾಕ್ರೆಗೆ ಪತ್ರ ಬರೆದಿದದ ಅವರು, ಗೃಹ ಸಚಿವರಾಗಿರುವ ಅನಿಲ್​ ದೇಶ್​ಮುಖ್​​ ಪೊಲೀಸ್​ ಇಲಾಖೆಯಲ್ಲಿ ತುಂಬ ಹಸ್ತಕ್ಷೇಪ ಮಾಡುತ್ತಾರೆ. ಪೊಲೀಸರನ್ನು ಬಳಸಿಕಂಡು ಪ್ರತಿ ತಿಂಗಳೂ ಬಾರ್​ ಆ್ಯಂಡ್ ರೆಸ್ಟೋರೆಂಟ್ ಸೇರಿ ವಿವಿಧ ಮೂಲಗಳಿಂದ 100 ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದರು. ಅಂದಹಾಗೆ ಮುಕೇಶ್ ಅಂಬಾನಿ ಮನೆಯ ಎದುರು ಬಾಂಬ್​ ಸಿಕ್ಕ ಪ್ರಕರಣದಲ್ಲಿ ಈ ಪರಮ್​ ಬೀರ್ ಸಿಂಗ್​ ತಮ್ಮ ಸ್ಥಾನ ಕಳೆದುಕೊಂಡಿದ್ದರು. ಅದಾದ ಬಳಿಕ ಅವರು ಅನಿಲ್​ ದೇಶ್​ಮುಖ್​ ವಿರುದ್ಧ ಆರೋಪ ಹೊರೆಸಿದ್ದರು.

ತಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಎಂದು ಅನಿಲ್​ ದೇಶ್​ಮುಖ್​ ಹೇಳುತ್ತಲೇ ಬಂದಿದ್ದಾರೆ. ನಿನ್ನೆ ಕೂಡ ಇದನ್ನೇ  ಹೇಳಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಪರಮ್​ಬೀರ್​ ಸಿಂಗ್​ ವಿರುದ್ಧವೂ ಕೂಡ ಭ್ರಷ್ಟಾಚಾರ ಆರೋಪ ಇದೆ. ಅವರಿಗೆ ಲುಕ್​ಔಟ್​ ನೋಟಿಸ್​ ಕೂಡ ಜಾರಿ ಮಾಡಲಾಗಿದ್ದರೂ ಅವರ ಪತ್ತೆಯಿಲ್ಲ. ಈ ಬಗ್ಗೆ ನಿನ್ನೆ ಪ್ರಶ್ನೆ ಎತ್ತಿರುವ ಅನಿಲ್​ ದೇಶ್​ಮುಖ್​, ಪರಮ್​ ಬೀರ್​ ಸಿಂಗ್ ಎಲ್ಲಿ ಹೋಗಿದ್ದಾರೆ? ನನ್ನ ವಿರುದ್ಧ ಆರೋಪ ಮಾಡಿದವರೇ ಕಾಣುತ್ತಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ‘ಅಭಿಮಾನಿಗಳಿಗೆ ಖಂಡಿತಾ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ ಕೊಡ್ತೀವಿ, ಆದರೆ 2 ದಿನ ಕಾಯಿರಿ’: ಶಿವಣ್ಣ

Coriander leaves: ಅಡುಗೆಯಲ್ಲಿ ರುಚಿ ಹೆಚ್ಚಿಸಲು ಮಾತ್ರವಲ್ಲ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೂ ಉತ್ತಮ

Published On - 10:20 am, Tue, 2 November 21