AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದನದಲ್ಲಿ ಕುಳಿತು ರಮ್ಮಿ ಆಡಿದ್ದ ಮಹಾರಾಷ್ಟ್ರ ಸಚಿವ ಮಾಣಿಕ್​ರಾವ್​ಗೆ ಕ್ರೀಡಾ ಖಾತೆ

ಸದನದಲ್ಲಿ ಮೊಬೈಲ್ ಫೋನ್‌ನಲ್ಲಿ ಆನ್‌ಲೈನ್ ರಮ್ಮಿ ಆಟ ಆಡುತ್ತಿರುವುದು ಕಂಡುಬಂದ ನಂತರ ವಿವಾದಕ್ಕೆ ಸಿಲುಕಿದ್ದ ಮಹಾರಾಷ್ಟ್ರ ಸಚಿವ ಮಾಣಿಕ್‌ರಾವ್ ಕೊಕಟೆ ಅವರನ್ನು ಕೃಷಿ ಖಾತೆಯಿಂದ ತೆಗೆದುಹಾಕಲಾಗಿದೆ. ಸಾಮಾನ್ಯ ಆಡಳಿತ ಇಲಾಖೆ (ಜಿಎಡಿ) ಹೊರಡಿಸಿದ ಅಧಿಸೂಚನೆಯ ಪ್ರಕಾರ, ಪ್ರಸ್ತುತ ಕ್ರೀಡಾ ಸಚಿವ ಮತ್ತು ಎನ್‌ಸಿಪಿ ನಾಯಕ ದತ್ತಾತ್ರೇಯ ಭರಾನೆ ಹೊಸ ಕೃಷಿ ಸಚಿವರಾಗಲಿದ್ದಾರೆ. ಆದರೆ ಕೊಕಟೆ ಹೊಸ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವರಾಗಲಿದ್ದಾರೆ.

ಸದನದಲ್ಲಿ ಕುಳಿತು ರಮ್ಮಿ ಆಡಿದ್ದ ಮಹಾರಾಷ್ಟ್ರ ಸಚಿವ ಮಾಣಿಕ್​ರಾವ್​ಗೆ ಕ್ರೀಡಾ ಖಾತೆ
ಮಾಣಿಕ್​ರಾವ್
ನಯನಾ ರಾಜೀವ್
|

Updated on:Aug 01, 2025 | 9:28 AM

Share

ಮುಂಬೈ, ಆಗಸ್ಟ್​ 01: ವಿಧಾನಸಭಾ ಅಧಿವೇಶನ(Assembly Session)ದ ವೇಳೆ ಸದನದಲ್ಲಿ ಕುಳಿತು ರಮ್ಮಿ ಆಡಿದ್ದ ಮಹಾರಾಷ್ಟ್ರ ಸಚಿವ ಮಾಣಿಕ್​ರಾವ್​ ಅವರಿಗೆ ಕ್ರೀಡಾ ಖಾತೆ ನೀಡಲಾಗಿದೆ. ಮಾಣಿಕ್ರಾವ್ ಕೊಕಟೆ ಅವರನ್ನು ಕೃಷಿ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದೆ ಮತ್ತು ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವರನ್ನಾಗಿ ಮಾಡಲಾಗಿದೆ.ಅವರ ಸ್ಥಾನದಲ್ಲಿ ದತ್ತಾತ್ರೇಯ ಭರಾಣೆ ಅವರನ್ನು ಈಗ ಹೊಸ ಕೃಷಿ ಸಚಿವರನ್ನಾಗಿ ನೇಮಿಸಲಾಗಿದೆ.

ಪ್ರತಿಪಕ್ಷಗಳು ಮಾಣಿಕ್​​ರಾವ್​ ರಾಜೀನಾಮೆ ಎದುರು ನೋಡುತ್ತಿರುವ ಹೊತ್ತಲ್ಲೇ ಈ ಸೂಚನೆ ಹೊರಬಿದ್ದಿದೆ. ಈ ನಿರ್ಧಾರವನ್ನು ಎನ್‌ಸಿಪಿ (ಅಜಿತ್ ಪವಾರ್ ಬಣ) ಗೆ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆಯ ಮೇಲೆ ತನ್ನ ಸಚಿವರಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಲು ಒತ್ತಡ ಹೆಚ್ಚಾಗಿದೆ.

ವಿಧಾನಸಭಾ ಅಧಿವೇಶನದ ವೇಳೆ ಕೊಕಟೆ ಆನ್​ಲೈನ್​ನಲ್ಲಿ ರಮ್ಮಿ ಆಡುತ್ತಿದ್ದರು.ಈ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು, ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರಚನೆ ನಡೆದಿದೆ. ಶರದ್ ಬಣದ ಶಾಸಕ ರೋಹಿತ್ ಪವಾರ್ ಅವರು ಬಿಡುಗಡೆ ಮಾಡಿದ ಈ ವೀಡಿಯೊ ಕೋಲಾಹಲಕ್ಕೆ ಕಾರಣವಾಯಿತು.

ಮತ್ತಷ್ಟು ಓದಿ: Video: ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದ ವೇಳೆ ಮೊಬೈಲ್​​ನಲ್ಲಿ ರಮ್ಮಿ ಆಡಿದ ಸಚಿವ

ಮಹಾರಾಷ್ಟ್ರದಲ್ಲಿನ ಕೃಷಿ ಬಿಕ್ಕಟ್ಟಿನ ನಡುವೆ ಕೊಕಟೆ ಅವರ ಅಸಂವೇದನಾಶೀಲತೆಯನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಟೀಕಿಸಿದರು . ರಾಜ್ಯದ ರೈತರು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಕೃಷಿ ಸಚಿವರ ಈ ವರ್ತನೆ ಬೇಜವಾಬ್ದಾರಿಯನ್ನು ಸಹಿಸಲಾಗದು ಎಂದು ಹೇಳಿದ್ದಾರೆ.

ಆದರೆ ಮಾಣಿಕ್​​ರಾವ್ ಈ ಆರೋಪಗಳನ್ನು ನಿರಾಕರಿಸಿದ್ದರು. ಶಾಸಕಾಂಗ ತನಿಖೆಯಲ್ಲಿ ಅವರು ಸುಮಾರು 18 ರಿಂದ 22 ನಿಮಿಷಗಳ ಕಾಲ ಮೊಬೈಲ್ ಆಟಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ, ಆದರೆ ಅವರು ಕೇವಲ 10-15 ಸೆಕೆಂಡುಗಳು ಎಂದು ಹೇಳಿದ್ದರು.

ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಂದ ಕೊಕಟೆ ಅವರ ರಾಜೀನಾಮೆಯನ್ನು ವಿರೋಧ ಪಕ್ಷ ನಿರೀಕ್ಷಿಸಿತ್ತು , ಆದರೆ ಕೇವಲ ಎಚ್ಚರಿಕೆ ನೀಡಿ ಕೊಕಟೆ ಅವರ ಖಾತೆಯನ್ನು ಬದಲಿಸಲಾಗಿದೆ.ಅವರು ಕ್ಷಮೆಯಾಚಿಸಿದ್ದು, ಮುಂದೆ ಹೀಗೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಕೊಕಟೆ ಅವರು ಈ ಹಿಂದೆಯೂ ಅನೇಕ ವಿವಾದಗಳಲ್ಲಿ ಭಾಗಿಯಾಗಿದ್ದರು, 1995 ರ ವಸತಿ ವಂಚನೆ ಪ್ರಕರಣ  ಮತ್ತು ರೈತರನ್ನು ಭಿಕ್ಷುಕರಿಗೆ ಹೋಲಿಸಿದ ಹೇಳಿಕೆಗಳು, ಈ ಘಟನೆಗಳಿಂದಾಗಿ, ಸರ್ಕಾರವನ್ನು ನಿರಂತರವಾಗಿ ಟೀಕಿಸಲಾಗುತ್ತಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:25 am, Fri, 1 August 25