ಶ್ರೀಮಂತನಾಗುವ ಆಸೆಗೆ ಮಾಂತ್ರಿಕ ಹೇಳಿದಂತೆ ಓರ್ವನ ತಲೆ ಕಡಿದು ಪೂಜೆ ಮಾಡಿದ ವ್ಯಕ್ತಿ

ಶ್ರೀಮಂತನಾಗುವ ದುರಾಸೆಯಿಂದ ಮಾಂತ್ರಿಕ ಹೇಳಿದಂತೆ ವ್ಯಕ್ತಿಯೊಬ್ಬ ಓರ್ವನ ತಲೆ ಕಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಪೂಜೆ ಮುಗಿಸಿದರೆ ನಿನಗೆ 50-60 ಕೋಟಿ ರೂ. ಸಿಗುವುದು ನಿಶ್ಚಿತ ಎಂದು ಮಾಂತ್ರಿಕನೊಬ್ಬ ಹೇಳಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಷ್ಟೇ ಅಲ್ಲದೆ ಆತನ ತಲೆಯನ್ನು ಕಡಿದು ಪೂಜೆಗೆ ಇರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀಮಂತನಾಗುವ ಆಸೆಗೆ ಮಾಂತ್ರಿಕ ಹೇಳಿದಂತೆ ಓರ್ವನ ತಲೆ ಕಡಿದು ಪೂಜೆ  ಮಾಡಿದ ವ್ಯಕ್ತಿ
ಆರೋಪಿಗಳು

Updated on: Dec 08, 2024 | 2:33 PM

ಶ್ರೀಮಂತನಾಗುವ ದುರಾಸೆಯಿಂದ ಮಾಂತ್ರಿಕ ಹೇಳಿದಂತೆ ವ್ಯಕ್ತಿಯೊಬ್ಬ ಓರ್ವನ ತಲೆ ಕಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಪೂಜೆ ಮುಗಿಸಿದರೆ ನಿನಗೆ 50-60 ಕೋಟಿ ರೂ. ಸಿಗುವುದು ನಿಶ್ಚಿತ ಎಂದು ಮಾಂತ್ರಿಕನೊಬ್ಬ ಹೇಳಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಷ್ಟೇ ಅಲ್ಲದೆ ಆತನ ತಲೆಯನ್ನು ಕಡಿದು ಪೂಜೆಗೆ ಇರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬಿಹಾರ ಮೂಲದವರಾಗಿದ್ದಾರೆ, ದೆಹಲಿಯಲ್ಲಿ ಇ-ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ, ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಅಪರಾಧವೆಸಗಿದ್ದಾನೆ. ಅದರಲ್ಲಿ ಒಬ್ಬ ಸ್ನೇಹಿತ ತಾನು ಯೂಟ್ಯೂಬ್ ನೋಡಿ ಬ್ಲ್ಯಾಕ್ ಮ್ಯಾಜಿಕ್ ಕಲಿತಿದ್ದೇನೆ, ತಲೆಬುರುಡೆಗೆ  ಪೂಜೆ ಮಾಡಿದರೆ ಶ್ರೀಮಂತರಾಗಬಹುದು ಎಂದು ಆತ ಹೇಳಿದ್ದ.

ಬಂಧಿತ ಆರೋಪಿಗಳನ್ನು ವಿಕಾಸ್ (28) ಅಲಿಯಾಸ್ ಪರಮಾತ್ಮ, ನರೇಂದ್ರ, ಪವನ್ ಕುಮಾರ್ ಮತ್ತು ಪಂಕಜ್ ಎಂದು ಗುರುತಿಸಲಾಗಿದೆ. ಈ ಘಟನೆ ಈ ಜೂನ್​ನಲ್ಲಿ ನಡೆದಿದೆ, ಪೊಲೀಸರು ಗಾಜಿಯಾಬಾದ್​ನ ಚರಂಡಿಯಲ್ಲಿ ತಲೆಯಿಲ್ಲದ ಶವ ವಶಪಡಿಸಿಕೊಂಡಿದ್ದರು. ತನಿಖೆ ಪ್ರಾರಂಭಿಸಲಾಯಿತು, ವಿಕಾಸ್ ಗುಪ್ತಾ (24) ಅಲಿಯಾಸ್ ಮೋಟಾ ಮತ್ತು ಧನಂಜಯ್ (25) ಅವರನ್ನು ಬಂಧಿಸಲಾಗಿತ್ತು.

ವಿಚಾರಣೆ ವೇಳೆ ವಿಕಾಸ್ (28) ಅಲಿಯಾಸ್ ಪರಮಾತ್ಮ ಎಂಬಾತ ವ್ಯಕ್ತಿಯೊಬ್ಬನನ್ನು ಕೊಂದು ಆತನ ತಲೆಬುರುಡೆಯನ್ನು ಮಾಟಮಂತ್ರಕ್ಕೆ ಬಳಸಿಕೊಳ್ಳಲು ಮುಂದಾಗಿದ್ದ ಎಂದು ತಿಳಿದು ಬಂದಿದೆ. ಪರಮಾತ್ಮನ ಸೂಚನೆ ಮೇರೆಗೆ ರಾಜು ಶಾ (29) ಎಂಬಾತನನ್ನು ಕೊಲೆ ಮಾಡಿರುವುದಾಗಿ ಮೋಟಾ ಮತ್ತು ಧನಂಜಯ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಡಿಸೆಂಬರ್ 7ರ ಶನಿವಾರದಂದು ಪರಮಾತ್ಮನನ್ನು ಬಂಧಿಸಲಾಗಿತ್ತು.

ಮತ್ತಷ್ಟು ಓದಿ: ಮದುವೆಯಾಗಿದ್ದರೂ 2 ಗರ್ಲ್ ಫ್ರೆಂಡ್ಸ್​​ಗಾಗಿ ಕಳ್ಳತನಕ್ಕೆ ಇಳಿದಿದ್ದ ಆರೋಪಿ ಬಂಧನ

ಆರೋಪಿಯ ಬಂಧನದ ನಂತರ, ಪೊಲೀಸರು ರಾಜು ಅವರ ತಲೆಬುರುಡೆಯನ್ನು ಗಾಜಿಯಾಬಾದ್‌ನ ಚರಂಡಿಯಿಂದ ವಶಪಡಿಸಿಕೊಂಡರು. ಇದಲ್ಲದೆ, ಪೊಲೀಸರು ಪ್ರಾಣಿಯ ತಲೆಬುರುಡೆ, ಹರಿತವಾದ ಆಯುಧಗಳು ಮತ್ತು ಅಪರಾಧಕ್ಕೆ ಬಳಸಿದ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us