AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಕನ ಮಗಳ ಮೊಬೈಲ್​ ಎಕ್ಸ್​ಚೇಂಜ್​ ಮಾಡಲ್ಲ ಎಂದಿದ್ದಕ್ಕೆ.. ಅಂಗಡಿ ಮುಂದೆ ಬೆಂಕಿ ಹಚ್ಚಿಕೊಂಡುಬಿಟ್ಟ!

ದೆಹಲಿ: ಮೊಬೈಲ್ ಫೋನ್​ ಬದಲಿಸಿಕೊಡಲು ನಿರಾಕರಿಸಿದ ಅಂಗಡಿ ಮಾಲೀಕನ ನಡೆಗೆ ಬೇಸತ್ತು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಗರದ ರೋಹಿಣಿಯಲ್ಲಿ ನಡೆದಿದೆ. 40 ವರ್ಷದ ಭೀಮ್ ಸಿಂಗ್ ಎಂಬಾತ ತನ್ನ ಅಕ್ಕನ ಮಗಳ ಆನ್​ಲೈನ್ ಕ್ಲಾಸ್​ಗಾಗಿ ಒಂದು ತಿಂಗಳ ಹಿಂದೆಯಷ್ಟೇ ದಕ್ಷಿಣ ರೋಹಿಣಿ ಮಾಲ್​ನಲ್ಲಿರುವ ಮೊಬೈಲ್ ಫೋನ್​ ಮಳಿಗೆಯಲ್ಲಿ ಮೊಬೈಲ್ ಒಂದನ್ನು ಖರೀದಿಸಿದ್ದನು. ಆದರೆ, ಆ ಮೊಬೈಲ್ ಸರಿಯಾಗಿ ಕೆಲಸ ಮಾಡದ ಕಾರಣ ಅದನ್ನು ಬದಲಿಸಿಕೊಡುವಂತೆ ಅಂಗಡಿ ಮಾಲೀಕನಿಗೆ ಭೀಮ್ ಸಿಂಗ್ ಮನವಿ ಮಾಡಿಕೊಂಡನು. ಆದರೆ, […]

ಅಕ್ಕನ ಮಗಳ ಮೊಬೈಲ್​ ಎಕ್ಸ್​ಚೇಂಜ್​ ಮಾಡಲ್ಲ ಎಂದಿದ್ದಕ್ಕೆ.. ಅಂಗಡಿ ಮುಂದೆ ಬೆಂಕಿ ಹಚ್ಚಿಕೊಂಡುಬಿಟ್ಟ!
ಪ್ರಾತಿನಿಧಿಕ ಚಿತ್ರ
KUSHAL V
|

Updated on: Nov 15, 2020 | 1:25 PM

Share

ದೆಹಲಿ: ಮೊಬೈಲ್ ಫೋನ್​ ಬದಲಿಸಿಕೊಡಲು ನಿರಾಕರಿಸಿದ ಅಂಗಡಿ ಮಾಲೀಕನ ನಡೆಗೆ ಬೇಸತ್ತು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಗರದ ರೋಹಿಣಿಯಲ್ಲಿ ನಡೆದಿದೆ. 40 ವರ್ಷದ ಭೀಮ್ ಸಿಂಗ್ ಎಂಬಾತ ತನ್ನ ಅಕ್ಕನ ಮಗಳ ಆನ್​ಲೈನ್ ಕ್ಲಾಸ್​ಗಾಗಿ ಒಂದು ತಿಂಗಳ ಹಿಂದೆಯಷ್ಟೇ ದಕ್ಷಿಣ ರೋಹಿಣಿ ಮಾಲ್​ನಲ್ಲಿರುವ ಮೊಬೈಲ್ ಫೋನ್​ ಮಳಿಗೆಯಲ್ಲಿ ಮೊಬೈಲ್ ಒಂದನ್ನು ಖರೀದಿಸಿದ್ದನು.

ಆದರೆ, ಆ ಮೊಬೈಲ್ ಸರಿಯಾಗಿ ಕೆಲಸ ಮಾಡದ ಕಾರಣ ಅದನ್ನು ಬದಲಿಸಿಕೊಡುವಂತೆ ಅಂಗಡಿ ಮಾಲೀಕನಿಗೆ ಭೀಮ್ ಸಿಂಗ್ ಮನವಿ ಮಾಡಿಕೊಂಡನು. ಆದರೆ, ಕಂಪನಿಯ ನೀತಿಯನ್ನು ಉಲ್ಲೇಖಿಸಿ ಅಂಗಡಿ ಮಾಲೀಕ ಮೊಬೈಲ್​ ಎಕ್ಸ್​ಚೇಂಜ್​ ಮಾಡಲು ನಿರಾಕರಿಸಿದ್ದಾನೆ. ಆತನ ವರ್ತನೆಯಿಂದ ಬೇಸತ್ತು ಸಿಂಗ್ ಕಳೆದ ಶುಕ್ರವಾರ ಮಧ್ನಾಹ್ನ ಅಂಗಡಿಯ ಮುಂದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಸದ್ಯ, ಘಟನೆಯಲ್ಲಿ ತೀವ್ರ ಸುಟ್ಟು ಗಾಯಗಳಾಗಿರುವ ಸಿಂಗ್​ನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೀಮ್​ ಸಿಂಗ್​ ಸಹೋದರಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು ಎಂದು ಹೇಳಲಾಗಿದೆ. ಆಕೆಯ ಅಗಲಿಕೆಯ ನಂತರ 12ನೇ ತರಗತಿಯಲ್ಲಿ ಓದುತಿದ್ದ ಸಹೋದರಿಯ ಮಗಳ ಆನ್​ಲೈನ್​ ಕ್ಲಾಸ್​ಗಾಗಿ 14 ಸಾವಿರ ರೂ. ಖರ್ಚು ಮಾಡಿ ಫೋನ್ ಖರೀದಿಸಿದ್ದರು ಎಂದು ಸಹ ತಿಳಿದುಬಂದಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್