AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಲ್ಲಿ ಗಿಫ್ಟ್​ ಇದೆ.. ತಗೋಂಡು ಬಾ ಎಂದವನ ನಂಬಿದ ಯುವತಿ; ನಾಲ್ಕು ದಿನಗಳ ನಂತರವೇ ಆಕೆಗೆ ಗೊತ್ತಾಯ್ತು ತಾನು ಮೋಸ ಹೋಗಿದ್ದು !

ಈ ವ್ಯಕ್ತಿಯ ಹಿನ್ನೆಲೆಯ ಜಾಡು ಹಿಡಿದು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಉದ್ಯೋಗಕ್ಕೆ ಸಂಬಂಧಪಟ್ಟ ವೆಬ್​ಸೈಟ್​​ವೊಂದರಲ್ಲಿ ಈತನ ಪ್ರೊಫೈಲ್​ ಪರಿಶೀಲನೆ ಮಾಡಿದಾಗ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಎಂಡೋಕ್ರಿನಾಲಿಜಿಸ್ಟ್​ ಈತ ಎಂಬುದು ಗೊತ್ತಾಗಿದೆ.

ಕಾರಲ್ಲಿ ಗಿಫ್ಟ್​ ಇದೆ.. ತಗೋಂಡು ಬಾ ಎಂದವನ ನಂಬಿದ ಯುವತಿ; ನಾಲ್ಕು ದಿನಗಳ ನಂತರವೇ ಆಕೆಗೆ ಗೊತ್ತಾಯ್ತು ತಾನು ಮೋಸ ಹೋಗಿದ್ದು !
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Mar 18, 2021 | 7:01 PM

ಮುಂಬೈ: ಪ್ರಿಯತಮೆಯ ಸುಮಾರು 6 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಪನ್ವೆಲ್​ ನಿವಾಸಿಯಾದ ಸೌರಭ್​ ಠಾಕೂರ್ (35)​ ಬಂಧಿತ. ಈತ 32ವರ್ಷದ ಯುವತಿಯೊಂದಿಗೆ ಕಳೆದ ಕೆಲವು ತಿಂಗಳುಗಳಿಂದಲೂ ಸಂಪರ್ಕದಲ್ಲಿದ್ದ. ಈಕೆ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಯುವತಿ ಕೊಟ್ಟ ದೂರಿನ ಅನ್ವಯ ಆತನನ್ನು ಅರೆಸ್ಟ್ ಮಾಡಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೌರಬ್ ಠಾಕೂರ್ ಹಾಗೂ ಯುವತಿ ಡೇಟಿಂಗ್​ ಆ್ಯಪ್​ ಮೂಲಕ ಪರಿಚಿತರಾಗಿದ್ದರು. ನಂತರ ಇವರಿಬ್ಬರ ಮಧ್ಯೆ ಮೆಸೇಜ್​ ವಿನಿಮಯ ಆಗಿತ್ತು. ಸೌರಭ್​ ತನ್ನನ್ನು ವೈದ್ಯ ಎಂದೂ ಹೇಳಿಕೊಂಡಿದ್ದ. ಅದಾದ ಬಳಿಕ ಪರಸ್ಪರ ಹತ್ತಿರವಾಗಿದ್ದರು. ಹೀಗೆ ಒಂದು ದಿನ ಸೌರಭ್ ಯುವತಿಯ ಬಳಿ, ನಿನ್ನ ಪಾಲಕರನ್ನು ಭೇಟಿಯಾಗಬೇಕು ಎಂದು ಕೇಳಿದ್ದ. ಹಾಗಾಗಿ ಘಾಟ್​​ಕೋಪರ್​​ನಲ್ಲಿರುವ ತಮ್ಮ ಮನೆಗೆ ಆತನನ್ನು ಯುವತಿ ಕರೆದಿದ್ದಳು. ಯುವತಿಯ ಮನೆಯೊಳಕ್ಕೆ ಹೋದ ಸೌರಭ್​, ನಾನೊಂದು ಉಡುಗೋರೆ ತಂದಿದ್ದೇನೆ. ಕಾರಲ್ಲೇ ಬಿಟ್ಟು ಬಂದಿದ್ದೇನೆ. ಅದನ್ನು ನೀನೇ ತೆಗೆದುಕೊಂಡು ಬಾ ಎಂದು ಹೇಳಿದ. ಆದರೆ ಸೌರಭ್​ ಮನೆಗೆ ಬಂದು ಹೋಗಿ ನಾಲ್ಕು ದಿನಗಳ ನಂತರ ತಮ್ಮ ಮನೆಯಲ್ಲಿ ಕಳವಾಗಿರುವುದು ಯುವತಿಗೆ ಗೊತ್ತಾಗಿತ್ತು. ಸೌರಭ್​ ಅಲ್ಲದೆ ತಮ್ಮ ಮನೆಗೆ ಇನ್ಯಾರೂ ಬಂದಿರಲಿಲ್ಲ ಎಂದು ಖಚಿತವಾಗಿ ಗೊತ್ತಿದ್ದ ಕಾರಣ ಕೂಡಲೇ ದೂರು ನೀಡಿದಳು ಎಂದು ಪೊಲೀಸ್ ಅಧಿಕಾರಿ ಪ್ರಶಾಂತ್ ಕದಮ್​ ತಿಳಿಸಿದ್ದಾರೆ.

ತನಿಖೆ ಶುರು ಮಾಡಿದ ಪೊಲೀಸರಿಗೆ ಸೌರಭ್​ನ ಇನ್ನೊಂದು ರೂಪ ಕಾಣಿಸಿತ್ತು. ಯುವತಿಯ ಬಳಿ ತಾನು ವೈದ್ಯ ಎಂದು ಹೇಳಿಕೊಂಡಿದ್ದಾತ ಪೊಲೀಸ್ ಇಲಾಖೆಯ ಲೋಗೋ ಇರುವ ಕಾರನ್ನೂ ಇಟ್ಟುಕೊಂಡಿದ್ದರು. ಅಲ್ಲದೆ, ಗೃಹಸಚಿವರ ಕಚೇರಿಯ ಗುರುತಿನ ಚೀಟಿಯನ್ನೂ ಹೊಂದಿದ್ದ. ಆತ ಪೊಲೀಸ್​ ಅಲ್ಲ ಎಂಬುದು ಸ್ಪಷ್ಟ. ಆದರೆ ಆ ಗುರುತಿನ ಚೀಟಿ ಹೇಗೆ ಬಂತು ಎಂಬುದನ್ನು ಪರಿಶೀಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಈ ವ್ಯಕ್ತಿಯ ಹಿನ್ನೆಲೆಯ ಜಾಡು ಹಿಡಿದು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಉದ್ಯೋಗಕ್ಕೆ ಸಂಬಂಧಪಟ್ಟ ವೆಬ್​ಸೈಟ್​​ವೊಂದರಲ್ಲಿ ಈತನ ಪ್ರೊಫೈಲ್​ ಪರಿಶೀಲನೆ ಮಾಡಿದಾಗ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಎಂಡೋಕ್ರಿನಾಲಿಜಿಸ್ಟ್​ ಈತ ಎಂಬುದು ಗೊತ್ತಾಗಿದೆ. ಇಷ್ಟಕ್ಕೇ ಬಿಡುವುದಿಲ್ಲ. ಸೌರಭನ ಹಿನ್ನೆಲೆ, ಶಿಕ್ಷಣ ಇತರ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: West Bengal Elections 2021: ಪಶ್ಚಿಮ ಬಂಗಾಳದ 148 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ

8 ಕೋಟಿ ಕೊಟ್ಟು ಹೊಸ ವಾಹನ ಖರೀದಿಸಿದ ಮಹೇಶ್​ ಬಾಬು; ಏನಿದರ ವಿಶೇಷತೆ?

Published On - 6:58 pm, Thu, 18 March 21

ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಪ್ರಗತಿ ಹೊಂದುವರು
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಪ್ರಗತಿ ಹೊಂದುವರು
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ