AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 ಕೋಟಿ ಕೊಟ್ಟು ಹೊಸ ವಾಹನ ಖರೀದಿಸಿದ ಮಹೇಶ್​ ಬಾಬು; ಏನಿದರ ವಿಶೇಷತೆ?

ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಶಾರುಖ್​ ಖಾನ್​ ದುಬಾರಿ ವ್ಯಾನಿಟಿ ವ್ಯಾನ್​ ಇದೆ. ಮಹೇಶ್​ ಬಾಬು ಹೊಂದಿರುವ ಕ್ಯಾರಾವಾನ್​ ಬೆಲೆ ಇದಕ್ಕೂ ದುಬಾರಿ ಇದೆ ಎನ್ನಲಾಗಿದೆ.

8 ಕೋಟಿ ಕೊಟ್ಟು ಹೊಸ ವಾಹನ ಖರೀದಿಸಿದ ಮಹೇಶ್​ ಬಾಬು; ಏನಿದರ ವಿಶೇಷತೆ?
ಮಹೇಶ್​ ಬಾಬು ಕಾರವಾನ್
ರಾಜೇಶ್ ದುಗ್ಗುಮನೆ
|

Updated on:Mar 18, 2021 | 6:16 PM

Share

ಸೆಲೆಬ್ರಿಟಿಗಳು ವಾಹನ ಖರೀದಿ ಮಾಡಿದರೆ ಅದು ಸುದ್ದಿಯಾಗೋದು ಸಾಮಾನ್ಯ. ಅವರು ಖರೀದಿಸಿದ ವಾಹನ ಯಾವ ಕಂಪನಿಯದ್ದು, ಯಾವ ಮಾಡೆಲ್​, ಅದಕ್ಕೆ ಎಷ್ಟು ಬೆಲೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತದೆ. ಇದಕ್ಕೆ ಈಗ ಹೊಸ ಸೇರ್ಪಡೆ ಟಾಲಿವುಡ್​ ನಟ ಮಹೇಶ್​ ಬಾಬು. ಅವರು ಹೊಸದಾಗಿ ವಾಹನವೊಂದನ್ನು ಖರೀದಿ ಮಾಡಿದ್ದು, ಇದರ ಬೆಲೆ ಒಂದಲ್ಲ, ಎರಡಲ್ಲ ಬರೋಬ್ಬರಿ 8 ಕೋಟಿ ರೂಪಾಯಿ. ಅಷ್ಟಕ್ಕೂ ಮಹೇಶ್​ ಬಾಬು ಖರೀದಿ ಮಾಡಿದ ವಾಹನ ಯಾವುದು? ಅದರ ವಿಶೇಷತೆ ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಎರಡು ಸಿನಿಮಾಗಳಲ್ಲಿ ಬ್ಯುಸಿ ಇರುವ ಮಹೇಶ್​ ಬಾಬು ಕಾರವಾನ್​ ಒಂದನ್ನು ಖರೀದಿ ಮಾಡಿದ್ದಾರೆ. ದುಬಾರಿ ಬೆಲೆಯ ಈ ವಾಹನಕ್ಕೆ ಮಹೇಶ್​ ಬಾಬು 8 ಕೋಟಿ ರೂಪಾಯಿ ನೀಡಿದ್ದಾರೆ. ಈ ಕಾರವಾನ್​ ಒಳಭಾಗವನ್ನು ನೋಡಿದ ಅನೇಕರು ಅಚ್ಚರಿ ಹೊರ ಹಾಕಿದ್ದಾರೆ. ಮಹೇಶ್​ ಬಾಬು ಇತ್ತೀಚೆಗೆ ಸಿನಿಮಾ ಸೆಟ್​ಗೆ ಇದನ್ನು ಕೊಂಡೊಯ್ದಿದ್ದರು. ಸಿನಿಮಾ ಶೂಟಿಂಗ್​ ಮಧ್ಯೆ ಇದೇ ಕಾರಾವಾನ್​ಗೆ ತೆರಳಿ ರೆಸ್ಟ್​ ಮಾಡಿದ್ದರು. ಹೀಗಾಗಿ, ಇದು ಎಲ್ಲರ ಗಮನ ಸೆಳೆದಿದೆ.

ಭಾರತದಲ್ಲಿ ಅನೇಕ ಸ್ಟಾರ್​ಗಳು ಕಾರಾವಾನ್​ ಹೊಂದಿದ್ದಾರೆ. ಆದರೆ, ಇಷ್ಟು ದೊಡ್ಡ ಮೊತ್ತದಲ್ಲಿ ಯಾರೊಬ್ಬರೂ ಕಾರವಾನ್​ ಹೊಂದಿಲ್ಲ ಎನ್ನಲಾಗಿದೆ. ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಶಾರುಖ್​ ಖಾನ್​ ದುಬಾರಿ ವ್ಯಾನಿಟಿ ವ್ಯಾನ್​ ಇದೆ. ಮಹೇಶ್​ ಬಾಬು ಹೊಂದಿರುವ ಕ್ಯಾರಾವಾನ್​ ಬೆಲೆ ಇದಕ್ಕೂ ದುಬಾರಿ ಇದೆ ಎನ್ನಲಾಗಿದೆ. ಈ ಕಾರವಾನ್​ ಸಾಕಷ್ಟು ಫೀಚರ್​ಗಳನ್ನು ಹೊಂದಿದೆ. ಈ ಕ್ಯಾರಾವಾನ್​ನಲ್ಲಿ ಟಿವಿ ಇದೆ. ಸಣ್ಣ ಕಿಚನ್​, ವಾಶ್​​ರೂಂ ಇದೆ. ವಿಶೇಷ ಎಂದರೆ, ಇಲ್ಲಿ ಬಿಸಿ ಹಾಗೂ ತಂಪು ನೀರು ಎರಡೂ ಸಿಗಲಿದೆ. ಮೀಟಿಂಗ್​ ರೂಂ ಮತ್ತು ಬೆಡ್​ ರೂಂ ಕೂಡ ಇದೆ.

ಈ ಕಾರವಾನ್​ ಮೂಲ ಬೆಲೆ 6.25 ಕೋಟಿ ರೂಪಾಯಿ ಅಂತೆ. ಇಂಟೀರಿಯರ್​ ಡಿಸೈನ್​ಗಾಗಿ ಮಹೇಶ್​ ಬಾಬು ಹೆಚ್ಚುವರಿಯಾಗಿ 2 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರಂತೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ರಾಬರ್ಟ್ ಸಿನಿಮಾದ ಸಕ್ಸಸ್ ಮೀಟ್: ಹಿಂದೆ ಮುಂದೆ ನೋಡ್ದೆ ಒಪ್ಕೊಂಡಿದ್ದಕ್ಕೆ ಫಲ ಸಿಕ್ತು ಎಂದ ಶಿವರಾಜ್​ ಕೆ ಆರ್​ ಪೇಟೆ

Published On - 6:14 pm, Thu, 18 March 21

Follow Us
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK