AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಚುರಾಚಂದ್‌ಪುರದಲ್ಲಿ ನಾಲ್ವರು ಗುಂಡೇಟಿಗೆ ಬಲಿ; ಇಂಫಾಲ್‌ನಲ್ಲಿ ತೆರಿಗೆ ಸಹಾಯಕನ ಹತ್ಯೆ

ಭದ್ರತಾ ಸಿಬ್ಬಂದಿಯ ನಿಯೋಜನೆಯಿಂದಾಗಿ ಜನರು ತಮ್ಮ ಮನೆಗಳಿಂದ ಹೊರಬರುತ್ತಿಲ್ಲ. ಸಂಜೆ 7 ಗಂಟೆ ಸುಮಾರಿಗೆ, ಪಟ್ಟಣದಲ್ಲಿ ಸಿಕ್ಕಿಬಿದ್ದಿರುವ ಮೈತಿ ಜನರನ್ನು ಭದ್ರತಾ ಸಿಬ್ಬಂದಿಯಿಂದ ಸ್ಥಳಾಂತರಿಸಲಾಗುವುದು ಎಂಬ ಮಾಹಿತಿ ನಮಗೆ ಸಿಕ್ಕಿತು. ಪಟ್ಟಣದ ಮುಖ್ಯರಸ್ತೆಯಾದ ಟಿಡಿಂ ರಸ್ತೆಯಲ್ಲಿ ಜಮಾಯಿಸಿದ ಜನರು  ತೆರವು ವಿರೋಧಿಸಿ ರಸ್ತೆ ತಡೆ ನಡೆಸಿದರು

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಚುರಾಚಂದ್‌ಪುರದಲ್ಲಿ ನಾಲ್ವರು ಗುಂಡೇಟಿಗೆ ಬಲಿ; ಇಂಫಾಲ್‌ನಲ್ಲಿ ತೆರಿಗೆ ಸಹಾಯಕನ ಹತ್ಯೆ
ಮಣಿಪುರದಲ್ಲಿ ಹಿಂಸಾಚಾರ
ರಶ್ಮಿ ಕಲ್ಲಕಟ್ಟ
|

Updated on: May 06, 2023 | 12:47 PM

Share

ಮಣಿಪುರದ (Manipur) ಚುರಾಚಂದ್‌ಪುರದಲ್ಲಿ ಭದ್ರತಾ ಪಡೆಗಳು ಮೈತಿಗಳನ್ನು (Meiteis )ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸುತ್ತಿದ್ದಾಗ ನಾಲ್ವರು ಗುಂಡೇಟಿಗೆ ಬಲಿಯಾಗಿದ್ದಾರೆ. ಏತನ್ಮಧ್ಯೆ ಇಂಫಾಲ್‌ನಲ್ಲಿ (Imphal) ಲೆಟ್ಮಿಂಥಾಂಗ್ ಹಾಕಿಪ್ ಎಂದು ಗುರುತಿಸಲಾದ ತೆರಿಗೆ ಸಹಾಯಕನ ಹತ್ಯೆ ನಡೆದಿದೆ ಎಂದು ಭಾರತೀಯ ಕಂದಾಯ ಸೇವೆ (IRS) ಅಸೋಸಿಯೇಷನ್ ಎಂದು ಹೇಳಿದರು.ಯಾವುದೇ ಕಾರಣ ನೀಡಿ ಅಥವಾ ಸಿದ್ಧಾಂತದ ಹೆಸರು ಹೇಳು ಕರ್ತವ್ಯದಲ್ಲಿದ್ದ ಅಮಾಯಕ ಸಾರ್ವಜನಿಕ ಸೇವಕನ ಹತ್ಯೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಐಆರ್​​ಎಸ್ ಟ್ವೀಟ್ ಮಾಡಿದೆ. ರಾಜ್ಯದ ಬಹುಸಂಖ್ಯಾತ ಮೈತಿ ಸಮುದಾಯ ಮತ್ತು ಕುಕಿ ಬುಡಕಟ್ಟು ಜನಾಂಗದ ನಡುವಿನ ಬುಧವಾರ ಕಾದಾಟ ನಡೆದಿದ್ದು, ಅದರ ಬೆನ್ನಲ್ಲೇ ಚುರಾಚಂದ್‌ಪುರದಲ್ಲಿ ಈ ಗುಂಡಿನ ದಾಳಿ ನಡೆದಿದೆ. ರಾಜ್ಯದ ರಾಜಧಾನಿ ಇಂಫಾಲ್ ಹಿಂಸಾಚಾರದಲ್ಲಿ ಕುಕಿಗಳು ಗುರಿಯಾದರೆ ಗುಡ್ಡಗಾಡು ಬುಡಕಟ್ಟು ಜನಾಂಗದವರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮೈತಿಗಳೇ ಟಾರ್ಗೆಟ್.

ಬುಡಕಟ್ಟು ಜನಾಂಗದವರು ಮೈತಿಗಳನ್ನು ಪ್ರದೇಶದಿಂದ ಸ್ಥಳಾಂತರಿಸುವಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಗುಂಡಿನ ದಾಳಿ ನಡೆದಿದೆ.

ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಪಟ್ಟಣದಲ್ಲಿ ಗಲಭೆ ಆರಂಭವಾಗಿದೆ ಎಂದು ಚುರಾಚಂದಪುರದ ಸಂಶೋಧಕ ಮತ್ತು ನಿವಾಸಿ ಮುವಾನ್ ಹನ್ಸಿಂಗ್ (24) ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ನಿಯೋಜನೆಯಿಂದಾಗಿ ಜನರು ತಮ್ಮ ಮನೆಗಳಿಂದ ಹೊರಬರುತ್ತಿಲ್ಲ. ಸಂಜೆ 7 ಗಂಟೆ ಸುಮಾರಿಗೆ, ಪಟ್ಟಣದಲ್ಲಿ ಸಿಕ್ಕಿಬಿದ್ದಿರುವ ಮೈತಿ ಜನರನ್ನು ಭದ್ರತಾ ಸಿಬ್ಬಂದಿಯಿಂದ ಸ್ಥಳಾಂತರಿಸಲಾಗುವುದು ಎಂಬ ಮಾಹಿತಿ ನಮಗೆ ಸಿಕ್ಕಿತು. ಪಟ್ಟಣದ ಮುಖ್ಯರಸ್ತೆಯಾದ ಟಿಡಿಂ ರಸ್ತೆಯಲ್ಲಿ ಜಮಾಯಿಸಿದ ಜನರು  ತೆರವು ವಿರೋಧಿಸಿ ರಸ್ತೆ ತಡೆ ನಡೆಸಿದರು. ನಾವು ಮಹಿಳೆಯರನ್ನು ಬ್ಯಾರಿಕೇಡ್‌ನ ಮುಂಭಾಗದಲ್ಲಿ ನಿಲ್ಲಿಸಿದ್ದೆವು. ಯಾಕೆಂದರೆ ಅವರ ಮೇಲೆ ಗುಂಡು ಹಾರಿಸುವುದಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಮುವಾನ್ ಆರೋಪಿಸಿದ್ದಾರೆ.

80-200 ಜನರ ಸಭೆ ನಡೆದಿದೆ. ಇದರಲ್ಲಿ ನಾಲ್ಕು ಜನರು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಂಫಾಲ್‌ನಲ್ಲಿರುವ ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ಹೇಳಿದರು. ರಾಜ್ಯದ ವಿವಿಧ ಭಾಗಗಳಿಂದ ಜನರನ್ನು ಸ್ಥಳಾಂತರಿಸುವುದು ನಿರಂತರವಾಗಿ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ರಸ್ತೆಗಳ ತಡೆ ಸಾಮಾನ್ಯವಾಗಿದೆ ಎಂದಿದ್ದಾರೆ ಅವರು. ಅದೇ ವೇಳೆ ಕೇಂದ್ರ ಭದ್ರತಾ ಪಡೆಗಳ ಹಿರಿಯ ಅಧಿಕಾರಿಯೊಬ್ಬರು ನಾಲ್ವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮೂವರು ಸಾವಿಗೀಡಾಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:  ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಚ್ಚಿದ ಚೇಳು; ಅಪಾಯದಿಂದ ಪಾರು

ಏತನ್ಮಧ್ಯೆ, CRPF ನ DIG (ಕಾರ್ಯಾಚರಣೆ) ತನ್ನ ಪಡೆಗೆ ಆಂತರಿಕ ಸಂವಹನದಲ್ಲಿ ಹೀಗೆ ಬರೆದಿದ್ದಾರೆ: ಮಣಿಪುರದಲ್ಲಿ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯಲ್ಲಿ ರಜೆಯಲ್ಲಿರುವ CRPF ಸಿಬ್ಬಂದಿಯ ಸುರಕ್ಷತೆಯನ್ನು ಖಾತ್ರಿಪಡಿಸುವ ಬಗ್ಗೆ, ಸಕ್ಷಮ ಪ್ರಾಧಿಕಾರವು ಎಲ್ಲಾ ಘಟಕಗಳ ಕಚೇರಿಗಳು/ಸ್ಥಾಪನೆಗಳನ್ನು ತಕ್ಷಣವೇ ಬಯಸಿದೆ. ಪ್ರಸ್ತುತ ರಜೆಯಲ್ಲಿರುವ ಮಣಿಪುರದಿಂದ ಬಂದಿರುವ ಅವರ ಸಿಬ್ಬಂದಿಯನ್ನು ಸಂಪರ್ಕಿಸಿ. ಅವರು ಅಸುರಕ್ಷಿತ ಎಂದು ಭಾವಿಸಿದರೆ, ಅವರ ಕುಟುಂಬ ಸದಸ್ಯರೊಂದಿಗೆ ಹತ್ತಿರದ ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಎಫ್ ಸ್ಥಳಕ್ಕೆ ತಕ್ಷಣ ವರದಿ ಮಾಡಲು ಅವರಿಗೆ ನಿರ್ದೇಶಿಸಲಾಗುತ್ತದೆ. ದಯವಿಟ್ಟು ಆದ್ಯತೆಯ ಆಧಾರದ ಮೇಲೆ ಅಂತಹ ಸಿಬ್ಬಂದಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಿ ಎಂದು ಹೇಳಲಾಗಿದೆ.

ರಜೆಯಲ್ಲಿದ್ದ ಚೋಂಖೋಲೆನ್ ಹಕಿಪ್ ಎಂದು ಗುರುತಿಸಲಾದ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಗ್ರಾಮಕ್ಕೆ ಬೆಂಕಿ ಹಚ್ಚುತ್ತಿರುವವರನ್ನು ತಡೆಯಲು ಪ್ರಯತ್ನಿಸಿದಾಗ ಗುಂಡಿಕ್ಕಿ ಕೊಲ್ಲಲ್ಪಟ್ಟ ಒಂದು ದಿನದ ನಂತರ ಈ ರೀತಿ ನಿರ್ದೇಶನ ನೀಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ