AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಗೊಳ್ಳಲು ಕಾರಣ ಇಲ್ಲಿದೆ

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಕಲಹಗಳಿಗೆ ಮ್ಯಾನ್ಮಾರ್​ನಿಂದ ಬಂದ ಉಗ್ರಗಾಮಿ ಗುಂಪುಗಳೇ ಮೂಲ ಕಾರಣ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ಮ್ಯಾನ್ಮಾರ್​ನಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಯುದ್ಧಕ್ಕೆ ಪ್ರಚೋದನೆ ನೀಡಿದ್ದರು. ಈಗ ಮಣಿಪುರದಲ್ಲಿ ಕುಕಿ ಹಾಗೂ ಮೈತಿ ಸಮುದಾಯ ಹಾಗೂ ಕ್ರಿಶ್ಚಿಯನ್ ನಡುವೆ ಹಿಂಸಾಚಾರ ಹುಟ್ಟಿಗೂ ಕಾರಣರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಗೊಳ್ಳಲು ಕಾರಣ ಇಲ್ಲಿದೆ
ಮಣಿಪುರ ಹಿಂಸಾಚಾರ
ನಯನಾ ರಾಜೀವ್
|

Updated on:Dec 20, 2024 | 12:06 PM

Share

ಮ್ಯಾನ್ಮಾರ್​ನಲ್ಲಿ ಆಶ್ರಯ ಪಡೆದಿದ್ದ ಹಾಗೂ ಅದರ ಅಂತರ್ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತದ ಉಗ್ರಗಾಮಿ ಗುಂಪು ಈ ವರ್ಷ ಮಣಿಪುರಕ್ಕೆ ಒಂದೊಂದಾಗಿ ಹಿಂದಿರುಗುತ್ತಿವೆ. ಹೀಗಾಗಿ ಮಣಿಪುರದ ಪರಿಸ್ಥಿತಿ ಹದಗೆಡುತ್ತಿದೆ. ಮ್ಯಾನ್ಮಾರ್​ನಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಯುದ್ಧಕ್ಕೆ ಪ್ರಚೋದನೆ ನೀಡಿದ್ದರು. ಈಗ ಮಣಿಪುರದಲ್ಲಿ ಕುಕಿ ಹಾಗೂ ಮೈತಿ ಸಮುದಾಯ ಹಾಗೂ ಕ್ರಿಶ್ಚಿಯನ್ ನಡುವೆ ಹಿಂಸಾಚಾರ ಹುಟ್ಟಿಗೂ ಕಾರಣರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 2023ರಿಂದ ಸುಮಾರು 260 ಮಂದಿ ಸಾವನ್ನಪ್ಪಿದ್ದಾರೆ, 60 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ. ಭಾರತೀಯ ಮಿಲಿಟರಿ ಅಧಿಕಾರಿಗಳು ಹಾಗೂ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಉಗ್ರಗಾಮಿಗಳು ಗಡಿಯನ್ನು ದಾಟಿ ಮಣಿಪುರಕ್ಕೆ ಬರುತ್ತಿದ್ದಂತೆ ಹೊಸ ಸಂಘರ್ಷಗಳು ತೆರೆದುಕೊಳ್ಳುತ್ತಿವೆ.

ಫೈಟರ್‌ಗಳು ರಾಕೆಟ್ ಲಾಂಚರ್‌ಗಳು ಸೇರಿದಂತೆ ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ನವೆಂಬರ್‌ನಲ್ಲಿ ಮಾತ್ರ 20 ಜನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಫೆಡರಲ್ ಸರ್ಕಾರವು ಮಣಿಪುರದಲ್ಲಿ 10,000 ಹೆಚ್ಚು ಸೈನಿಕರನ್ನು ನಿಯೋಜಿಸುವುದಾಗಿ ಘೋಷಿಸಿತು.

10 ವರ್ಷಗಳ ಹಿಂದೆ ನಾವು ನಿಯಂತ್ರಿಸಿದ್ದ ದಂಗೆಕೋರರು ಮತ್ತೆ ಮುನ್ನಲೆಗೆ ಬಂದಿದ್ದಾರೆ ಎಂದು ಮಣಿಪುರದ ಪೊಲೀಸ್ ಮಾಜಿ ಮುಖ್ಯಸ್ಥ ಯುಮ್ನಮ್ ಹೇಳಿದ್ದಾರೆ. ಕೆಲವರು ಮ್ಯಾನ್ಮಾರ್​ನಿಂದ ಹಿಂದಿರುಗುತ್ತಿದ್ದಾರೆ, ಕೆಲವರು ಈಗಾಗಲೇ ಬಂದಿದ್ದಾರೆ. ಮಣಿಪುರವು ಭಾರತದ ಈಶಾನ್ಯದಲ್ಲಿ 3.2 ಮಿಲಿಯನ್ ಜನರಿರುವ ಗುಡ್ಡಗಾಡು, ಅರಣ್ಯ ಪ್ರದೇಶವಾಗಿದ್ದು, ಮ್ಯಾನ್ಮಾರ್‌ನ ಗಡಿಯಲ್ಲಿದೆ.

ಮತ್ತಷ್ಟು ಓದಿ: ರಾಕೆಟ್ ದಾಳಿಯ ನಂತರ ಮಣಿಪುರದ ಜಿರಿಬಾಮ್​​ನಲ್ಲಿ ಹಿಂಸಾಚಾರ, 4 ಸಾವು

ರಾಜ್ಯದ ಸಮೃದ್ಧ ಇಂಫಾಲ್ ಕಣಿವೆ ಪ್ರದೇಶದಲ್ಲಿ ವಾಸಿಸುವ ಮೈತಿ, ಹೆಚ್ಚು ಬಡತನದ ಬೆಟ್ಟಗಳಲ್ಲಿ ವಾಸಿಸುವ ಐತಿಹಾಸಿಕವಾಗಿ ಹಿಂದುಳಿದ ಕುಕಿಗಳಿಗೆ ನೀಡಿದ ಸರ್ಕಾರಿ ಪ್ರಯೋಜನಗಳನ್ನು ನೀಡುವ ನ್ಯಾಯಾಲಯದ ಆದೇಶದಿಂದ ಕಳೆದ ವರ್ಷ ಅಲ್ಲಿ ಹೋರಾಟವು ಕಿಡಿ ಹೊತ್ತಿಸಿತ್ತು.

ಹಿಂಸಾಚಾರವನ್ನು ಕಡಿಮೆ ಮಾಡಲು ಭದ್ರತಾ ಪಡೆಗಳು ಎರಡು ಗುಂಪುಗಳ ನಡುವೆ ಬಫರ್ ವಲಯನ್ನು ನಿರ್ಮಿಸಲಾಗಿದೆ. ಕುಕಿಗಳು, ಕಚಿನ್ ಬಂಡುಕೋರರ ಬೆಂಬಲವನ್ನು ಹೊಂದಿದ್ದಾರೆ.ಮಣಿಪುರಕ್ಕೆ ಮರಳಿದ ಉಗ್ರರ ಸಂಖ್ಯೆ ಇಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ.

ಮ್ಯಾನ್ಮಾರ್ ಗಡಿಯಲ್ಲಿ ಭಾರತೀಯ ಅಧಿಕಾರಿಗಳು ತಡೆದ ಕೆಲವರು ಸೇರಿದಂತೆ 100 ಕ್ಕೂ ಹೆಚ್ಚು ಮೈಟಿ ಬಂಡುಕೋರರನ್ನು ಕಳೆದ ವರ್ಷ ಮಣಿಪುರದಲ್ಲಿ ಮತ್ತು 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅದೇ ಅವಧಿಯಲ್ಲಿ ಸುಮಾರು 50 ಕುಕಿ ದಂಗೆಕೋರರನ್ನು ಬಂಧಿಸಲಾಗಿದೆ ಎಂದು ಡೇಟಾ ತೋರಿಸುತ್ತದೆ.

ಮಣಿಪುರದಲ್ಲಿ ಬಳಸಲಾಗುತ್ತಿರುವ ಹಲವು ಶಸ್ತ್ರಾಸ್ತ್ರಗಳನ್ನು ಸಂಘರ್ಷದ ಆರಂಭಿಕ ತಿಂಗಳುಗಳಲ್ಲಿ ರಾಜ್ಯದ ಶಸ್ತ್ರಾಸ್ತ್ರಗಳಿಂದ ಲೂಟಿ ಮಾಡಲಾಗಿತ್ತು. ಈ ವರ್ಷ ಹೆಚ್ಚು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮ್ಯಾನ್ಮಾರ್‌ನಿಂದ ತರಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:03 pm, Fri, 20 December 24

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ