AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SC on Hindu Marriage: ಹಿಂದೂ ಸಂಪ್ರದಾಯದಂತೆ ನಡೆಯದ ಮದುವೆ ಅಸಿಂಧು: ಸುಪ್ರೀಂ

Hindu marriage validity: ಹಿಂದೂ ವಿವಾಹ ಕಾಯ್ದೆಯಡಿ ಸೂಚಿಸಲಾದ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಾರಂಭಗಳು ಶ್ರದ್ಧೆಯಿಂದ, ಕಟ್ಟುನಿಟ್ಟಾಗಿ ಮತ್ತು ಧಾರ್ಮಿಕವಾಗಿರಬೇಕು ಎಂದು ಹೇಳಿದೆ. ಒಂದು ವೇಳೆ ಇವುಗಳನ್ನು ಅನುಸರಿಸಲು ವಿಫಲವಾದರೆ ಆ ಮದುವೆಯನ್ನು ನೋಂದಾಯಿಸಿದ ನಂತರವೂ ಅಮಾನ್ಯವೆಂದು ಘೋಷಿಸಲಾಗುತ್ತದೆ ಎಂದು ಕಟ್ಟುನಿಟ್ಟಾಗಿ ಹೇಳಿದೆ.

SC on Hindu Marriage: ಹಿಂದೂ ಸಂಪ್ರದಾಯದಂತೆ ನಡೆಯದ ಮದುವೆ ಅಸಿಂಧು: ಸುಪ್ರೀಂ
ಅಕ್ಷಯ್​ ಪಲ್ಲಮಜಲು​​
| Updated By: Vimal Kumar|

Updated on:May 02, 2024 | 12:38 PM

Share

ಹಿಂದೂ ಧರ್ಮದಲ್ಲಿ ನಡೆಯುವ ವಿವಾಹವು (Hindu marriage) ಅದೊಂದು ಪವಿತ್ರವಾದ ಪ್ರಕ್ರಿಯೇ ಹೊರತು ಹಾಡು ಮತ್ತು ನೃತ್ಯ ಭೋಜನಕ್ಕೆ ಮಾತ್ರ ಸೀಮಿತವಲ್ಲ ಎಂದು ಸುಪ್ರೀ ಕೋರ್ಟ್​​ ಹೇಳಿದೆ. ಹಿಂದೂ ವಿವಾಹ ಕಾಯ್ದೆಯಡಿ ಸೂಚಿಸಲಾದ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಾರಂಭಗಳು ಶ್ರದ್ಧೆಯಿಂದ, ಕಟ್ಟುನಿಟ್ಟಾಗಿ ಮತ್ತು ಧಾರ್ಮಿಕವಾಗಿರಬೇಕು ಎಂದು ಹೇಳಿದೆ. ಒಂದು ವೇಳೆ ಇವುಗಳನ್ನು ಅನುಸರಿಸಲು ವಿಫಲವಾದರೆ ಆ ಮದುವೆಯನ್ನು ನೋಂದಾಯಿಸಿದ ನಂತರವೂ ಅಮಾನ್ಯವೆಂದು ಘೋಷಿಸಲಾಗುತ್ತದೆ ಎಂದು ಕಟ್ಟುನಿಟ್ಟಾಗಿ ಹೇಳಿದೆ.

ಈ ಬಗ್ಗೆ ಕಾಯಿದೆಯ ಸೆಕ್ಷನ್ 7 ‘ಹಿಂದೂ ವಿವಾಹದ ಆಚರಣೆಗಳ ಬಗ್ಗೆ ಹೇಳುತ್ತದೆ. ಮದುವೆಯ ಸಿಂಧುತ್ವಕ್ಕಾಗಿ ಅದನ್ನು ಅನುಸರಿಸಬೇಕು. ಒಂದು ವೇಳೆ ಇದನ್ನು ಪಾಲಿಸದಿದ್ದಾರೆ, ಕಾನೂನಿನ ದೃಷ್ಟಿಯಲ್ಲಿ ಮದುವೆಯನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಹೇಳಿದೆ. ಸೆಕ್ಷನ್ 7 ಹೇಳುವಂತೆ ಹಿಂದೂ ವಿವಾಹವನ್ನು ಯಾವುದೇ ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳಿಗೆ ಅನುಗುಣವಾಗಿ ನಡೆಸಬಹುದು ಎಂದು ಹೇಳಿದೆ.

ಈ ಆದೇಶವನ್ನು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ನೀಡಿದೆ. ಹಿಂದೂ ವಿವಾಹವು ‘ಸಂಸ್ಕಾರ’ ಮತ್ತು ಭಾರತೀಯ ಸಮಾಜಕ್ಕೆ ಒಂದು ಶೋಭೆಯನ್ನು ತರುವ ಮೌಲ್ಯಯುತವಾದ ಸಂಸ್ಕಾರವಾಗಿದೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್​​​ ಈ ಆದೇಶವನ್ನು ನೀಡಲು ಈ ಪ್ರಕರಣ ಕಾರಣವಾಗಿದೆ. ಇಬ್ಬರು ದಂಪತಿಗಳ ವಿವಾಹ ಮಾನ್ಯವಾಗಿದ್ದರು. ಅವರು ಹಿಂದೂ ಧರ್ಮದ ಸಂಪ್ರದಾಯದಂತೆ ಮದುವೆಯಾಗಿಲ್ಲ. ಅದಕ್ಕಾಗಿ ಅವರ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ತಡೆಹಿಡಿದಿದೆ. ಈ ವಿಚಾರಣೆ ವೇಳೆ ಕೋರ್ಟ್​​​ ವಿವಾಹ ಕಾಯ್ದೆ ಹಾಗೂ ಕಾನೂನಿ ಪ್ರಕಾರ ಹಿಂದೂ ವಿವಾಹ ಹೇಗಿರಬೇಕು ಎಂದು ಹೇಳಿದೆ. ಯುವಕರು ಮತ್ತು ಯುವತಿಯರು ಮದುವೆ ಮಾಡಿಕೊಳ್ಳುವ ಮೊದಲು ವಿವಾಹದ ಸಂಪ್ರಾದಾಯಗಳನ್ನು ಹಾಗೂ ಅದರ ಕಟ್ಟುಪಡುಗಳನ್ನು ತಿಳಿದುಕೊಳ್ಳಬೇಕು ಹಾಗೂ ಅದರ ಬಗ್ಗೆ ಯೋಚನೆ ಮಾಡಬೇಕು ಎಂದು ಪೀಠವು ಹೇಳಿದೆ.

ಮದುವೆ ಎನ್ನುವುದು, ಹಾಡು, ಡ್ಯಾನ್ಸ್​​​​, ಊಟ, ಮಾತ್ರವಲ್ಲ ಹಾಗೂ ಒತ್ತಡದಿಂದ ವರದಕ್ಷಿಣೆ ನೀಡುವುದು ಸರಿಯಲ್ಲ, ಇದು ಕೊನೆಗೆ ಕ್ರಿಮಿನಲ್ ಮೊಕದ್ದಮೆ ಕಾರಣವಾಗುತ್ತದೆ. ಮದುವೆ ಎನ್ನುವುದು ವ್ಯಾಪಾರವಲ್ಲ, ಇದು ಭಾರತೀಯ ಸಮಾಜದ ಮೂಲ ಹಾಗೂ ಮುಂದಿನ ನಿಮ್ಮ ವಿಕಸಿತ ಕುಟುಂಬಕ್ಕೆ ಸ್ಥಾನಮಾನ ನೀಡುವ ಹಾದಿಯಾಗಿದೆ. ಹಾಗಾಗಿ ಈ ಬಗ್ಗೆ ಒಂದು ಬಾರಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದೆ.

ಇದನ್ನೂ ಓದಿ: ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕೈಬಿಟ್ಟ ಆರೋಗ್ಯ ಇಲಾಖೆ, ಕಾರಣವೇನು?

ವಿವಾಹ ಎನ್ನುವುದು ಜೀವಗಳನ್ನು ಒಗ್ಗೂಡಿಸುವ, ಸಮಾನ, ಒಮ್ಮತದ ಮತ್ತು ಆರೋಗ್ಯಕರ ಸಮ್ಮಿಲ ಎಂದು ಪೀಠ ಹೇಳಿದೆ. ಹಿಂದೂ ವಿವಾಹವು ಸಂತಾನ ಹಾಗೂ ಕುಟುಂಬವನ್ನು ಬಳಸಪಡಿಸುವ ಘಟಕ ಹಾಗೂ ವಿವಿಧ ಸಮುದಾಯಗಳಲ್ಲಿ ಭ್ರಾತೃತ್ವದ ಮನೋಭಾವವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:12 am, Thu, 2 May 24