Sign In

By signing in or creating an account, you agree with Associated Broadcasting Company's Terms & Conditions and Privacy Policy.

Horrible Video: ಕಸದ ರಾಶಿಗೆ ಬಿದ್ದ ಬೆಂಕಿಯ ರೌದ್ರತೆ ಇದು; ಅಗ್ನಿ ಜ್ವಾಲೆಯ ಭೀಕರತೆ ನೋಡಿ ಬೆಚ್ಚಿದ ಸ್ಥಳೀಯರು

ಅಲ್ಲೇ ಸಮೀಪದ ಪ್ರದೇಶಗಳಲ್ಲಿ ಕೆಲವು ಗುಡಿಸಲುಗಳಿದ್ದು, ಮಹಿಳೆಯರು ತೆರೆದ ಪ್ರದೇಶದಲ್ಲಿ ಒಲೆಗೆ ಬೆಂಕಿ ಹಾಕಿ ಅಡುಗೆ ಮಾಡುತ್ತಿದ್ದರು. ಜೋರಾದ ಗಾಳಿ ಬಂದಾಗ ಬೆಂಕಿಯ ಕಿಡಿ ಹಾರಿ ಕಸಕ್ಕೆ ಬೆಂಕಿ ಬಿದ್ದಿದೆ ಎಂದು ವರದಿಯಾಗಿದೆ.

Horrible Video: ಕಸದ ರಾಶಿಗೆ ಬಿದ್ದ ಬೆಂಕಿಯ ರೌದ್ರತೆ ಇದು; ಅಗ್ನಿ ಜ್ವಾಲೆಯ ಭೀಕರತೆ ನೋಡಿ ಬೆಚ್ಚಿದ ಸ್ಥಳೀಯರು
ಬೆಂಕಿಯ ದೃಶ್ಯ
Follow us
TV9 Web
| Updated By: Lakshmi Hegde

Updated on:Apr 26, 2022 | 9:05 AM

ಗುರ್​ಗಾಂವ್​​ನ ಮನೇಸರ್​ ಎಂಬಲ್ಲಿ ತ್ಯಾಜ್ಯದ ರಾಶಿಗೆ ಭಾರಿ ಪ್ರಮಾಣದಲ್ಲಿ ಬೆಂಕಿ ತಗುಲಿದೆ. ಮನೇಸರ್​ನ ಸೆಕ್ಟರ್​ 6ರ ಬಳಿ, ಸೋಮವಾರ ರಾತ್ರಿ ಮೊದಲು ಕಸದ ರಾಶಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಿಪ್ರವಾಗಿ ವಿಶಾಲವಾದ ಪ್ರದೇಶಕ್ಕೆ ಆವರಿಸಿದೆ. ಸೋಮವಾರ ಸಂಜೆ ಹೊತ್ತಿಗೆ ದೆಹಲಿ-ಎನ್​ಸಿಆರ್​ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಧೂಳು ಸಹಿತ, ಬಿರುಗಾಳಿ ಕಾಣಿಸಿಕೊಂಡಿತ್ತು. ಅದಾದ ಕೆಲವೇ ಹೊತ್ತಲ್ಲಿ ಬೆಂಕಿ ಹೊತ್ತಿಕೊಂಡಿದೆ.  35 ಫೈರ್​ ಎಂಜಿನ್​​ಗಳ ಸಹಾಯದಿಂದ, ಸತತ ಆರು ತಾಸುಗಳ ಕಾಲ ನಿರಂತರ ಶ್ರಮವಹಿಸಿದ ಬಳಿಕ ಬೆಂಕಿ ಆರಿಸಲಾಗಿದೆ. ಬೆಂಕಿಯ ಭಯಾನಕ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ.

ಅಲ್ಲೇ ಸಮೀಪದ ಪ್ರದೇಶಗಳಲ್ಲಿ ಕೆಲವು ಗುಡಿಸಲುಗಳಿದ್ದು, ಮಹಿಳೆಯರು ತೆರೆದ ಪ್ರದೇಶದಲ್ಲಿ ಒಲೆಗೆ ಬೆಂಕಿ ಹಾಕಿ ಅಡುಗೆ ಮಾಡುತ್ತಿದ್ದರು. ಜೋರಾದ ಗಾಳಿ ಬಂದಾಗ ಬೆಂಕಿಯ ಕಿಡಿ ಹಾರಿ ಕಸಕ್ಕೆ ಬೆಂಕಿ ಬಿದ್ದಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ಬೆಂಕಿ ವಿಪರೀತವಾಗಿ ಪಸರಿಸಿದ ಬೆನ್ನಲ್ಲೇ, ಸಿಲಿಂಡರ್ ಸ್ಫೋಟಗಳೂ ಆಗಿವೆ. ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ. ಹಾಗಂತ ಬೆಂಕಿಗೆ ಕಾರಣವೇನು ಎಂಬುದನ್ನೂ ಇನ್ನೂ ಸ್ಥಳೀಯ ಆಡಳಿತ ಸ್ಪಷ್ಟ ಪಡಿಸಿಲ್ಲ.

ಬೆಂಕಿಯ ಮತ್ತು ಅದರಿಂದ ಉಂಟಾದ ದಟ್ಟ ಹೊಗೆಯ ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅದೆಷ್ಟೋ ಮಂದಿ ತಮ್ಮ ಮನೆಯ ಬಾಲ್ಕನಿಗಳಿಗೆ ಬಂದು ನಿಂತು ಫೋಟೋ-ವಿಡಿಯೋ ಸೆರೆ ಹಿಡಿದಿದ್ದಾರೆ. ಅದಲ್ಲಿ ಎಎನ್​ಐ ಮಾಧ್ಯಮವೂ ಕೂಡ ಒಂದು ವಿಡಿಯೋವನ್ನು ಶೇರ್ ಮಾಡಿದ್ದು, ಆಕಾಶದೆತ್ತರಕ್ಕೆ ಎದ್ದ ಹೊಗೆಯನ್ನು ಅದರಲ್ಲಿ ನೋಡಬಹುದು. ಇದು ನಿಜಕ್ಕೂ ಭಯಾನಕ ದೃಶ್ಯವೇ ಆಗಿದೆ.

ಇದನ್ನೂ ಓದಿ: ಋತುವಿಲಾಸಿನಿ : ಸಾವು ಆವರಿಸುವ ಹೊತ್ತಿನಲ್ಲಿ ನೀನು ಹೊರಗಿರಬೇಕು ಅಂತ ಬಯಸುವವಳು ನಾನು 

Published On - 9:04 am, Tue, 26 April 22

ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ