AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandrayaan 3 Scientists: ಈ ಮೂನ್ ಮಿಷನ್‌ನ ಹಿಂದಿನ ಅದ್ಭುತ ವಿಜ್ಞಾನಿಗಳ ಪರಿಚಯ ಇಲ್ಲಿದೆ

ಚಂದ್ರಯಾನ-3: ಹಲವಾರು ವಿಜ್ಞಾನಿಗಳು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ವರ್ಷಗಳ ಕಾಲ ಹಗಲಿರುಳು ಶ್ರಮಿಸಿದ ಫಲವೇ ಈ ಚಂದ್ರಯಾನ-3 ಮಿಷನ್. ಮಿಷನ್‌ನ ಹಿಂದಿನ ಕೆಲವು ಪ್ರಮುಖ ವ್ಯಕ್ತಿಗಳ ವಿವರಗಳು ಇಲ್ಲಿವೆ

Chandrayaan 3 Scientists: ಈ ಮೂನ್ ಮಿಷನ್‌ನ ಹಿಂದಿನ ಅದ್ಭುತ ವಿಜ್ಞಾನಿಗಳ ಪರಿಚಯ ಇಲ್ಲಿದೆ
ಚಂದ್ರಯಾನ 3 ರ ಹಿಂದಿನ ಇಸ್ರೋ ವಿಜ್ಞಾನಿಗಳು
Follow us
ನಯನಾ ಎಸ್​ಪಿ
|

Updated on: Aug 23, 2023 | 11:10 AM

ಚಂದ್ರಯಾನ-3 (Chandrayaan 3) ಇಂದು (ಆಗಸ್ಟ್ 23, 2023) ಸಂಜೆ ಸುಮಾರು 6:04 ಗಂಟೆಗೆ ಚಂದ್ರನನ್ನು ಸ್ಪರ್ಶಿಸಲಿದೆ ಎಂದು ಇಸ್ರೋ ತಿಳಿಸಿದೆ. ಇಡೀ ದೇಶವು ಚಂದ್ರಯಾನ-3 ರ ಸುರಕ್ಷಿತ ಇಳಿಯುವಿಕೆಯ ನಿರೀಕ್ಷೆಯಲ್ಲಿದೆ. ಈ ಗುರಿಯನ್ನು ಸಾಧಿಸಲು ನಮ್ಮ ಇಸ್ರೋ ವಿಜ್ಞಾನಿಗಳು (ISRO Scientists) ಪಟ್ಟಿರುವ ಶ್ರಮ ಶೀಘ್ರದಲ್ಲೇ ಫಲ ನೀಡುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ ಚಂದ್ರಯಾನ-3 ತಂಡವು ಈ ಯೋಜನೆಯಲ್ಲಿ ಸಾಕಷ್ಟು ಆಕಾಂಕ್ಷೆಗಳನ್ನು ಹೂಡಿದೆ. ಈ ಮೂನ್ ಮಿಷನ್ ಚಂದ್ರನ ಮೇಲೆ ಸುರಕ್ಷಿತ ಲ್ಯಾಂಡಿಂಗ್ ಮತ್ತು ಅದರ ಮೇಲ್ಮೈಯನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ.

ಈ ಮಿಷನ್ ಸಾಧ್ಯವಾಗಿಸಿದ ಜನರ ಪ್ರಮುಖ ವಿವರಗಳು ಇಲ್ಲಿವೆ:

ಎಸ್ ಸೋಮನಾಥ್ (ಇಸ್ರೋ ಅಧ್ಯಕ್ಷ)

ಎಸ್ ಸೋಮನಾಥ್ ಅವರು ಭಾರತದ ಚಂದ್ರಯಾನ ಮಿಷನ್ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಇವರು ಕಳೆದ ವರ್ಷದ ಜನವರಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನಾಯಕತ್ವವನ್ನು ವಹಿಸಿಕೊಂಡರು. ಇವರು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಮತ್ತು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವೆರಡು ಸಂಸ್ಥೆ ISRO ಗಾಗಿ ರಾಕೆಟ್ ತಂತ್ರಜ್ಞಾನಗಳ ಅಭಿವೃದ್ಧಿಗೆ ಪ್ರಾಥಮಿಕ ಕೇಂದ್ರಗಳು. ಎಸ್ ಸೋಮನಾಥ್ ಅವರು ಚಂದ್ರಯಾನ-3, ಹಾಗೆಯೇ ಆದಿತ್ಯ-L1 ಟು ಸನ್ ಮತ್ತು ಗಗನ್ಯಾನ್ (ಭಾರತದ ಮೊದಲ ಮಾನವಸಹಿತ ಮಿಷನ್) ನಂತಹ ಇತರ ಮಹತ್ವದ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿದ್ದಾರೆ.

ಪಿ ವೀರಮುತ್ತುವೇಲ್ (ಚಂದ್ರಯಾನ 3 ಯೋಜನಾ ನಿರ್ದೇಶಕ)

2019 ರಲ್ಲಿ ಚಂದ್ರಯಾನ-3 ಯೋಜನೆಯ ಚುಕ್ಕಾಣಿ ಹಿಡಿಯುವ ಮೊದಲು, ಪಿ ವೀರಮುತ್ತುವೆಲ್ ಅವರು ಇಸ್ರೋದ ಬಾಹ್ಯಾಕಾಶ ಮೂಲಸೌಕರ್ಯ ಕಾರ್ಯಕ್ರಮ ಕಚೇರಿಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಇವರು ಚಂದ್ರಯಾನ-2 ಯೋಜನೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಭಾರತದ ಎರಡನೆಯ ಮೂನ್-ಮಿಷನ್ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (IIT-M) ನಲ್ಲಿ ಪದವಿ ಪಡೆದ ಪಿ ವೀರಮುತ್ತುವೇಲ್ ತಮಿಳುನಾಡಿನ ವಿಲ್ಲುಪುರಂನಿಂದ ಬಂದಿದ್ದಾರೆ.

ಎಸ್ ಉನ್ನಿಕೃಷ್ಣನ್ ನಾಯರ್ (ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ನಿರ್ದೇಶಕ)

ಕೇರಳದ ತಿರುವನಂತಪುರಂನ ಸಮೀಪವಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC) ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ಮಾರ್ಕ್-III ಅನ್ನು ಅಭಿವೃದ್ಧಿಪಡಿಸಿತು, ನಂತರ ಅದನ್ನು ಲಾಂಚ್ ವೆಹಿಕಲ್ ಮಾರ್ಕ್-III ಎಂದು ಮರುನಾಮಕರಣ ಮಾಡಲಾಯಿತು. ವಿಎಸ್‌ಎಸ್‌ಸಿಯ ಉಸ್ತುವಾರಿ ವಹಿಸಿರುವ ಎಸ್ ಉನ್ನಿಕೃಷ್ಣನ್ ನಾಯರ್ ಚಂದ್ರಯಾನ 3 ಮಿಷನ್​ನ ಹಲವಾರು ಪ್ರಮುಖ ಕಾರ್ಯಗಳ ಉಸ್ತುವಾರಿ ವಹಿಸಿದ್ದಾರೆ.

ಎಂ ಶಂಕರನ್ (ಯು.ಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ)

ಎಂ ಶಂಕರನ್ ಅವರನ್ನು ಜೂನ್ 2021 ರಲ್ಲಿ ಯು.ಆರ್ ರಾವ್ ಉಪಗ್ರಹ ಕೇಂದ್ರದ (URSC) ನಿರ್ದೇಶಕರಾಗಿ ನೇಮಿಸಲಾಯಿತು. ಭಾರತದ ಎಲ್ಲಾ ಉಪಗ್ರಹಗಳನ್ನು ಈ ಕೇಂದ್ರದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ಮಿಸಲಾಗಿದೆ. ಸಂವಹನ, ನ್ಯಾವಿಗೇಷನ್, ರಿಮೋಟ್ ಸೆನ್ಸಿಂಗ್, ಹವಾಮಾನ ಮುನ್ಸೂಚನೆ ಮತ್ತು ಗ್ರಹಗಳ ಅನ್ವೇಷಣೆಯಲ್ಲಿ ರಾಷ್ಟ್ರದ ಅವಶ್ಯಕತೆಗಳನ್ನು ಪೂರೈಸಲು ಉಪಗ್ರಹಗಳನ್ನು ರಚಿಸುವ ಗುಂಪಿನ ಜವಾಬ್ದಾರಿಯನ್ನು ಪ್ರಸ್ತುತ ಎಂ ಶಂಕರನ್ ಹೊಂದಿದ್ದಾರೆ.

ಎ ರಾಜರಾಜನ್ (ಉಡಾವಣಾ ಅಧಿಕಾರ ಮಂಡಳಿ ಮುಖ್ಯಸ್ಥ)

ಎ ರಾಜರಾಜನ್ ಅವರು ಪ್ರಸಿದ್ಧ ವಿಜ್ಞಾನಿಯಾಗಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಶಾರ್ (SDSC SHAR) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು LAB ಯ ಅಧ್ಯಕ್ಷರೂ ಆಗಿದ್ದು, ಇದು ಉಡಾವಣೆಗೆ ಗ್ರೀನ್ ಸಿಗ್ನಲ್ ನೀಡುತ್ತದೆ. ಗಗನ್ಯಾನ್ ಮತ್ತು ಎಸ್‌ಎಸ್‌ಎಲ್‌ವಿ ಸೇರಿದಂತೆ ಇಸ್ರೋದ ವಿಸ್ತರಣೆಯ ಉಡಾವಣಾ ಬೇಡಿಕೆಗಳಿಗೆ ಘನ ಮೋಟಾರ್‌ಗಳು ಮತ್ತು ಉಡಾವಣಾ ಮೂಲಸೌಕರ್ಯಗಳು ಸಿದ್ಧವಾಗಿವೆ ಎಂದು ಎ ರಾಜರಾಜನ್ ಖಚಿತಪಡಿಸಿಕೊಂಡಿದ್ದಾರೆ ಮತ್ತು ಇದರ ಸಂಯೋಜಿತ ವಸ್ತುಗಳಲ್ಲಿ ಪರಿಣತರಾಗಿದ್ದಾರೆ.

ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್ ಚಂದ್ರನೂರಿನಲ್ಲಿ ಕಾಲೂರುವ ಆ ಕ್ಷಣ ಹೇಗಿರುತ್ತೆ? ಇಲ್ಲಿದೆ ವಿವರ

ಇವರೆಲ್ಲರ ಜೊತೆಗೆ, ಚಂದ್ರಯಾನ-3 ತಂಡವು ಯೋಜನೆಯ ಕಾರ್ಯಾಚರಣೆಯ ಘಟಕಗಳ ಉಸ್ತುವಾರಿ ವಹಿಸಿರುವ ನಿರ್ದೇಶಕ ಮೋಹನ್ ಕುಮಾರ್ ಮತ್ತು ವಾಹನ ನಿರ್ದೇಶಕ ಬಿಜು ಸಿ ಥಾಮಸ್ ಅವರನ್ನು ಒಳಗೊಂಡಿದೆ. ಸುಮಾರು 54 ಮಹಿಳಾ ಎಂಜಿನಿಯರ್‌ಗಳು/ವಿಜ್ಞಾನಿಗಳು ಈ ಕಾರ್ಯಾಚರಣೆಯಲ್ಲಿ ನೇರವಾಗಿ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ