AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರದೊಟ್ಟಿಗೆ ನಿಂತ ಮೇಘಾ ಇಂಜಿನಿಯರಿಂಗ್​ ಕಂಪನಿ; ಥೈಲ್ಯಾಂಡ್​ನಿಂದ 11 ಕ್ರಯೋಜನಿಕ್​ ಆಕ್ಸಿಜನ್​ ಟ್ಯಾಂಕರ್ ಆಮದು

ಎಂಇಐಎಲ್​ ಕಂಪನಿಯು ಮೇ 9ರಿಂದ 21ರವರೆಗೆ ಸುಮಾರು 29,694 ಮೆಟ್ರಿಕ್​ ಟನ್​ ಅಂದರೆ 3 ಕೋಟಿ ಲೀಟರ್​ಗಳಷ್ಟು ದ್ರವರೂಪದ ವೈದ್ಯಕೀಯ ಆಕ್ಸಿಜನ್​ನ್ನು ಪೂರೈಸಿದೆ.

ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರದೊಟ್ಟಿಗೆ ನಿಂತ ಮೇಘಾ ಇಂಜಿನಿಯರಿಂಗ್​ ಕಂಪನಿ; ಥೈಲ್ಯಾಂಡ್​ನಿಂದ 11 ಕ್ರಯೋಜನಿಕ್​ ಆಕ್ಸಿಜನ್​ ಟ್ಯಾಂಕರ್ ಆಮದು
ಆರ್ಮಿಯ ವಿಶೇಷ ವಿಮಾನದಲ್ಲಿ ಆಕ್ಸಿಜನ್ ಟ್ಯಾಂಕರ್​​ಗಳ ಆಮದು
Lakshmi Hegde
|

Updated on:May 22, 2021 | 5:09 PM

Share

ಹೈದರಾಬಾದ್​: ದೇಶದಲ್ಲಿ ಕೊರೊನಾ ಸೋಂಕಿನ ಉಲ್ಬಣತೆಯ ಬೆನ್ನಲ್ಲೇ ಹೆಚ್ಚುತ್ತಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ, ದೇಶದ ಸಂಘ-ಸಂಸ್ಥೆಗಳು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿವೆ. ಈಗಾಗಲೇ ಹಲವು ದೇಶಗಳು ಆಕ್ಸಿಜನ್​ ಸಾಂದ್ರಕಗಳನ್ನು ಭಾರತಕ್ಕೆ ಕಳಿಸುವ ಮೂಲಕ ತಮ್ಮ ಸಹಾಯ ಹಸ್ತ ಚಾಚಿವೆ. ಹಾಗೇ ಇದೀಗ ಹೈದರಾಬಾದ್​​ನ ಮೇಘಾ ಇಂಜಿನಿಯರಿಂಗ್​ ಆ್ಯಂಡ್ ಇನ್​​ಫ್ರಾಸ್ಟ್ರಕ್ಚರ್​ ಲಿಮಿಟೆಡ್​(MEIL) ಕಂಪನಿ ಥೈಲ್ಯಾಂಡ್​ನಿಂದ 11 ಕ್ರಯೋಜನಿಕ್​ ಆಕ್ಸಿಜನ್​ ಟ್ಯಾಂಕರ್​ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಆಕ್ಸಿಜನ್​ನ್ನು ಕಂಪನಿಯು ಸರ್ಕಾರಕ್ಕೆ ಉಚಿತವಾಗಿ ನೀಡಲಿದ್ದು, ಆಸ್ಪತ್ರೆಗಳಿಗೆ ಕೂಡ ಉಚಿತವಾಗಿಯೇ ವಿತರಣೆ ಆಗಲಿದೆ.

ಮೊದಲ ಹಂತದಲ್ಲಿ ಥೈಲ್ಯಾಂಡ್​ನಿಂದ ಒಟ್ಟು 3 ಆಕ್ಸಿಜನ್​ ಟ್ಯಾಂಕರ್​ಗಳನ್ನು ವಿಶೇಷ ಸೇನಾ ಏರ್​​ಕ್ರಾಫ್ಟ್ ಮೂಲಕ ತರಲಾಗಿದ್ದು, ಇಂದು ಹೈದರಾಬಾದ್​ನ ಬೇಗಂಪೇಟ್​ ಏರ್​ಪೋರ್ಸ್​ ಸ್ಟೇಶನ್​​ನಲ್ಲಿ ಬಂದಿಳಿದಿದೆ. ಉಳಿದ 8 ಆಕ್ಸಿಜನ್ ಟ್ಯಾಂಕರ್​ಗಳು ಕೂಡ ಕೆಲವೇ ದಿನಗಳಲ್ಲಿ ಭಾರತ ತಲುಪಲಿವೆ. ಪ್ರತಿ ಕ್ರಯೋಜನಿಕ್​ ಟ್ಯಾಂಕ್​​ 1.40 ಕೋಟಿ ಲೀಟರ್​ ಸಾಮರ್ಥ್ಯದ್ದಾಗಿದ್ದು, 11 ಟ್ಯಾಂಕ್​​ನಿಂದ 15.40 ಕೋಟಿ ಲೀಟರ್​ ವೈದ್ಯಕೀಯ ಆಮ್ಲಜನಕ ಭಾರತಕ್ಕೆ ಬರಲಿದೆ ಎಂದು ಮೇಘಾ ಇಂಜಿನಿಯರಿಂಗ್​​ ಆ್ಯಂಡ್ ಇನ್​​ಫ್ರಾಸ್ಟ್ರಕ್ಚರ್​ ಲಿಮಿಟೆಡ್ ತಿಳಿಸಿದೆ.

ಇನ್ನು ಎಂಇಐಎಲ್​ (ಮೇಘಾ ಇಂಜಿನಿಯರಿಂಗ್​ ​ಆ್ಯಂಡ್ ಇನ್​​ಫ್ರಾಸ್ಟ್ರಕ್ಚರ್​ ಲಿಮಿಟೆಡ್)ನ ಉನ್ನತ ಆಡಳಿತ ಮಂಡಳಿಯೊಟ್ಟಿಗೆ, ತೆಲಂಗಾಣ ಹಣಕಾಸು ಸಚಿವ ಟಿ. ಹರೀಶ್ ರಾವ್​ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್​ ಕುಮಾರ್ ನೇತೃತ್ವದಲ್ಲಿ ರಚಿಸಲಾದ ಹಿರಿಯ ಅಧಿಕಾರಿಗಳ ಸಲಹಾ ಸಮಿತಿಯು ಈ ಆಕ್ಸಿಜನ್​ ಆಮದಿಗೆ ಸಂಬಂಧಪಟ್ಟ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಇಐಎಲ್​ ಉಪಾಧ್ಯಕ್ಷ ಪಿ.ರಾಜೇಶ್​ ರೆಡ್ಡಿ, ದ್ರವರೂಪದ ವೈದ್ಯಕೀಯ ಆಕ್ಸಿಜನ್​ ಸಾಗಣೆಗೆ ಹಲವು ಅಡಚಣೆಗಳಿವೆ. ಆದರೆ ದೇಶದಲ್ಲಿನ ಆಕ್ಸಿಜನ್ ಕೊರತೆ ನೀಗಿಸಲು ನಮ್ಮ ಸಂಸ್ಥೆ ಸದಾ ಸಿದ್ಧವಿದ್ದು, ಇದೀಗ ಆಮದು ಮಾಡಿಕೊಳ್ಳುತ್ತಿರುವ 11 ಕ್ರಯೋಜನಿಕ್​​ ಟ್ಯಾಂಕ್​​ಗಳಿಂದ ಖಂಡಿತ ಸಹಾಯವಾಗಲಿದೆ. ಆಮ್ಲಜನಕ ಅಗತ್ಯ ಇರುವ ಆಸ್ಪತ್ರೆಗಳಿಗೆ ಸರ್ಕಾರ ಇದನ್ನು ವಿತರಿಸಬಹುದು ಎಂದು ಹೇಳಿದ್ದಾರೆ.

ಎಂಇಐಎಲ್​ ಕಂಪನಿಯು ಮೇ 9ರಿಂದ 21ರವರೆಗೆ ಸುಮಾರು 29,694 ಮೆಟ್ರಿಕ್​ ಟನ್​ ಅಂದರೆ 3 ಕೋಟಿ ಲೀಟರ್​ಗಳಷ್ಟು ದ್ರವರೂಪದ ವೈದ್ಯಕೀಯ ಆಕ್ಸಿಜನ್​ನ್ನು ಪೂರೈಸಿದೆ. ಹೈದರಾಬಾದ್​ನ ಬೊಲಾರಮ್​​ನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಹೊಂದಿರುವ ಈ ಕಂಪನಿ ತೆಲಂಗಾಣ ಮಾತ್ರವಲ್ಲದೆ, ಆಂಧ್ರಪ್ರದೇಶ, ಒಡಿಶಾದ ಆಸ್ಪತ್ರೆಗಳಿಗೂ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುತ್ತಿದೆ.

ಇದನ್ನೂ ಓದಿ: ಕೊರೊನಾ ಮಾರ್ಗಸೂಚಿ ಗಾಳಿಗೆ ತೂರಿ ವಿಜಯೇಂದ್ರ ಪೂಜೆ: ನಂಜನಗೂಡಿನಲ್ಲಿ ಸಚಿವ ಸೋಮಶೇಖರ್ ಗೌಪ್ಯ ಸಭೆ

CBSE Exams: ಪರೀಕ್ಷೆ ಬೇಕೇ, ಬೇಡವೇ? ವಿದ್ಯಾರ್ಥಿಗಳ ಬಳಿ ಸಲಹೆ ಕೇಳಿದ ಕೇಂದ್ರ ಸರ್ಕಾರ

Published On - 5:04 pm, Sat, 22 May 21

Follow Us
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?