AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗೆ ಹೋದ್ರೆ ಅಮ್ಮ ಸ್ನಾನ ಮಾಡಿಸ್ತಾಳೆ ಎಂದು ಕಾರಿನಲ್ಲಿ ಹೋಗಿ ಅಡಗಿ ಕುಳಿತ ಬಾಲಕ, ಉಸಿರುಗಟ್ಟಿ ಸಾವು

ಮನೆಗೆ ಹೋದ್ರೆ ತಾಯಿ ಸ್ನಾನ ಮಾಡಿಸ್ತಾಳೆ ಎಂದು ನಿಲ್ಲಿಸಿದ್ದ ಕಾರಿನಲ್ಲಿ ಅಡಗಿ ಕುಳಿತ 5 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಗುಜರಾತ್​ನ ಜುನಾಗಢದಲ್ಲಿ ನಡೆದಿದೆ. ತಾಯಿ ಭಾರತಿ ಆತನನ್ನು ಸ್ನಾನಕ್ಕೆ ಬರುವಂತೆ ಕರೆದಿದ್ದರು, ಆದಿತ್ಯನಿಗೆ ನಿತ್ಯ ಆಟವಾಡುವ ಆಸೆ, ಯಾರು ಸ್ನಾನ ಮಾಡ್ತಾರೆ ಎನ್ನುವ ಆಲಸ್ಯ ಹಾಗಾಗಿ ಅಲ್ಲೇ ಹತ್ತಿರದ ಕಾರ್ಖಾನೆಯೊಂದರಲ್ಲಿ ಹಲವು ದಿನಗಳಿಂದ ನಿಲ್ಲಿಸಲಾಗಿದ್ದ ಕಾರಿನೊಳಗೆ ಬಾಲಕ ಹತ್ತಿದ್ದಾನೆ.

ಮನೆಗೆ ಹೋದ್ರೆ ಅಮ್ಮ ಸ್ನಾನ ಮಾಡಿಸ್ತಾಳೆ ಎಂದು ಕಾರಿನಲ್ಲಿ ಹೋಗಿ ಅಡಗಿ ಕುಳಿತ ಬಾಲಕ, ಉಸಿರುಗಟ್ಟಿ ಸಾವು
ಕಾರು-ಸಾಂದರ್ಭಿಕ ಚಿತ್ರImage Credit source: India Today
ನಯನಾ ರಾಜೀವ್
|

Updated on: Sep 27, 2023 | 3:09 PM

Share

ಮನೆಗೆ ಹೋದ್ರೆ ತಾಯಿ ಸ್ನಾನ ಮಾಡಿಸ್ತಾಳೆ ಎಂದು ನಿಲ್ಲಿಸಿದ್ದ ಕಾರಿನಲ್ಲಿ ಅಡಗಿ ಕುಳಿತ 5 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಗುಜರಾತ್​ನ ಜುನಾಗಢದಲ್ಲಿ ನಡೆದಿದೆ. ತಾಯಿ ಭಾರತಿ ಆತನನ್ನು ಸ್ನಾನಕ್ಕೆ ಬರುವಂತೆ ಕರೆದಿದ್ದರು, ಆದಿತ್ಯನಿಗೆ ನಿತ್ಯ ಆಟವಾಡುವ ಆಸೆ, ಯಾರು ಸ್ನಾನ ಮಾಡ್ತಾರೆ ಎನ್ನುವ ಆಲಸ್ಯ ಹಾಗಾಗಿ ಅಲ್ಲೇ ಹತ್ತಿರದ ಕಾರ್ಖಾನೆಯೊಂದರಲ್ಲಿ ಹಲವು ದಿನಗಳಿಂದ ನಿಲ್ಲಿಸಲಾಗಿದ್ದ ಕಾರಿನೊಳಗೆ ಬಾಲಕ ಹತ್ತಿದ್ದಾನೆ. ಆದರೆ ಕೆಲವೇ ಕ್ಷಣಗಳಲ್ಲಿ ಬಾಗಿಲು ಮುಚ್ಚಿದೆ, ಬಾಗಿಲು ತೆರೆಯುವುದು ಹೇಗೆ ಎಂದು ತೋಚದೆ ಉಸಿರುಕಟ್ಟಿ ಮೃತಪಟ್ಟಿದ್ದಾನೆ.

ಪಾಲಕರು ತೀವ್ರ ಹುಡುಕಾಟ ನಡೆಸಿದರೂ ಆದಿತ್ಯ ಎಲ್ಲಿದ್ದಾನೆ ಎಂಬುದು ಗೊತ್ತಾಗಲಿಲ್ಲ. ಕಾರ್ಖಾನೆಯ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಮಗು ಕಾರಿನೊಳಗೆ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಆದಿತ್ಯನನ್ನು ವಾಹನದಿಂದ ಹೊರತರುವಷ್ಟರಲ್ಲಿ ಆತ ಪ್ರಜ್ಞಾಹೀನನಾಗಿದ್ದ. ಪೋಷಕರು ಆತನನ್ನು ಜುನಾಗಢ್ ಆಸ್ಪತ್ರೆಗೆ ಕರೆದೊಯ್ದರು ಬಳಿಕ ರಾಜ್​ಕೋಟ್​ಗೆ ಕರೆದೊಯ್ಯಲಾಯಿತು, ಆದರೆ ವೈದ್ಯಕೀಯ ತಂಡದ ಉತ್ತಮ ಪ್ರಯತ್ನಗಳ ಹೊರತಾಗಿಯೂ, ಆದಿತ್ಯ ಉಸಿರಾಡಲು ಕಷ್ಟಪಡುತ್ತಿದ್ದ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಕಾರಿನ ಕಿಟಕಿಯಿಂದ ತಲೆ ಹೊರಗೆ ಹಾಕಿ ಮದುವೆ ನೋಡುತ್ತಿದ್ದ ಬಾಲಕಿ, ನಿರ್ಲಕ್ಷ್ಯದಿಂದ ಡೋರ್ ಹಾಕಿದ ಚಾಲಕ, ಉಸಿರುಗಟ್ಟಿ ಮಗು ಸಾವು

ತೆಲಂಗಾಣದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಬಾಲಕಿ ಸಾವನ್ನಪ್ಪಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದ ಮದುವೆ ಮನೆಯಲ್ಲಿ ದುರಂತದ ಛಾಯೆ ಆವರಿಸಿತ್ತು. ಸೂರ್ಯಪೇಟ ಜಿಲ್ಲೆಯ ಅನಂತಗಿರಿ ಮಂಡಲದ ಬೊಜ್ಜಗುಡೆಂ ಗ್ರಾಮದಲ್ಲಿ ರಾತ್ರಿ ಮದುವೆ ಸಮಾರಂಭ ನಡೆಯುತ್ತಿತ್ತು. ವರ ಹಾಗೂ ವಧುವಿನ ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ಬಾನೋಟು ಇಂದ್ರಜಾ (9) ಎಂಬ ಮಗು ಕಾರಿನ ಹಿಂದಿನ ಸೀಟಿನಲ್ಲಿ ಒಂಟಿಯಾಗಿ ಕುಳಿತು ಕಿಟಕಿಯಿಂದ ತಲೆ ಹಾಕಿಕೊಂಡು ನೃತ್ಯಗಳನ್ನು ವೀಕ್ಷಿಸುತ್ತಿತ್ತು.

ಆದರೆ ಅದೇ ವೇಳೆ ಮಗುವನ್ನು ಗಮನಿಸದ ಕಾರು ಚಾಲಕ ಎಲ್ಲಿಂದಲೋ ಡೋರ್ ಮಿರರ್ ಬಟನ್ ಒತ್ತಿದ್ದಾನೆ. ಇದರಿಂದ ಕಾರಿನ ಕಿಟಕಿಯಲ್ಲಿ ಮಗುವಿನ ಕುತ್ತಿಗೆ ಸಿಲುಕಿಕೊಂಡಿದೆ. ಯಾರೂ ಗಮನಿಸದ ಕಾರಣ ಮಗು ಉಸಿರುಗಟ್ಟಿ ಸಾವನ್ನಪ್ಪಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ