AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modi@20: ಶೀಘ್ರದಲ್ಲೇ ಬರಲಿದೆ ಪ್ರಧಾನಿ ಮೋದಿಯವರ 20 ವರ್ಷಗಳ ರಾಜಕೀಯ ಪಯಣದ ಪುಸ್ತಕ

Modi@20 ಎಂಬ ಈ ಪುಸ್ತಕವು ಮೋದಿಯವರು ಗುಜರಾತ್ ಸಿಎಂ ಆಗಿದ್ದ ಅವಧಿಯಿಂದ ಹಿಡಿದು ಭಾರತದ ಪ್ರಧಾನಿ ಆಗುವವರೆಗೆ ಅಂದರೆ ಮೋದಿಯವರ ಕಳೆದ 20 ವರ್ಷಗಳ ರಾಜಕೀಯ ಜೀವನದ ಪಯಣವನ್ನು ವಿವರಿಸುತ್ತದೆ.

Modi@20: ಶೀಘ್ರದಲ್ಲೇ ಬರಲಿದೆ ಪ್ರಧಾನಿ ಮೋದಿಯವರ 20 ವರ್ಷಗಳ ರಾಜಕೀಯ ಪಯಣದ ಪುಸ್ತಕ
ಪುಸ್ತಕದ ಮುಖಪುಟ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Mar 15, 2022 | 3:12 PM

Share

ದೆಹಲಿ : 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಯಶಸ್ಸನ್ನು ಕಂಡ ನಂತರ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜೀವನದ ಬಗ್ಗೆ ಪುಸ್ತಕ ಬಿಡುಗಡೆ ಮಾಡಲು ಸಜ್ಜಾಗಿದೆ. Modi@20 ಎಂಬ ಈ ಪುಸ್ತಕವು ಮೋದಿಯವರು ಗುಜರಾತ್ ಸಿಎಂ ಆಗಿದ್ದ ಅವಧಿಯಿಂದ ಹಿಡಿದು ಭಾರತದ ಪ್ರಧಾನಿ ಆಗುವವರೆಗೆ ಅಂದರೆ ಮೋದಿಯವರ ಕಳೆದ 20 ವರ್ಷಗಳ ರಾಜಕೀಯ ಜೀವನದ ಪಯಣವನ್ನು ವಿವರಿಸುತ್ತದೆ. ಕಳೆದ 20 ವರ್ಷಗಳು ನರೇಂದ್ರ ಮೋದಿಯವರಿಗೆ ಬಹಳ ಮಹತ್ತರವಾದುದಾಗಿದೆ. ಅವರು 2002 ರಲ್ಲಿ ಗುಜರಾತ್‌ನ (Gujrat) ಆಡಳಿತವನ್ನು ವಹಿಸಿಕೊಂಡರು. 2014 ರಿಂದ ಸುಮಾರು 8 ವರ್ಷಗಳಿಂದ ರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ. ಈ ಪುಸ್ತಕವು ಕಳೆದ 20 ವರ್ಷಗಳಲ್ಲಿ ನರೇಂದ್ರ ಮೋದಿಯವರು ರೂಪಿಸಿದ ಮತ್ತು ಜಾರಿಗೆ ತಂದ ಆಡಳಿತದ ಮಾದರಿಯನ್ನು ಎತ್ತಿ ತೋರಿಸುವ ಮತ್ತು ಪ್ರದರ್ಶಿಸುವ ಪ್ರಯತ್ನವಾಗಿದೆ. ಬುದ್ದಿಜೀವಿಗಳು ಮತ್ತು ತಜ್ಞರು ಬರೆದಿರುವ ತುಣುಕುಗಳ ಸಂಕಲನವಾಗಿರುವ ಈ ಪುಸ್ತಕವು, ಪ್ರಧಾನಿ ಮೋದಿಯವರ ಅನನ್ಯ ಆಡಳಿತ ಮಾದರಿಯ ಖಾತೆಯಲ್ಲಿ ಕಳೆದ 20 ವರ್ಷಗಳಲ್ಲಿ ಗುಜರಾತ್ ಮತ್ತು ದೇಶದ ಮೂಲಭೂತ ಪರಿವರ್ತನೆಯ ಮೇಲೆ ಬೆಳಕು ಚೆಲ್ಲುತ್ತದೆ. ಪುಸ್ತಕವನ್ನು ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಸಂಪಾದಿಸಿದೆ. ಇದು ಮುಂದಿನ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.ಈ ಲಿಂಕ್‌ನಲ್ಲಿ ಪುಸ್ತಕವನ್ನು ಪ್ರೀ ಆರ್ಡರ್ ಮಾಡಬಹುದು ಎಂದು ರೂಪಾ ಪಬ್ಲಿಕೇಷನ್ಸ್ ಟ್ವೀಟ್ ಮಾಡಿದೆ.

5 ದಶಕಗಳ ಸಕ್ರಿಯ ರಾಜಕೀಯ ಜೀವನದಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಹೆಚ್ಚಿದೆ. ಅದು ಅವರ ತವರು ರಾಜ್ಯ ಗುಜರಾತ್ ಆಗಿರಲಿ, ಇಡೀ ದೇಶವೇ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ, ಅವರು ಜಾಗತಿಕ ಖ್ಯಾತಿಯನ್ನು ಹೊಂದಿರುವ ನಾಯಕರಾಗಿದ್ದಾರೆ. ಅನುಮೋದಿತ ರೇಟಿಂಗ್‌ಗಳಲ್ಲಿ ಎಲ್ಲಾ ವಿಶ್ವ ನಾಯಕರನ್ನು ವರ್ಷದಿಂದ ವರ್ಷಕ್ಕೆ ಹಿಂದಿಕ್ಕಿದ ಏಕೈಕ ಭಾರತೀಯ ನಾಯರಾಗಿದ್ದಾರೆ ಮೋದಿ.

ಇದನ್ನ ಓದಿ: ಉದ್ಯೋಗ ಸೃಷ್ಟಿಸುವುದರ ಜತೆ ಸ್ವಾವಲಂಬಿ ಭಾರತಕ್ಕಾಗಿ ಗ್ರಾಮ ಆರ್ಥಿಕತೆ ನಿರ್ಮಿಸಲು ಯೋಜನೆ ರೂಪಿಸಿದ ಆರ್​​ಎಸ್ಎಸ್

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?