AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸದರಿಗೆ‌ ಇನ್ಮುಂದೆ ಸಿಗಲ್ಲ ಸಬ್ಸಿಡಿ ಊಟ!

ದೆಹಲಿ: ನಮ್ಮ ದೇಶದಲ್ಲಿ ನಿಧಾನವಾಗಿ ವಿಐಪಿ ಸಂಸ್ಕೃತಿಯ ಒಂದೊಂದೇ ಪಳೆಯುಳಿಕೆಗಳು ಅಂತ್ಯವಾಗುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ ವಿಐಪಿಗಳ ಕೆಂಪು ಗೂಟದ ಸಂಸ್ಕೃತಿಯು‌ ಅಂತ್ಯವಾಗಿದೆ. ಈಗ ಸಂಸದರಿಗೆ ಸಂಸತ್ ಭವನದಲ್ಲಿ ನೀಡುತ್ತಿದ್ದ ಸಬ್ಸಿಡಿ ಊಟಕ್ಕೂ ಫುಲ್‌ ಬ್ರೇಕ್ ಬಿದ್ದಿದೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯವಾಗಲಿದೆ. ನಮ್ಮ ದೇಶದಲ್ಲಿ ವಿಐಪಿ ಸಂಸ್ಕೃತಿ ಜೋರಾಗಿಯೇ ಇದೆ. ಸಂಸದರು ನಮ್ಮ ದೇಶದ ವಿಐಪಿಗಳು, ಅವರಿಗೆ ಎಲ್ಲೆಡೆ ರಾಜ ಮರ್ಯಾದೆ. ಜನರಿಗೆ ತಿನ್ನೋಕೆ ಅನ್ನ ಇಲ್ಲದಿದ್ರೂ ಪರವಾಗಿಲ್ಲ, ಇವ್ರಿಗೆ ಸರ್ಕಾರದಿಂದ ಎಲ್ಲಾ ಉಚಿತ […]

ಸಂಸದರಿಗೆ‌ ಇನ್ಮುಂದೆ ಸಿಗಲ್ಲ ಸಬ್ಸಿಡಿ ಊಟ!
ಸಂಸತ್ ಭವನ
ಸಾಧು ಶ್ರೀನಾಥ್​
|

Updated on:Dec 06, 2019 | 12:29 PM

Share

ದೆಹಲಿ: ನಮ್ಮ ದೇಶದಲ್ಲಿ ನಿಧಾನವಾಗಿ ವಿಐಪಿ ಸಂಸ್ಕೃತಿಯ ಒಂದೊಂದೇ ಪಳೆಯುಳಿಕೆಗಳು ಅಂತ್ಯವಾಗುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ ವಿಐಪಿಗಳ ಕೆಂಪು ಗೂಟದ ಸಂಸ್ಕೃತಿಯು‌ ಅಂತ್ಯವಾಗಿದೆ. ಈಗ ಸಂಸದರಿಗೆ ಸಂಸತ್ ಭವನದಲ್ಲಿ ನೀಡುತ್ತಿದ್ದ ಸಬ್ಸಿಡಿ ಊಟಕ್ಕೂ ಫುಲ್‌ ಬ್ರೇಕ್ ಬಿದ್ದಿದೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯವಾಗಲಿದೆ.

ನಮ್ಮ ದೇಶದಲ್ಲಿ ವಿಐಪಿ ಸಂಸ್ಕೃತಿ ಜೋರಾಗಿಯೇ ಇದೆ. ಸಂಸದರು ನಮ್ಮ ದೇಶದ ವಿಐಪಿಗಳು, ಅವರಿಗೆ ಎಲ್ಲೆಡೆ ರಾಜ ಮರ್ಯಾದೆ. ಜನರಿಗೆ ತಿನ್ನೋಕೆ ಅನ್ನ ಇಲ್ಲದಿದ್ರೂ ಪರವಾಗಿಲ್ಲ, ಇವ್ರಿಗೆ ಸರ್ಕಾರದಿಂದ ಎಲ್ಲಾ ಉಚಿತ ಸೌಲಭ್ಯಗಳು ಸಿಕ್ಕೇ ಸಿಗುತ್ತೆ. ಉಚಿತ ಮನೆ, ಸಾರಿಗೆ ವ್ಯವಸ್ಥೆ, ವರ್ಷಕ್ಕೆ 36 ವಿಮಾನ ಟಿಕೆಟ್, ನೀರಿನ ಬಿಲ್, ಕರೆಂಟ್ ಬಿಲ್, ಹೀಗೆ ಎಲ್ಲವನ್ನೂ ಸರ್ಕಾರವೇ ಪಾವತಿ ಮಾಡುತ್ತೆ. ಆದ್ರೀಗ, ಸರ್ಕಾರ ನೀಡುವ ಒಂದೊಂದೆ ಸೌಲಭ್ಯಕ್ಕೆ ಕತ್ತರಿ ಬೀಳ್ತಿದೆ.

ಸರ್ಕಾರಕ್ಕೆ 17 ಕೋಟಿ ರೂಪಾಯಿ ಉಳಿತಾಯ! ದೆಹಲಿಯ ಸಂಸತ್ ಭವನದ ಕ್ಯಾಂಟೀನ್ ನಲ್ಲಿ ಸಂಸದರಿಗೆ ಸಬ್ಸಿಡಿ ದರದಲ್ಲಿ ಊಟ, ತಿಂಡಿ, ಕಾಫಿ ಸೌಲಭ್ಯ ಸಿಗುತ್ತೆ. ಕಾಫಿ ಟೀ 5 ರೂಪಾಯಿಗೆ, ವೆಜ್‌ ಕರಿ 7 ರೂಪಾಯಿ, ಚಿಕನ್ ಕರಿ 50 ರೂಪಾಯಿ, ಚಿಕನ್ ಬಿರಿಯಾನಿ 50 ರೂಪಾಯಿ, ಮಟನ್ ಕರಿ 40 ರೂಪಾಯಿ. ಹೀಗೆ ಕಮ್ಮಿಯಲ್ಲಿ ಸಂಸರಿಗೆ ಊಟ ಸಿಗುತ್ತಿತ್ತು.‌ ಈಗ ಸಂಸತ್ ಕ್ಯಾಂಟೀನ್ ಸಬ್ಸಿಡಿ ಊಟಕ್ಕೆ ಫುಲ್ ಬ್ರೇಕ್ ಬಿದ್ದಿದೆ.

ಇನ್ನೂ ಮುಂದೆ ಸಂಸತ್ ಕ್ಯಾಂಟೀನ್ ನಲ್ಲಿ ಸಂಸದರಿಗೆ ಸಬ್ಸಿಡಿ ದರದಲ್ಲಿ ಊಟ ಸಿಗಲ್ಲ. ಅಗ್ಗದ ದರದಲ್ಲಿ ಊಟ ನೀಡಿ, ಊಟದ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರವೇ ಪಾವತಿ ಮಾಡುತ್ತಿತ್ತು. ಸಂಸತ್ ಕ್ಯಾಂಟೀನ್ ಊಟದ ಸಬ್ಸಿಡಿಗಾಗಿ ವರ್ಷಕ್ಕೆ ಹದಿನೇಳು ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು‌. ಆದರೆ ಈಗ ಸಂಸತ್ ಕ್ಯಾಂಟೀನ್ ಸಬ್ಸಿಡಿ ಊಟಕ್ಕೆ ಲೋಕಸಭಾ ಸ್ಪೀಕರ್ ಓಂಬಿರ್ಲಾ ಬ್ರೇಕ್ ಹಾಕಿದ್ದಾರೆ.

ಸ್ಪೀಕರ್​ ಓಂ ಬಿರ್ಲಾ ಸಬ್ಸಿಡಿಯನ್ನು ತೆಗೆದು ಹಾಕುವ ಕುರಿತು ಸಲಹೆ ನೀಡಿದ್ದರು. ಬಳಿಕ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಂಸತ್ತಿನಲ್ಲಿ ಊಟದ ಮೇಲೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ತೆಗೆದುಹಾಕುವ ಪ್ರಸ್ತಾಪಕ್ಕೆ ಉಭಯ ಸದನ ಸಂಸದರು ಸರ್ವಾನುಮತದಿಂದ ಒಪ್ಪಿದ್ದಾರೆ.

ಇದರಿಂದಾಗಿ ಇನ್ನೂ ಮುಂದೆ ಸಂಸತ್ ಭವನದಲ್ಲಿ ಸಬ್ಸಿಡಿ ಊಟ ಸಿಗಲ್ಲ. ಪೂರ್ತಿ ಹಣವನ್ನ ನೀಡಿ ಉಪಹಾರ ಸೇವಿಸಬೇಕು. ಹೀಗಾಗಿ ಸರ್ಕಾರಕ್ಕೆ ಊಟದ ಸಬ್ಸಿಡಿಗಾಗಿ ನೀಡುತ್ತಿದ್ದ ಹದಿನೇಳು ಕೋಟಿ ರೂಪಾಯಿ ಉಳಿತಾಯ ಆಗಲಿದೆ. ಈ ಹಣವನ್ನು ಕೇಂದ್ರ ಸರ್ಕಾರ ಜನ ಕಲ್ಯಾಣ ಕಾರ್ಯಕ್ರಮಕ್ಕೆ ಬಳಕೆ ಮಾಡಬಹುದಾಗಿದೆ.

Published On - 9:52 am, Fri, 6 December 19

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್