AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸದರಿಗೆ‌ ಇನ್ಮುಂದೆ ಸಿಗಲ್ಲ ಸಬ್ಸಿಡಿ ಊಟ!

ದೆಹಲಿ: ನಮ್ಮ ದೇಶದಲ್ಲಿ ನಿಧಾನವಾಗಿ ವಿಐಪಿ ಸಂಸ್ಕೃತಿಯ ಒಂದೊಂದೇ ಪಳೆಯುಳಿಕೆಗಳು ಅಂತ್ಯವಾಗುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ ವಿಐಪಿಗಳ ಕೆಂಪು ಗೂಟದ ಸಂಸ್ಕೃತಿಯು‌ ಅಂತ್ಯವಾಗಿದೆ. ಈಗ ಸಂಸದರಿಗೆ ಸಂಸತ್ ಭವನದಲ್ಲಿ ನೀಡುತ್ತಿದ್ದ ಸಬ್ಸಿಡಿ ಊಟಕ್ಕೂ ಫುಲ್‌ ಬ್ರೇಕ್ ಬಿದ್ದಿದೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯವಾಗಲಿದೆ. ನಮ್ಮ ದೇಶದಲ್ಲಿ ವಿಐಪಿ ಸಂಸ್ಕೃತಿ ಜೋರಾಗಿಯೇ ಇದೆ. ಸಂಸದರು ನಮ್ಮ ದೇಶದ ವಿಐಪಿಗಳು, ಅವರಿಗೆ ಎಲ್ಲೆಡೆ ರಾಜ ಮರ್ಯಾದೆ. ಜನರಿಗೆ ತಿನ್ನೋಕೆ ಅನ್ನ ಇಲ್ಲದಿದ್ರೂ ಪರವಾಗಿಲ್ಲ, ಇವ್ರಿಗೆ ಸರ್ಕಾರದಿಂದ ಎಲ್ಲಾ ಉಚಿತ […]

ಸಂಸದರಿಗೆ‌ ಇನ್ಮುಂದೆ ಸಿಗಲ್ಲ ಸಬ್ಸಿಡಿ ಊಟ!
ಸಂಸತ್ ಭವನ
ಸಾಧು ಶ್ರೀನಾಥ್​
|

Updated on:Dec 06, 2019 | 12:29 PM

Share

ದೆಹಲಿ: ನಮ್ಮ ದೇಶದಲ್ಲಿ ನಿಧಾನವಾಗಿ ವಿಐಪಿ ಸಂಸ್ಕೃತಿಯ ಒಂದೊಂದೇ ಪಳೆಯುಳಿಕೆಗಳು ಅಂತ್ಯವಾಗುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ ವಿಐಪಿಗಳ ಕೆಂಪು ಗೂಟದ ಸಂಸ್ಕೃತಿಯು‌ ಅಂತ್ಯವಾಗಿದೆ. ಈಗ ಸಂಸದರಿಗೆ ಸಂಸತ್ ಭವನದಲ್ಲಿ ನೀಡುತ್ತಿದ್ದ ಸಬ್ಸಿಡಿ ಊಟಕ್ಕೂ ಫುಲ್‌ ಬ್ರೇಕ್ ಬಿದ್ದಿದೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯವಾಗಲಿದೆ.

ನಮ್ಮ ದೇಶದಲ್ಲಿ ವಿಐಪಿ ಸಂಸ್ಕೃತಿ ಜೋರಾಗಿಯೇ ಇದೆ. ಸಂಸದರು ನಮ್ಮ ದೇಶದ ವಿಐಪಿಗಳು, ಅವರಿಗೆ ಎಲ್ಲೆಡೆ ರಾಜ ಮರ್ಯಾದೆ. ಜನರಿಗೆ ತಿನ್ನೋಕೆ ಅನ್ನ ಇಲ್ಲದಿದ್ರೂ ಪರವಾಗಿಲ್ಲ, ಇವ್ರಿಗೆ ಸರ್ಕಾರದಿಂದ ಎಲ್ಲಾ ಉಚಿತ ಸೌಲಭ್ಯಗಳು ಸಿಕ್ಕೇ ಸಿಗುತ್ತೆ. ಉಚಿತ ಮನೆ, ಸಾರಿಗೆ ವ್ಯವಸ್ಥೆ, ವರ್ಷಕ್ಕೆ 36 ವಿಮಾನ ಟಿಕೆಟ್, ನೀರಿನ ಬಿಲ್, ಕರೆಂಟ್ ಬಿಲ್, ಹೀಗೆ ಎಲ್ಲವನ್ನೂ ಸರ್ಕಾರವೇ ಪಾವತಿ ಮಾಡುತ್ತೆ. ಆದ್ರೀಗ, ಸರ್ಕಾರ ನೀಡುವ ಒಂದೊಂದೆ ಸೌಲಭ್ಯಕ್ಕೆ ಕತ್ತರಿ ಬೀಳ್ತಿದೆ.

ಸರ್ಕಾರಕ್ಕೆ 17 ಕೋಟಿ ರೂಪಾಯಿ ಉಳಿತಾಯ! ದೆಹಲಿಯ ಸಂಸತ್ ಭವನದ ಕ್ಯಾಂಟೀನ್ ನಲ್ಲಿ ಸಂಸದರಿಗೆ ಸಬ್ಸಿಡಿ ದರದಲ್ಲಿ ಊಟ, ತಿಂಡಿ, ಕಾಫಿ ಸೌಲಭ್ಯ ಸಿಗುತ್ತೆ. ಕಾಫಿ ಟೀ 5 ರೂಪಾಯಿಗೆ, ವೆಜ್‌ ಕರಿ 7 ರೂಪಾಯಿ, ಚಿಕನ್ ಕರಿ 50 ರೂಪಾಯಿ, ಚಿಕನ್ ಬಿರಿಯಾನಿ 50 ರೂಪಾಯಿ, ಮಟನ್ ಕರಿ 40 ರೂಪಾಯಿ. ಹೀಗೆ ಕಮ್ಮಿಯಲ್ಲಿ ಸಂಸರಿಗೆ ಊಟ ಸಿಗುತ್ತಿತ್ತು.‌ ಈಗ ಸಂಸತ್ ಕ್ಯಾಂಟೀನ್ ಸಬ್ಸಿಡಿ ಊಟಕ್ಕೆ ಫುಲ್ ಬ್ರೇಕ್ ಬಿದ್ದಿದೆ.

ಇನ್ನೂ ಮುಂದೆ ಸಂಸತ್ ಕ್ಯಾಂಟೀನ್ ನಲ್ಲಿ ಸಂಸದರಿಗೆ ಸಬ್ಸಿಡಿ ದರದಲ್ಲಿ ಊಟ ಸಿಗಲ್ಲ. ಅಗ್ಗದ ದರದಲ್ಲಿ ಊಟ ನೀಡಿ, ಊಟದ ಸಬ್ಸಿಡಿ ಹಣವನ್ನು ಕೇಂದ್ರ ಸರ್ಕಾರವೇ ಪಾವತಿ ಮಾಡುತ್ತಿತ್ತು. ಸಂಸತ್ ಕ್ಯಾಂಟೀನ್ ಊಟದ ಸಬ್ಸಿಡಿಗಾಗಿ ವರ್ಷಕ್ಕೆ ಹದಿನೇಳು ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು‌. ಆದರೆ ಈಗ ಸಂಸತ್ ಕ್ಯಾಂಟೀನ್ ಸಬ್ಸಿಡಿ ಊಟಕ್ಕೆ ಲೋಕಸಭಾ ಸ್ಪೀಕರ್ ಓಂಬಿರ್ಲಾ ಬ್ರೇಕ್ ಹಾಕಿದ್ದಾರೆ.

ಸ್ಪೀಕರ್​ ಓಂ ಬಿರ್ಲಾ ಸಬ್ಸಿಡಿಯನ್ನು ತೆಗೆದು ಹಾಕುವ ಕುರಿತು ಸಲಹೆ ನೀಡಿದ್ದರು. ಬಳಿಕ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಂಸತ್ತಿನಲ್ಲಿ ಊಟದ ಮೇಲೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ತೆಗೆದುಹಾಕುವ ಪ್ರಸ್ತಾಪಕ್ಕೆ ಉಭಯ ಸದನ ಸಂಸದರು ಸರ್ವಾನುಮತದಿಂದ ಒಪ್ಪಿದ್ದಾರೆ.

ಇದರಿಂದಾಗಿ ಇನ್ನೂ ಮುಂದೆ ಸಂಸತ್ ಭವನದಲ್ಲಿ ಸಬ್ಸಿಡಿ ಊಟ ಸಿಗಲ್ಲ. ಪೂರ್ತಿ ಹಣವನ್ನ ನೀಡಿ ಉಪಹಾರ ಸೇವಿಸಬೇಕು. ಹೀಗಾಗಿ ಸರ್ಕಾರಕ್ಕೆ ಊಟದ ಸಬ್ಸಿಡಿಗಾಗಿ ನೀಡುತ್ತಿದ್ದ ಹದಿನೇಳು ಕೋಟಿ ರೂಪಾಯಿ ಉಳಿತಾಯ ಆಗಲಿದೆ. ಈ ಹಣವನ್ನು ಕೇಂದ್ರ ಸರ್ಕಾರ ಜನ ಕಲ್ಯಾಣ ಕಾರ್ಯಕ್ರಮಕ್ಕೆ ಬಳಕೆ ಮಾಡಬಹುದಾಗಿದೆ.

Published On - 9:52 am, Fri, 6 December 19

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ