AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಯನ್ಸ್​ನ ಮುಕೇಶ್​ ಅಂಬಾನಿ ವಿಶ್ವದ 6ನೇ ಅತ್ಯಂತ ಧನಿಕ, ಹೇಗೆ?

ಜಗತ್ತಿನ ಡಿಜಿಟಲ್​ ಲೋಕದ ದಿಗ್ಗಜರಾದ ಗೂಗಲ್​ ಮತ್ತು ಫೇಸ್​ಬುಕ್​ರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಪಡೆದಿರುವ ರಿಲಯನ್ಸ್​ ಸಂಸ್ಥೆಯ ಒಡೆಯ ಮುಕೇಶ್​ ಅಂಬಾನಿ ಇದೀಗ ಜಗತ್ತಿನ 6ನೇ ಅತಿ ದೊಡ್ಡ ಶ್ರೀಮಂತ. ಧನ ಲಕ್ಷ್ಮಿ ಧನಿಕರ ಮನೆಯಲ್ಲೇ ಇರಲು ಬಯಸುತ್ತಾಳಂತೆ! ಹಾಗೆ.. ಈ ಕೊರೊನಾ ಸಂಕಷ್ಟ ಕಾಲದಲ್ಲಿ ಜಾಣ ಮುಕೇಶ್​ ಅಂಬಾನಿಯ ಕಂಪನಿಗೆ ವಿಶ್ವದ ಎಲ್ಲ ಕಡೆಗಳಿಂದಲೂ ಹಣ ಹರಿದುಬರುತ್ತಿದೆ. ಹೌದು, ಪ್ರತಿಷ್ಠಿತ ಬ್ಲೂಮ್​ಬರ್ಗ್ ಸಂಸ್ಥೆಯ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯ ಪ್ರಕಾರ ಮುಕೇಶ್​ ಅಂಬಾನಿಯ ನಿವ್ವಳ ಮೌಲ್ಯ […]

ರಿಲಯನ್ಸ್​ನ ಮುಕೇಶ್​ ಅಂಬಾನಿ ವಿಶ್ವದ 6ನೇ ಅತ್ಯಂತ ಧನಿಕ, ಹೇಗೆ?
KUSHAL V
| Edited By: |

Updated on: Jul 14, 2020 | 6:44 PM

Share

ಜಗತ್ತಿನ ಡಿಜಿಟಲ್​ ಲೋಕದ ದಿಗ್ಗಜರಾದ ಗೂಗಲ್​ ಮತ್ತು ಫೇಸ್​ಬುಕ್​ರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಪಡೆದಿರುವ ರಿಲಯನ್ಸ್​ ಸಂಸ್ಥೆಯ ಒಡೆಯ ಮುಕೇಶ್​ ಅಂಬಾನಿ ಇದೀಗ ಜಗತ್ತಿನ 6ನೇ ಅತಿ ದೊಡ್ಡ ಶ್ರೀಮಂತ. ಧನ ಲಕ್ಷ್ಮಿ ಧನಿಕರ ಮನೆಯಲ್ಲೇ ಇರಲು ಬಯಸುತ್ತಾಳಂತೆ! ಹಾಗೆ.. ಈ ಕೊರೊನಾ ಸಂಕಷ್ಟ ಕಾಲದಲ್ಲಿ ಜಾಣ ಮುಕೇಶ್​ ಅಂಬಾನಿಯ ಕಂಪನಿಗೆ ವಿಶ್ವದ ಎಲ್ಲ ಕಡೆಗಳಿಂದಲೂ ಹಣ ಹರಿದುಬರುತ್ತಿದೆ.

ಹೌದು, ಪ್ರತಿಷ್ಠಿತ ಬ್ಲೂಮ್​ಬರ್ಗ್ ಸಂಸ್ಥೆಯ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯ ಪ್ರಕಾರ ಮುಕೇಶ್​ ಅಂಬಾನಿಯ ನಿವ್ವಳ ಮೌಲ್ಯ ಬರೋಬ್ಬರಿ 72.4 ಬಿಲಿಯನ್​ ಡಾಲರ್​ (5.44 ಲಕ್ಷ ಕೋಟಿ). ತಮ್ಮ ಸಂಸ್ಥೆಗೆ ಫೇಸ್​ಬುಕ್​, ಕ್ವಾಲ್​ಕಾಮ್​ ಮುಂತಾದ ಕಂಪನಿಗಳಿಂದ ಹರಿದುಬಂದಿರುವ ಹೂಡಿಕೆಯಿಂದ ಕಂಪನಿಯ ಶೇರ್​ ಮೌಲ್ಯ ದ್ವಿಗುಣವಾಗಿ ಇವರ ನಿವ್ವಳ ಮೌಲ್ಯ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ.

ಇಂಧನ ಕ್ಷೇತ್ರದ ಜೊತೆಗೆ ಇ-ವಾಣಿಜ್ಯದಲ್ಲೂ ವ್ಯವಹಾರ ನಡೆಸಲು ಮುಂದಾಗಿರುವುದು ಮುಕೇಶ್​ಗೆ ಮತ್ತಷ್ಟು ಲಾಭ ತಂದುಕೊಟ್ಟಿದೆ ಎಂದು ತಿಳಿದುಬಂದಿದೆ. ಇದೀಗ ಈ ಭಾರತದ ಅತಿದೊಡ್ಡ ಶ್ರೀಮಂತ ವಿಶ್ವದ ಹಲವಾರು ಕೋಟ್ಯಾಧಿಪತಿಗಳನ್ನು ಹಿಂದಿಕ್ಕಿ ಮುಂದೆ ಹೋಗಿದ್ದಾರೆ. ಹೌದು, ಪ್ರತಿಷ್ಠಿತ ಅಮೆರಿಕ ಉದ್ಯಮಿ ಇಲಾನ್​ ಮಸ್ಕ್​ ಹಾಗೂ ಗೂಗಲ್​ ಕಂಪನಿಯ ಸಂಸ್ಥಾಪಕರಾದ ಸರ್ಗೇ ಬ್ರಿನ್​ ಮತ್ತು ಲ್ಯಾರಿ ಪೇಜ್​ರನ್ನ ಹಿಂದಿಕ್ಕಿದ್ದಾರೆ.

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!