AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಲಾಕ್​ಡೌನ್ ವೇಳೆ ಕಾರ್ಯ ನಿರ್ವಹಿಸುವ ಮುಂಬೈ ಪೊಲೀಸರಿಗೆ ಉಚಿತ ವ್ಯಾನಿಟಿ ವ್ಯಾನ್​ ನೀಡಿದ ಉದ್ಯಮಿ

ಇಲ್ಲಿಯವರೆಗೆ ಕೇತನ್​ ರಾವಲ್ ಹೊಂದಿರುವ 50 ವ್ಯಾನ್​ಗಳಲ್ಲಿ 12 ವ್ಯಾನ್​ಗಳನ್ನು ಪೊಲೀಸ್​ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಒದಗಿಸಿದ್ದಾರೆ.

ಕೊವಿಡ್ ಲಾಕ್​ಡೌನ್ ವೇಳೆ ಕಾರ್ಯ ನಿರ್ವಹಿಸುವ ಮುಂಬೈ ಪೊಲೀಸರಿಗೆ ಉಚಿತ ವ್ಯಾನಿಟಿ ವ್ಯಾನ್​ ನೀಡಿದ ಉದ್ಯಮಿ
ಮುಂಬೈ ಪೊಲೀಸರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಉಚಿತ ವ್ಯಾನಿಟಿ ವ್ಯಾನ್​ ನೀಡಿದ ಉದ್ಯಮಿ
shruti hegde
|

Updated on:Apr 25, 2021 | 5:03 PM

Share

ಮುಂಬೈ: ನಗರದ ಉದ್ಯಮಿ ಕೇತನ್​ ರಾವಲ್​ ಮುಂಬೈ ಪೊಲೀಸರಿಗೆ ತಮ್ಮ ವ್ಯಾನಿಟಿ ವ್ಯಾನ್​​ಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರು ಲಾಕ್​ಡೌನ್​ ಇದ್ದ ಸಮಯದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಆಹಾರ ಸೇವಿಸಲು ಸಹಾಯವಾಗುವುದಾಗಿ ತನ್ನಲ್ಲಿರುವ ವ್ಯಾನಿಟ್​ ವ್ಯಾನ್​ಗಳನ್ನು ನೀಡಿದ್ದಾರೆ. ಸುದ್ದಿ ಸಂಸ್ಥೆ ಎಎನ್​ಐ ಜೊತೆ ಮಾತನಾಡಿದ ಕೇತನ್​ ರಾವಲ್​, ‘ನಾನು ಈ ವ್ಯಾನಿಟಿ ವ್ಯಾನ್​ಗಳನ್ನು ಪೊಲೀಸ್​ ಸಿಬ್ಬಂದಿಗೆ ನೀಡುತ್ತಿದ್ದೇನೆ. ಇದರಿಂದ ಅವರು ವಿಶ್ರಾಂತಿ ಪಡೆಯಬಹುದು. ವ್ಯಾನ್​ನಲ್ಲಿ ಕುಳಿತು ಆಹಾರ ಸೇವಿಸಬಹುದು ಮತ್ತು ಕರ್ತವ್ಯದಲ್ಲಿದ್ದಾಗ ವಾಶ್​ರೂಂಗಳನ್ನು ಬಳಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.

‘ಈ ವ್ಯಾನಿಟಿ ವ್ಯಾನ್​ಗಳಲ್ಲಿ ಮಲಗುವ ಕೋಣೆ, ವಾಶ್​ರೂಂ, ಡ್ರೆಸ್ಸಿಂಗ್​ ಟೇಬಲ್​ ಮತ್ತು ಎಸಿ ಗಳಿವೆ. ಇವೆಲ್ಲವೂ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಸಹಾಯವಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ. ಆರೋಗ್ಯ ಕಾರ್ಯಕರ್ತರಿಗೆ ಅವರು ಹೇಗೆ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸುತ್ತಿದ್ದ ಕೇತನ್​ ರಾವಲ್​​, ತಲಾ ಮೂರು ಕೊಠಡಿಗಳನ್ನು ಹೊಂದಿರುವ ಮೂರು ವ್ಯಾನಿಟಿ ವ್ಯಾನ್​ಗಳನ್ನು  24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ, ಸಹಾಯಕ ಸಿಬ್ಬಂದಿಗೆ ಮತ್ತು ಆರೋಗ್ಯ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿರುವವರಿಗೆ ಒದಗಿಸಿದ್ದೇನೆ. ವ್ಯಾನ್​ಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಗಳಿಗೂ ತನ್ನಲ್ಲಿರುವ ವ್ಯಾನಿಟಿ ವ್ಯಾನ್​ಗಳನ್ನು ಒದಗಿಸಲು ಸಿದ್ಧ ಎಂದು ಕೇತನ್​ ರಾವಲ್​​ ಹೇಳಿದ್ದಾರೆ. ಕೊವಿಡ್​ ಸೋಂಕಿತ ರೋಗಿಗಳಿಗೆ ಅಗತ್ಯವಾದ ಚಿಕಿತ್ಸೆಯನ್ನು ಒದಗಿಸಿದರೆ ಜನರ ಜೀವ ಉಳಿಸಲು ನನ್ನ ವ್ಯಾನ್​ಗಳನ್ನು ನೀಡಲು ನಾನು ಸಿದ್ಧನಿದ್ಧೇನೆ ಎಂದು ತಿಳಿಸಿದ್ದಾರೆ.

ಇಲ್ಲಿಯವರೆಗೆ ಅವರು ಹೊಂದಿರುವ 50 ವ್ಯಾನ್​ಗಳಲ್ಲಿ 12 ವ್ಯಾನ್​ಗಳನ್ನು ಪೊಲೀಸ್​ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಒದಗಿಸಿದ್ದಾರೆ. ಏತನ್ಮಧ್ಯೆ, ಮುಂಬೈನಲ್ಲಿ 5,888 ಹೊಸ ಕೊವಿಡ್​ ಪ್ರಕರಣಗಳು, 71 ಜನರು ಬಲಿಯಾಗಿದ್ದಾರೆ. ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6,66,109 ಆಗಿದೆ.

ಇದನ್ನೂ ಓದಿ: ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ಮೂರು ವಾರಗಳಲ್ಲೇ ಅತಿ ಕಡಿಮೆ ಕೊರೊನಾ ಸೋಂಕಿತರು ಪತ್ತೆ

Published On - 5:00 pm, Sun, 25 April 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!