Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ಮಾಂಸದ ಅಂಗಡಿ, ಧಾರ್ಮಿಕ ಸ್ಥಳದ ನಡುವಿನ ಅಂತರ 100 ಮೀಟರ್​​ಗೆ ಇಳಿಕೆ

ಎಂಸಿಡಿ, ಡಿಸೆಂಬರ್ 28 ರಂದು 2023 ರ ತನ್ನ ಕೊನೆಯ ಸದನ ಸಭೆಯಲ್ಲಿ, ಎಎಪಿ ಕೌನ್ಸಿಲರ್‌ಗಳಾದ ಸುಲ್ತಾನಾ ಆಬಾದ್ ಮತ್ತು ಅಮೀನ್ ಮಲಿಕ್ ಅವರು ಖಾಸಗಿ ಸದಸ್ಯ ಮಸೂದೆಯಾಗಿ ಪರಿಚಯಿಸಿದ ಪರಿಷ್ಕೃತ ಪ್ರಸ್ತಾವನೆಗೆ ಒಪ್ಪಿಗೆ ನೀಡಿತು. ಇದು ಮಾಂಸದ ಅಂಗಡಿ ಮತ್ತು ಧಾರ್ಮಿಕ ನಡುವಿನ ಕನಿಷ್ಠ ಅನುಮತಿ ಅಂತರವನ್ನು ಕಡಿಮೆ ಮಾಡಲು ಪ್ರಸ್ತಾಪಿಸಿತ್ತು.

ದೆಹಲಿ: ಮಾಂಸದ ಅಂಗಡಿ, ಧಾರ್ಮಿಕ ಸ್ಥಳದ ನಡುವಿನ ಅಂತರ 100 ಮೀಟರ್​​ಗೆ ಇಳಿಕೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Jan 01, 2024 | 7:39 PM

ದೆಹಲಿ ಜನವರಿ 01: ಯಾವುದೇ ಧಾರ್ಮಿಕ ಸ್ಥಳದ ಬಳಿ ಮಾಂಸದ ಅಂಗಡಿ (meat shop) ತೆರೆಯಲು ಇರುವ ಕನಿಷ್ಠ ಅಂತರದ ಷರತ್ತನ್ನು 150 ಮೀಟರ್‌ಗಳಿಂದ 100 ಮೀಟರ್‌ಗೆ ಇಳಿಸಲು ದೆಹಲಿ (Delhi) ಮುನ್ಸಿಪಲ್ ಕಾರ್ಪೊರೇಷನ್ (Municipal Corporation) ನಿರ್ಧರಿಸಿದೆ. ಅಕ್ಟೋಬರ್‌ನಲ್ಲಿ ಅಂಗೀಕರಿಸಿದ ಹೊಸ ನಿಯಮಗಳು ಎಂಸಿಡಿ ವ್ಯಾಪ್ತಿಯಲ್ಲಿರುವ ಸುಮಾರು 6,000 ಮಾಂಸದ ಅಂಗಡಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಅನೇಕರು ವ್ಯಾಪಾರವನ್ನು ಮುಚ್ಚುವಂತೆ ಒತ್ತಾಯಿಸಬಹುದು ಎಂದು ನಗರದ ಮಾಂಸ ಮಾರಾಟಗಾರರಿಂದ ವಿರೋಧ ವ್ಯಕ್ತವಾದ ನಂತರ ಈ ಕ್ರಮ ಬಂದಿದೆ.

ಎಂಸಿಡಿ, ಡಿಸೆಂಬರ್ 28 ರಂದು 2023 ರ ತನ್ನ ಕೊನೆಯ ಸದನ ಸಭೆಯಲ್ಲಿ, ಎಎಪಿ ಕೌನ್ಸಿಲರ್‌ಗಳಾದ ಸುಲ್ತಾನಾ ಆಬಾದ್ ಮತ್ತು ಅಮೀನ್ ಮಲಿಕ್ ಅವರು ಖಾಸಗಿ ಸದಸ್ಯ ಮಸೂದೆಯಾಗಿ ಪರಿಚಯಿಸಿದ ಪರಿಷ್ಕೃತ ಪ್ರಸ್ತಾವನೆಗೆ ಒಪ್ಪಿಗೆ ನೀಡಿತು. ಇದು ಮಾಂಸದ ಅಂಗಡಿ ಮತ್ತು ಧಾರ್ಮಿಕ ನಡುವಿನ ಕನಿಷ್ಠ ಅನುಮತಿ ಅಂತರವನ್ನು ಕಡಿಮೆ ಮಾಡಲು ಪ್ರಸ್ತಾಪಿಸಿತು. ಇತರ ಬದಲಾವಣೆಗಳೊಂದಿಗೆ ಜನನಿಬಿಡ ಪ್ರದೇಶಗಳಲ್ಲಿ 100 ಮೀಟರ್‌ಗೆ ಇರಿಸಿ ಎಂದು ಹೇಳಿರುವುದಾಗಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಪರಿಷ್ಕೃತ ಪ್ರಸ್ತಾವನೆ ಪ್ರಕಾರ, ಮಾಂಸದಂಗಡಿ ಪರವಾನಗಿ ನವೀಕರಣಕ್ಕೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಈ ಹಿಂದೆ ಪ್ರಸ್ತಾಪಿಸಿದ್ದ ₹ 7,000ದಿಂದ ₹ 5,000ಕ್ಕೆ ಇಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. “ಹಳೆ ದೆಹಲಿಯಂತಹ ಜನನಿಬಿಡ ಪ್ರದೇಶಗಳಲ್ಲಿ, ಮಾಂಸದ ಅಂಗಡಿಗಳು ಮತ್ತು ಧಾರ್ಮಿಕ ಸ್ಥಳಗಳ ನಡುವಿನ ಕನಿಷ್ಠ ಅಂತರವನ್ನು 150 ಮೀಟರ್‌ಗಳಿಗೆ ನಿಗದಿಪಡಿಸುವುದು ಪ್ರಾಯೋಗಿಕವಾಗಿ ಕಾರ್ಯಸಾಧ್ಯವಲ್ಲ. “ಇದು ಮಾಂಸ ಮಾರಾಟಗಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ನಾವು ಈ ಮಿತಿಯನ್ನು 100 ಮೀಟರ್‌ಗೆ ಇಳಿಸಲು ಪ್ರಸ್ತಾಪಿಸಿದ್ದೇವೆ”ಎಂದು ಜಾಮಾ ಮಸೀದಿಯ ಕೌನ್ಸಿಲರ್ ಸುಲ್ತಾನಾ ಆಬಾದ್ ಪಿಟಿಐಗೆ ತಿಳಿಸಿದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಎಂಸಿಡಿ ವಲಯಗಳಾದ್ಯಂತ ಪರವಾನಗಿ ಶುಲ್ಕವನ್ನು ಪ್ರಮಾಣೀಕರಿಸುವ ಮತ್ತು ಮಾಂಸದ ಅಂಗಡಿ ಮತ್ತು ಯಾವುದೇ ಧಾರ್ಮಿಕ ಸ್ಥಳದ ನಡುವಿನ ಕನಿಷ್ಠ ಅಂತರವನ್ನು 150 ಮೀಟರ್‌ಗೆ ನಿಗದಿಪಡಿಸುವ ಗುರಿಯನ್ನು ಹೊಂದಿರುವ ಮಾಂಸದ ಅಂಗಡಿಗಳಿಗೆ ಹೊಸ ಪರವಾನಗಿ ನೀತಿಯನ್ನು ನಾಗರಿಕ ಸಂಸ್ಥೆ ಅಂಗೀಕರಿಸಿತ್ತು.

ಪರಿಷ್ಕೃತ ಪ್ರಸ್ತಾವನೆಯು ನಿಯಮಗಳ ಉಲ್ಲಂಘನೆಯ ಸಂದರ್ಭದಲ್ಲಿ ವಿಧಿಸುವ ದಂಡವನ್ನು ₹ 10,000 ಕ್ಕೆ ಇಳಿಸುತ್ತದೆ. ಹಿಂದಿನ ಪ್ರಸ್ತಾವನೆಯಲ್ಲಿ, ನಿಯಮ ಉಲ್ಲಂಘನೆಗಾಗಿ ವಿಧಿಸಲಾದ ದಂಡವನ್ನು ಮೊದಲ ಬಾರಿಗೆ ₹ 20,000 ಮತ್ತು ಯಾವುದೇ ನಿಯಮ ಉಲ್ಲಂಘನೆಗೆ ₹ 50,000 ಎಂದು ನಿಗದಿಪಡಿಸಲಾಗಿದೆ. ಅಲ್ಲದೆ, ಮಾಂಸದಂಗಡಿ ತೆರೆಯಲು ಕನಿಷ್ಠ ವಿಸ್ತೀರ್ಣವನ್ನು 60 ಚದರ ಅಡಿಯಿಂದ 50 ಚದರ ಅಡಿಗೆ ಇಳಿಸಲು ನಿಗಮ ಒಪ್ಪಿಗೆ ನೀಡಿದೆ.

“ಇವರು ಬಡವರು ಮತ್ತು ಅವರಲ್ಲಿ ಅನೇಕರು ದೊಡ್ಡ ಪ್ರಮಾಣದ ಭೂಮಿಯಲ್ಲಿ ಮಾಂಸದ ಅಂಗಡಿಯನ್ನು ಪ್ರಾರಂಭಿಸಲು ಶಕ್ತರಾಗುವುದಿಲ್ಲ. ಅಲ್ಲದೆ, ದಟ್ಟಣೆಯ ಪ್ರದೇಶಗಳಲ್ಲಿ ಲಭ್ಯವಿರುವ ಸೀಮಿತ ಸ್ಥಳದಿಂದಾಗಿ, ದೊಡ್ಡ ಜಾಗವನ್ನು ಬಾಡಿಗೆಗೆ ಪಡೆಯುವುದು ಕಷ್ಟಕರವಾಗಿದೆ ಎಂದು ಆಬಾದ್ ಹೇಳಿದ್ದಾರೆ.

ಇದನ್ನೂ ಓದಿ:ದೆಹಲಿ: ಇಸ್ರೇಲ್​ ರಾಯಭಾರಿ ಕಚೇರಿ ಬಳಿ ಭಾರೀ ಸದ್ದು, ಸ್ಥಳದಲ್ಲಿ ಪತ್ತೆಯಾಯ್ತು ಪತ್ರ

ದೆಹಲಿಯ ವರ್ತಕರು ಕೂಡ ವಾರ್ಷಿಕ ಶುಲ್ಕ ಹೆಚ್ಚಳದಿಂದ ಅತೃಪ್ತರಾಗಿದ್ದರು. ದೆಹಲಿ ಮಾಂಸ ವ್ಯಾಪಾರಿಗಳ ಸಂಘವು ಈ ಪ್ರಸ್ತಾಪವನ್ನು ವಿರೋಧಿಸಿತು. ಇದು “ಭ್ರಷ್ಟಾಚಾರ” ಕ್ಕೆ ಕಾರಣವಾಗುತ್ತದೆ ಮತ್ತು ನೀತಿಯನ್ನು ಹಿಂತೆಗೆದುಕೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಬೆದರಿಕೆ ಹಾಕಿದ್ದರು.

ಮಾಂಸದ ಅಂಗಡಿ ಮತ್ತು ದೇವಸ್ಥಾನ, ಮಸೀದಿ ಮತ್ತು ಗುರುದ್ವಾರದಂತಹ ಯಾವುದೇ ಧಾರ್ಮಿಕ ಸ್ಥಳಗಳ ನಡುವೆ ಕನಿಷ್ಠ 150 ಮೀಟರ್ ಅಂತರದ ಷರತ್ತನ್ನು ಕಳೆದ ವರ್ಷ ಅಕ್ಟೋಬರ್ 31 ರಂದು ಅನುಮೋದಿಸಲಾದ ಮಾಂಸದ ಅಂಗಡಿಗಳಿಗೆ ಹೊಸ ಅಥವಾ ನವೀಕರಿಸಿದ ಪರವಾನಗಿಗಳನ್ನು ನೀಡುವ ಪ್ರಸ್ತಾವಿತ ಹೊಸ ನೀತಿಯ ಭಾಗವಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Mon, 1 January 24

ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್