AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಚ್ಚರಿಯ ಸೀಟ್ ನಂಬರ್ 11ಎ: ಎರಡು ವಿಮಾನ ಅಪಘಾತದಲ್ಲಿ ಬದುಕುಳಿದವರು ಈ ಸೀಟ್​​ನಲ್ಲಿ ಕೂತವರೆಯೇ

Mystery of seat number 11A: ಸೀಟ್ ನಂ. 11ಎ ಬಗ್ಗೆ ಸಿನಿಮಾವೇ ತಯಾರಾಗಬಹುದು, ಆ ಮಟ್ಟಿಗೆ ಅಚ್ಚರಿಯ ದಾಖಲೆ ಇದರದ್ದು. ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕಿದ್ದ ಏಕೈಕ ವ್ಯಕ್ತಿ 11ಎ ಸೀಟ್​​ನಲ್ಲಿ ಕೂತಿದ್ದವರು. ಹಾಗೆಯೇ, 1998ರಲ್ಲಿ ಥಾಯ್ಲೆಂಡ್​ನಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಬದುಕಿದ ಒಬ್ಬ ವ್ಯಕ್ತಿಯೂ ಕೂಡ ಇದೇ 11ಎ ಸೀಟ್​​ನಲ್ಲಿ ಕೂತಿದ್ದರು.

ಅಚ್ಚರಿಯ ಸೀಟ್ ನಂಬರ್ 11ಎ: ಎರಡು ವಿಮಾನ ಅಪಘಾತದಲ್ಲಿ ಬದುಕುಳಿದವರು ಈ ಸೀಟ್​​ನಲ್ಲಿ ಕೂತವರೆಯೇ
ಸೀಟ್ ನಂ. 11ಎನಲ್ಲಿ ಕೂತು ಬದುಕಿದವರು...
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 15, 2025 | 9:02 PM

Share

ನವದೆಹಲಿ, ಜೂನ್ 15: ಮೊನ್ನೆಮೊನ್ನೆ ಅಹ್ಮದಾಬಾದ್​​ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತ (Air India flight crash incident) ದುರಂತ ಘಟನೆಯಲ್ಲಿ 260ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಆಘಾತದ ಸುದ್ದಿಯ ಜೊತೆಗೆ ಒಬ್ಬ ವ್ಯಕ್ತಿ ಪವಾಡಸದೃಶ ರೀತಿಯಲ್ಲಿ ಬದುಕಿದ ಘಟನೆಯೂ ಅಚ್ಚರಿ ಮೂಡಿಸಿತು. ವಿಶ್ವಾಸ್ ಕುಮಾರ್ ರಮೇಶ್ ಎನ್ನುವ ಬ್ರಿಟನ್ ನಿವಾಸಿ ವಿಶ್ವಾಸ್ ಕುಮಾರ್ ರಮೇಶ್ ಬದುಕುಳಿದವರು. ಅಪಘಾತಕ್ಕೊಳಗಾದ ಬೋಯಿಂಗ್ 787-8 ಡ್ರೀಮ್​ಲೈನರ್ ವಿಮಾನದ ಸೀಟ್ ನಂಬರ್ 11A ನಲ್ಲಿ (Seat No. 11A) ರಮೇಶ್ ಕೂತಿದ್ದರು. ಇಡೀ ವಿಮಾನದಲ್ಲಿದ್ದವರೆಲ್ಲಾ ಸುಟ್ಟು ಕರಕಲಾದರೂ ಇವರು ಅಲ್ಪಸ್ವಲ್ಪ ಗಾಯಗೊಂದಿಗೆ ಜೀವ ಉಳಿಸಿಕೊಂಡಿದ್ದರು. ಅದಕ್ಕೆ ಕಾರಣವಾಗಿದ್ದು ಸೀಟ್ ನಂಬರ್ 11ಎ.

ಥಾಯ್ಲೆಂಡ್ ವಿಮಾನ ಅಪಘಾತ ಮತ್ತು ಸೀಟ್ ನಂ. 11ಎ

ಇನ್ನೂ ಅಚ್ಚರಿಯ ಸಂಗತಿಯೊಂದು ಇಂಟರ್ನೆಟ್​​ನಲ್ಲಿ ಸಿಕ್ಕಿದೆ. 26-27 ವರ್ಷದ ಹಿಂದೆ, ಅಂದರೆ 1998ರ ಡಿಸೆಂಬರ್​​ನಲ್ಲಿ ಥಾಯ್ಲೆಂಡ್​ನಲ್ಲಿ ಸಂಭವಿಸಿದ ವಿಮಾನಾಘಾತವೊಂದರಲ್ಲಿ ನೂರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಥಾಯ್ ಏರ್​ವೇಸ್ ಫ್ಲೈಟ್​​ನಲ್ಲಿ ಬದುಕುಳಿದ ಕೆಲವೇ ಮಂದಿಯಲ್ಲಿ ಗಾಯಕ ರುವಾಂಗ್​ಸಕ್ ಲೋಯಚುಸಕ್ (Ruangsak Loyachusak) ಒಬ್ಬರು. ಇವರು ಆ ವಿಮಾನದಲ್ಲಿ ಕೂತಿದ್ದು ಸೀಟ್ ನಂಬರ್ 11ಎನಲ್ಲೇ.

ಇದನ್ನೂ ಓದಿ: ಕೇರಳದಲ್ಲಿ ಬ್ರಿಟಿಷ್ ಫೈಟರ್ ಜೆಟ್ ತುರ್ತು ಭೂಸ್ಪರ್ಶ

ಈ ಬಗ್ಗೆ ರುವಾಂಗ್​​ಸಕ್ ಫೇಸ್ಬುಕ್ ಪೋಸ್ಟ್​ನಲ್ಲಿ ಬರೆದಿದ್ದಾರೆ: ‘ಭಾರತದಲ್ಲಿ ವಿಮಾನ ಅಪಘಾತದಲ್ಲಿ ಒಬ್ಬರು ಬದುಕುಳಿದಿದ್ದಾರೆ. ನಾನು ಕೂತಿದ್ದ 11ಎ ಸೀಟ್​​ನಲ್ಲೇ ಅವರೂ ಕೂತಿದ್ದರು’ ಎಂದು ಹೇಳಿದ ಅವರು, ಮೃತಪಟ್ಟ ಎಲ್ಲರಿಗೂ ಸಂತಾಪ ಹೇಳಿದ್ದಾರೆ.

ಇದು ಬೋಯಿಂಗ್, ಅದು ಏರ್​ಬಸ್

ಅಪಘಾತಗೊಂಡ ಏರ್ ಇಂಡಿಯಾ ವಿಮಾನವು ಬೋಯಿಂಗ್ 787-8 ಡ್​ರೀಮ್​ಲೈನರ್ ಆಗಿದೆ. ಥಾಯ್ ಏರ್​ವೇಸ್​​ನ ವಿಮಾನವು ಏರ್​ಬಸ್ ಕಂಪನಿಯ ಎ310-204 ಆಗಿತ್ತು. ಥಾಯ್ಲೆಂಡ್​ನ ಸುರಾಟ್ ಥಾಣಿ ಏರ್​ಪೋರ್ಟ್​ನಲ್ಲಿ ಲ್ಯಾಂಡಿಂಗ್ ಆಗುವ ಅಪಘಾತವಾಗಿತ್ತು. 146 ಮಂದಿ ಪ್ರಯಾಣಿಕರಲ್ಲಿ 101 ಮಂದಿ ಅಸುನೀಗಿದ್ದರು. ಪೈಲಟ್ ತಂಡದ ತಪ್ಪಿನಿಂದ ಆ ಅಪಘಾತವಾಗಿತ್ತು.

ಮಾನಸಿಕ ಆಘಾತದಲ್ಲಿ ರುವಾಂಗಸಕ್

ಅಂದು ಬದುಕುಳಿದಿದ್ದ ರುವಾಂಗಸಕ್ ಲೋಯಚಸುಕ್ ಅವರಿಗೆ ಆಗ 20 ವರ್ಷ ವಯಸ್ಸಾಗಿತ್ತು. ಈಗ ಅವರಿಗೆ 47 ವರ್ಷ ವಯಸ್ಸು. ಅಪಘಾತವಾಗಿ ಹಲವು ವರ್ಷ ಅವರು ಆ ಘಟನೆಯ ಆಘಾತದಿಂದ ಹೊರಬರಲು ಆಗಿರಲಿಲ್ಲವಂತೆ. ಹತ್ತು ವರ್ಷ ಅವರು ಮತ್ತೆ ವಿಮಾನವನ್ನೇ ಏರಿರಲಿಲ್ಲ. ಈಗ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 11ಎ ಸೀಟ್​ನಲ್ಲಿದ್ದ ವ್ಯಕ್ತಿ ಬದುಕುಳಿದಿರುವ ಸುದ್ದಿ ಕೇಳಿ ಅವರಿಗೆ ಹಳೆಯ ನೆನಪೆಲ್ಲಾ ಬಂದು ಮೈ ನಡುಗಿದಂತಾಯಿತಂತೆ.

ಇದನ್ನೂ ಓದಿ: ವಿಮಾನ ದುರಂತ: 3 ದಿನ ಬಳಿಕ ವಿಜಯ್​ ರೂಪಾನಿ ಗುರುತು ಪತ್ತೆ, ಅಂತ್ಯಕ್ರಿಯೆ ವೇಳಾಪಟ್ಟಿ ಪ್ರಕಟ

ಏರ್ ಇಂಡಿಯಾ ಫ್ಲೈಟ್​ ಅಪಘಾತದಲ್ಲಿ ಬದುಕಿದ ವಿಶ್ವಾಸ್ ಕುಮಾರ್ ರಮೇಶ್ ಅವರು ತಾನು ಜೀವಂತವಾಗಿ ಹೇಗೆ ಉಳಿದೆ ಎನ್ನುವುದೇ ಅಚ್ಚರಿ ಆಗಿದೆ ಎನ್ನುತ್ತಾರೆ.

ಏರ್​ಪೋರ್ಟ್ ಬಿಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನವು ನೆಲಕ್ಕೆ ಅಪ್ಪಳಿಸಿದೆ. ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಗುದ್ದಿದ ರಭಸಕ್ಕೆ ರಮೇಶ್ ಅವರು ತಮ್ಮ 11ಎ ಸೀಟು ಹೊರಗೆ ಬಿದ್ದಿದ್ದಾರೆ. ವಿಮಾನದ ಇತರರೆಲ್ಲರೂ ಬೆಂಕಿಗೆ ಸುಟ್ಟು ಬೂದಿಯಾಗಿದ್ದರು. 11ಎ ಸೀಟು ಎಮರ್ಜೆನ್ಸಿ ಡೋರ್​​ನ ಬದಿಯಲ್ಲೇ ಇತ್ತು. ಹೀಗಾಗಿ, ಬಚಾವಾಗಲು ಅವಕಾಶವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:57 pm, Sun, 15 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ