AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gaganyaan Mission Astronauts: ಭಾರತದಿಂದ ಹಾರಲಿರುವ ಮೊದಲ ಗಗನಯಾತ್ರಿಗಳು; ಇಂದು ಹೆಸರು ಬಹಿರಂಗಪಡಿಸಲಿದ್ದಾರೆ ಪ್ರಧಾನಿ ಮೋದಿ; ಯಾರವರು ಈ ನಾಲ್ವರು

Names of 4 Indian Astronauts: ಇಸ್ರೋ ನಡೆಸುತ್ತಿರುವ ಐತಿಹಾಸಿಕ ಗಗನಯಾನ ಯೋಜನೆ ಮೂಲಕ ನಾಲ್ವರು ಗಗನಯಾತ್ರಿಕರು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ. ಇವರ ಹೆಸರು ಅಧಿಕೃತವಾಗಿ ಬಹಿರಂಗಗೊಳ್ಳಲಿದೆ. ಕೇರಳದ ತಿರುವನಂತಪುರಂನಲ್ಲಿನ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್​ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈ ನಾಲ್ವರನ್ನು ಭೇಟಿ ಮಾಡಲಿದ್ದಾರೆ. 12 ಟೆಸ್ಟ್ ಪೈಲಟ್​ಗಳ ಪೈಕಿ ಈ ನಾಲ್ವರು ಆಯ್ಕೆಗೊಂಡಿದ್ದು, ರಷ್ಯಾ ಸೇರಿದಂತೆ ವಿವಿಧೆಡೆ ಕಠಿಣ ತರಬೇತಿ ಪಡೆದಿದ್ದಾರೆ.

Gaganyaan Mission Astronauts: ಭಾರತದಿಂದ ಹಾರಲಿರುವ ಮೊದಲ ಗಗನಯಾತ್ರಿಗಳು; ಇಂದು ಹೆಸರು ಬಹಿರಂಗಪಡಿಸಲಿದ್ದಾರೆ ಪ್ರಧಾನಿ ಮೋದಿ; ಯಾರವರು ಈ ನಾಲ್ವರು
ಗಗನಯಾತ್ರಿ (ಸಾಂದರ್ಭಿಕ ಚಿತ್ರ)
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 27, 2024 | 12:22 PM

Share

ತಿರುವನಂತಪುರಂ, ಫೆಬ್ರುವರಿ 27: ಕೇರಳ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಸ್ರೋ ಗಗನಯಾನ ಯೋಜನೆ ಅಡಿ (ISRO Gaganyaan) ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಭಾರತೀಯ ಗಗನಯಾತ್ರಿಗಳು (Indian Astronauts) ಯಾರು ಎಂದು ಇಂದು ಹೆಸರು ಬಹಿರಂಗಪಡಿಸಲಿದ್ದಾರೆ. ಕೇರಳ ರಾಜಧಾನಿ ನಗರಿ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್​ನಲ್ಲಿ ಪ್ರಧಾನಿಯವರು ಈ ನಾಲ್ವರು ಗಗನಯಾನಿಗಳನ್ನು ಭೇಟಿ ಮಾಡಿ ಮಾತನಾಡಲಿದ್ದಾರೆ. ಆ ಬಳಿಕ ಅವರ ಹೆಸರನ್ನು ಮಾಧ್ಯಮಗಳಿಗೆ ತಿಳಿಸಲಿದ್ದಾರೆ. ಇಸ್ರೋ ಛೇರ್ಮನ್ ಎಸ್ ಸೋಮನಾಥ್ ಈ ವಿಚಾರವನ್ನು ತಿಳಿಸಿದ್ದಾರೆ.

ಯಾರು ಈ ನಾಲ್ವರು ಗಗನಯಾತ್ರಿಗಳು?

ಚಂದ್ರಯಾನವನ್ನು ಯಶಸ್ವಿಯಾಗಿ ಮಾಡಿರುವ ಇಸ್ರೋ ಮೊದಲ ಬಾರಿಗೆ ಗಗನಯಾನಕ್ಕೆ ಕೈಹಾಕುತ್ತಿದೆ. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿರುವ ನಾಲ್ಕನೇ ದೇಶ ಭಾರತವಾಗಿದೆ. ಹೀಗಾಗಿ ಇದು ಐತಿಹಾಸಿಕ ಎನಿಸಿದೆ. ಗಗನಯಾನವು ಮಾನವರನ್ನು ಬಾಹ್ಯಾಕಾಶಕ್ಕೆ ಹೊತ್ತು ಹೋಗುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಲಿರುವ ನಾಲ್ವರು ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ. ಟೈಮ್ಸ್ ಆಫ್ ಇಂಡಿಯಾ ನಿನ್ನೆ ಪ್ರಕಟಿಸಿದ ವರದಿಯೊಂದರಲ್ಲಿ ಈ ನಾಲ್ವರ ಹೆಸರನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಛೇರ್ಮನ್ ಸ್ಥಾನದಿಂದ ವಿಜಯ್ ಶೇಖರ್ ಶರ್ಮಾ ಹೊರಕ್ಕೆ; ಬ್ಯಾಂಕ್ ಮಂಡಳಿ ಪುನಾರಚನೆ

ಪ್ರಶಾಂತ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಚೌಹಾಣ್ ಅವರು ಭಾರತದ ಗಗನಯಾನದಲ್ಲಿ ಭಾಗಿಯಾಗಲಿರುವ ನಾಲ್ವರು ಗಗನಯಾತ್ರಿಗಳು. ಇವರೆಲ್ಲರೂ ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಮತ್ತು ಗ್ರೂಪ್ ಕ್ಯಾಪ್ಟನ್​ಗಳಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಇಸ್ರೋದಿಂದ ಈವರೆಗೂ ಅಧಿಕೃತವಾಗಿ ಇವರ ಹೆಸರನ್ನು ತಿಳಿಸಲಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ಇಂದು ಖುದ್ದಾಗಿ ಇವರ ಹೆಸರನ್ನು ಬಹಿರಂಗಪಡಿಸಲಿದ್ದಾರೆ.

ಯಾವಾಗ ಆಗಲಿದೆ ಗಗನಯಾನ?

ಬಾಹ್ಯಾಕಾಶಕ್ಕೆ ಖಾಲಿ ನೌಕೆಗಳನ್ನು ಕಳುಹಿಸುವುದಕ್ಕೂ ಮನುಷ್ಯರನ್ನು ಕಳುಹಿಸುವುದಕ್ಕೂ ವ್ಯತ್ಯಾಸ ಇದೆ. ಗಗನಯಾತ್ರಿಗಳಿಗೆ ಎಂಥ ಸಂದರ್ಭದಲ್ಲೂ ಅಪಾಯವಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಅದಕ್ಕಾಗಿ, ಇಸ್ರೋ ಸಂಸ್ಥೆ ತರಾತುರಿಯಲ್ಲಿ ಗಗನಯಾನ ಯೋಜನೆ ನಡೆಸುತ್ತಿಲ್ಲ. ಮನುಷ್ಯರನ್ನು ಹೊತ್ತೊಯ್ಯುವ ಮುನ್ನ ಎರಡರಿಂದ ಮೂರು ಮಾನವರಹಿತ ಗಗನಯಾನಗಳನ್ನು ಕೈಗೊಳ್ಳಲಿದೆ. ಈ ವರ್ಷವೇ ಸರಣಿಯಾಗಿ ಈ ಅನ್​ಮಾನ್ಡ್ ಮಿಷನ್ ನಡೆಯಲಿದೆ. ಇವು ಯಶಸ್ವಿಯಾಗಿದ್ದು ಖಾತ್ರಿಯಾದ ಬಳಿಕ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಯೋಜಿಸಬಹುದು. ಮುಂದಿನ ವರ್ಷ ಈ ಐತಿಹಾಸಿಕ ಹೆಜ್ಜೆ ಇಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ತಾವು ಏನು ಧರಿಸಬೇಕೆಂಬುದನ್ನು ಹೆಣ್ಣುಮಕ್ಕಳೇ ನಿರ್ಧರಿಸಬೇಕು, ಬೇರೆ ಯಾರೂ ಅಲ್ಲ: ರಾಹುಲ್ ಗಾಂಧಿ

ಬೆಂಗಳೂರಿನಲ್ಲಿ ತರಬೇತಿ ಪಡೆದಿರುವ ನಾಲ್ವರು ಯಾತ್ರಿಗಳು

2019ರಲ್ಲಿ ಗಗನಯಾನ ಯೋಜನೆಯಲ್ಲಿ ಪಾಲ್ಗೊಳ್ಳಲು ಟೆಸ್ಟ್ ಪೈಲಟ್​ಗಳನ್ನು ಆಹ್ವಾನಿಸಲಾಗಿತ್ತು. 12 ಪರೀಕ್ಷಾರ್ಥ ಪೈಲಟ್​ಗಳು ಮೊದಲ ಸುತ್ತಿನಲ್ಲಿ ಆಯ್ಕೆಯಾಗಿದ್ದರು. ಮುಂದಿನ ಹಲವು ಸುತ್ತುಗಳ ಬಳಿಕ ನಾಲ್ವರನ್ನು ಶಾರ್ಟ್ ಲಿಸ್ಟ್ ಮಾಡಲಾಯಿತು.

ಈ ನಾಲ್ವರನ್ನು ಭಾರತದ ವಿವಿಧ ಸೇನಾ ಪಡೆಗಳಲ್ಲಿ ನಿಯೋಜಿಸಿ ನಾನಾ ತರಬೇತಿಗಳನ್ನು ಕೊಡಿಸಲಾಗಿದೆ. ರಷ್ಯಾದಲ್ಲೂ ಇವರಿಗೆ ಟ್ರೈನಿಂಗ್ ನೀಡಲಾಗಿದೆ. ಸಿಮುಲೇಟರ್​ಗಳನ್ನು ಬಳಸಿಯೂ ತರಬೇತಿ ಕೊಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು