Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್ 13ರಂದು G20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆ ಉದ್ಘಾಟಿಸಲಿದ್ದಾರೆ ಮೋದಿ

'ವಸುಧೈವ ಕುಟುಂಬಕಂ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಮನೋಭಾವದೊಂದಿಗೆ, ಭಾರತವು ಸಂಕೀರ್ಣವಾದ ಜಾಗತಿಕ ಸಮಸ್ಯೆಗಳಿಗೆ ಒಮ್ಮತ ಆಧಾರಿತ ಪರಿಹಾರಗಳನ್ನು ಹೆಚ್ಚು ಅಂತರ್ಗತ, ಶಾಂತಿಯುತ ಮತ್ತು ಸಮಾನ ಜಗತ್ತಿಗೆ ಒದಗಿಸುವ ಗುರಿಯನ್ನು ಹೊಂದಿದೆ ಎಂದು ಬಿರ್ಲಾ ಹೇಳಿದ್ದಾರೆ.

ಅಕ್ಟೋಬರ್ 13ರಂದು G20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆ ಉದ್ಘಾಟಿಸಲಿದ್ದಾರೆ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Oct 06, 2023 | 8:58 PM

ದೆಹಲಿ ಅಕ್ಟೋಬರ್ 06: ನವದೆಹಲಿಯ ದ್ವಾರಕಾ ಯಶೋಭೂಮಿಯಲ್ಲಿ ಹೊಸದಾಗಿ ನಿರ್ಮಿಸಲಾದ ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಮತ್ತು ಎಕ್ಸ್‌ಪೋ ಸೆಂಟರ್ (IICC)ನಲ್ಲಿ ಅಕ್ಟೋಬರ್ 13 ರಿಂದ 14 ಅಕ್ಟೋಬರ್ ವರೆಗೆ 9 ನೇ G20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆ (P-20) ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು 13 ಅಕ್ಟೋಬರ್ 2023 ರಂದು ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ.

ಇಂದು (ಶುಕ್ರವಾರ) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಜಿ-20 ದೇಶಗಳಲ್ಲದೆ, ಇತರ 10 ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಶೃಂಗಸಭೆಯಲ್ಲಿ ಭಾಗವಹಿಸಲಿವೆ. ಇದುವರೆಗೆ 50 ಸಂಸದರು ಮತ್ತು 26 ಅಧ್ಯಕ್ಷರು, 10 ಉಪಾಧ್ಯಕ್ಷರು ಸೇರಿದಂತೆ 14 ಜನರಲ್ ಸೆಕ್ರೆಟರಿಗಳು ಅಧ್ಯಕ್ಷರು, 01 ಸಮಿತಿಯ ಅಧ್ಯಕ್ಷರು ಮತ್ತು ಐಪಿಯು ಅಧ್ಯಕ್ಷರು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿದ್ದಾರೆ. ಪ್ಯಾನ್ ಆಫ್ರಿಕನ್ ಸಂಸತ್ತಿನ ಅಧ್ಯಕ್ಷರು ಭಾರತದಲ್ಲಿ ಮೊದಲ ಬಾರಿಗೆ P-20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

‘ವಸುಧೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಮನೋಭಾವದೊಂದಿಗೆ, ಭಾರತವು ಸಂಕೀರ್ಣವಾದ ಜಾಗತಿಕ ಸಮಸ್ಯೆಗಳಿಗೆ ಒಮ್ಮತ ಆಧಾರಿತ ಪರಿಹಾರಗಳನ್ನು ಹೆಚ್ಚು ಅಂತರ್ಗತ, ಶಾಂತಿಯುತ ಮತ್ತು ಸಮಾನ ಜಗತ್ತಿಗೆ ಒದಗಿಸುವ ಗುರಿಯನ್ನು ಹೊಂದಿದೆ ಎಂದು ಬಿರ್ಲಾ ಹೇಳಿದ್ದಾರೆ.

P-20 ಶೃಂಗಸಭೆಯಲ್ಲಿ ನಾಲ್ಕು ಉನ್ನತ ಮಟ್ಟದ ಅಧಿವೇಶನಗಳನ್ನು ಆಯೋಜಿಸಲಾಗುವುದು. ಅವುಗಳೆಂದರೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ವೇಗಗೊಳಿಸುವುದು, ಸುಸ್ಥಿರ ಶಕ್ತಿ ಪರಿವರ್ತನೆ,ಮಹಿಳಾ ನೇತೃತ್ವದ ಅಭಿವೃದ್ಧಿ, ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜನರ ಜೀವನದಲ್ಲಿ ಪರಿವರ್ತನೆ.

ಈ ಅಧಿವೇಶನಗಳು G-20 ಸದಸ್ಯರು ಮತ್ತು ಅತಿಥಿ ರಾಷ್ಟ್ರಗಳನ್ನು P-20 ಯ ಉದ್ದೇಶಗಳನ್ನು ಸಂಸತ್ ಗಳು ಹೇಗೆ ಪರಿಣಾಮಕಾರಿಯಾಗಿ ಮುನ್ನಡೆಸಬಹುದುಎಂಬುದರ ಕುರಿತು ವ್ಯಾಪಕ ಚರ್ಚೆಗಾಗಿ ಒಟ್ಟುಗೂಡಿಸುತ್ತದೆ. ಸಮಾನತೆ, ಒಳಗೊಳ್ಳುವಿಕೆ ಮತ್ತು ಶಾಂತಿಯ ಆಧಾರದ ಮೇಲೆ ಪ್ರಮುಖ ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು G-20 ಸರ್ಕಾರಗಳನ್ನು ಒತ್ತಾಯಿಸುವ ಜಂಟಿ ಹೇಳಿಕೆಯೊಂದಿಗೆ ಶೃಂಗಸಭೆಯು ಮುಕ್ತಾಯಗೊಳ್ಳುತ್ತದೆ ಎಂದು ಬಿರ್ಲಾ ತಿಳಿಸಿದರು.

ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಸಂಸ್ಥಾಪಕ, ಎಚ್ಆರ್ ಮುಖ್ಯಸ್ಥರ ಬಂಧನ ಪ್ರಕರಣ: ಪೊಲೀಸರ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

2023 ರ ಅಕ್ಟೋಬರ್ 12 ರಂದು ಶೃಂಗಸಭೆಯ ಮೊದಲು LiFE (ಪರಿಸರಕ್ಕಾಗಿ ಜೀವನಶೈಲಿ) ಕುರಿತು ಸಂಸದೀಯ ವೇದಿಕೆಯನ್ನು ಆಯೋಜಿಸಲಾಗುತ್ತದೆ. ಲೈಫ್ ಅನ್ನು 20 ನೇ ಅಕ್ಟೋಬರ್ 2022 ರಂದು ನರೇಂದ್ರ ಮೋದಿ ಮತ್ತು ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಅವರು ಗುಜರಾತ್‌ನ ಕೆವಾಡಿಯಾದಲ್ಲಿ ಪ್ರಾರಂಭಿಸಿದರು. ಈ ಉಪಕ್ರಮವು ಪರಿಸರ ಪ್ರಜ್ಞೆಯ ಜೀವನಶೈಲಿ ಮತ್ತು ‘ಕಡಿಮೆ, ಮರುಬಳಕೆ ಮತ್ತು ರೀಸೈಕಲ್ ತತ್ವದ ಆಧಾರದ ಮೇಲೆ ಸಮರ್ಥನೀಯ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಶೃಂಗಸಭೆಯ ಸಮಯದಲ್ಲಿ, ಭಾರತದ ಪ್ರಾಚೀನ ಮತ್ತು ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಎತ್ತಿ ಹಿಡಿಯಲು ‘ಮದರ್ ಆಫ್ ಡೆಮಾಕ್ರಸಿ’ ಪ್ರದರ್ಶನವನ್ನು ಸಹ ಆಯೋಜಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ