AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಮಂಡ್​​​​ ಮುಖ್ಯಸ್ಥ ಗೌತಮ್ ಸಿಂಘಾನಿಯಾ ವಿಚ್ಛೇದನ, ಪತ್ನಿ ನವಾಜ್ ವಿಧಿಸಿದ ಷರತ್ತೇನು?

ಪ್ರಖ್ಯಾತ ಉದ್ಯಮಿ  ರೇಮಂಡ್​​​​ ಮುಖ್ಯಸ್ಥ ಗೌತಮ್​​ ಸಿಂಘಾನಿಯಾ(Gautam Singhania) ಅವರು ಪತ್ನಿ ನವಾಜ್​ಗೆ ವಿಚ್ಛೇದನ ನೀಡಿರುವ ಸುದ್ದಿಯನ್ನು ದೀಪಾವಳಿ ಹಬ್ಬದಂದು ಪ್ರಕಟಿಸಿದ್ದರು. ಪತ್ನಿ ವಿಚ್ಛೇದನಕ್ಕೆ ಬದಲಾಗಿ ಭಾರಿ ಷರತ್ತುಗಳನ್ನು ಹಾಕಿದ್ದಾರೆ ಮತ್ತು ಗೌತಮ್ ಸಿಂಘಾನಿಯಾ ಅವರ ಒಟ್ಟು ನಿವ್ವಳ ಮೌಲ್ಯದ ಶೇ.75ರಷ್ಟನ್ನು ತನಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ರೇಮಂಡ್​​​​ ಮುಖ್ಯಸ್ಥ ಗೌತಮ್ ಸಿಂಘಾನಿಯಾ ವಿಚ್ಛೇದನ, ಪತ್ನಿ ನವಾಜ್ ವಿಧಿಸಿದ ಷರತ್ತೇನು?
ಗೌತಮ್ ಸಿಂಘಾನಿಯಾ
ನಯನಾ ರಾಜೀವ್
|

Updated on:Nov 20, 2023 | 2:05 PM

Share

ಪ್ರಖ್ಯಾತ ಉದ್ಯಮಿ  ರೇಮಂಡ್​​​​ ಮುಖ್ಯಸ್ಥ ಗೌತಮ್​​ ಸಿಂಘಾನಿಯಾ(Gautam Singhania) ಅವರು ಪತ್ನಿ ನವಾಜ್​ಗೆ ವಿಚ್ಛೇದನ ನೀಡಿರುವ ಸುದ್ದಿಯನ್ನು ದೀಪಾವಳಿ ಹಬ್ಬದಂದು ಪ್ರಕಟಿಸಿದ್ದರು. ಪತ್ನಿ ವಿಚ್ಛೇದನಕ್ಕೆ ಬದಲಾಗಿ ಭಾರಿ ಷರತ್ತುಗಳನ್ನು ಹಾಕಿದ್ದಾರೆ ಮತ್ತು ಗೌತಮ್ ಸಿಂಘಾನಿಯಾ ಅವರ ಒಟ್ಟು ನಿವ್ವಳ ಮೌಲ್ಯದ ಶೇ.75ರಷ್ಟನ್ನು ತನಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಗೌತಮ್ ಸಿಂಘಾನಿಯಾ ಅವರ ನಿವ್ವಳ ಮೌಲ್ಯ 1.4 ಬಿಲಿಯನ್ ಡಾಲರ್ (ಸುಮಾರು 11,660 ಕೋಟಿ ರೂ.). ಈ ಹಿನ್ನೆಲೆಯಲ್ಲಿ ನವಾಜ್ ಮೋದಿ ಸಿಂಘಾನಿಯಾ ಅವರು ವಿಚ್ಛೇದನಕ್ಕೆ ಬದಲಾಗಿ ಸಿಂಘಾನಿಯಾ ಕುಟುಂಬಕ್ಕೆ 8,745 ಕೋಟಿ ರೂ. ನೀಡುವಂತೆ ಕೇಳಿದ್ದಾರೆ.

32 ವರ್ಷ ಕಾಲ ಅವರ ದಾಂಪತ್ಯ ಸಾಗಿತ್ತು. ಹಿಂದಿನ ದೀಪಾವಳಿಯಂತೆ ಈ ಬಾರಿ ಇರುವುದಿಲ್ಲ. 32 ವರ್ಷ ಕಾಲ ದಂಪತಿಯಾಗಿ ಒಟ್ಟಿಗೆ ಇದ್ದೆವು. ಪೋಷಕರಾಗಿ ಒಟ್ಟಿಗೆ ಬೆಳೆದೆವು. ಪರಿಸ್ಪರರಿಗೆ ಶಕ್ತಿಯಾಗಿ ನಿಂತಿದ್ದೆವು. ಬದ್ಧತೆ, ನಂಬಿಕೆಯಿಂದ ಮುಂದುವರಿದೆವು. ಇಬ್ಬರು ಅದ್ಭುತ ಕುಡಿಗಳು ನಮ್ಮ ಬದುಕಿನಲ್ಲಿ ಮೇಳೈಸಿದವು. ಇಲ್ಲಿಂದ ನಾನು ಮತ್ತು ನವಾಜ್ ಇಬ್ಬರೂ ಬೇರೆ ಬೇರೆ ಹಾದಿಯಲ್ಲಿ ಸಾಗುತ್ತೇವೆ ಎಂದು ನಂಬಿದ್ದೇನೆ. ಅವಳಿಂದ ದೂರ ಹೋಗುತ್ತಿದ್ದೇನೆ. ನಮ್ಮ ಎರಡು ಮುತ್ತುಗಳಾದ ನಿಹಾರಿಕಾ ಮತ್ತು ನೀಸಾ ಅವರಿಗೆ ಒಳಿತಾಗುವ ರೀತಿಯಲ್ಲಿ ಇಬ್ಬರೂ ಮುಂದುವರಿಯುತ್ತೇವೆ,’ ಎಂದು ಗೌತಮ್ ಸಿಂಘಾನಿಯಾ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ರೇಮಂಡ್ ಸಂಸ್ಥೆ ಛೇರ್ಮನ್ ಗೌತಮ್ ಸಿಂಘಾನಿಯಾ, ನವಾಜ್ ಮೋದಿ 32 ವರ್ಷದ ದಾಂಪತ್ಯ ಅಂತ್ಯ; ನಮ್ಮಿಬ್ಬರದ್ದೀಗ ಬೇರೆ ದಾರಿ ಎಂದ ಸಿಂಘಾನಿಯಾ

ಗೌತಮ್ ಸಿಂಘಾನಿಯಾ ಈ ಷರತ್ತಿಗೆ ಒಪ್ಪುತ್ತಾರಾ? ಗೌತಮ್ ಸಿಂಘಾನಿಯಾ ಅವರು ಈ ಬೇಡಿಕೆಯನ್ನು ಸ್ಥೂಲವಾಗಿ ಒಪ್ಪಬಹುದು ಎಂದು ಮೂಲಗಳು ಹೇಳುತ್ತವೆ. ಆದರೆ ಆಸ್ತಿಯ ಈ ಲೆಕ್ಕಪತ್ರವನ್ನು ನೇರವಾಗಿ ಮಾಡಲಾಗುವುದಿಲ್ಲ. ಬದಲಿಗೆ ಫ್ಯಾಮಿಲಿ ಟ್ರಸ್ಟ್ ರಚಿಸುವಂತೆ ಸಲಹೆ ನೀಡಿದ್ದಾರೆ. ಈ ಟ್ರಸ್ಟ್ ಕುಟುಂಬದ ಎಲ್ಲಾ ಆಸ್ತಿ ಮತ್ತು ಆಸ್ತಿಗಳ ಮಾಲೀಕತ್ವದ ಹಕ್ಕುಗಳನ್ನು ಹೊಂದಿರುತ್ತದೆ. ಅವರು ಈ ಟ್ರಸ್ಟ್‌ನ ಏಕೈಕ ಟ್ರಸ್ಟಿಯಾಗಿರುತ್ತಾರೆ. ಅವರ ಮರಣದ ನಂತರ, ಅವರ ಕುಟುಂಬ ಸದಸ್ಯರು ಉಯಿಲು ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಆದರೆ, ನವಾಜ್ ಮೋದಿ ಸಿಂಘಾನಿಯಾ ಈ ವ್ಯವಸ್ಥೆಗೆ ಒಪ್ಪಿಗೆ ನೀಡುವ ಸಾಧ್ಯತೆಗಳು ಕಡಿಮೆ.

ರೇಮಂಡ್ಸ್​ ಗ್ರೂಪ್‌ನಲ್ಲಿ ಈಗಾಗಲೇ ಹಲವು ಟ್ರಸ್ಟ್‌ಗಳನ್ನು ರಚಿಸಲಾಗಿದೆ. ಇವರಲ್ಲಿ ಜೆ.ಕೆ. ಟ್ರಸ್ಟ್ಸ್ ಮತ್ತು ಶ್ರೀಮತಿ ಸುನೀತಿದೇವಿ ಸಿಂಘಾನಿಯಾ ಆಸ್ಪತ್ರೆ ಟ್ರಸ್ಟ್, ರೇಮಂಡ್ ಲಿಮಿಟೆಡ್‌ನಲ್ಲಿ 1.04 ಶೇಕಡಾ ಪಾಲನ್ನು ಹೊಂದಿದೆ. ಗೌತಮ್ ಸಿಂಘಾನಿಯಾ ಈ ಟ್ರಸ್ಟ್‌ನ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದಾರೆ. ಆದರೆ ನವಾಜ್ ಮೋದಿ ಸಿಂಘಾನಿಯಾ ಕೂಡ ಟ್ರಸ್ಟಿಯಾಗಿದ್ದಾರೆ.

ವಿಚ್ಛೇದನ ಷರತ್ತನ್ನು ಹೇಗೆ ಪರಿಹರಿಸಲಾಗುತ್ತದೆ? ಮಾಧ್ಯಮ ವರದಿಗಳ ಪ್ರಕಾರ, ಖೈತಾನ್ ಮತ್ತು ಪಾಲುದಾರ ಎಚ್. ಖೈತಾನ್ ಅವರನ್ನು ಈ ವಿಷಯದಲ್ಲಿ ಗೌತಮ್ ಸಿಂಘಾನಿಯಾ ಅವರ ಕಾನೂನು ಸಲಹೆಗಾರರನ್ನಾಗಿ ಮಾಡಲಾಗಿದೆ. ಆದರೆ ಮುಂಬೈನ ರಶ್ಮಿ ಕಾಂತ್ ಅವರು ನವಾಜ್ ಅವರ ವಕೀಲರಾಗಬಹುದು. ಕೌಟುಂಬಿಕ ಟ್ರಸ್ಟ್ ರಚಿಸುವ ಮೂಲಕ ಗೌತಮ್ ಸಿಂಘಾನಿಯಾ ಏಕೈಕ ಅಧ್ಯಕ್ಷ ಮತ್ತು ಟ್ರಸ್ಟಿಯಾಗಿ ಉಳಿಯುವುದು ಕಷ್ಟವಾಗಬಹುದು ಎಂದು ಕಾನೂನು ತಜ್ಞರು ಹೇಳುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:05 pm, Mon, 20 November 23

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!