Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಮಂಡ್​​​​ ಮುಖ್ಯಸ್ಥ ಗೌತಮ್ ಸಿಂಘಾನಿಯಾ ವಿಚ್ಛೇದನ, ಪತ್ನಿ ನವಾಜ್ ವಿಧಿಸಿದ ಷರತ್ತೇನು?

ಪ್ರಖ್ಯಾತ ಉದ್ಯಮಿ  ರೇಮಂಡ್​​​​ ಮುಖ್ಯಸ್ಥ ಗೌತಮ್​​ ಸಿಂಘಾನಿಯಾ(Gautam Singhania) ಅವರು ಪತ್ನಿ ನವಾಜ್​ಗೆ ವಿಚ್ಛೇದನ ನೀಡಿರುವ ಸುದ್ದಿಯನ್ನು ದೀಪಾವಳಿ ಹಬ್ಬದಂದು ಪ್ರಕಟಿಸಿದ್ದರು. ಪತ್ನಿ ವಿಚ್ಛೇದನಕ್ಕೆ ಬದಲಾಗಿ ಭಾರಿ ಷರತ್ತುಗಳನ್ನು ಹಾಕಿದ್ದಾರೆ ಮತ್ತು ಗೌತಮ್ ಸಿಂಘಾನಿಯಾ ಅವರ ಒಟ್ಟು ನಿವ್ವಳ ಮೌಲ್ಯದ ಶೇ.75ರಷ್ಟನ್ನು ತನಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ರೇಮಂಡ್​​​​ ಮುಖ್ಯಸ್ಥ ಗೌತಮ್ ಸಿಂಘಾನಿಯಾ ವಿಚ್ಛೇದನ, ಪತ್ನಿ ನವಾಜ್ ವಿಧಿಸಿದ ಷರತ್ತೇನು?
ಗೌತಮ್ ಸಿಂಘಾನಿಯಾ
Follow us
ನಯನಾ ರಾಜೀವ್
|

Updated on:Nov 20, 2023 | 2:05 PM

ಪ್ರಖ್ಯಾತ ಉದ್ಯಮಿ  ರೇಮಂಡ್​​​​ ಮುಖ್ಯಸ್ಥ ಗೌತಮ್​​ ಸಿಂಘಾನಿಯಾ(Gautam Singhania) ಅವರು ಪತ್ನಿ ನವಾಜ್​ಗೆ ವಿಚ್ಛೇದನ ನೀಡಿರುವ ಸುದ್ದಿಯನ್ನು ದೀಪಾವಳಿ ಹಬ್ಬದಂದು ಪ್ರಕಟಿಸಿದ್ದರು. ಪತ್ನಿ ವಿಚ್ಛೇದನಕ್ಕೆ ಬದಲಾಗಿ ಭಾರಿ ಷರತ್ತುಗಳನ್ನು ಹಾಕಿದ್ದಾರೆ ಮತ್ತು ಗೌತಮ್ ಸಿಂಘಾನಿಯಾ ಅವರ ಒಟ್ಟು ನಿವ್ವಳ ಮೌಲ್ಯದ ಶೇ.75ರಷ್ಟನ್ನು ತನಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಗೌತಮ್ ಸಿಂಘಾನಿಯಾ ಅವರ ನಿವ್ವಳ ಮೌಲ್ಯ 1.4 ಬಿಲಿಯನ್ ಡಾಲರ್ (ಸುಮಾರು 11,660 ಕೋಟಿ ರೂ.). ಈ ಹಿನ್ನೆಲೆಯಲ್ಲಿ ನವಾಜ್ ಮೋದಿ ಸಿಂಘಾನಿಯಾ ಅವರು ವಿಚ್ಛೇದನಕ್ಕೆ ಬದಲಾಗಿ ಸಿಂಘಾನಿಯಾ ಕುಟುಂಬಕ್ಕೆ 8,745 ಕೋಟಿ ರೂ. ನೀಡುವಂತೆ ಕೇಳಿದ್ದಾರೆ.

32 ವರ್ಷ ಕಾಲ ಅವರ ದಾಂಪತ್ಯ ಸಾಗಿತ್ತು. ಹಿಂದಿನ ದೀಪಾವಳಿಯಂತೆ ಈ ಬಾರಿ ಇರುವುದಿಲ್ಲ. 32 ವರ್ಷ ಕಾಲ ದಂಪತಿಯಾಗಿ ಒಟ್ಟಿಗೆ ಇದ್ದೆವು. ಪೋಷಕರಾಗಿ ಒಟ್ಟಿಗೆ ಬೆಳೆದೆವು. ಪರಿಸ್ಪರರಿಗೆ ಶಕ್ತಿಯಾಗಿ ನಿಂತಿದ್ದೆವು. ಬದ್ಧತೆ, ನಂಬಿಕೆಯಿಂದ ಮುಂದುವರಿದೆವು. ಇಬ್ಬರು ಅದ್ಭುತ ಕುಡಿಗಳು ನಮ್ಮ ಬದುಕಿನಲ್ಲಿ ಮೇಳೈಸಿದವು. ಇಲ್ಲಿಂದ ನಾನು ಮತ್ತು ನವಾಜ್ ಇಬ್ಬರೂ ಬೇರೆ ಬೇರೆ ಹಾದಿಯಲ್ಲಿ ಸಾಗುತ್ತೇವೆ ಎಂದು ನಂಬಿದ್ದೇನೆ. ಅವಳಿಂದ ದೂರ ಹೋಗುತ್ತಿದ್ದೇನೆ. ನಮ್ಮ ಎರಡು ಮುತ್ತುಗಳಾದ ನಿಹಾರಿಕಾ ಮತ್ತು ನೀಸಾ ಅವರಿಗೆ ಒಳಿತಾಗುವ ರೀತಿಯಲ್ಲಿ ಇಬ್ಬರೂ ಮುಂದುವರಿಯುತ್ತೇವೆ,’ ಎಂದು ಗೌತಮ್ ಸಿಂಘಾನಿಯಾ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ರೇಮಂಡ್ ಸಂಸ್ಥೆ ಛೇರ್ಮನ್ ಗೌತಮ್ ಸಿಂಘಾನಿಯಾ, ನವಾಜ್ ಮೋದಿ 32 ವರ್ಷದ ದಾಂಪತ್ಯ ಅಂತ್ಯ; ನಮ್ಮಿಬ್ಬರದ್ದೀಗ ಬೇರೆ ದಾರಿ ಎಂದ ಸಿಂಘಾನಿಯಾ

ಗೌತಮ್ ಸಿಂಘಾನಿಯಾ ಈ ಷರತ್ತಿಗೆ ಒಪ್ಪುತ್ತಾರಾ? ಗೌತಮ್ ಸಿಂಘಾನಿಯಾ ಅವರು ಈ ಬೇಡಿಕೆಯನ್ನು ಸ್ಥೂಲವಾಗಿ ಒಪ್ಪಬಹುದು ಎಂದು ಮೂಲಗಳು ಹೇಳುತ್ತವೆ. ಆದರೆ ಆಸ್ತಿಯ ಈ ಲೆಕ್ಕಪತ್ರವನ್ನು ನೇರವಾಗಿ ಮಾಡಲಾಗುವುದಿಲ್ಲ. ಬದಲಿಗೆ ಫ್ಯಾಮಿಲಿ ಟ್ರಸ್ಟ್ ರಚಿಸುವಂತೆ ಸಲಹೆ ನೀಡಿದ್ದಾರೆ. ಈ ಟ್ರಸ್ಟ್ ಕುಟುಂಬದ ಎಲ್ಲಾ ಆಸ್ತಿ ಮತ್ತು ಆಸ್ತಿಗಳ ಮಾಲೀಕತ್ವದ ಹಕ್ಕುಗಳನ್ನು ಹೊಂದಿರುತ್ತದೆ. ಅವರು ಈ ಟ್ರಸ್ಟ್‌ನ ಏಕೈಕ ಟ್ರಸ್ಟಿಯಾಗಿರುತ್ತಾರೆ. ಅವರ ಮರಣದ ನಂತರ, ಅವರ ಕುಟುಂಬ ಸದಸ್ಯರು ಉಯಿಲು ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಆದರೆ, ನವಾಜ್ ಮೋದಿ ಸಿಂಘಾನಿಯಾ ಈ ವ್ಯವಸ್ಥೆಗೆ ಒಪ್ಪಿಗೆ ನೀಡುವ ಸಾಧ್ಯತೆಗಳು ಕಡಿಮೆ.

ರೇಮಂಡ್ಸ್​ ಗ್ರೂಪ್‌ನಲ್ಲಿ ಈಗಾಗಲೇ ಹಲವು ಟ್ರಸ್ಟ್‌ಗಳನ್ನು ರಚಿಸಲಾಗಿದೆ. ಇವರಲ್ಲಿ ಜೆ.ಕೆ. ಟ್ರಸ್ಟ್ಸ್ ಮತ್ತು ಶ್ರೀಮತಿ ಸುನೀತಿದೇವಿ ಸಿಂಘಾನಿಯಾ ಆಸ್ಪತ್ರೆ ಟ್ರಸ್ಟ್, ರೇಮಂಡ್ ಲಿಮಿಟೆಡ್‌ನಲ್ಲಿ 1.04 ಶೇಕಡಾ ಪಾಲನ್ನು ಹೊಂದಿದೆ. ಗೌತಮ್ ಸಿಂಘಾನಿಯಾ ಈ ಟ್ರಸ್ಟ್‌ನ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದಾರೆ. ಆದರೆ ನವಾಜ್ ಮೋದಿ ಸಿಂಘಾನಿಯಾ ಕೂಡ ಟ್ರಸ್ಟಿಯಾಗಿದ್ದಾರೆ.

ವಿಚ್ಛೇದನ ಷರತ್ತನ್ನು ಹೇಗೆ ಪರಿಹರಿಸಲಾಗುತ್ತದೆ? ಮಾಧ್ಯಮ ವರದಿಗಳ ಪ್ರಕಾರ, ಖೈತಾನ್ ಮತ್ತು ಪಾಲುದಾರ ಎಚ್. ಖೈತಾನ್ ಅವರನ್ನು ಈ ವಿಷಯದಲ್ಲಿ ಗೌತಮ್ ಸಿಂಘಾನಿಯಾ ಅವರ ಕಾನೂನು ಸಲಹೆಗಾರರನ್ನಾಗಿ ಮಾಡಲಾಗಿದೆ. ಆದರೆ ಮುಂಬೈನ ರಶ್ಮಿ ಕಾಂತ್ ಅವರು ನವಾಜ್ ಅವರ ವಕೀಲರಾಗಬಹುದು. ಕೌಟುಂಬಿಕ ಟ್ರಸ್ಟ್ ರಚಿಸುವ ಮೂಲಕ ಗೌತಮ್ ಸಿಂಘಾನಿಯಾ ಏಕೈಕ ಅಧ್ಯಕ್ಷ ಮತ್ತು ಟ್ರಸ್ಟಿಯಾಗಿ ಉಳಿಯುವುದು ಕಷ್ಟವಾಗಬಹುದು ಎಂದು ಕಾನೂನು ತಜ್ಞರು ಹೇಳುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:05 pm, Mon, 20 November 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!