AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಬ್ಬ ಡ್ರಗ್ ಸಪ್ಲೈಯರ್​ ಅರೆಸ್ಟ್​.. ಬಾಲಿವುಡ್​ ಗಣ್ಯರಿಗೆ ನಡುಕ ಶುರು

ಬಾಲಿವುಡ್​ ಡ್ರಗ್ಸ್ ಲಿಂಕ್​ ಸಂಬಂಧಪಟ್ಟಂತೆ ಎನ್​ಸಿಬಿ ಹಲವರನ್ನು ವಿಚಾರಣೆಗೆ ಒಳಪಡಿಸಿದೆ..ಬಂಧಿಸಿದೆ. ಈಗ ಬಂಧಿತನಾಗಿರುವ ರೆಗೆಲ್ ಕೂಡ ಬಾಲಿವುಡ್​ನ ಹಲವು ಗಣ್ಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖಾ ದಳದ ಮೂಲಗಳು ತಿಳಿಸಿವೆ

ಮತ್ತೊಬ್ಬ ಡ್ರಗ್ ಸಪ್ಲೈಯರ್​ ಅರೆಸ್ಟ್​.. ಬಾಲಿವುಡ್​ ಗಣ್ಯರಿಗೆ ನಡುಕ ಶುರು
ಡ್ರಗ್ಸ್ ಪೆಡ್ಲರ್​ ರೆಗೆಲ್​ ಮಹಾಕಾಲ್​
Lakshmi Hegde
| Edited By: |

Updated on: Dec 09, 2020 | 3:59 PM

Share

ಮುಂಬೈ: ನಟ ಸುಶಾಂತ್​ ಸಿಂಗ್ ಸಾವಿನೊಂದಿಗೆ ತಳುಕು ಹಾಕಿಕೊಂಡಿರುವ ಡ್ರಗ್ಸ್ ಕೇಸ್​ಗೆ ಸಂಬಂಧಪಟ್ಟಂತೆ ಎನ್​ಸಿಬಿ ಮುಂಬೈನ ಐಷಾರಾಮಿ ಪ್ರದೇಶವಾದ ಅಂಧೇರಿ ಪಶ್ಚಿಮದಲ್ಲಿ ದಾಳಿ ನಡೆಸಿದ್ದು, ಸುಮಾರು 2.5 ಕೋಟಿ ರೂ.ಮೌಲ್ಯದ 5 ಕೆಜಿ ಹಶೀಶ್​ ಸೇರಿ ಹಲವು ವಿಧದ ಡ್ರಗ್ಸ್​ ವಶಪಡಿಸಿಕೊಂಡಿದೆ.

ಸುಶಾಂತ್ ಸಿಂಗ್​ ಮೃತಪಟ್ಟ ಬಳಿಕ ವಿವಿಧ ಆಯಾಮಗಳಲ್ಲಿ ತನಿಖೆ ಶುರುವಾಗಿತ್ತು. ಡ್ರಗ್ಸ್​ ಲಿಂಕ್​ಗೆ ಸಂಬಂಧಪಟ್ಟಂತೆ ತನಿಖೆ ಕೈಗೊಂಡಿದ್ದ ಎನ್​ಸಿಬಿ, ಹಲವು ಕಡೆಗಳಲ್ಲಿ ಈಗಾಗಲೇ ದಾಳಿ ನಡೆಸಿದೆ. ಈ ಬಾರಿ ಅಂಧೇರಿ ಪಶ್ಚಿಮದಲ್ಲಿ ರೇಡ್​ ಮಾಡಿದ್ದ ಎನ್​ಸಿಬಿ, ನಾಪತ್ತೆಯಾಗಿದ್ದ ಡ್ರಗ್ಸ್ ಪೆಡ್ಲರ್​ ರೆಗೆಲ್​ ಮಹಾಕಾಲ್​ ಎಂಬಾತನನ್ನು ಬಂಧಿಸಿದೆ. ಹಶಿಶ್​ ಜತೆಗೆ ಸ್ವಲ್ಪ ಪ್ರಮಾಣದಲ್ಲಿ ಎಂಡಿಎಂಎ ಮತ್ತು ಒಪಿಯಾಡ್​ಗಳನ್ನೂ ವಶಪಡಿಸಿಕೊಂಡಿದೆ.

2 ದಿನ NCB ಕಸ್ಟಡಿ​ಗೆ

ರೆಗೆಲ್ ಮಹಾಕಾಲ್​ನನ್ನು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಆತನನ್ನು ಎರಡು ದಿನಗಳ ಎನ್​ಸಿಬಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಆದರೆ ಈತ ರಿಯಾ ಚಕ್ರವರ್ತಿ ಮತ್ತು ಶೌವಿಕ್​​ನೊಂದಿಗೆ ಸಂಪರ್ಕದಲ್ಲಿದ್ದ ಬಗ್ಗೆ ಯಾವುದೇ ಮಾಹಿತಿಯನ್ನೂ ನಾವು ನೀಡುವುದಿಲ್ಲ ಎಂದು ಎನ್​ಸಿಬಿಯ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ತಿಳಿಸಿದ್ದಾರೆ.

ಬಂಧಿತ ರೆಗೆಲ್​ ಮಹಾಕಾಲಾ ಇನ್ನೋರ್ವ ಆರೋಪಿ ಅನುಜ್ ಕೇಶ್ವಾನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಅನುಜ್ ಕೇಶ್ವಾನಿ, ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ಸುಶಾಂತ್​ಸಿಂಗ್ ರಜಪೂತ್​ಗೆ ಡ್ರಗ್ಸ್​ ನೀಡುತ್ತಿದ್ದ ಆರೋಪದಡಿ ಸೆಪ್ಟೆಂಬರ್​ನಲ್ಲಿಯೇ ಬಂಧಿತನಾಗಿದ್ದಾನೆ. ಇನ್ನು ರಿಯಾ ಮತ್ತು ಆಕೆಯ ಸಹೋದರ್​ ಶೌವಿಕ್​ರನ್ನು ಕೂಡ ಎನ್​ಸಿಬಿ ಬಂಧಿಸಿತ್ತು. ಅವರು ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದಾರೆ.

ಬಾಲಿವುಡ್​ ಡ್ರಗ್ಸ್ ಲಿಂಕ್​ ಸಂಬಂಧಪಟ್ಟಂತೆ ಎನ್​ಸಿಬಿ ಹಲವರನ್ನು ವಿಚಾರಣೆಗೆ ಒಳಪಡಿಸಿದೆ..ಬಂಧಿಸಿದೆ. ಈಗ ಬಂಧಿತನಾಗಿರುವ ರೆಗೆಲ್ ಕೂಡ ಬಾಲಿವುಡ್​ನ ಹಲವು ಗಣ್ಯರೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖಾ ದಳದ ಮೂಲಗಳು ತಿಳಿಸಿವೆ. ಈತನಿಂದಾಗಿ ಇನ್ನಷ್ಟು ಜನರ ಸತ್ಯ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ