AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryan Khan Case ವಾಟ್ಸ್​​ಆಪ್ ಚಾಟ್ ಆರೋಪ ನಿರಾಕರಿಸಿದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ

Sameer Wankhede ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮಲಿಕ್ ಅವರು ಸಮೀರ್ ವಾಂಖೆಡೆ ಮತ್ತು ಡ್ರಗ್ಸ್ ಆನ್ ಕ್ರೂಸ್ ಪ್ರಕರಣವನ್ನು ಎನ್‌ಸಿಬಿ ನಿಭಾಯಿಸುತ್ತಿರುವುದರ ಬಗ್ಗೆ ಟೀಕಾ ಪ್ರಹಾರ ಮಾಡಿದ್ದು ಯಾಸ್ಮೀನ್ ವಾಂಖೆಡೆ ಮತ್ತು ಅಪರಿಚಿತ ಫೋನ್ ಸಂಖ್ಯೆ ನಡುವೆ ನಡೆದ ವಾಟ್ಸ್​​ಆಪ್ ಚಾಟ್‌ಗಳನ್ನು ಹಂಚಿಕೊಂಡಿದ್ದಾರೆ.

Aryan Khan Case ವಾಟ್ಸ್​​ಆಪ್ ಚಾಟ್ ಆರೋಪ ನಿರಾಕರಿಸಿದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ
ಸಮೀರ್ ವಾಂಖೆಡೆ
TV9 Web
| Edited By: |

Updated on: Nov 02, 2021 | 12:51 PM

Share

ಮುಂಬೈ:  ಆರ್ಯನ್ ಖಾನ್ ಡ್ರಗ್ ಪ್ರಕರಣದ (Aryan Khan drug case) ತನಿಖೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede)ಬಗ್ಗೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ (Nawab Malik) ಆರೋಪ, ಟೀಕೆ ಮುಂದುವರಿಸಿದ್ದಾರೆ.  ಇತ್ತೀಚೆಗೆ ವಾಂಖೆಡೆ  ಸಹೋದರಿ (ವಕೀಲರು) ಮತ್ತು ಈಗ ಜೈಲಿನಲ್ಲಿರುವ ಡ್ರಗ್ ಪೆಡ್ಲರ್ ಜತೆಗಿನ  ವಾಟ್ಸ್​​ಆಪ್ ಚಾಟ್ ಬಗ್ಗೆ ಮಲಿಕ್ ಆರೋಪ ಮಾಡಿದ್ದು ಇದಕ್ಕೆ  ಎನ್‌ಸಿಬಿ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ. ತನ್ನ ಸಹೋದರಿ ಯಾಸ್ಮೀನ್ ವಾಂಖೆಡೆ ಅವರನ್ನು ಡ್ರಗ್ ಪೆಡ್ಲರ್ ಕಾನೂನು ವಿಷಯಕ್ಕೆ ಸಂಬಂಧಿಸಿದ್ದಂತೆ ಸಂಪರ್ಕಿಸಿದ್ದಾರೆ ಎಂದು ಸಮೀರ್  ವಾಂಖೆಡೆ ಹೇಳಿದರು. ಆದರೆ ಅವರು ಎನ್‌ಡಿಪಿಎಸ್ ಅಥವಾ ನಾರ್ಕೋಟಿಕ್ ಡ್ರಗ್ಸ್ ಆಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣಗಳನ್ನು ನಿರ್ವಹಿಸುವುದಿಲ್ಲ ಎಂದು ಆಕೆ ಹೇಳಿದರು. “ಸುಳ್ಳು ಆರೋಪಗಳನ್ನು” ಮಾಡಿದ್ದಕ್ಕಾಗಿ ಎನ್​​ಸಿಬಿ ಅಧಿಕಾರಿ ಮಲಿಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಒಬ್ಬ (ಡ್ರಗ್) ವ್ಯಾಪಾರಿ ಸಲ್ಮಾನ್ ನನ್ನ ಸಹೋದರಿಯನ್ನು ಸಂಪರ್ಕಿಸಿದನು. ಆದರೆ ಅವಳು ಎನ್‌ಡಿಪಿಎಸ್ ಪ್ರಕರಣಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬ ಕಾರಣದಿಂದ ಆತನನ್ನು ಹಿಂದಕ್ಕೆ ಕಳುಹಿಸಿದಳು. ಸಲ್ಮಾನ್ ಮಧ್ಯವರ್ತಿ ಮೂಲಕ ನಮ್ಮನ್ನು ಬಲೆಗೆ ಬೀಳಿಸಲು ಪ್ರಯತ್ನಿಸಿದನು. ಅವನನ್ನು ಬಂಧಿಸಲಾಯಿತು ಮತ್ತು ಜೈಲಿನಲ್ಲಿರಿಸಲಾಗಿದೆ. ವಾಟ್ಸ್​​ಆಪ್ ಚಾಟ್ ಅನ್ನು ಹಂಚಿಕೊಳ್ಳುವ ಮೂಲಕ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ವಾಂಖೆಡೆ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ಹೇಳಿದೆ.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮಲಿಕ್ ಅವರು ಸಮೀರ್ ವಾಂಖೆಡೆ ಮತ್ತು ಡ್ರಗ್ಸ್ ಆನ್ ಕ್ರೂಸ್ ಪ್ರಕರಣವನ್ನು ಎನ್‌ಸಿಬಿ ನಿಭಾಯಿಸುತ್ತಿರುವುದರ ಬಗ್ಗೆ ಟೀಕಾ ಪ್ರಹಾರ ಮಾಡಿದ್ದು ಯಾಸ್ಮೀನ್ ವಾಂಖೆಡೆ ಮತ್ತು ಅಪರಿಚಿತ ಫೋನ್ ಸಂಖ್ಯೆ ನಡುವೆ ನಡೆದ ವಾಟ್ಸಾಪ್ ಚಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಯಾಸ್ಮೀನ್ ವಾಂಖೆಡೆ ಅವರು ತಮ್ಮ ಬ್ಯುಸಿನೆಸ್ ಕಾರ್ಡ್ ಮತ್ತು ಕಚೇರಿ ಸ್ಥಳವನ್ನು ಹಂಚಿಕೊಂಡಿದ್ದಾರೆ ಎಂದು ಚಾಟ್‌ಗಳು ಸೂಚಿಸಿವೆ.

“ನಾನು ನಿಮ್ಮೊಂದಿಗೆ ವಾಟ್ಸ್​​ಆಪ್ ಚಾಟ್ ಹಂಚಿಕೊಳ್ಳುತ್ತಿದ್ದೇನೆ” ಎಂದು ಮಾಧ್ಯಮದವರಿಗೆ ಹೇಳಿದ ಮಲಿಕ್, ಈ ಚಾಟ್‌ಗಳಲ್ಲಿ ‘ಲೇಡಿ ಡಾನ್’ ಯಾಸ್ಮೀನ್ ವಾಂಖೆಡೆ ಡ್ರಗ್ಸ್ ಆರೋಪದ ಮೇಲೆ ಬಂಧಿತ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾರೆ. ಅವಳು ತನ್ನ ವಿಸಿಟಿಂಗ್ ಕಾರ್ಡ್ ಮತ್ತು ವಿಳಾಸವನ್ನು ಹಂಚಿಕೊಳ್ಳುತ್ತಿದ್ದಾಳೆ. ಎನ್​​ಸಿಬಿ ಅಧಿಕಾರಿಯ ಸಹೋದರಿ ಮಾದಕವಸ್ತು ಆರೋಪಿಯೊಂದಿಗೆ ಏಕೆ ಸಂವಹನ ನಡೆಸುತ್ತಿದ್ದಾರೆ? ಇದು ಪ್ರೈವೆಟ್ ಆರ್ಮಿ ಆಟ… ‘ಲೇಡಿ ಡಾನ್’ ಕೂಡ ಈ ವಿಷಯದೊಂದಿಗೆ ಸಂಬಂಧ ಹೊಂದಿದ್ದು, ‘ಚಾಟ್ ರಿಕವರಿ’ ಮಾಡಲಾಗುತ್ತಿದೆ.

ಇಲ್ಲಿ ಪ್ರಶ್ನಿಸಿರುವ ಆರೋಪಿ ಮಾದಕವಸ್ತು ಕಳ್ಳಸಾಗಣೆ ಮಧ್ಯವರ್ತಿ ಎಂದು ವಾಂಖಡೆ ಹೇಳಿದರು. ಆತ ಈ ಹಿಂದೆ ಮುಂಬೈ ಪೊಲೀಸರಿಗೆ ಸುಳ್ಳು ದೂರು ನೀಡಿದ್ದರು ಮತ್ತು ದೂರನ್ನು ಮುಚ್ಚಲಾಗಿದೆ ಎಂದು ವಾಂಖೆಡೆ ಸ್ಪಷ್ಟಪಡಿಸಿದರು.

“ಮಧ್ಯವರ್ತಿಯು ನಮ್ಮನ್ನು ಬಲೆಗೆ ಬೀಳಿಸಲು ಈ ವರ್ಷದ ಆರಂಭದಲ್ಲಿ ಮುಂಬೈ ಪೊಲೀಸರಿಗೆ ಸುಳ್ಳು ದೂರು ನೀಡಿದ್ದನು. ಆದರೆ ಅದರಿಂದ ಏನೂ ಹೊರಬರಲಿಲ್ಲ. ನಂತರ ಸಲ್ಮಾನ್‌ನಂತಹ ಪೆಡ್ಲರ್‌ಗಳನ್ನು ನನ್ನ ಕುಟುಂಬವನ್ನು ಬಲೆಗೆ ಬೀಳಿಸಲು ಬಳಸಲಾಯಿತು. ಅಂತಹ ಪ್ರಯತ್ನಗಳು ನಡೆಯುತ್ತಿವೆ ಇದರ ಹಿಂದೆ ಡ್ರಗ್ಸ್ ಮಾಫಿಯಾ ಕೈವಾಡವಿದೆ ಎಂದು ಡ್ರಗ್ಸ್ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಅವರ “ದುಬಾರಿ ಬಟ್ಟೆ” ವಿಷಯದ ಕುರಿತು ಪ್ರತಿಕ್ರಿಯಿಸಿದ ವಾಂಖೆಡೆ ಇದು ವದಂತಿಗಳು ಎಂದು ಹೇಳಿದರು. “ನನ್ನ ದುಬಾರಿ ಬಟ್ಟೆಗಳಿಗೆ ಸಂಬಂಧಿಸಿದಂತೆ, ಇದು ಕೇವಲ ವದಂತಿಯಾಗಿದೆ. ಮಲಿಕ್ ಅವರಿಗೆ ಈ ಬಗ್ಗೆ ಜ್ಞಾನವಿಲ್ಲ. ಅವರು ಹೆಚ್ಚಿನದನ್ನು ಕಂಡುಹಿಡಿಯಬೇಕು” ಅವರು ಹೇಳಿದರು.

ವಾಂಖೆಡೆ ಅವರು ₹ 2 ಲಕ್ಷ ಮೌಲ್ಯದ ಶೂಗಳು, ₹ 50,000 ಮತ್ತು ₹ 30,000 ಕ್ಕಿಂತ ಹೆಚ್ಚು ಬೆಲೆಯ ಶರ್ಟ್‌ಗಳು ಮತ್ತು ಟೀ ಶರ್ಟ್‌ಗಳು ಮತ್ತು ₹ 20 ಲಕ್ಷಕ್ಕೂ ಹೆಚ್ಚು ವಾಚ್‌ಗಳನ್ನು ಧರಿಸಿರುವುದನ್ನು ಕಾಣಬಹುದು ಎಂದು ಮಲಿಕ್ ಹೇಳಿಕೊಂಡಿದ್ದರು.

“ಇದು ಪ್ರಾಮಾಣಿಕ ಅಧಿಕಾರಿಯ ಜೀವನವಾಗಿದ್ದರೆ, ಇದು ದೇಶದಲ್ಲಿ ನಡೆಯಲಿ ಎಂದು ನಾವು ಬಯಸುತ್ತೇವೆ” ಎಂದಿದ್ದರು ಮಲಿಕ್.

ಸಮೀರ್ ವಾಂಖೆಡೆ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದ ಪ್ರಮುಖ ತನಿಖಾಧಿಕಾರಿಯಾಗಿದ್ದು, ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇತರ ಹಲವರನ್ನು ಬಂಧಿಸಲಾಗಿದೆ. ಆದಾಗ್ಯೂ, ಏಜೆನ್ಸಿಯ ಸಾಕ್ಷಿ ಪ್ರಭಾಕರ್ ಸೈಲ್ ಎನ್‌ಸಿಬಿ ಅಧಿಕಾರಿಯನ್ನು ಒಳಗೊಂಡವರು ₹ 8 ಕೋಟಿ ಪಾವತಿ (₹ 18 ಕೋಟಿ ಒಪ್ಪಂದದ ಭಾಗ) ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳನ್ನು ಮಾಡಿದ ನಂತರ ವಾಂಖೆಡೆ ಅವರು ಆಂತರಿಕ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಮಾಲ್ಡೀವ್ಸ್ ಭೇಟಿಯ ಸಂದರ್ಭದಲ್ಲಿ ಬಾಲಿವುಡ್ ವ್ಯಕ್ತಿಗಳ ಸುಲಿಗೆ ಸೇರಿದಂತೆ ಎಲ್ಲಾ ಆರೋಪಗಳನ್ನು ವಾಂಖೆಡೆ ನಿರಾಕರಿಸಿದ್ದಾರೆ.  ಎನ್‌ಸಿಬಿ ‘ಆರೋಪಿ ನಂ. 1’ ಎಂದು ಗುರುತಿಸಿರುವ ಆರ್ಯನ್ ಖಾನ್ 20 ದಿನಗಳ ಜೈಲಿನಲ್ಲಿ ಕಳೆದ ನಂತರ ಭಾನುವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.

ವಿಪರ್ಯಾಸವೆಂದರೆ ಆರ್ಯನ್ ಖಾನ್ ಮತ್ತು ಇತರ ಇಬ್ಬರು ಪ್ರಮುಖ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಅವರ ವಿರುದ್ಧದ ಪ್ರಕರಣವು ಇಬ್ಬರಿಗೂ ಜಾಮೀನು ನೀಡಿದೆ. ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 3 ರಂದು ಬಂಧಿಸಲಾಯಿತು ಆದರೆ ಅವರ ಬಳಿಯಿಂದ ಡ್ರಗ್ಸ್ ಪತ್ತೆಯಾಗಿಲ್ಲ.

ಇದನ್ನೂ ಓದಿ: ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್​ಗೆ ಬಿಗ್​ ಶಾಕ್​; 1000 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ ಮಾಡಿದ ಐಟಿ

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ