NEET-UG ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ: ಬಿಹಾರದ ಅಭ್ಯರ್ಥಿ ಸೇರಿದಂತೆ ಇಬ್ಬರನ್ನು ಬಂಧಿಸಿದ ಸಿಬಿಐ

|

Updated on: Jul 09, 2024 | 8:22 PM

ನೀಟ್ ಅಭ್ಯರ್ಥಿಯಾಗಿರುವ ಸನ್ನಿ ಕುಮಾರ್ ಎಂಬಾತನನ್ನು ನಳಂದಾದಿಂದ ಬಂಧಿಸಲಾಗಿದ್ದು, ಮತ್ತೊಬ್ಬ ಅಭ್ಯರ್ಥಿಯ ತಂದೆ ರಂಜಿತ್ ಕುಮಾರ್ ಅವರನ್ನು ಗಯಾದಿಂದ ಬಂಧಿಸಲಾಗಿದೆ. ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಸಿಬಿಐ ಇದುವರೆಗೆ ಎಂಟು ಜನರನ್ನು ಮತ್ತು ಲಾತೂರ್ ಮತ್ತು ಗೋಧ್ರಾದಲ್ಲಿ ಆಪಾದಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾ ಒಬ್ಬರನ್ನು ಮತ್ತು ಪಿತೂರಿ ನಡೆಸಿದ್ದಕ್ಕಾಗಿ ಡೆಹ್ರಾಡೂನ್‌ನಿಂದ ಇನ್ನೊಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

NEET-UG ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ: ಬಿಹಾರದ ಅಭ್ಯರ್ಥಿ ಸೇರಿದಂತೆ ಇಬ್ಬರನ್ನು ಬಂಧಿಸಿದ ಸಿಬಿಐ
ನೀಟ್ ಪ್ರತಿಭಟನೆ
Follow us on

ದೆಹಲಿ ಜುಲೈ 09: ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಪಾಟ್ನಾದಿಂದ ಮತ್ತಿಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀಟ್ ಅಭ್ಯರ್ಥಿಯಾಗಿರುವ ಸನ್ನಿ ಕುಮಾರ್ ಎಂಬಾತನನ್ನು ನಳಂದಾದಿಂದ ಬಂಧಿಸಲಾಗಿದ್ದು, ಮತ್ತೊಬ್ಬ ಅಭ್ಯರ್ಥಿಯ ತಂದೆ ರಂಜಿತ್ ಕುಮಾರ್ ಅವರನ್ನು ಗಯಾದಿಂದ ಬಂಧಿಸಲಾಗಿದೆ.  ನೀಟ್ ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುತ್ತದೆ. ಇದು MBBS, BDS, ಆಯುಷ್ ಮತ್ತು ರಾಷ್ಟ್ರಾದ್ಯಂತ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಇತರ ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆಯಾಗಿದೆ. ಮೇ 5 ರಂದು ನಡೆದ NEET-UG 2024 ಪರೀಕ್ಷೆಯಲ್ಲಿ ಸರಿಸುಮಾರು 24 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.

ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಸಿಬಿಐ ಇದುವರೆಗೆ ಎಂಟು ಜನರನ್ನು ಮತ್ತು ಲಾತೂರ್ ಮತ್ತು ಗೋಧ್ರಾದಲ್ಲಿ ಆಪಾದಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾ ಒಬ್ಬರನ್ನು ಮತ್ತು ಪಿತೂರಿ ನಡೆಸಿದ್ದಕ್ಕಾಗಿ ಡೆಹ್ರಾಡೂನ್‌ನಿಂದ ಇನ್ನೊಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಮೇ 5 ರಂದು ನಡೆದ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ವ್ಯಾಪಕ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಿಬಿಐಗೆ ಪ್ರಕರಣದ ತನಿಖೆಯನ್ನು ವಹಿಸಿದೆ.

ನೀಟ್ ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆ: ಸುಪ್ರೀಂಕೋರ್ಟ್

ಸೋಮವಾರ ಸುಪ್ರೀಂ ಕೋರ್ಟ್  ಎನ್‌ಟಿಎ ಮತ್ತು ಕೇಂದ್ರ ಸರ್ಕಾರಕ್ಕೆ ತಮ್ಮ ಕ್ರಮಗಳ ವಿವರವಾದ ಅಫಿಡವಿಟ್‌ಗಳನ್ನು ಸಲ್ಲಿಸಲು ಸೂಚನೆ ನೀಡಿತು ಮತ್ತು ಜುಲೈ 10 ರೊಳಗೆ NEET-UG ಪರೀಕ್ಷೆಗೆ ಸಂಬಂಧಿಸಿದಂತೆ ಸಿಬಿಐನಿಂದ ಸ್ಥಿತಿ ವರದಿಯನ್ನು ಕೇಳಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ NEET-UG ಪರೀಕ್ಷೆಯಲ್ಲಿ ರಾಜಿಯಾಗಿರುವುದನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್, ಸೋರಿಕೆಯ ಫಲಾನುಭವಿಗಳನ್ನು ಗುರುತಿಸಲು ತೆಗೆದುಕೊಂಡ ಕ್ರಮಗಳ ರೂಪರೇಖೆ ಸಲ್ಲಿಸುವಂತೆ NTA ಗೆ ನಿರ್ದೇಶಿಸಿದೆ.

ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯುಂಟಾಗಿದೆ ಎಂಬ ಅಂಶವು ಸಂದೇಹವಿಲ್ಲ. ಸೋರಿಕೆಯಾಗಿದೆ ಮತ್ತು ಸೋರಿಕೆಯ ಸ್ವರೂಪವನ್ನು ನಾವು ನಿರ್ಧರಿಸುತ್ತಿದ್ದೇವೆ ಎಂಬುದು ಒಪ್ಪಿಕೊಳ್ಳುವ ಸತ್ಯ. ಇದು ವ್ಯಾಪಕವಾಗಿಲ್ಲದಿದ್ದರೆ ಯಾವುದೇ ರದ್ದತಿ ಇಲ್ಲ. ಆದರೆ ನಾವು ಮರುಪರೀಕ್ಷೆಗೆ ಆದೇಶಿಸುವ ಮೊದಲು, ನಾವು 23 ಲಕ್ಷ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುತ್ತಿರುವ ಕಾರಣ ಸೋರಿಕೆಯ ವ್ಯಾಪ್ತಿಯನ್ನು ನಾವು ಜಾಗೃತರಾಗಿರಬೇಕು ಎಂದು ಪೀಠ ಹೇಳಿದೆ.

ಇದನ್ನೂ ಓದಿ: ಗುರುಪತ್ವಂತ್ ಪನ್ನುನ್ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ ನಿಷೇಧ 5 ವರ್ಷಗಳವರೆಗೆ ವಿಸ್ತರಣೆ

ಸಿಬಿಐ ತನ್ನ ತನಿಖೆಯ ಪ್ರಗತಿ ಮತ್ತು ಇದುವರೆಗೆ ಸಂಗ್ರಹಿಸಲಾದ ಸಾಕ್ಷ್ಯಗಳ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಕೋರ್ಟ್ ಹೇಳಿದೆ. ಜುಲೈ 10 ರಂದು ಸಂಜೆ 5 ಗಂಟೆಯೊಳಗೆ ವಿವರವಾದ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಎನ್‌ಟಿಎ ಜೊತೆಗೆ ಸಿಬಿಐಗೆ ಸೂಚನೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 11 ರಂದು ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ