ಇಂದು ಭಾರತಕ್ಕೆ ಆಗಮಿಸಲಿದ್ದಾರೆ ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ

ಮೂರು ದಿನಗಳ ಕಾಲ ಅಂದರೆ ಜನವರಿ 16ರ ವರೆಗೆ ಭಾರತದಲ್ಲೇ ವಾಸ್ತವ ಹೂಡಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಇಂದು ಭಾರತಕ್ಕೆ ಆಗಮಿಸಲಿದ್ದಾರೆ ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ
ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ
Updated By: Lakshmi Hegde

Updated on: Jan 14, 2021 | 3:22 PM

ದೆಹಲಿ: ನೇಪಾಳ ಹಾಗೂ ಭಾರತ ಜಂಟಿ ಆಯೋಗದ 6ನೇ ಸಭೆ ನಿಮಿತ್ತ  ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ ಇಂದು ( ಜನವರಿ 14) ಭಾರತಕ್ಕೆ ಆಗಮಿಸಲಿದ್ದು, ಮೂರು ದಿನಗಳ ಕಾಲ ಅಂದರೆ ಜನವರಿ 16ರ ವರೆಗೆ  ವಾಸ್ತವ್ಯ ಹೂಡಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ನೇಪಾಳ-ಭಾರತ ದ್ವಿಪಕ್ಷೀಯ ಸಂಬಂಧದ ಹರವಿನ ಬಗ್ಗೆ ಜಂಟಿ ಆಯೋಗದಲ್ಲಿ ಚರ್ಚೆ ನಡೆಸಲಾಗುವುದು. ಈ ಚರ್ಚೆ ವ್ಯಾಪಾರ, ಇಂಧನ, ಸಾಗಣೆ, ಕೊವಿಡ್​-19 ಸಂದರ್ಭದ ಸಹಕಾರ, ಮೂಲಸೌಕರ್ಯ, ಸಂಪರ್ಕ, ಹೂಡಿಕೆ, ಕೃಷಿ, ಪ್ರವಾಸೋದ್ಯಮ, ಸಂಸ್ಕೃತಿ ಸೇರಿ ಇನ್ನೂ ಹಲವು ವಿಚಾರಗಳನ್ನು ಒಳಗೊಳ್ಳಲಿದೆ ಎಂದು ನಮ್ಮ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ನೇಪಾಳಿ ಸಚಿವರೊಂದಿಗೆ ಭಾರತಕ್ಕೆ ಆಗಮಿಸುವ ನಿಯೋಗದಲ್ಲಿ, ಭಾರತದಲ್ಲಿ ಇರುವ ನೇಪಾಳದ ರಾಯಭಾರಿ, ವಿದೇಶಾಂಗ ಇಲಾಖೆಯ ಕಾರ್ಯದರ್ಶಿ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮತ್ತಿತರ ಹಿರಿಯ ಅಧಿಕಾರಿಗಳು ಇರಲಿದ್ದಾರೆ.ಇನ್ನು 14-16ರವರೆಗೆ ಭಾರತದಲ್ಲೇ ಇರುವ ಗ್ಯಾವಲಿ, ಭಾರತದ ಉನ್ನತ ಮಟ್ಟದ ನಿಯೋಗವನ್ನೂ ಭೇಟಿಯಾಗಲಿದ್ದಾರೆ.

ಚೀನಾದ ಆಕ್ರಮಣಕಾರಿ ಧೋರಣೆಗೆ ತಕ್ಕ ತಿರುಗೇಟು ನೀಡುವ ಸಾಮರ್ಥ್ಯ ಭಾರತಕ್ಕಿದೆ: ಅಮೆರಿಕ