ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹಾ ಕ್ರಾಂತಿ: ಇನ್ನು ಐದು ಗಂಟೆಗಳ ಐವಿ ಡ್ರಿಪ್ ಬೇಕಿಲ್ಲ, ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಇಂಜೆಕ್ಷನ್

ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಗಾಳಿ ಬೀಸಿದ್ದು, ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ವರದಾನವಾಗಬಲ್ಲ ಅತ್ಯಾಧುನಿಕ ಚುಚ್ಚುಮದ್ದು ಬಿಡುಗಡೆಯಾಗಿದೆ. ರಾಶ್ ಫಾರ್ಮಾ ಸಂಸ್ಥೆಯು 'ಟೆಸೆಂಟ್ರಿಕ್' (Tecentriq) ಹೆಸರಿನ ಈ ಇಮ್ಯುನೊಥೆರಪಿ ಔಷಧವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇಲ್ಲಿಯವರೆಗೆ ರೋಗಿಗಳು ಆಸ್ಪತ್ರೆಯ ಬೆಡ್ ಮೇಲೆ ಗಂಟೆಗಟ್ಟಲೆ ಮಲಗಿ ಇಂಟ್ರಾವೆನಸ್ (IV) ಡ್ರಿಪ್ ಮೂಲಕ ಚಿಕಿತ್ಸೆ ಪಡೆಯಬೇಕಿತ್ತು. ಆದರೆ, ಈ ಹೊಸ ‘ಸಬ್ಕ್ಯುಟೇನಿಯಸ್ ಇಂಜೆಕ್ಷನ್’ ಅನ್ನು ಅತ್ಯಂತ ಸುಲಭವಾಗಿ ಚರ್ಮದ ಅಡಿಯಲ್ಲಿ ಕೇವಲ 7 ನಿಮಿಷಗಳಲ್ಲಿ ನೀಡಬಹುದು. ಇದು ರೋಗಿಗಳ ದೈಹಿಕ ಒತ್ತಡವನ್ನು ತಗ್ಗಿಸುವುದಲ್ಲದೆ, ಆಸ್ಪತ್ರೆಗಳ ಮೇಲಿನ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ವಯಸ್ಸಾದವರಿಗೆ ಮತ್ತು ದೂರದ ಊರುಗಳಿಂದ ಬರುವ ರೋಗಿಗಳಿಗೆ ಈ ವೇಗದ ಚಿಕಿತ್ಸಾ ವಿಧಾನವು ಭಾರಿ ಅನುಕೂಲ ಕಲ್ಪಿಸಲಿದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹಾ ಕ್ರಾಂತಿ: ಇನ್ನು ಐದು ಗಂಟೆಗಳ ಐವಿ ಡ್ರಿಪ್ ಬೇಕಿಲ್ಲ, ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಇಂಜೆಕ್ಷನ್
ಕ್ಯಾನ್ಸರ್ ಇಂಜೆಕ್ಷನ್
Image Credit source: Cancer treatment Centre of America

Updated on: May 19, 2026 | 6:59 AM

ನವದೆಹಲಿ, ಮೇ 18: ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಕ್ರಾಂತಿಕಾರಿ ಹಾಗೂ ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ. ಶ್ವಾಸಕೋಶದ ಕ್ಯಾನ್ಸರ್(Cancer) ರೋಗಿಗಳಿಗೆ ವರದಾನವಾಗಬಲ್ಲ ಅತ್ಯಾಧುನಿಕ ಚುಚ್ಚುಮದ್ದನ್ನು ದೇಶದಲ್ಲಿ ಪರಿಚಯಿಸಲಾಗಿದೆ. ಈ ಕುರಿತಾದ ಪೂರ್ಣ ವರದಿ ಇಲ್ಲಿದೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನದಲ್ಲಿ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ಬದಲಾವಣೆ ಗಾಳಿ ಬೀಸಿದೆ.

ಗಂಟೆಗಟ್ಟಲೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಪಡೆಯಬೇಕಿದ್ದ ಸಾಂಪ್ರದಾಯಿಕ ಇಂಟ್ರಾವೆನಸ್ (IV) ಚಿಕಿತ್ಸೆಗೆ ಪರ್ಯಾಯವಾಗಿ, ಕೇವಲ ಏಳು ನಿಮಿಷಗಳಲ್ಲಿ ನೀಡಬಹುದಾದ ಹೊಸ ಕ್ಯಾನ್ಸರ್ ಇಂಜೆಕ್ಷನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲಾಗಿದೆ. ‘ಟೆಸೆಂಟ್ರಿಕ್’ (Tecentriq) ಹೆಸರಿನ ಈ  ಇಮ್ಯುನೊಥೆರಪಿ ಔಷಧವನ್ನು ರಾಶ್ ಫಾರ್ಮಾ ಇಂಡಿಯಾ (Roche Pharma India) ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದೆ.

ಗಂಟೆಗಳ ಕಾಯುವಿಕೆಗೆ ಸಿಕ್ಕಿತು ಮುಕ್ತಿ

ಇಲ್ಲಿಯವರೆಗೆ ಕ್ಯಾನ್ಸರ್ ರೋಗಿಗಳು ಆಸ್ಪತ್ರೆ ಅಥವಾ ಕ್ಲಿನಿಕ್‌ಗಳಲ್ಲಿ ಸೂಜಿ ಚುಚ್ಚಿಸಿಕೊಂಡು ಹಲವಾರು ಗಂಟೆಗಳ ಕಾಲ ಇನ್ಫ್ಯೂಷನ್ ಮೂಲಕ ಔಷಧ ಪಡೆಯಬೇಕಿತ್ತು. ಇದು ರೋಗಿಗಳಿಗೆ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಉಂಟುಮಾಡುತ್ತಿತ್ತು. ಆದರೆ, ಈ ಹೊಸ ‘ಸಬ್ಕ್ಯುಟೇನಿಯಸ್ ಇಂಜೆಕ್ಷನ್’ ಅನ್ನು ಅತ್ಯಂತ ಸುಲಭವಾಗಿ ಚರ್ಮದ ಅಡಿಯಲ್ಲಿ (ಸಾಮಾನ್ಯವಾಗಿ ತೊಡೆಯ ಭಾಗದಲ್ಲಿ) ಕೇವಲ 7 ನಿಮಿಷಗಳಲ್ಲಿ ನೀಡಬಹುದು. ಇದು ಆಸ್ಪತ್ರೆಗಳ ಮೇಲಿನ ಹೊರೆಯನ್ನು ತಗ್ಗಿಸುವುದಲ್ಲದೆ, ವಯಸ್ಸಾದ ರೋಗಿಗಳಿಗೆ ಮತ್ತು ದೂರದ ಊರುಗಳಿಂದ ಬರುವವರಿಗೆ ಭಾರಿ ಅನುಕೂಲ ಕಲ್ಪಿಸಲಿದೆ.

ಔಷಧ ಕೆಲಸ ಮಾಡುವುದು ಹೇಗೆ?
ಈ ಇಂಜೆಕ್ಷನ್‌ನಲ್ಲಿ ಅಟೆಜೋಲಿಜುಮಾಬ್ (Atezolizumab) ಎಂಬ ಪ್ರಮುಖ ಔಷಧವನ್ನು ಬಳಸಲಾಗಿದೆ. ಕ್ಯಾನ್ಸರ್ ಕೋಶಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳಲು PD-L1 ಎಂಬ ಪ್ರೋಟೀನ್ ಅನ್ನು ಕವಚದಂತೆ ಬಳಸುತ್ತವೆ.

ಈ ಹೊಸ ಇಂಜೆಕ್ಷನ್ ಆ ಪ್ರೋಟೀನ್ ಕವಚವನ್ನು ನಿರ್ಬಂಧಿಸುತ್ತದೆ . ಒಮ್ಮೆ ಪ್ರೋಟಿನ್ ಬ್ಲಾಕ್ ಆದ ತಕ್ಷಣ, ದೇಹದ ರೋಗನಿರೋಧಕ ಕೋಶಗಳು ಕ್ಯಾನ್ಸರ್ ಕೋಶಗಳನ್ನು ಸುಲಭವಾಗಿ ಗುರುತಿಸಿ, ಅವುಗಳ ಮೇಲೆ ತೀವ್ರವಾಗಿ ದಾಳಿ ಮಾಡಿ ಧ್ವಂಸಗೊಳಿಸುತ್ತವೆ. ಇದು ಆರೋಗ್ಯಕರ ಕೋಶಗಳಿಗೂ ಹಾನಿ ಮಾಡುವ ಕೀಮೋಥೆರಪಿಗಿಂತ ಭಿನ್ನವಾಗಿದ್ದು, ಅತ್ಯಂತ ಕಡಿಮೆ ಅಡ್ಡಪರಿಣಾಮಗಳನ್ನು ಹೊಂದಿದೆ.

ಮತ್ತಷ್ಟು ಓದಿ: ಮಹಿಳೆಯರಲ್ಲಿ ಕ್ಯಾನ್ಸರ್​​ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು

ಯಾರಿಗೆ ಇದು ಸಹಕಾರಿ
ಭಾರತದಲ್ಲಿ ಅತಿ ಸಾಮಾನ್ಯ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗುತ್ತದೆ. ರೋಗಿಯಗೆಡ್ಡೆಯಲ್ಲಿ ಹೆಚ್ಚಿನ ಮಟ್ಟದ PD-L1 ಪ್ರೋಟಿನ್ ಇದೆಯೇ ಎಂಬುದನ್ನು ವೈದ್ಯರು ಮೊದಲು ಪರೀಕ್ಷಿಸುತ್ತಾರೆ. ತಜ್ಞರ ಪ್ರಕಾರ, ಸುಮಾರು ಅರ್ಧದಷ್ಟು ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಈ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ.

ಪ್ರತಿ ಡೋಸ್‌ಗೆ 3.7 ಲಕ್ಷ ರೂ. ಆಗಿದ್ದು, ಇದು ರೋಗಿಗಳ ಕುಟುಂಬವನ್ನು ಆತಂಕಕ್ಕೆ ತಳ್ಳಿದೆ. ಚಿಕಿತ್ಸೆಯ ಸಂಪೂರ್ಣ ಅವಧಿಯಲ್ಲಿ ಒಬ್ಬ ರೋಗಿಗೆ ಕನಿಷ್ಠ 6 ಡೋಸ್‌ಗಳು ಬೇಕಾಗುತ್ತವೆ. ಅಂದರೆ ಒಟ್ಟು ವೆಚ್ಚ ಸುಮಾರು 22 ಲಕ್ಷ ರೂ. ದಾಟಲಿದೆ. ಮುಂದುವರೆದ ತಂತ್ರಜ್ಞಾನ ಮತ್ತು ಸುದೀರ್ಘ ಸಂಶೋಧನೆಯ ಕಾರಣದಿಂದಾಗಿ ಈ ಇಮ್ಯುನೊಥೆರಪಿ ಔಷಧಗಳು ದುಬಾರಿಯಾಗಿವೆ ಎನ್ನಲಾಗಿದೆ.

ರೋಗಿಗಳಿಗೆ ಸಿಗಲಿದೆಯೇ ಸಹಾಯ?
ಈ ಭಾರಿ ಆರ್ಥಿಕ ಹೊರೆಯನ್ನು ತಗ್ಗಿಸಲು ರೋಚೆ ಸಂಸ್ಥೆಯು “ಬ್ಲೂ ಟ್ರೀ” ಎಂಬ ವಿಶೇಷ ರೋಗಿ ಸಹಾಯ ಯೋಜನೆಯನ್ನು ತಂದಿದೆ. ಇದರ ಜೊತೆಗೆ, ಈ ಔಷಧವನ್ನು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಅಡಿಯಲ್ಲಿ ಸೇರಿಸಲಾಗಿದ್ದು, ಅರ್ಹ ರೋಗಿಗಳಿಗೆ ಹಣ ಮರುಪಾವತಿ (Reimbursement) ಸೌಲಭ್ಯ ಸಿಗಲಿದೆ. ಆದಾಗ್ಯೂ, ಸಾಮಾನ್ಯ ಜನರಿಗೂ ಈ ಚಿಕಿತ್ಸೆ ಸುಲಭವಾಗಿ ಸಿಗುವಂತಾಗಲು ಸರ್ಕಾರದ ಹಸ್ತಕ್ಷೇಪದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೈಗೆಟುಕುವ ಬೆಲೆಯ ಸವಾಲುಗಳಿದ್ದರೂ, ಕ್ಯಾನ್ಸರ್ ರೋಗಿಗಳ ಜೀವಿತಾವಧಿ ಹೆಚ್ಚಿಸುವಲ್ಲಿ ಮತ್ತು ಅವರ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಈ 7 ನಿಮಿಷದ ಇಂಜೆಕ್ಷನ್ ಭಾರತೀಯ ವೈದ್ಯಕೀಯ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಎನ್ನಬಹುದು.

ಡಿಸ್​ಕ್ಲೈಮರ್: ವೈದ್ಯಕೀಯ ಸಲಹೆಯನ್ನು ಒಳಗೊಂಡ ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ತಜ್ಞರ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ವೈದ್ಯರನ್ನು ಅಥವಾ ನಿಮ್ಮ  ಕುಟುಂಬ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಗೆ ಟಿವಿ9 ಕನ್ನಡ ಸಂಸ್ಥೆ ಜವಾಬ್ದಾರರಾಗಿರುವುದಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:16 am, Mon, 18 May 26

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us