Sign In

By signing in or creating an account, you agree with Associated Broadcasting Company's Terms & Conditions and Privacy Policy.

New wage code explainer: ಏಪ್ರಿಲ್ 1ರಿಂದ ಬದಲಾಗಬಹುದು ನಿಮ್ಮ ಕೆಲಸದ ಅವಧಿ, ಸಂಬಳದ ಲೆಕ್ಕ

ಏಪ್ರಿಲ್ 1, 2021ರಿಂದ ಅನ್ವಯ ಆಗುವಂತೆ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವೇತನ ಮತ್ತು ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

New wage code explainer: ಏಪ್ರಿಲ್ 1ರಿಂದ ಬದಲಾಗಬಹುದು ನಿಮ್ಮ ಕೆಲಸದ ಅವಧಿ, ಸಂಬಳದ ಲೆಕ್ಕ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Mar 29, 2021 | 3:00 PM

ಹೊಸ ಆರ್ಥಿಕ ವರ್ಷದಿಂದ (ಏಪ್ರಿಲ್ 1, 2021) ಕಾರ್ಪೊರೇಟ್ ವಲಯದಲ್ಲಿ ಹಲವು ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಅದರಲ್ಲಿ ಬಹಳ ಮುಖ್ಯವಾದದ್ದು ಏನೆಂದರೆ ಕಾರ್ಯ ನಿರ್ವಹಿಸುವ ಅವಧಿ ಹಾಗೂ ಸಿಬ್ಬಂದಿಯ ವೇತನ ರಚನೆಯಲ್ಲಿನ ಆಗಲಿರುವ ಬದಲಾವಣೆ. ಸರ್ಕಾರವು ಜಾರಿಗೆ ತರಲು ಮುಂದಾಗಿರುವ ಹೊಸ ಯೋಜನೆ ಏನೆಂದರೆ, ಸದ್ಯಕ್ಕೆ ದಿನಕ್ಕೆ 9 ಗಂಟೆಯ ಕಾರ್ಯ ನಿರ್ವಹಿಸುವ ಅವಧಿ ಇರುವುದನ್ನು 12 ಗಂಟೆಗೆ ಹೆಚ್ಚಳ ಮಾಡಿದ್ದು, ವಾರಕ್ಕೆ ನಾಲ್ಕು ದಿನವನ್ನು ಕಾರ್ಯ ನಿರ್ವಹಿಸುವ ದಿನವಾಗಿ ಮಾಡಿದೆ.

ಮತ್ತೊಂದು ಬದಲಾವಣೆ ಏನೆಂದರೆ, ಗ್ರಾಚ್ಯುಟಿ ಮತ್ತು ಪ್ರಾವಿಡೆಂಟ್ ಫಂಡ್ (ಭವಿಷ್ಯ ನಿಧಿ) ಹೆಚ್ಚಿಸಿರುವುದರಿಂದ ಉದ್ಯೋಗಿಯ ಟೇಕ್ ಹೋಮ್ ಸ್ಯಾಲರಿ (ಕೈಗೆ ದೊರೆಯುವ ವೇತನ) ಕಡಿಮೆ ಆಗಲಿದೆ ಎಂಬ ನಿರೀಕ್ಷೆ ಸರ್ಕಾರದ್ದಾಗಿದೆ. ಸರ್ಕಾರವು ಕಳೆದ ವರ್ಷ ಸಂಸತ್​ನಲ್ಲಿ ವೇತನ ನೀತಿ ಸಂಹಿತೆ ಮಸೂದೆಯನ್ನು ಅಂಗೀಕರಿಸಿತು. ಅದು ಏಪ್ರಿಲ್ 1ನೇ ತಾರೀಕಿನಂದು ಜಾರಿಗೆ ಬರುವ ನಿರೀಕ್ಷೆ ಇದೆ. ಈ ಕೆಳಕಂಡ ಬದಲಾವಣೆಗಳನ್ನು ಕಾರ್ಪೊರೇಟ್ ಸಿಬ್ಬಂದಿ ಮತ್ತು ಉದ್ಯೋಗದಾತರಲ್ಲಿ ತರಲಾಗುತ್ತದೆ.

1. ಪ್ರತಿ 5 ಗಂಟೆಗಳ ಕೆಲಸದ ನಂತರ 30 ನಿಮಿಷಗಳ ಬಿಡುವು ಕಡ್ಡಾಯ. 2. ಸತತ 5 ಗಂಟೆಗಳ ಮೇಲ್ಪಟ್ಟು ಕೆಲಸ ಮಾಡುವುದನ್ನು ನಿರ್ಬಂಧಿಸಲಾಗಿದೆ. 3. ಸದ್ಯಕ್ಕೆ ಕಾರ್ಯ ನಿರ್ವಹಣೆ ಅವಧಿಯ ನಂತರದ ಹೆಚ್ಚುವರಿಯಾಗಿ15 ನಿಮಿಷ ಕಾರ್ಯ ನಿರ್ವಹಿಸಿದಲ್ಲಿ ಅದನ್ನು ಓವರ್​ಟೈಮ್ ಎಂದು ಪರಿಗಣಿಸಲಾಗುತ್ತದೆ. ಆದರೆ ಇನ್ನು ಮುಂದೆ ಕಾರ್ಯ ನಿರ್ವಹಣೆ ಅವಧಿ ನಂತರ 30 ನಿಮಿಷಕ್ಕಿಂತ ಕಡಿಮೆ ಸಮಯದ ಹೆಚ್ಚುವರಿ ಕೆಲಸವನ್ನು ಓವರ್​ಟೈಮ್ ಎಂದು ಪರಿಗಣಿಸುವುದಿಲ್ಲ. 4. ಮೂಲ ವೇತನವು ಒಟ್ಟು ಸಂಬಳದ ಶೇಕಡಾ 50ರಷ್ಟು ಅಥವಾ ಅದಕ್ಕಿಂತ ಹೆಚ್ಚಿಗೆ ಇರಬೇಕು. ಆದ್ದರಿಂದ ಉದ್ಯೋಗಿಯ ವೇತನ ರಚನೆಯಲ್ಲಿ ಕಡ್ಡಾಯವಾಗಿ ಬದಲಾವಣೆ ಆಗುತ್ತದೆ. 5. ಗ್ರಾಚ್ಯುಯಿಟಿ ಮತ್ತು ಪ್ರಾವಿಡೆಂಟ್ ಫಂಡ್ ಹೆಚ್ಚಳ ಮಾಡುವುದರಿಂದ ನಿವೃತ್ತಿ ನಂತರ ಬರುವ ಮೊತ್ತವು ಹೆಚ್ಚಾಗಲಿದೆ.

ಈ ಹೊಸ ನಿಯಮಾವಳಿಗಳಿಂದ ಯಾವುದೇ ಉದ್ಯೋಗ ಸಂಸ್ಥೆಯ ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಅನುಕೂಲ ಆಗಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.

ಇದನ್ನೂ ಓದಿ: New Wage Code: ಏಪ್ರಿಲ್​ನಿಂದ ನಿಮ್ಮ ಕೈಗೆ ಬರುವ ಸಂಬಳದ ಲೆಕ್ಕಾಚಾರವೇ ಆಗಲಿದೆ ಬದಲು

ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್