Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳದಲ್ಲಿ ಉದ್ಯೋಗವಿಲ್ಲದೆ ಪರದಾಡುತ್ತಿರುವ ಪಧವಿದರರು; ಸ್ಫೋಟಕ ಮಾಹಿತಿ ನೀಡಿದ ಬಂಗಾಳದ ಕೃಷಿ ಸಚಿವ

ಸಾವಿರಾರು ವಿದ್ಯಾರ್ಥಿಗಳು ಪಧವಿದರರಾಗಿ ತೇರ್ಗಡೆಯಾಗಿ ಮಹಾವಿದ್ಯಾಲಯಗಳಿಂದ ಹೊರಹೊಮ್ಮುತ್ತಿದ್ದು, ಅವರಿಗೆ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಕೃಷಿ ಸಚಿವ ಸೋವಂದೇಬ್ ಚಟರ್ಜಿ ಅವರು ತೀರ್ವ ಕಳವಳ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಉದ್ಯೋಗವಿಲ್ಲದೆ ಪರದಾಡುತ್ತಿರುವ ಪಧವಿದರರು; ಸ್ಫೋಟಕ ಮಾಹಿತಿ ನೀಡಿದ ಬಂಗಾಳದ ಕೃಷಿ ಸಚಿವ
ಮಮತಾ ಬ್ಯಾನರ್ಜಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 05, 2022 | 8:26 PM

ಪಶ್ಚಿಮ ಬಂಗಾಳ: ರಾಜ್ಯದಲ್ಲಿ ಉದ್ಯೋಗವಿಲ್ಲದೆ ಸಾಕಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಪಧವಿದರರಾಗಿ (Graduates) ತೇರ್ಗಡೆಯಾಗಿ ಮಹಾವಿದ್ಯಾಲಯಗಳಿಂದ ಹೊರಹೊಮ್ಮುತ್ತಿದ್ದು, ಅವರಿಗೆ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ (West Bengal) ಕೃಷಿ ಸಚಿವ ಸೋವಂದೇಬ್ ಚಟರ್ಜಿ ಅವರು ತೀರ್ವ ಕಳವಳ ವ್ಯಕ್ತಪಡಿಸಿದ್ದಾರೆ.

ಶನಿವಾರ (ಮೇ 4) ರಂದು ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ”ಮಾಧ್ಯಮಿಕದಲ್ಲಿ 12 ಲಕ್ಷ ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಸುಮಾರು ಶೇ.86. ವಿದ್ಯಾವಂತ ನಿರುದ್ಯೋಗಿಗಳು ಸೃಷ್ಠಿಯಾಗಿದ್ದಾರೆ. ಪದವಿ ಮುಗಿಸಿ ಎಂಎ ಮುಗಿಸಿದರೂ ಉದ್ಯೋಗವಿಲ್ಲ.  ನನ್ನ ಮನೆಗೆ ಬರುವವರಲ್ಲಿ ಅರ್ಧದಷ್ಟು ಜನರು ನೌಕರಿಯನ್ನು ಕೇಳುತ್ತಾ ಬರುತ್ತಾರೆ ಮತ್ತು  ಎಲ್ಲಿ ಹೋಗಿ ಕೆಲಸ ಪಡೆಯಲಿ ಎಂದು ಪ್ರಶ್ನಿಸುತ್ತಿದ್ದಾರೆ? ಎಂದು ಪ್ರಶ್ನಿಸುತ್ತಿದ್ದಾರೆ  ಅವರು ಹೇಳಿದರು.

ಇದನ್ನು ಓದಿ: ಉತ್ತರ ಪ್ರದೇಶದ ಕಾರ್ಖಾನೆಯೊಂದರಲ್ಲಿ ಸ್ಪೋಟ ; ಸ್ಪೋಟಗೊಂಡ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆ

ಎಷ್ಟೋ ಹುಡುಗರು ಮತ್ತು ಹುಡುಗಿಯರು ಉದ್ಯೋಗವಿಲ್ಲದೆ ತಿರುಗಾಡುತ್ತಿದ್ದಾರೆ. ಈ ವರ್ಷ 12 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಂದರೆ 86 ಪ್ರತಿಷತದಷ್ಟು ಉತ್ತೀರ್ಣರಾಗಿದ್ದಾರೆ.  ಪಿಯುಸಿ ನಂತರ ನಂತರ ಪದವಿ, ಸ್ನಾತಕೋತ್ತರ, ಹೀಗೆ ವಿವಿಧ ಕ್ಷೇತ್ರಗಳಿಂದ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಹೊರಹೊಮ್ಮುತ್ತಾರೆ ಆದರೆ ಅವರಿಗೆ ಉದ್ಯೋಗವಿಲ್ಲದೆ ತಿರುಗಾಡುತ್ತಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡುವವರು ಯಾರೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ದ್ವಿಪಕ್ಷೀಯ ರಕ್ಷಣಾ ಸಹಕಾರ ಗಾಢಗೊಳಿಸಲು ವಿಯೆಟ್ನಾಂಗೆ 3 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ ರಾಜನಾಥ್ ಸಿಂಗ್

ಪ್ರತಿ ದಿನ ಬೆಳಗ್ಗೆ ನನ್ನ ನಿವಾಸದಲ್ಲಿ ಸಾಮಾನ್ಯ ಜನರನ್ನು ಭೇಟಿಯಾಗುತ್ತೇನೆ, 10 ಜನರಲ್ಲಿ ಕನಿಷ್ಠ 5 ಜನರು ಕೆಲಸಕ್ಕಾಗಿ ಬರುತ್ತಾರೆ ಎಂದು ಅವರು ಹೇಳಿದರು. “ಹುಡುಗನೊಬ್ಬ ಪಿಯುಸಿ ಪಾಸಾದರೆ ಈಗ ಹಲವೆಡೆ ಕೆಲಸ ಸಿಗುತ್ತಿದೆ. ಬೇರೆ ಬೇರೆ ಆಸ್ಪತ್ರೆಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಎರಡು ನಾಲ್ಕು ಮಂದಿಯನ್ನು ಹಾಕಲು ಅವಕಾಶವಿದೆ. ಆದರೆ ಪದವೀಧರರಿಗೆ ಎಂ.ಎ ಅಥವಾ ಉನ್ನತ ವ್ಯಾಸಂಗ ಮಾಡಿದವರಿಗೆ. ಪದವಿ, ಯಾವುದೇ ಕೆಲಸ ಲಭ್ಯವಿಲ್ಲ.”

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 8:26 pm, Sun, 5 June 22