AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಬಂಗಲೆಯಲ್ಲಿ ಬಾಡಿಗೆಗಿದ್ದ ಕಲಾವಿದರ ತೆರವು: ಮನೆ ಕಳೆದುಕೊಂಡ 91ರ ಹರೆಯದ ಪದ್ಮಶ್ರೀ ಪುರಸ್ಕೃತ ಗುರು ಮಾಯಾಧರ್ ರಾವುತ್

ಈ ಮಹಾನ್ ವ್ಯಕ್ತಿಯ ಜತೆ ನೀವು ಅದು ಹೇಗೆ ಈ ರೀತಿ ಕ್ರೂರವಾಗಿ ನಡೆದುಕೊಳ್ಳುತ್ತಿದ್ದೀರಿ? ಅವರು ದೆಹಲಿಯಲ್ಲಿ 50 ವರ್ಷಗಳ ಕಾಲ ಕಲಿಸಿದರು ಮತ್ತು ಎಲ್ಲಿಯೂ ಒಂದು ಇಂಚು ಭೂಮಿಯನ್ನ ಸಹ ಹೊಂದಿಲ್ಲ. ಅವರನ್ನು ಈ ರೀತಿ ಹೊರಹಾಕುವುದು ಸರಿಯಲ್ಲ. ಪ್ರತಿಯೊಬ್ಬ ನಾಗರಿಕರೂ ಮೂಲಭೂತ ಘನತೆಗೆ ಅರ್ಹರು

ಸರ್ಕಾರಿ ಬಂಗಲೆಯಲ್ಲಿ ಬಾಡಿಗೆಗಿದ್ದ ಕಲಾವಿದರ ತೆರವು: ಮನೆ ಕಳೆದುಕೊಂಡ 91ರ ಹರೆಯದ ಪದ್ಮಶ್ರೀ ಪುರಸ್ಕೃತ ಗುರು ಮಾಯಾಧರ್ ರಾವುತ್
ಗುರು ಮಾಯಾಧರ್ ರಾವುತ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Apr 28, 2022 | 7:57 AM

Share

ದೆಹಲಿ: 1970 ರ ದಶಕದಲ್ಲಿ ಏಷ್ಯಾಡ್ ಗ್ರಾಮದಲ್ಲಿ (Asiad village) ಮಂಜೂರು ಮಾಡಿದ್ದ ಸರ್ಕಾರಿ ಬಂಗಲೆಯಲ್ಲಿ ಬಾಡಿಗೆಗಿದ್ದ ಕಲಾವಿದರನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರವು ಪ್ರಾರಂಭಿಸಿದೆ. ಇವರಲ್ಲಿ ಹಲವಾರು ಪದ್ಮ ಪ್ರಶಸ್ತಿ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ಈ ಪೈಕಿ 91 ವರ್ಷದ ಒಡಿಸ್ಸಿ ನೃತ್ಯಪಟು ಗುರು ಮಾಯಾಧರ್ ರಾವುತ್ (Guru Mayadhar Raut) ಅವರು ಒಡಿಸ್ಸಿಗೆ (Odissi) ಶಾಸ್ತ್ರೀಯ ಸ್ಥಾನಮಾನವನ್ನು ನೀಡುವಲ್ಲಿ ಮಹತ್ವದ ಪಾತ್ರಕ್ಕಾಗಿ ರಾಷ್ಟ್ರಪತಿಗಳಿಂದ 2010 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದವರು. ಮಂಗಳವಾರ ಮಧ್ಯಾಹ್ನ ತೆರವು ಕಾರ್ಯಾಚರಣೆ ವೇಳೆ ರಾಷ್ಟ್ರಪತಿ ಸಹಿ ಮಾಡಿದ ಪ್ರಮಾಣಪತ್ರ ಕೂಡಾ ಇತರ ವಸ್ತುಗಳ ಜೊತೆಗೆ ರಸ್ತೆಯ ಮೇಲೆ ಬಿದ್ದಿತ್ತು ಎಂದು ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ. ಅಧಿಕಾರಿಗಳು ಬಂದಾಗ ನಾನು ಊಟ ಬಡಿಸುತ್ತಿದ್ದೆ ಎಂದು ಅವರ ಮಗಳು, ಒಡಿಸ್ಸಿ ನೃತ್ಯಗಾರ್ತಿ ಮಧುಮಿತಾ ರಾವುತ್ ಹೇಳಿದರು. “ನನಗೆ ಇವತ್ತು ತುಂಬಾ ನೋವಾಗಿದೆ. ಸೋನಾಲ್ ಮಾನ್ಸಿಂಗ್ ಮತ್ತು ರಾಧಾ ರೆಡ್ಡಿಯಂತಹ ದೇಶದ ಕೆಲವು ಪ್ರಸಿದ್ಧ ನೃತ್ಯಗಾರರಿಗೆ ತರಬೇತಿ ನೀಡಿದ ನರ್ತಕ ಇಲ್ಲಿದ್ದಾರೆ. ಈ ಮಹಾನ್ ವ್ಯಕ್ತಿಯ ಜತೆ ನೀವು ಅದು ಹೇಗೆ ಈ ರೀತಿ ಕ್ರೂರವಾಗಿ ನಡೆದುಕೊಳ್ಳುತ್ತಿದ್ದೀರಿ? ಅವರು ದೆಹಲಿಯಲ್ಲಿ 50 ವರ್ಷಗಳ ಕಾಲ ಕಲಿಸಿದರು ಮತ್ತು ಎಲ್ಲಿಯೂ ಒಂದು ಇಂಚು ಭೂಮಿಯನ್ನ ಸಹ ಹೊಂದಿಲ್ಲ. ಅವರನ್ನು ಈ ರೀತಿ ಹೊರಹಾಕುವುದು ಸರಿಯಲ್ಲ. ಪ್ರತಿಯೊಬ್ಬ ನಾಗರಿಕರೂ ಮೂಲಭೂತ ಘನತೆಗೆ ಅರ್ಹರು ಎಂದು ಮಧುಮಿತಾ ಹೇಳಿದರು. ಅವರು ತಾತ್ಕಾಲಿಕವಾಗಿ ಸರ್ವೋದಯ ಎನ್‌ಕ್ಲೇವ್‌ನಲ್ಲಿರುವ ತನ್ನ ವಿದ್ಯಾರ್ಥಿಯ ಪೋಷಕರ ಒಡೆತನದ ನೆಲಮಾಳಿಗೆಗೆ ತೆರಳಿದ್ದಾರೆ.

70 ರ ದಶಕದಿಂದ, 40-70 ರ ನಡುವಿನ ವಯಸ್ಸಿನ ಕಲಾವಿದರಿಗೆ ಮೂರು ವರ್ಷಗಳ ಅವಧಿಗೆ ಮೂಲ ಬಾಡಿಗೆಗೆ ವಸತಿಗಳನ್ನು ನೀಡಲಾಯಿತು, ಅದನ್ನು ನಿಯಮಿತವಾಗಿ ವಿಸ್ತರಿಸಲಾಯಿತು. ಈ ವಿಸ್ತರಣೆಗಳು 2014 ರಲ್ಲಿ ಮುಕ್ತಾಯಗೊಂಡವು. ಅಂದಿನಿಂದ ಕಲಾವಿದರು ಮತ್ತು ಸಂಸ್ಕೃತಿ ಸಚಿವಾಲಯದ ನಡುವೆ ನಿರಂತರ ಪತ್ರಗಳ ವ್ಯವಹಾರ ನಡೆಯುತ್ತಿತ್ತು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2020 ರಲ್ಲಿ ಈ ಮನೆಗಳನ್ನು ಖಾಲಿ ಮಾಡುವಂತೆ ಅವರಿಗೆ ನೋಟಿಸ್ ನೀಡಿತ್ತು. ದಿವಂಗತ ಕಥಕ್ ಪ್ರತಿಪಾದಕ ಬಿರ್ಜು ಮಹಾರಾಜ್, ದ್ರುಪದ ಗುರು ವಾಸಿಫುದ್ದೀನ್ ದಾಗರ್, ಕೂಚಿಪುಡಿ ಗುರು ಜಯರಾಮ ರಾವ್ ಮತ್ತು ಮೋಹಿನಿಯಾಟ್ಟಂ ಗುರು ಭಾರತಿ ಶಿವಾಜಿ ಸೇರಿದಂತೆ ಕೆಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಎಸ್ಟೇಟ್ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಮ್ಮ ತಂಡಗಳು ಸರ್ಕಾರಿ ಬಂಗಲೆಗಳನ್ನು ಹೊರಹಾಕಲು ಮುಂದಾಗಿದ್ದಾರೆ ಎಂದು ಹೇಳಿದರು. “ಕಲಾವಿದರು ಇನ್ನು ಮುಂದೆ ಸರ್ಕಾರಿ ಬಂಗಲೆಗಳಿಗೆ ಅರ್ಹರಲ್ಲ ಎಂದು ಕೇಂದ್ರ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ. ದೆಹಲಿ ಹೈಕೋರ್ಟ್ ಆ ತೀರ್ಪನ್ನು ಎತ್ತಿಹಿಡಿದಿದೆ ಮತ್ತು ಮಾನವೀಯ ಆಧಾರದ ಮೇಲೆ (ಏಪ್ರಿಲ್ 25 ರವರೆಗೆ) ಹೊರಹೋಗಲು ಅವರಿಗೆ ಸ್ವಲ್ಪ ಸಮಯಾವಕಾಶ ನೀಡುವಂತೆ ಕೇಳಿದೆ. ಆ ಅವಧಿಯೂ ಮುಗಿದಿದ್ದು, ಖಾಲಿ ಮಾಡುವಂತೆ ಹೇಳಿದ್ದೇವೆ. ಅಂತಹ 28 ವಸತಿಗಳಲ್ಲಿ, 17 ಕಲಾವಿದರು ಖಾಲಿ ಮಾಡಿದ್ದಾರೆ ಮತ್ತು ಉಳಿದವರು ಕೆಲವೇ ದಿನಗಳಲ್ಲಿ ಅದನ್ನು ಮಾಡುವುದಾಗಿ ನಮಗೆ ತಿಳಿಸಿದ್ದಾರೆ, ”ಎಂದು ಅಧಿಕಾರಿ ಹೇಳಿದರು.

ಮೋಹಿನಿಯಾಟ್ಟಂ ಗುರು ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ 74ರ ಹರೆಯದ ಭಾರತಿ ಶಿವಾಜಿ ಅವರು ತಮ್ಮ 98 ವರ್ಷದ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ. ಅವರಿಗೂ ತೆರವು ಮಾಡಲಿರುವ ನೋಟಿಸ್‌ ಸಿಕ್ಕಿದೆ, ಗುರು ಮಾಯಾಧರ್ ಅವರೊಂದಿಗಿನ ಘಟನೆಯು ತುಂಬಾ ನೋವಿನಿಂದ ಕೂಡಿದೆ. ದೆಹಲಿಯಲ್ಲಿ ಕೈಗೆಟುಕುವ ಅಪಾರ್ಟ್ಮೆಂಟ್ ಹುಡುಕುತ್ತಿರುವಾಗ ಶೇಖರಿಸಿಡಲು ನಾನು ನನ್ನ ವಸ್ತುಗಳನ್ನು ಪ್ಯಾಕ್ ಮಾಡಿ ಕಳುಹಿಸಿದ್ದೇನೆ. ನಾನು ಇಲ್ಲಿ ಪ್ರದರ್ಶನ ನೀಡುವ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದೆ, ಈ ಜಾಗದಿಂದ ಮೂರು ಪುಸ್ತಕಗಳನ್ನು ಬರೆದಿದ್ದೇನೆ, ಇಲ್ಲಿ ಕಲಿಸಿದ್ದೇನೆ ಮತ್ತು ಈಗ ನನ್ನನ್ನು ಇಲ್ಲಿಂದ ಹೊರಹಾಕಲಾಗುತ್ತಿದೆ. ಕಲಾವಿದರು ನಿವೃತ್ತರಾಗುವುದಿಲ್ಲ, ಅವರ ಪಾತ್ರ ಬದಲಾಗುತ್ತದೆ. ಅದಕ್ಕೆ ಸರ್ಕಾರ ಬೆಲೆ ಕೊಡಬೇಕು’ ಎಂದು ಶಿವಾಜಿ ಹೇಳಿದರು.

ದ್ರುಪದ ಗುರು ವಾಸಿಫುದ್ದೀನ್ ದಾಗರ್ ಅವರು ಗುರ್ಗಾಂವ್‌ನಲ್ಲಿ ವಿದ್ಯಾರ್ಥಿಯ ಪೋಷಕರು ಏರ್ಪಡಿಸಿದ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ. “ನಾವು ಶಾಸ್ತ್ರೀಯ ಸಂಗೀತದ ಉನ್ನತ ವ್ಯಕ್ತಿಗಳಲ್ಲ. ಇತರರು ಪಡೆಯುವ ರೀತಿಯ ಹಣ ನಮ್ಮ ಬಳಿ ಇಲ್ಲ, ಆದ್ದರಿಂದ ದೆಹಲಿಯಲ್ಲಿ ಕೈಗೆಟುಕುವದನ್ನು ಪಡೆಯಲು ಕಷ್ಟವಾಗುತ್ತದೆ. ಆದರೆ ಈ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Pulwama encounter ಪುಲ್ವಾಮಾ ಎನ್‌ಕೌಂಟರ್‌: ವಲಸೆ ಕಾರ್ಮಿಕರ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರ ಹತ್ಯೆ

Published On - 7:34 am, Thu, 28 April 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?