Pandora Papers – ಪಂಡೋರಾ ಪೇಪರ್ಸ್: 300 ಭಾರತೀಯರು, ಜಗತ್ತಿನ ಗಣ್ಯರು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳ ಹೂಡಿಕೆ ದಾಖಲೆಗಳು ಸೋರಿಕೆ

ಪಂಡೋರಾ ಪೇಪರ್ಸ್‌' ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಈ ತನಿಖೆಯು ಪ್ರಪಂಚದಾದ್ಯಂತದ 14 ವಿವಿಧ ಹಣಕಾಸು ಸೇವಾ ಕಂಪನಿಗಳಿಂದ ಸುಮಾರು 1.2 ಕೋಟಿ ದಾಖಲೆಗಳನ್ನು ಪರಿಶೀಲಿಸುತ್ತದೆ.

Pandora Papers - ಪಂಡೋರಾ ಪೇಪರ್ಸ್: 300 ಭಾರತೀಯರು, ಜಗತ್ತಿನ ಗಣ್ಯರು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳ ಹೂಡಿಕೆ ದಾಖಲೆಗಳು ಸೋರಿಕೆ
ಪಂಡೋರಾ ಪೇಪರ್ಸ್
Follow us
| Updated By: Digi Tech Desk

Updated on:Oct 04, 2021 | 12:36 PM

Pandora Papers | ದೆಹಲಿ: ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ (ICIJ)ಭಾನುವಾರ ಬಿಡುಗಡೆ ಮಾಡಿದ ವರದಿ ಪ್ರಕಾರ ರಾಜ್ಯ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು, ಸೆಲೆಬ್ರಿಟಿಗಳು ಮತ್ತು ಕ್ರೀಡಾಪಟುಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆ ಆಗಿವೆ. ‘ಪಂಡೋರಾ ಪೇಪರ್ಸ್‌’ (Pandora Papers) ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಈ ತನಿಖೆಯು ಪ್ರಪಂಚದಾದ್ಯಂತದ 14 ವಿವಿಧ ಹಣಕಾಸು ಸೇವಾ ಕಂಪನಿಗಳಿಂದ ಸುಮಾರು 1.2 ಕೋಟಿ ದಾಖಲೆಗಳನ್ನು ಪರಿಶೀಲಿಸುತ್ತದೆ.

ಪಂಡೋರಾ ಪೇಪರ್‌ಗಳಲ್ಲಿ 300 ಕ್ಕೂ ಅಧಿಕ ಭಾರತೀಯರ ಹೆಸರುಗಳಿವೆ. ಜೊತೆಗೆ ಜೋರ್ಡಾನ್ ರಾಜ ಅಬ್ದುಲ್ಲಾ II, ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್, ಜೆಕ್ ಗಣರಾಜ್ಯದ ಪ್ರಧಾನ ಮಂತ್ರಿ ಆಂಡ್ರೆಜ್ ಬಾಬಿಸ್, ಕೀನ್ಯಾದ ಅಧ್ಯಕ್ಷ ಉಹುರು ಕೆನ್ಯತ್ತಾ, ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸೊ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಾಜಿ ಸಹವರ್ತಿಗಳ ಹೆಸರು ಇದೆ ಎಂದು 117 ದೇಶಗಳ 150 ಮಾಧ್ಯಮಗಳ ಸುಮಾರು 600 ಪತ್ರಕರ್ತರು ನಡೆಸಿದ ತನಿಖೆಯಲ್ಲಿ ತಿಳಿದು ಬಂದಿದೆ. ತನಿಖೆಯ ಭಾಗವಾಗಿರುವ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ ಬ್ರಿಟನ್ ನ್ಯಾಯಾಲಯದಲ್ಲಿ ದಿವಾಳಿತನವನ್ನು ಘೋಷಿಸಿದ ಅನಿಲ್ ಅಂಬಾನಿ 18 ಆಸ್ತಿ ಹೊಂದಿರುವ ಸಾಗರೋತ್ತರ ಕಂಪನಿಗಳನ್ನು ಹೊಂದಿದ್ದಾರೆ. ನೀರವ್ ಮೋದಿಯ ಸಹೋದರಿ ದೇಶದಿಂದ ಪರಾರಿಯಾಗುವ ಒಂದು ತಿಂಗಳ ಮೊದಲು ಟ್ರಸ್ಟ್ ಅನ್ನು ಸ್ಥಾಪಿಸಿದರು. ಬಯೋಕಾನ್ ಪ್ರವರ್ತಕ ಕಿರಣ್ ಮಜುಂದಾರ್ ಶಾ ಅವರ ಪತಿಯು ಆಂತರಿಕ ವ್ಯಾಪಾರಕ್ಕಾಗಿ ಸೆಬಿ ನಿಷೇಧಿಸಿದ ವ್ಯಕ್ತಿಯೊಂದಿಗೆ ಟ್ರಸ್ಟ್ ಅನ್ನು ಸ್ಥಾಪಿಸಿದರು ಎಂದು ವರದಿಯಲ್ಲಿ ಹೇಳಿದೆ.

ಪನಾಮ ಪೇಪರ್ಸ್ ಬಹಿರಂಗಗೊಂಡ ನಂತರ ಅನೇಕ ವ್ಯಕ್ತಿಗಳ ಸಾಗರೋತ್ತರ ಖಾತೆಗಳು ಬಹಿರಂಗಗೊಂಡಿವೆ. ಪನಾಮಾ ಪೇಪರ್ಸ್ ನಂತರ ಮೂರು ತಿಂಗಳ ನಂತರ ಸಚಿನ್ ತೆಂಡೂಲ್ಕರ್ ಬ್ರಿಟಿಷ್ ವರ್ಜಿನ್ ದ್ವೀಪದಲ್ಲಿ ತನ್ನ ಅಸ್ತಿತ್ವವನ್ನು ದಿವಾಳಿಗೊಳಿಸುವಂತೆ ಕೇಳಿದರು ಎಂದು ವರದಿ ಹೇಳಿದೆ. ಸಮೋವಾ, ಬೆಲೀಜ್ ಅಥವಾ ಕುಕ್ ದ್ವೀಪಗಳು ಬ್ರಿಟಿಷ್ ವರ್ಜಿನ್ ದ್ವೀಪಗಳು ಅಥವಾ ಪನಾಮದಂತಹ ದೊಡ್ಡ ತೆರಿಗೆ ಸ್ವರ್ಗಗಳ ಹೊರತಾಗಿ ಕೆಲವು ಆದ್ಯತೆಯ ತೆರಿಗೆ ಧಾಮಗಳಾಗಿವೆ.

ಪೋರ್ಡೋರಾ ಪೇಪರ್ಸ್, ಜೋರ್ಡಾನ್ ರಾಜ ಅಬ್ದುಲ್ಲಾ II ರವರು ಯುಎಸ್ ಮತ್ತು ಯುಕೆಗಳಲ್ಲಿ  100 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ರಹಸ್ಯವಾಗಿ ಸಂಗ್ರಹಿಸಿದ್ದಾರೆ ಎಂದು ಬಹಿರಂಗಪಡಿಸಿದೆ. ಬ್ಯಾಂಕುಗಳಿಗೆ ಸಾವಿರಾರು ಕೋಟಿಗಳಷ್ಟು ಸಾಲವನ್ನು ಹೊಂದಿರುವ ಭಾರತೀಯರು ತಮ್ಮ ಆಸ್ತಿಯ ಗಮನಾರ್ಹ ಭಾಗವನ್ನು ಸಾಗರೋತ್ತರ ಕಂಪನಿಗಳ ಜಟಿಲಕ್ಕೆ ಸ್ಥಳಾಂತರಿಸಿದ್ದಾರೆ ಎಂದು ವರದಿಯು ಹೇಳುತ್ತದೆ.

ಭಾರತದಲ್ಲಿ ಸಾರ್ವಜನಿಕ ಕಚೇರಿಯನ್ನು ನಿರ್ವಹಿಸಿದ ಮಾಜಿ ಸಂಸತ್ ಸದಸ್ಯರನ್ನು ಪತ್ರಿಕೆಗಳಲ್ಲಿ ಹೆಸರಿಸಲಾಗಿದೆ. 700 ಕ್ಕೂ ಹೆಚ್ಚು ಪಾಕಿಸ್ತಾನಿಯರು, ಕೆಲವು ಸಚಿವರು ಮತ್ತು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಆಪ್ತ ವಲಯದ ಪ್ರಮುಖ ಸದಸ್ಯರು ಹಣಕಾಸು ಸಚಿವ ಶೌಕತ್ ತಾರಿನ್, ಜಲಸಂಪನ್ಮೂಲ ಸಚಿವ ಮೂನಿಸ್ ಎಲಾಹಿ, ಸೆನೆಟರ್ ಫೈಸಲ್ ವಾವ್ಡಾ, ಕೈಗಾರಿಕೆಗಳು ಮತ್ತು ಉತ್ಪಾದನೆ ಮಂತ್ರಿ ಖುಸ್ರೋ ಭಕ್ತಿಯಾರ್ ಅವರ ಕುಟುಂಬದ ಕೂಡಾ ಪಂಡೋರಾ ಪೇಪರ್ಸ್‌ನಲ್ಲಿ ಹೆಸರಿಸಲಾಗಿದೆ.

ಪಂಡೋರಾ ಪೇಪರ್ಸ್ ತನಿಖೆ 2016 ರಲ್ಲಿ ಜಗತ್ತನ್ನು ಬೆಚ್ಚಿಬೀಳಿಸಿದ ಪನಾಮ ಪೇಪರ್‌ಗಳಿಗಿಂತ ದೊಡ್ಡದಾಗಿದೆ. ಪನಾಮ ಪೇಪರ್ಸ್ ಒಂದೇ ಸಾಗರೋತ್ತರ ಸೇವಾ ಪೂರೈಕೆದಾರ ಮೊಸಾಕ್ ಫೊನ್ಸೆಕಾ ಅವರ ಫೈಲ್‌ಗಳಿಂದ ಬಂದಿದ್ದರೆ, ಪಂಡೋರಾ ಪೇಪರ್‌ಗಳು ವಕೀಲರು ಮತ್ತು ಮಧ್ಯವರ್ತಿಗಳ ಸರಮಾಲೆಯನ್ನು ಒಳಗೊಂಡಿವೆ. ವಿಶ್ವದ 38 ವಿವಿಧ ನ್ಯಾಯವ್ಯಾಪ್ತಿಗಳಲ್ಲಿ ವ್ಯಾಪಾರ ಮಾಡುತ್ತಿರುವ 14 ವಿವಿಧ ಸೇವಾ ಪೂರೈಕೆದಾರರಿಂದ ಸುಮಾರು 3 ಟೆರಾಬೈಟ್ ಡೇಟಾ ಮೂಲಕ ಇತ್ತೀಚಿನ ಬಾಂಬ್‌ಶೆಲ್ ಪೋರ್ಟ್‌ಗಳು ಸೋರಿಕೆಯಾಗಿದೆ. ದಾಖಲೆಗಳು 1970 ರ ಹಿಂದಿನವು, ಆದರೆ ಹೆಚ್ಚಿನ ಫೈಲ್‌ಗಳು 1996 ರಿಂದ 2020 ರವರೆಗಿನವುಗಳಾಗಿವೆ.

ಇದನ್ನೂ ಓದಿ: Lakhimpur Kheri Violence ‘ನಾನು ಮುಖ್ಯ ಅಲ್ಲ’: ಲಖಿಂಪುರ್ ಖೇರಿ ಗಡಿಯಲ್ಲಿ ಉತ್ತರ ಪ್ರದೇಶ ಪೊಲೀಸರೊಂದಿಗೆ ಪ್ರಿಯಾಂಕಾ ವಾಗ್ವಾದ

Published On - 12:14 pm, Mon, 4 October 21

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!