AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pegasus row ಭಾರತವನ್ನು ಕಣ್ಗಾವಲು ರಾಜ್ಯವನ್ನಾಗಿ ಮಾಡಲು ಬಿಜೆಪಿ ಬಯಸಿದೆ: ಮಮತಾ ಬ್ಯಾನರ್ಜಿ

Mamata Banerjee:ನಾವು ದೇಶದ ಜನರನ್ನು ಮತ್ತು ನನ್ನ ರಾಜ್ಯವನ್ನು ಅಭಿನಂದಿಸಲು ಬಯಸುತ್ತೇವೆ. ನಾವು ಹಣ, ತೋಳ್ಬಲ, ಮಾಫಿಯಾ ಶಕ್ತಿ ಮತ್ತು ಎಲ್ಲಾ ಏಜೆನ್ಸಿಗಳ ವಿರುದ್ಧ ಹೋರಾಡಿದೆವು. ಎಲ್ಲಾ ವಿವಾದಗಳ ಹೊರತಾಗಿಯೂ, ನಾವು ಗೆದ್ದಿದ್ದೇವೆ ಏಕೆಂದರೆ ಬಂಗಾಳದ ಜನರು ನಮಗೆ ಮತ ಹಾಕಿದರು

Pegasus row ಭಾರತವನ್ನು ಕಣ್ಗಾವಲು ರಾಜ್ಯವನ್ನಾಗಿ ಮಾಡಲು ಬಿಜೆಪಿ ಬಯಸಿದೆ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 21, 2021 | 4:41 PM

ಕೊಲ್ಕತ್ತಾ: ಪೆಗಾಸಸ್ ಪ್ರಾಜೆಕ್ಟ್ ವರದಿ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ  ಮಮತಾ ಬ್ಯಾನರ್ಜಿ ಬುಧವಾರ ಬಿಜೆಪಿ “ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಇಟ್ಟುಕೊಳ್ಳುವ ಬದಲು ಕಣ್ಗಾವಲು ರಾಜ್ಯವನ್ನಾಗಿ ಮಾಡಲು ಬಯಸಿದೆ” ಎಂದು ಆರೋಪಿಸಿದ್ದಾರೆ. “ನಮ್ಮ ಫೋನ್‌ಗಳನ್ನು ಟ್ಯಾಪ್ ಮಾಡಲಾಗಿದೆ. ಪೆಗಾಸಸ್ ಅಪಾಯಕಾರಿ ಮತ್ತು ಉಗ್ರರೂಪದ್ದು. ನಾನು ಯಾರೊಂದಿಗೂ ಮಾತನಾಡಲು ಸಾಧ್ಯವಿಲ್ಲ. ಬೇಹುಗಾರಿಕೆಗಾಗಿ ನೀವು ಹೆಚ್ಚು ಹಣವನ್ನು ಪಾವತಿಸುತ್ತಿದ್ದೀರಿ. ನನ್ನ ಫೋನ್ ಪ್ಲ್ಯಾಸ್ಟರ್ ಮಾಡಿದ್ದೇನೆ. ನಾವು ಕೇಂದ್ರವನ್ನು ಪ್ಲ್ಯಾಸ್ಟರ್ ಮಾಡಬೇಕು, ಇಲ್ಲದಿದ್ದರೆ, ನಮ್ಮ ದೇಶವು ನಾಶವಾಗುತ್ತದೆ. ಫೆಡರಲ್ ರಚನೆಯನ್ನು ಬಿಜೆಪಿ ಹತ್ತಿಕ್ಕಿದೆ”ಎಂದು ಸಿಎಂ ಮಮತಾ ಕೋಲ್ಕತ್ತಾದಲ್ಲಿ ನಡೆದ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ಸಾಂಕ್ರಾಮಿಕ ರೋಗದ ಎರಡನೇ ಅಲೆ “ಮೋದಿ ಸರ್ಕಾರದ ಐತಿಹಾಸಿಕ ವೈಫಲ್ಯ” ಎಂದು ಗುರುತಿಸಿದೆ ಎಂದು ಅವರು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಕಾರಣರಾದ ಬಂಗಾಳದ ಜನರಿಗೆ ಧನ್ಯವಾದ ಹೇಳಿದ ಅವರು, “ನಾವು ದೇಶದ ಜನರನ್ನು ಮತ್ತು ನನ್ನ ರಾಜ್ಯವನ್ನು ಅಭಿನಂದಿಸಲು ಬಯಸುತ್ತೇವೆ. ನಾವು ಹಣ, ತೋಳ್ಬಲ, ಮಾಫಿಯಾ ಶಕ್ತಿ ಮತ್ತು ಎಲ್ಲಾ ಏಜೆನ್ಸಿಗಳ ವಿರುದ್ಧ ಹೋರಾಡಿದೆವು. ಎಲ್ಲಾ ವಿವಾದಗಳ ಹೊರತಾಗಿಯೂ, ನಾವು ಗೆದ್ದಿದ್ದೇವೆ ಏಕೆಂದರೆ ಬಂಗಾಳದ ಜನರು ನಮಗೆ ಮತ ಹಾಕಿದರು ಮತ್ತು ದೇಶ ಮತ್ತು ಪ್ರಪಂಚದ ಜನರಿಂದ ನಮಗೆ ಆಶೀರ್ವಾದ ದೊರೆತಿದೆ ಎಂದಿದ್ದಾರೆ.

ಬಿಜೆಪಿಯನ್ನು ದೇಶದಿಂದ ತೆಗೆದುಹಾಕುವವರೆಗೆ ಎಲ್ಲಾ ರಾಜ್ಯಗಳಲ್ಲಿ ‘ಖೇಲಾ’ ನಡೆಯಲಿದೆ. ಆಗಸ್ಟ್ 16 ರಂದು ನಾವು ‘ಖೇಲಾ ದಿವಾಸ್’ ಆಚರಿಸುತ್ತೇವೆ. ಬಡ ಮಕ್ಕಳಿಗೆ ಫುಟ್‌ಬಾಲ್ ನೀಡುತ್ತೇವೆ. ಇಂದು, ನಮ್ಮ ಸ್ವಾತಂತ್ರ್ಯವು ಅಪಾಯದಲ್ಲಿದೆ. ಬಿಜೆಪಿ ನಮ್ಮ ಸ್ವಾತಂತ್ರ್ಯಕ್ಕೆ ಅಪಾಯವನ್ನುಂಟು ಮಾಡಿದೆ. ಅವರು ತಮ್ಮ ಸ್ವಂತ ಸಚಿವರನ್ನು ನಂಬುವುದಿಲ್ಲ ಮತ್ತು ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ, ”ಎಂದು ಅವರು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಬಂಗಾಳದಲ್ಲಿ ಅಧಿಕಾರಕ್ಕೆ ಮರಳಿದ ನಂತರ, ಟಿಎಂಸಿ ತನ್ನ ಹೆಜ್ಜೆಗುರುತನ್ನು ಇತರ ರಾಜ್ಯಗಳಿಗೆ ವಿಸ್ತರಿಸುವ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಪಕ್ಷವನ್ನು ತನ್ನ ಆರಾಮ ವಲಯದಿಂದ ಮತ್ತು ಗುರುತು ಹಾಕದ ಗಡಿನಾಡುಗಳಿಗೆ ಕರೆದೊಯ್ಯುವ ಮೊದಲ ಹೆಜ್ಜೆಯಾಗಿ, ಟಿಎಂಸಿ ಇತ್ತೀಚಿನ ದಿನಗಳಲ್ಲಿ ಇತರರಿಗಿಂತ ಭಿನ್ನವಾಗಿ ಹುತಾತ್ಮರ ದಿನದ ರ್ಯಾಲಿಯನ್ನು ಯೋಜಿಸಿದೆ.

ಜುಲೈ 21 ರಂದು ಹುತಾತ್ಮರ ದಿನದ ರ್ಯಾಲಿಯು ತೃಣಮೂಲದ ಪ್ರಮುಖ ವಾರ್ಷಿಕ ರಾಜಕೀಯ ಘಟನೆಯಾಗಿದ್ದು ,ರಾಜಕೀಯ ಮುಖಂಡರ ಭಾಷಣವನ್ನು ಕೇಳಲು ಜನ ಸೇರುತ್ತಾರೆ. ಜುಲೈ 21, 1993 ರಂದು ಆಗಿನ ಫೈರ್‌ಬ್ರಾಂಡ್ ಯೂತ್ ಕಾಂಗ್ರೆಸ್ ಮುಖಂಡ ಮಮತಾ ನೇತೃತ್ವದ ಪ್ರದರ್ಶನದಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ಮೃತಪಟ್ಟ 13 ಪಶ್ಚಿಮ ಬಂಗಾಳ ಯುವ ಕಾಂಗ್ರೆಸ್ ಕಾರ್ಯಕರ್ತರ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಬಂಗಾಳದ ಗಡಿಯನ್ನು ಮೀರಿ ಬಿಜೆಪಿಗೆ ಹೋರಾಡುವ ಉದ್ದೇಶದಿಂದ ಮಾರ್ಗಸೂಚಿಯನ್ನು ರೂಪಿಸಲಾಗುತ್ತಿದೆ ಎಂದು ಬ್ಯಾನರ್ಜಿ ಇತ್ತೀಚೆಗೆ ಹೇಳಿದ್ದಾರೆ. ಬಿಜೆಪಿ, ತೃಣಮೂಲದ ತೀವ್ರ ಪ್ರತಿಸ್ಪರ್ಧಿ ಎಂದು ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರೀಯ ರಾಜಕಾರಣದ ಕ್ಷೇತ್ರದಲ್ಲಿಯೂ ಈ ಹೇಳಿಕೆಯು ಸ್ಪಷ್ಟಪಡಿಸುತ್ತದೆ. ಟಿಎಂಸಿ ಬ್ಯಾನರ್ಜಿಯ ಈ ಕಾರ್ಯಕ್ರಮವನ್ನು ಇತರ ನಗರಗಳಲ್ಲಿನ ದೈತ್ಯ ಪರದೆಗಳ ಮೂಲಕ ನೇರ ಪ್ರಸಾರ ಮಾಡಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸೆ ಪ್ರಕರಣದ ವಿಚಾರಣೆ ಜಾರಿಯಲ್ಲಿರುವಾಗಲೇ ದೆಹಲಿಗೆ ಭೇಟಿ ನೀಡಲಿದ್ದಾರೆ ಮಮತಾ ಬ್ಯಾನರ್ಜಿ

ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ವಿಜಯೇಂದ್ರ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಕಾರು ಅಪಘಾತ, ವಿಡಿಯೋ ನೋಡಿ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಮತದಾರರ ಪರಿಷ್ಕೃತ ಪಟ್ಟಿ ನೀಡಲು ತಡವಾಗಿದ್ದಕ್ಕೆ ಶಾಸಕನಿಗೆ ಅಸಮಾಧಾನ
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಡಾ. ರಾಜ್ ಬಗ್ಗೆ ಅವಹೇಳನಕಾರಿ ಮಾತು: ಆರ್​ಜಿವಿಗೆ ಸಾರಾ ಗೋವಿಂದು ಕ್ಲಾಸ್​
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಕುಕ್ಕೆ ದೇಗುಲ ಸೇರಿ ಸರ್ಕಾರದ 3 ಸಾವಿರ ರೂಮ್​​​ ಆನ್​​ ಲೈನ್​ ಬುಕ್ಕಿಂಗ್
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಬಿಜೆಪಿ ನಿಯೋಗದ ನಾಯಕತ್ವ ವಹಿಸಿದ್ದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಸರ್ಕಾರವನ್ನು ದೂರಿ ಏನು ಪ್ರಯೋಜನ ಎಂದ ಅಶಯ್ ಅಂಬಲಿ ತಂದೆ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಯಾರು ಹೊಣೆ ಅಂತ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು: ಜಾರಕಿಹೊಳಿ
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?