AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಪಕ್ಷವನ್ನು ನಡೆಸಲು ಅಸಮರ್ಥರಾಗಿರುವ ರಾಹುಲ್ ಗಾಂಧಿ ಮೇಲೆ ಯಾರಾದರೂ ಯಾಕೆ ಬೇಹುಗಾರಿಕೆ ಮಾಡುತ್ತಾರೆ?: ಸಂಬಿತ್ ಪಾತ್ರಾ

Pegasus row:“ಅವರ ಫೋನ್‌ನಲ್ಲಿ ಶಸ್ತ್ರಾಸ್ತ್ರವಿದ್ದರೆ, ಅವರು ದೂರು ದಾಖಲಿಸುವುದಿಲ್ಲ ಮತ್ತು ಪತ್ರಿಕಾಗೋಷ್ಠಿಗಳನ್ನು ಮಾತ್ರ ಮಾಡುತ್ತಾರೆ. ರಾಹುಲ್ ಗಾಂಧಿಯ ಬಗ್ಗೆ ಯಾರಾದರೂ ಯಾಕೆ ಕಣ್ಣಿಡುತ್ತಾರೆ? ಕಾಂಗ್ರೆಸ್ ಪಕ್ಷವನ್ನು ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವನ ಮೇಲೆ ಬೇಹುಗಾರಿಕೆ ಮಾಡಿ ಗಳಿಸುವುದೇನನ್ನು? ರಾಹುಲ್ ಜಿ, ನಿಮ್ಮ ಫೋನ್ ಅನ್ನು ನೀವು ಪರಿಶೀಲಿಸಬೇಕು ”ಎಂದು ಪಾತ್ರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಕಾಂಗ್ರೆಸ್ ಪಕ್ಷವನ್ನು ನಡೆಸಲು ಅಸಮರ್ಥರಾಗಿರುವ ರಾಹುಲ್ ಗಾಂಧಿ ಮೇಲೆ ಯಾರಾದರೂ ಯಾಕೆ ಬೇಹುಗಾರಿಕೆ ಮಾಡುತ್ತಾರೆ?: ಸಂಬಿತ್ ಪಾತ್ರಾ
ಸಂಬಿತ್ ಪಾತ್ರಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 28, 2021 | 5:03 PM

Share

ದೆಹಲಿ: ಪೆಗಾಸಸ್ ವಿಷಯದ ಬಗ್ಗೆ ಬಿಜೆಪಿಯನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಬುಧವಾರ ರಾಹುಲ್ ಗಾಂಧಿ ಬಗ್ಗೆ ಯಾರೊಬ್ಬರೂ ಗೂಢಚರ್ಯೆ ನಡೆಸುವುದಕ್ಕೆ ಕಾರಣವೇ ಇಲ್ಲ ಎಂದು ಹೇಳಿದ್ದಾರೆ.

“ಅವರ ಫೋನ್‌ನಲ್ಲಿ ಶಸ್ತ್ರಾಸ್ತ್ರವಿದ್ದರೆ, ಅವರು ದೂರು ದಾಖಲಿಸುವುದಿಲ್ಲ ಮತ್ತು ಪತ್ರಿಕಾಗೋಷ್ಠಿಗಳನ್ನು ಮಾತ್ರ ಮಾಡುತ್ತಾರೆ. ರಾಹುಲ್ ಗಾಂಧಿಯ ಬಗ್ಗೆ ಯಾರಾದರೂ ಯಾಕೆ ಕಣ್ಣಿಡುತ್ತಾರೆ? ಕಾಂಗ್ರೆಸ್ ಪಕ್ಷವನ್ನು ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವನ ಮೇಲೆ ಬೇಹುಗಾರಿಕೆ ಮಾಡಿ ಗಳಿಸುವುದೇನನ್ನು? ರಾಹುಲ್ ಜಿ, ನಿಮ್ಮ ಫೋನ್ ಅನ್ನು ನೀವು ಪರಿಶೀಲಿಸಬೇಕು ”ಎಂದು ಪಾತ್ರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಪ್ರಧಾನಿ ಮೋದಿ ಪ್ರಮುಖ ವಿಷಯಗಳ ಕುರಿತು ಸಭೆಗಳನ್ನು ಕರೆಯುತ್ತಾರೆ, ಆದರೆ ಕಾಂಗ್ರೆಸ್ ಅವರನ್ನು ಬಹಿಷ್ಕರಿಸುತ್ತದೆ. ನೀವು (ರಾಹುಲ್ ಗಾಂಧಿ) ದುರುದ್ದೇಶ (ಪೆಗಾಸಸ್) ನಮಗೆ ಮುಖ್ಯವಾಗಿದೆ. ಕೊವಿಡ್ -19 ಮುಖ್ಯ ಅಲ್ಲ ಎಂದು ಹೇಳುತ್ತಿದ್ದೀರಿ. ನೀವು ಜನರ ಜೀವನದೊಂದಿಗೆ ಆಡುತ್ತಿದ್ದೀರಿ. ನೀವು ಜನರ ಧ್ವನಿಯನ್ನು ನಿಗ್ರಹಿಸುತ್ತಿದ್ದೀರಿ.

ಪ್ರತಿಪಕ್ಷಗಳು ತಮ್ಮ ಕುಟುಂಬಗಳನ್ನು ಉಳಿಸುವ ಬಗ್ಗೆ ಹೆಚ್ಚು ಚಿಂತಿತರಾಗಿದ್ದರೆ, ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗೆ ಶ್ರಮಿಸುವತ್ತ ಗಮನ ಹರಿಸಿದ್ದಾರೆ ಎಂದು ಪಾತ್ರಾ ಹೇಳಿದರು. “ವಿರೋಧ ಪಕ್ಷಗಳು ಏನು ಬಯಸುತ್ತವೆ? ಅವರಿಗೆ ಒಂದೇ ಒಂದು ಗುರಿ ಇದೆ ಮತ್ತು ಅದು ಅವರ ಕುಟುಂಬಗಳನ್ನು ಉಳಿಸುವುದು.

ರಾಹುಲ್ ಮತ್ತು ಪ್ರಿಯಾಂಕಾ ಮಾತ್ರ ರಾಜಕೀಯವಾಗಿ ನೆಲೆಗೊಳ್ಳಲು ಬಯಸುತ್ತಾರೆ. ಪಿಎಂ ಮೋದಿಯವರ ಏಕೈಕ ಕಾಳಜಿ ಭಾರತವನ್ನು ಅಭಿವೃದ್ಧಿಯ ಹಾದಿಯಲ್ಲಿ ನೆಲೆಸುವುದು. ವಿರೋಧದ ಏಕತೆಯ ನಾಟಕವನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳುತ್ತಾರೆ”ಎಂದು ಅವರು ಹೇಳಿದರು.

“ಭಾರತ, ಅದರ ಸಂಸ್ಥೆಗಳ ವಿರುದ್ಧ ಪೆಗಾಸಸ್ ಅನ್ನು ಬಳಸುವುದರ ಮೂಲಕ” ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ ಬೆನ್ನಲ್ಲೇ ಪಾತ್ರಾ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಪಕ್ಷಗಳ ಮುಖಂಡರೊಂದಿಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಾಂಧಿ, ಪ್ರತಿಪಕ್ಷಗಳಿಗೆ ಒಂದೇ ಒಂದು ಪ್ರಶ್ನೆ ಇದೆ – ಭಾರತ ಸರ್ಕಾರವು ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು “ತನ್ನದೇ ಜನರ ವಿರುದ್ಧದ ಆಯುಧ” ವಾಗಿ ಬಳಸಲು ಖರೀದಿಸಿತ್ತೇ ಎಂಬುದು ಎಂದಿದ್ದರು.

ಈ ವಿಷಯವನ್ನು ಸದನದಲ್ಲಿ ಏಕೆ ಚರ್ಚಿಸಲಾಗುವುದಿಲ್ಲ ಎಂದು ಗಾಂಧಿ ಪ್ರಶ್ನಿಸಿದರು. ಪ್ರತಿಪಕ್ಷಗಳು ಈ ವಿಷಯವನ್ನು ಎತ್ತುವ ಮೂಲಕ ಸಂಸತ್ತಿನ ಕಲಾಪಕ್ಕೆ ತೊಂದರೆ ನೀಡುತ್ತಿಲ್ಲ ಆದರೆ “ನಮ್ಮ ಜವಾಬ್ದಾರಿಯನ್ನು ಮಾತ್ರ ಪೂರೈಸುತ್ತಿದೆ” ಎಂದು ಅವರು ಒತ್ತಿ ಹೇಳಿದರು.

“ಸರ್ಕಾರವು ಪೆಗಾಸಸ್ ಅನ್ನು ಖರೀದಿಸಿ ಭಾರತೀಯರ ಮೇಲೆ ಕಣ್ಣಿಟ್ಟಿದೆಯೇ ಎಂದು ನಾವು ಕೇಳುತ್ತಿದ್ದೇವೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು. ಪೆಗಾಸಸ್ ವಿವಾದ “ಗೌಪ್ಯತೆಯ ವಿಷಯವಲ್ಲ”, ಆದರೆ “ರಾಷ್ಟ್ರ ವಿರೋಧಿ ಕೆಲಸ” ಎಂದು ಅವರು ವಾದಿಸಿದರು. ನರೇಂದ್ರ ಮೋದಿ, ಅಮಿತ್ ಶಾ ಅವರು ಪೆಗಾಸಸ್ ಅನ್ನು ಭಾರತ, ಅದರ ಸಂಸ್ಥೆಗಳ ವಿರುದ್ಧ ಬಳಸುವ ಮೂಲಕ ಭಾರತದ ಪ್ರಜಾಪ್ರಭುತ್ವದ ಆತ್ಮವನ್ನು ಹೊಡೆದಿದ್ದಾರೆ ”ಎಂದು ಗಾಂಧಿ ಹೇಳಿದರು.

ಮಂಗಳವಾರ, ಗಾಂಧಿ ಅಧ್ಯಕ್ಷತೆಯಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ನಡೆದಿದ್ದು ಪೆಗಾಸಸ್ ಸ್ಪೈವೇರ್ ಫೋನ್ ಹ್ಯಾಕಿಂಗ್ ವಿವಾದ ಪ್ರಕರಣದಲ್ಲಿ ಒಟ್ಟಿಗೆ ಸೇರಲು ಮತ್ತು ಷಾ ಅವರ ಸಮ್ಮುಖದಲ್ಲಿ ಚರ್ಚೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದರು.

ಇದನ್ನೂ ಓದಿ: Pegasus spyware ನನ್ನ ಎಲ್ಲ ಫೋನ್​​ಗಳನ್ನು ಕದ್ದಾಲಿಕೆ ಮಾಡಲಾಗಿದೆ: ರಾಹುಲ್ ಗಾಂಧಿ

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ ನಡುವೆ ಮಹತ್ವದ ಭೇಟಿ, ಸಂಯುಕ್ತ ವಿರೋಧ ಪಕ್ಷ ರಚನೆ ಕುರಿತು ನಡೆಯಲಿದೆ ಚರ್ಚೆ

(Pegasus row why anyone would ever spy on Rahul Gandhi Sambit Patra hits back at Congress)

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ