AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಭಿನ್ನ ರೂಪದಲ್ಲಿ 4ನೇ ಹಂತದ ಲಾಕ್‌ಡೌನ್‌ ಜಾರಿ, ಯಾರಿಗೆ ಟಫ್.. ಯಾರಿಗೆ ರಿಲೀಫ್?

ದೆಹಲಿ: ಲಾಕ್​ಡೌನ್ ಮುಂದುವರಿಯುತ್ತಾ? ಇಲ್ಲ ರಿಲೀಫ್ ಸಿಗುತ್ತಾ? ಸಾರ್ವಜನಿಕ ಸಂಚಾರಕ್ಕೆ ಅನುಮತಿ ಸಿಗುತ್ತಾ? ಶಾಲಾ-ಕಾಲೇಜುಗಳು ಆರಂಭವಾಗುತ್ವಾ? ಹೀಗೆ ನೂರಾರು ಪ್ರಶ್ನೆಗಳು, ಹಲವು ಯೋಚನೆಗಳನ್ನಿಟ್ಟುಕೊಂಡಿದ್ದ ಜನರು ನಿನ್ನೆ ರಾತ್ರಿ ಮೋದಿ ಭಾಷಣಕ್ಕಾಗಿ ಕಾಯ್ತಿದ್ರು. 130 ಕೋಟಿ ಮಂದಿ ಲಾಕ್​ಡೌನ್ ಭವಿಷ್ಯ ಕೇಳೋಕೆ ಟಿವಿ ಮುಂದೆ ಕೂತಿದ್ರು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ರೂ ತುದಿಗಾಲಲ್ಲಿ ನಿಂತಿದ್ರು. ಅಂದುಕೊಂಡಂತೆಯೇ ಲಾಕ್​ಡೌನ್ ಬಗ್ಗೆ ಮಾತಾನಾಡಿದ ಮೋದಿ ದೇಶದ ಜನರಿಗೆ ಕೊಂಚ ಶಾಕಿಂಗ್ ನ್ಯೂಸೇ ಕೊಟ್ರು. ಮೇ 18ರಿಂದ 4ನೇ ಹಂತದ ಲಾಕ್​ಡೌನ್ […]

ವಿಭಿನ್ನ ರೂಪದಲ್ಲಿ 4ನೇ ಹಂತದ ಲಾಕ್‌ಡೌನ್‌ ಜಾರಿ, ಯಾರಿಗೆ ಟಫ್.. ಯಾರಿಗೆ ರಿಲೀಫ್?
Follow us
ಸಾಧು ಶ್ರೀನಾಥ್​
|

Updated on:May 13, 2020 | 2:04 PM

ದೆಹಲಿ: ಲಾಕ್​ಡೌನ್ ಮುಂದುವರಿಯುತ್ತಾ? ಇಲ್ಲ ರಿಲೀಫ್ ಸಿಗುತ್ತಾ? ಸಾರ್ವಜನಿಕ ಸಂಚಾರಕ್ಕೆ ಅನುಮತಿ ಸಿಗುತ್ತಾ? ಶಾಲಾ-ಕಾಲೇಜುಗಳು ಆರಂಭವಾಗುತ್ವಾ? ಹೀಗೆ ನೂರಾರು ಪ್ರಶ್ನೆಗಳು, ಹಲವು ಯೋಚನೆಗಳನ್ನಿಟ್ಟುಕೊಂಡಿದ್ದ ಜನರು ನಿನ್ನೆ ರಾತ್ರಿ ಮೋದಿ ಭಾಷಣಕ್ಕಾಗಿ ಕಾಯ್ತಿದ್ರು. 130 ಕೋಟಿ ಮಂದಿ ಲಾಕ್​ಡೌನ್ ಭವಿಷ್ಯ ಕೇಳೋಕೆ ಟಿವಿ ಮುಂದೆ ಕೂತಿದ್ರು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ರೂ ತುದಿಗಾಲಲ್ಲಿ ನಿಂತಿದ್ರು. ಅಂದುಕೊಂಡಂತೆಯೇ ಲಾಕ್​ಡೌನ್ ಬಗ್ಗೆ ಮಾತಾನಾಡಿದ ಮೋದಿ ದೇಶದ ಜನರಿಗೆ ಕೊಂಚ ಶಾಕಿಂಗ್ ನ್ಯೂಸೇ ಕೊಟ್ರು.

ಮೇ 18ರಿಂದ 4ನೇ ಹಂತದ ಲಾಕ್​ಡೌನ್ ಶುರು! ಕೊರೊನಾವನ್ನ ಕಟ್ಟಿ ಹಾಕೋಕೆ, ಹೆಮ್ಮಾರಿಯ ಸಾವಿನ ಸುಳಿಯಿಂದ ಬಚಾವ್ ಆಗೋಕೆ ಲಾಕ್​ಡೌನ್ ಅನ್ನೋದು ಸದ್ಯ ಅನಿವಾರ್ಯವಾಗೋಗಿದೆ. ಹೀಗಾಗಿ ನಿನ್ನೆ ಪ್ರಧಾನಿ ಮೋದಿ ಮೇ 18ರಿಂದ 4ನೇ ಹಂತದ ಲಾಕ್​ಡೌನ್ ಜಾರಿಯಾಗೋದಾಗಿ ಹೇಳಿದ್ರು. ಆದ್ರೆ 4ನೇ ಹಂತದ ಲಾಕ್​ಡೌನ್ ಹೊಸ ರೂಪರೇಷೆ ಹಾಗೂ ಹೊಸ ನಿಯಮಗಳೊಂದಿಗೆ ವಿಭಿನ್ನವಾಗಿರುತ್ತೆ ಅಂದ್ರು. ಅಷ್ಟೇ ಅಲ್ಲದೆ ಮೇ 18ಕ್ಕೂ ಮೊದಲೇ ಹೊಸ ರೂಲ್ಸ್ ಘೋಷಿಸಲಾಗುತ್ತೆ. ಜೊತೆಗೆ ರಾಜ್ಯಗಳ ಸಲಹೆ ಆಧರಿಸಿ ಲಾಕ್​ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತೆ ಅಂದ್ರು.

ಇನ್ನು 4ನೇ ಹಂತದ ಲಾಕ್​ಡೌನ್​ನಲ್ಲಿರೋ ಹೊಸ ರೂಲ್ಸ್ ಏನು? ಹೊಸ ಮಾರ್ಗಸೂಚಿಯಲ್ಲಿ ಏನೇನಿರುತ್ತೆ ಅನ್ನೋದನ್ನ ನೋಡೋದಾದ್ರೆ.

ಹೊಸ ಮಾರ್ಗಸೂಚಿಯಲ್ಲಿ ಏನಿರುತ್ತೆ? ಕಂಟೇನ್ಮೆಂಟ್ ಜೋನ್​ಗಳಲ್ಲಿ ಮಾತ್ರ ಲಾಕ್​ಡೌನ್ ಮುಂದುವರಿಸೋ ಸಾಧ್ಯತೆಯಿದೆ. ಕಂಟೇನ್ಮೆಂಟ್ ಜೋನ್ ಬಿಟ್ಟು ಬೇರೆ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ಸಿಗಬಹುದು. ಕಂಪನಿ, ಕಾರ್ಖಾನೆಗಳಲ್ಲಿ ಶೇ.33ರ ಬದಲು ಶೇ.50ರಷ್ಟು ಕಾರ್ಮಿಕರನ್ನ ಬಳಸಿಕೊಳ್ಳಲು ಸೂಚಿಸಬಹುದು.

ಇನ್ನು ಮಹಾನಗರಗಳಲ್ಲಿ & ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸಂಚಾರ ಆರಂಭಿಸಬಹುದು. ದೊಡ್ಡ ನಗರಗಳಿಗೆ ಆರಂಭವಾದ ರೈಲು ಸಂಚಾರ ಸಣ್ಣ ನಗರಗಳಿಗೂ ವಿಸ್ತರಣೆಯಾಗ್ಬಹುದು. ಅಷ್ಟೇ ಅಲ್ಲದೆ ದೊಡ್ಡ ದೊಡ್ಡ ನಗರಗಳಿಗೆ ದೇಶೀಯ ವಿಮಾನ ಸಂಚಾರ ಆರಂಭ ಸಾಧ್ಯತೆಯಿದೆ. ಜೊತೆಗೆ ನಗರಗಳಲ್ಲಿ ಆಟೋ, ಕ್ಯಾಬ್​ಗಳ ಸಂಚಾರಕ್ಕೆ ಅವಕಾಶ ಸಿಗ್ಬಹುದು. ಇನ್ನು ಕೊರೊನಾ ಜೋನ್ ಗುರುತಿಸುವ ಜವಾಬ್ದಾರಿ ರಾಜ್ಯಗಳಿಗೆ ಬಿಡಬಹುದು ಹಾಗೂ ಬಹುತೇಕ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆ.

ಹೀಗೆ ಕೇಂದ್ರ ಸರ್ಕಾರ ಹೊರಡಿಸಲಿರೋ ಮಾರ್ಗಸೂಚಿ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಕೊಂಡಿದ್ದು, ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆಯಾಗಬಹುದು. ಆದ್ರೆ ಯಾವ್ಯಾವ ಕ್ಷೇತ್ರಗಳಿಗೆ ಲಾಕ್​ನಿಂದ ರಿಲೀಫ್ ಸಿಗುತ್ತೆ? ಕೊರೊನಾ ಅಟ್ಟಹಾಸ ಹೆಚ್ಚಾಗ್ತಿರೋದ್ರ ನಡ್ವೆಯೂ ಲಾಕ್​ಡೌನ್​​ನ ಇನ್ನಷ್ಟು ಸಡಿಲಿಕೆ ಮಾಡೋ ಸಾಧ್ಯತೆ ಇದೆಯಾ? ಅನ್ನೋದನ್ನ ಕಾದು ನೋಡ್ಬೇಕಿದೆ.

Published On - 7:46 am, Wed, 13 May 20

ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ