AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Republic Day 2022: ಇಂದು ಪ್ರಧಾನಿ ಮೋದಿಯಿಂದ ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಹೊಲೋಗ್ರಾಮ್​ ಪ್ರತಿಮೆ ಅನಾವರಣ

ಇಂಡಿಯಾ ಗೇಟ್​​ನ ಬಳಿಯಿದ್ದ ಅಮರ ಜವಾನ್​ ಜ್ಯೋತಿಯನ್ನು ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಶುಕ್ರವಾರ ವಿಲೀನಗೊಳಿಸಲಾಗಿದೆ. ಇದೀಗ ಆ ಅಮರ ಜವಾನ್ ಜ್ಯೋತಿ ಇದ್ದ ಜಾಗದ ಮೇಲ್ಛಾವಣಿ ಮೇಲೆ ನೇತಾಜಿ ಸುಭಾಷ್​ ಚಂದ್ರಬೋಸ್ ಅವರ ಹೊಲೋಗ್ರಾಮ್​ ಪ್ರತಿಮೆ ಅನಾವರಣಗೊಳ್ಳಲಿದೆ.

Republic Day 2022: ಇಂದು ಪ್ರಧಾನಿ ಮೋದಿಯಿಂದ ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಹೊಲೋಗ್ರಾಮ್​ ಪ್ರತಿಮೆ ಅನಾವರಣ
ನೇತಾಜಿ ಸುಭಾಷ್​ ಚಂದ್ರ ಬೋಸ್ ಪ್ರತಿಮೆ (ಎಎನ್​ಐ ಚಿತ್ರ)
Follow us
TV9 Web
| Updated By: Lakshmi Hegde

Updated on:Jan 23, 2022 | 9:11 AM

ಗಣರಾಜ್ಯೋತ್ಸವ ಆಚರಣೆ ದೇಶದಲ್ಲಿ ಇಂದಿನಿಂದಲೇ ಪ್ರಾರಂಭವಾಗಲಿದೆ. ಇಂದು ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ನೇತಾಜಿಯವರ ಹೊಲೋಗ್ರಾಮ್​ ಪ್ರತಿಮೆ (ಲೇಸರ್ ಅಥವಾ ಅಂಥ ಇತರ ಬೆಳಕಿನ ಕಿರಣಗಳ ಟಚ್​ ಕೊಡಲಾದ  ಮೂರು ಆಯಾಮದ ಪ್ರತಿಮೆ). ದೇಶದಲ್ಲಿ ಸಾಮಾನ್ಯವಾಗಿ ಜನವರಿ 24ರಿಂದ ಗಣರಾಜ್ಯೋತ್ಸವ ದಿನಾಚರಣೆ ಶುರುವಾಗುತ್ತಿತ್ತು. ಆದರೆ ಈ ಬಾರಿ ನೇತಾಜಿ ಸುಭಾಷ್​ ಚಂದ್ರ ಬೋಸ್​ ಜನ್ಮದಿನದಿಂದಲೇ ಗಣರಾಜ್ಯೋತ್ಸವ ಸಂಭ್ರಮವೂ ಶುರುವಾಗಲಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹೇಳಿದೆ.

ನೇತಾಜಿ ಸುಭಾಷ್​ ಚಂದ್ರ ಬೋಸ್​ ಪ್ರತಿಮೆಯನ್ನು ಗ್ರಾನೈಟ್​​ನಿಂದ ಮಾಡಲಾಗಿದ್ದು, ಅದನ್ನು ಇಂಡಿಯಾ ಗೇಟ್​ ಬಳಿ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.  ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಈ ಬಾರಿ ದೇಶ ನೇತಾಜಿ ಸುಭಾಷ್​ ಚಂದ್ರ ಅವರ 125ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಗ್ರಾನೈಟ್​​ನಿಂದ ನಿರ್ಮಿಸಲಾದ ಅವರ ಬಹುದೊಡ್ಡ ಪ್ರತಿಮೆಯನ್ನು ಇಂಡಿಯಾ ಗೇಟ್​ಬಳಿ ಸ್ಥಾಪಿಸಲಾಗುತ್ತಿರುವುದಕ್ಕೆ ನನಗೆ ತುಂಬ ಸಂತೋಷವಾಗುತ್ತಿದೆ. ನೇತಾಜಿಯವರ ಋಣ ತೀರಿಸುವ ಒಂದು ಅವಕಾಶ ಎಂದೇ ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಗ್ರಾನೈಟ್​ ಪ್ರತಿಮೆ ಪೂರ್ಣಗೊಳ್ಳಲು ಇನ್ನೂ ಸಮಯ ಬೇಕು. ಅಲ್ಲಿಯವರೆಗೆ ಈ ಹೊಲೋಗ್ರಾಮ್​ ಪ್ರತಿಮೆ ಇರುತ್ತದೆ ಎಂದೂ ಪ್ರಧಾನಿ ತಿಳಿಸಿದ್ದಾರೆ. ಸುಭಾಷ್​ ಚಂದ್ರ ಬೋಸ್ ಅವರ ಹೊಲೋಗ್ರಾಮ್​ ಮೂರ್ತಿ 30 ಸಾವಿರ ಲ್ಯೂಮೆನ್ಸ್​ 4ಕೆ ಪ್ರಾಜೆಕ್ಟರ್​​ನಿಂದ ಚಾಲಿತವಾಗಿದೆ ಎಂದು ಪಿಎಂಒ ತಿಳಿಸಿದೆ.

ಇಂಡಿಯಾ ಗೇಟ್​​ನ ಬಳಿಯಿದ್ದ ಅಮರ ಜವಾನ್​ ಜ್ಯೋತಿಯನ್ನು ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಶುಕ್ರವಾರ ವಿಲೀನಗೊಳಿಸಲಾಗಿದೆ. ಇದೀಗ ಆ ಅಮರ ಜವಾನ್ ಜ್ಯೋತಿ ಇದ್ದ ಜಾಗದ ಮೇಲ್ಛಾವಣಿ ಮೇಲೆ ನೇತಾಜಿ ಸುಭಾಷ್​ ಚಂದ್ರಬೋಸ್ ಅವರ ಹೊಲೋಗ್ರಾಮ್​ ಪ್ರತಿಮೆ ಅನಾವರಣಗೊಳ್ಳಲಿದೆ. ಗ್ರಾನೈಟ್​ನ ಭವ್ಯ ಮೂರ್ತಿ ಪೂರ್ಣಪ್ರಮಾಣದಲ್ಲಿ ಸಿದ್ಧ ಆಗುವವರೆಗೂ ಈ ಪ್ರತಿಮೆ ಇರಲಿದೆ.  ಅಂದಹಾಗೇ, ಸುಭಾಷ್​ ಚಂದ್ರ ಬೋಸ್​​ ಅವರ ಗ್ರಾನೈಟ್​ ಪ್ರತಿಮೆ 28 ಅಡಿ ಎತ್ತರ ಮತ್ತು ಆರು ಅಡಿ ಅಗಲ ಇರಲಿದೆ ಎಂದು ನ್ಯಾಶನಲ್​ ಮಾಡರ್ನ್​ ಆರ್ಟ್​ ಗ್ಯಾಲರಿಯ ಪ್ರಧಾನ ನಿರ್ದೇಶಕರಾದ ಅದ್ವೈತಾ ಗಡನಾಯಕ್​ ತಿಳಿಸಿದ್ದಾರೆ. ನೇತಾಜಿ ಗ್ರಾನೈಟ್​ ಪ್ರತಿಮೆಯನ್ನು ಇಂಡಿಯಾ ಗೇಟ್​ ಬಳಿ ಸ್ಥಾಪಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಟಿಎಂಸಿ ಸೇರಿ ಹಲವು ಪ್ರತಿಪಕ್ಷಗಳು ಸ್ವಾಗತಿಸಿವೆ.

ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ತುಸು ಚೇತರಿಕೆ; ವೈದ್ಯರು ನೀಡಿದ ಮಾಹಿತಿ ಇಲ್ಲಿದೆ

Published On - 8:20 am, Sun, 23 January 22

ವಿಚಾರಣೆ ನಂತರ ಈಡಿ ಕರೆದಿದ್ದು ಯಾಕೆ ಅಂತ ಗೊತ್ತಾಗಲಿದೆ: ಸುರೇಶ್
ವಿಚಾರಣೆ ನಂತರ ಈಡಿ ಕರೆದಿದ್ದು ಯಾಕೆ ಅಂತ ಗೊತ್ತಾಗಲಿದೆ: ಸುರೇಶ್
ರಜನಿ ಎಂಟ್ರಿಗೆ ಮೈಸೂರಿನ ಅಭಿಮಾನಿಗಳು ಫುಲ್ ಖುಷ್
ರಜನಿ ಎಂಟ್ರಿಗೆ ಮೈಸೂರಿನ ಅಭಿಮಾನಿಗಳು ಫುಲ್ ಖುಷ್
ದೂದ್​ಗಂಗಾ, ವೇದಗಂಗಾ ಮತ್ತು ಹಿರಣ್ಯಕೇಶಿ ನದಿಗಳಲ್ಲೂ ಹೆಚ್ಚಿದ ನೀರು ಪ್ರಮಾಣ
ದೂದ್​ಗಂಗಾ, ವೇದಗಂಗಾ ಮತ್ತು ಹಿರಣ್ಯಕೇಶಿ ನದಿಗಳಲ್ಲೂ ಹೆಚ್ಚಿದ ನೀರು ಪ್ರಮಾಣ
VIDEO: ಕಾಂಬೊ ಕ್ಯಾಚ್​... ರವೀಂದ್ರ ಜಡೇಜಾ-ಸಾಯಿ ಸುದರ್ಶನ್ ಜುಗಲ್‌ಬಂದಿ
VIDEO: ಕಾಂಬೊ ಕ್ಯಾಚ್​... ರವೀಂದ್ರ ಜಡೇಜಾ-ಸಾಯಿ ಸುದರ್ಶನ್ ಜುಗಲ್‌ಬಂದಿ
ಕಣ್ ಹೊಡ್ಯೋದ್ರಲ್ಲಿ ರವಿಚಂದ್ರನ್​ ಮೀರಿಸಿದ ರಚಿತಾ ರಾಮ್
ಕಣ್ ಹೊಡ್ಯೋದ್ರಲ್ಲಿ ರವಿಚಂದ್ರನ್​ ಮೀರಿಸಿದ ರಚಿತಾ ರಾಮ್
ನಗರದಲ್ಲಿ ರಾರಾಜಿಸುತ್ತಿವೆ ದೈತ್ಯಗಾತ್ರದ ಕಟೌಟ್ ಮತ್ತು ಫ್ಲೆಕ್ಸ್​ಗಳು
ನಗರದಲ್ಲಿ ರಾರಾಜಿಸುತ್ತಿವೆ ದೈತ್ಯಗಾತ್ರದ ಕಟೌಟ್ ಮತ್ತು ಫ್ಲೆಕ್ಸ್​ಗಳು
ಕೃಷ್ಣಾ ನದಿ ಪ್ರವಾಹಕ್ಕೆ ಚಿಕ್ಕೋಡಿ ಸುತ್ತಮುತ್ತ 7 ಸೇತುವೆಗಳು ಜಲಾವೃತ
ಕೃಷ್ಣಾ ನದಿ ಪ್ರವಾಹಕ್ಕೆ ಚಿಕ್ಕೋಡಿ ಸುತ್ತಮುತ್ತ 7 ಸೇತುವೆಗಳು ಜಲಾವೃತ
ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿವೆ ಜಾನುವಾರುಗಳು
ಮಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿವೆ ಜಾನುವಾರುಗಳು
ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ
ಮಂಡ್ಯ: ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋದ ಮಗ
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?
ಮನೆಯಲ್ಲಿ ದೇವರ ವಿಗ್ರಹಗಳನ್ನು ಪಶ್ಚಿಮಾಭಿಮುಖವಾಗಿ ಇಡಬಹುದಾ?