AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Draupadi Murmu: ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಇಂದು ನಾಮಪತ್ರ ಸಲ್ಲಿಕೆ, ಬಿಜೆಡಿ-ವೈಎಸ್​ಆರ್​ಪಿ ಬೆಂಬಲ ಘೋಷಣೆ

Presidential Election: ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಬಿಜು ಜನತಾ ದಳ ಮತ್ತು ಆಂಧ್ರ ಪ್ರದೇಶದ ವೈಎಸ್​ಆರ್​ಪಿ ಬೆಂಬಲ ಸೂಚಿಸಿವೆ.

Draupadi Murmu: ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಇಂದು ನಾಮಪತ್ರ ಸಲ್ಲಿಕೆ, ಬಿಜೆಡಿ-ವೈಎಸ್​ಆರ್​ಪಿ ಬೆಂಬಲ ಘೋಷಣೆ
ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 24, 2022 | 10:36 AM

Share

ದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷ (Bharatiya Janata Party – BJP) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (National Democratic Alliance – NDA) ಉಮೇದುವಾರರಾಗಿರುವ ದ್ರೌಪದಿ ಮುರ್ಮು ಇಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಬಿಜು ಜನತಾ ದಳ (Biju Janata Dal – BJD) ಮತ್ತು ಆಂಧ್ರ ಪ್ರದೇಶದ ವೈಎಸ್​ಆರ್​ಪಿ (Yuvajana Sramika Rythu Congress Party – YSRCP) ಬೆಂಬಲ ಸೂಚಿಸಿವೆ.

ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಚಲಾವಣೆಯಾಗಬೇಕಿರುವ 10,86,431 ಮತಗಳ ಪೈಕಿ 5,32,351 (ಶೇ 49) ಮತಗಳು ಎನ್​ಡಿಎ ಪರವಾಗಿ ಇವೆ. ಬಿಜೆಡಿ 31,686 ಮತ್ತು ವೈಎಸ್​ಆರ್​ಸಿಪಿ 45,550, ಎಐಎಡಿಎಂಕೆ 14,940 ಮತಗಳನ್ನು ಹೊಂದಿದೆ. ಆರ್​ಜೆಡಿ ಅಥವಾ ವೈಎಸ್​ಆರ್​ಸಿಪಿ ಎರಡರ ಪೈಕಿ ಒಂದು ಪಕ್ಷದ ಬೆಂಬಲ ಸಿಕ್ಕರೂ ಮುರ್ಮು ಅವರ ಗೆಲುವು ಖಚಿತವಾಗುತ್ತದೆ. ಮುರ್ಮು ಅವರು ಜಯಗಳಿಸಿದರೆ ಭಾರತದಲ್ಲಿ ಮೊದಲ ಬಾರಿಗೆ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳಾ ಅಭ್ಯರ್ಥಿಯೊಬ್ಬರು ರಾಷ್ಟ್ರಪತಿ ಸ್ಥಾನಕ್ಕೆ ಬಂದಂತೆ ಆಗುತ್ತದೆ.

ಪರಿಶಿಷ್ಟ ಬುಡಕಟ್ಟಿಗೆ ಸೇರಿದವರೇ ಮುಂಚೂಣಿ ಸ್ಥಾನದಲ್ಲಿರುವ ಜಾರ್ಖಂಡ್​ನ ‘ಜಾರ್ಖಂಡ್ ಮುಕ್ತಿ ಮೋರ್ಚಾ’ (Jharkhand Mukti Morch – JMM) ಪಕ್ಷದ ಬೆಂಬಲದ ನಿರೀಕ್ಷೆಯನ್ನೂ ಎನ್​​ಡಿಎ ಇರಿಸಿಕೊಂಡಿದೆ. ಪ್ರತಿಪಕ್ಷಗಳು ತಮ್ಮ ಸಹಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಿಜೆಪಿಯ ಮಾಜಿ ನಾಯಕ ಯಶವಂತ್ ಸಿನ್ಹಾ ಅವರಿಗೆ ಬೆಂಬಲ ನೀಡುವುದರಿಂದ ಜೆಎಂಎಂ ಅಂತರ ಕಾಯ್ದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಶಿರೋಮಣಿ ಅಕಾಲಿ ದಳ, ತೆಲುಗುದೇಶಂ, ಬಹುಜನ ಸಮಾಜ ಪಕ್ಷಗಳು ಸಹ ಮುರ್ಮು ಅವರಿಗೆ ಬೆಂಬಲ ನೀಡಬಹುದು ಎಂಬ ನಿರೀಕ್ಷೆಯನ್ನು ಬಿಜೆಪಿ ನಾಯಕರು ಇರಿಸಿಕೊಂಡಿದ್ದಾರೆ.

ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಬಿಜೆಪಿ ನಿರ್ಧಾರವನ್ನು ಹಲವು ರಾಜಕೀಯ ಪಕ್ಷಗಳು ಶ್ಲಾಘಿಸಿವೆ. ಬಿಜೆಪಿಯನ್ನು ಸೈದ್ಧಾಂತಿಕ ಕಾರಣಗಳಿಗೆ ವಿರೋಧಿಸುವ ಪಕ್ಷಗಳು ಸಹ ರಾಷ್ಟ್ರಪತಿ ಚುನಾವಣೆ ವೇಳೆ ಎನ್​ಡಿಎ ಅಭ್ಯರ್ಥಿ ಮುರ್ಮು ಅವರಿಗೆ ಬೆಂಬಲ ಸೂಚಿಸಬಹುದು ಎಂದು ವಿಶ್ಲೇಷಿಸಲಾಗಿದೆ. ರಾಷ್ಟ್ರಪತಿ ಚುನಾವಣೆಯ ಮತದಾನವು ಗೌಪ್ಯವಾಗಿರುತ್ತದೆ. ಪಕ್ಷಗಳು ನೀಡುವ ವಿಪ್​ಗೆ ನಿಷ್ಠರಾಗಿರಬೇಕು ಎಂಬ ಒತ್ತಾಯ ಇರುವುದಿಲ್ಲ.

ರಾಷ್ಟ್ರಪತಿ ಚುನಾವಣೆಯಲ್ಲಿ ಜಯಗಳಿಸಲು ಎನ್​ಡಿಎ ಅಭ್ಯರ್ಥಿಗೆ 20,000 ಮತಗಳು ಕಡಿಮೆಯಾಗುತ್ತವೆ. ಬಿಜೆಪಿಯೊಂದಿಗೆ ಮಿತ್ರಭಾವ ಹೊಂದಿರುವ ಬಿಜೆಡಿ ಮತ್ತು ವೈಎಸ್​ಆರ್​ಸಿಪಿ ಬೆಂಬಲದಿಂದ ಈ ಕೊರತೆ ನೀಗಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಎನ್​ಡಿಎ ಇದೆ. ಇದೀಗ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದಿರುವ ಏಕನಾಥ್ ಶಿಂದೆ ಅವರ ಬೆಂಬಲಿಗರ ಮತವನ್ನೂ ಬಿಜೆಪಿ ನಿರೀಕ್ಷಿಸುತ್ತಿದೆ.

ಲೋಕಸಭೆಯ 533, ರಾಜ್ಯಸಭೆಯ 233, ರಾಜ್ಯ ವಿಧಾನಸಭೆಗಳ 4,033 ಮಂದಿ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಸಂಸಸ್ ಸದಸ್ಯರ ಮತಗಳಿಗೆ 5,43,200 ಹಾಗೂ ವಿಧಾನಸಭೆ ಸದಸ್ಯರ ಮತಗಳಿಗೆ 5,43,231 ಮೌಲ್ಯವಿದೆ. ಒಟ್ಟಾರೆ 10,86,431 ಮೌಲ್ಯದ ಮತಗಳು ಚಲಾವಣೆಯಾಗುತ್ತವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎನ್​ಡಿಎ ಪ್ರಾಬಲ್ಯ ಹೊಂದಿದೆ. ಆದರೂ ಎನ್​ಡಿಎ ಅಭ್ಯರ್ಥಿಗಳ ಗೆಲುವಿಗೆ ಸಣ್ಣ ಪಕ್ಷಗಳ ಬೆಂಬಲದ ಅಗತ್ಯವಿದೆ. ಬಿಜೆಪಿಯು 18 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು, 5,32,351 ಮತಗಳನ್ನು ಹೊಂದಿದೆ.

ಪಕ್ಷಾತೀತವಾಗಿ ಒಡಿಶಾದ ಎಲ್ಲ ಶಾಸಕರೂ ಮುರ್ಮು ಅವರನ್ನು ಬೆಂಬಲಿಸಬೇಕೆಂದು ಬಿಜೆಡಿ ನಾಯಕ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೋರಿದ್ದಾರೆ. ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ದರೂ ಹಲವು ವಿಚಾರಗಳಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಜೆಡಿಯು ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದೆ ಎಂಬ ನಿರೀಕ್ಷೆಗಳು ಬಿಜೆಪಿ ವಲಯದಲ್ಲಿ ವ್ಯಕ್ತವಾಗಿವೆ.

ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಲಿಂಕ್: NDA Presidential candidate Draupadi Murmu

Published On - 9:39 am, Fri, 24 June 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ