Gold Smuggling Case: ಕೇರಳ ಚಿನ್ನ ಸಾಗಣೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ ಜೈಲಿನಿಂದ ಬಿಡುಗಡೆ

ನವೆಂಬರ್​ 2ರಂದು ಸ್ವಪ್ನ ಸುರೇಶ್​ಗೆ ಮಾತ್ರವಲ್ಲ, ಅವರೊಂದಿಗೆ ಉಳಿದ ಏಳುಮಂದಿಗೆ ಕೂಡ ಜಾಮೀನು ಸಿಕ್ಕಿದೆ.  ಆದರೆ ಎನ್​ಐಎ ಪ್ರಕರಣ ಬಾಕಿ ಇದ್ದುದರಿಂದ ಸ್ವಪ್ನಾ ಜೈಲಿನಲ್ಲಿಯೇ ಉಳಿಯುವಂತಾಗಿತ್ತು.

Gold Smuggling Case: ಕೇರಳ ಚಿನ್ನ ಸಾಗಣೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ ಜೈಲಿನಿಂದ ಬಿಡುಗಡೆ
ಸ್ವಪ್ನಾ ಸುರೇಶ್​
Follow us
| Updated By: Lakshmi Hegde

Updated on: Nov 06, 2021 | 12:42 PM

ದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೇರಳ ಏರ್​ಪೋರ್ಟ್​ ಚಿನ್ನಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ.  ಸುಮಾರು 16 ತಿಂಗಳ ನಂತರ ಸ್ವಪ್ನಾ ಸುರೇಶ್​ ಜೈಲಿನಿಂದ ಹೊರಬರುತ್ತಿದ್ದಾರೆ. ಸ್ವಪ್ನಾ ಸುರೇಶ್​​ರಿಗೆ ನವೆಂಬರ್​ 2ರಂದು ಕೇರಳ ಹೈಕೋರ್ಟ್​ ಜಾಮೀನು ನೀಡಿತ್ತು. 25 ಲಕ್ಷ ರೂ.ಬಾಂಡ್​​ ಮತ್ತು 2 ಶ್ಯೂರಿಟಿಗಳೊಂದಿಗೆ ಜಾಮೀನು ನೀಡಲಾಗಿತ್ತು. 

ಇನ್ನು ನವೆಂಬರ್​ 2ರಂದು ಸ್ವಪ್ನ ಸುರೇಶ್​ಗೆ ಮಾತ್ರವಲ್ಲ, ಅವರೊಂದಿಗೆ ಉಳಿದ ಏಳುಮಂದಿಗೆ ಕೂಡ ಜಾಮೀನು ಸಿಕ್ಕಿದೆ.  ಆದರೆ ಎನ್​ಐಎ ಪ್ರಕರಣ ಬಾಕಿ ಇದ್ದುದರಿಂದ ಸ್ವಪ್ನಾ ಜೈಲಿನಲ್ಲಿಯೇ ಉಳಿಯುವಂತಾಗಿತ್ತು. ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಮತ್ತು ಸಿ.ಜಯಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು.

ಈ ಹಿಂದೆ ಯುಎಇ ಕಾನ್ಸುಲೇಟ್‌ನಲ್ಲಿ ಕೆಲಸ ಮಾಡಿದ್ದ ಸ್ವಪ್ನಾ ಸುರೇಶ್ ಮತ್ತು ಆಕೆಯ ಸಹಚರ ಸಂದೀಪ್ ನಾಯರ್ ಬಂಧನಕ್ಕೀಡಾಗಿದ್ದರು. ರಾಜತಾಂತ್ರಿಕ ಮಾರ್ಗಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಮತ್ತು ವಿದೇಶಗಳಿಂದ ಹೆಚ್ಚಿನ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ಸಾಗಿಸುವುದಕ್ಕಾಗಿ ಈ ಬಂಧನ ನಡೆದಿತ್ತು. ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್‌ಗೆ ರವಾನಿಸಲಾದ ರಾಜತಾಂತ್ರಿಕ ಸರಕುಗಳ ಮೂಲಕ 30 ಕಿಲೋಗ್ರಾಂಗಳಷ್ಟು ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪ ಅವರ ಮೇಲಿತ್ತು. ಇಂದು ಸ್ವಪ್ನಾ ಸುರೇಶ್​​ರನ್ನು ಜೈಲಿನಿಂದ ಕರೆತರಲು ಅವರ ತಾಯಿಯೇ ಅಲ್ಲಿಗೆ ಹೋಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಯುಎಸ್​ನಲ್ಲಿ 2-18 ವರ್ಷದವರಿಗೆ ಕೊವ್ಯಾಕ್ಸಿನ್​ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಒಕುಜೆನ್​ ಕಂಪನಿ

AQI: ದೆಹಲಿಯಲ್ಲಿ 5 ವರ್ಷದಲ್ಲೇ ಅತಿಹೆಚ್ಚು ವಾಯುಮಾಲಿನ್ಯ; ಬೆಂಗಳೂರಿನ ವಾಯುಗುಣಮಟ್ಟ ಹೇಗಿದೆ? ಇಲ್ಲಿದೆ ವಿವರ