ವಾರಣಾಸಿಯಲ್ಲಿ ಸಂತ ರವಿದಾಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ಸಂತ ಗುರು ರವಿದಾಸ್ ಅವರ 647ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರವಿದಾಸ್ ಜಿ ನನ್ನನ್ನು ಮತ್ತೆ ಮತ್ತೆ ಅವರ ಜನ್ಮಭೂಮಿಗೆ ಕರೆಯುತ್ತಾರೆ. ಅವರ ಸಂಕಲ್ಪಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಅವಕಾಶ ಮತ್ತು ಅವರ ಲಕ್ಷಾಂತರ ಅನುಯಾಯಿಗಳ ಸೇವೆ ಮಾಡುವ ಅವಕಾಶವನ್ನು ನಾನು ಸ್ವೀಕರಿಸುತ್ತೇನೆ. ಗುರುಗಳ ಜನ್ಮತೀರ್ಥದಲ್ಲಿ, ಅವರ ಎಲ್ಲಾ ಅನುಯಾಯಿಗಳಿಗೆ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ವಾರಣಾಸಿಯಲ್ಲಿ ಸಂತ ರವಿದಾಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ
ಸಂತ ರವಿದಾಸ್
Follow us
|

Updated on:Feb 23, 2024 | 12:59 PM

ವಾರಣಾಸಿ ಫೆಬ್ರುವರಿ 23: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಶುಕ್ರವಾರ)ವಾರಣಾಸಿಯಲ್ಲಿ (Varanasi) ಸಂತ ರವಿದಾಸ್ (Sant Ravidas) ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಸಂತ ಗುರು ರವಿದಾಸ್ ಜನ್ಮಸ್ಥಳಕ್ಕೂ ಭೇಟಿ ನೀಡಿದರು. ಮೋದಿ ಜತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಜೊತೆಗಿದ್ದರು. ಪ್ರತಿಮೆ ಅನಾವರಣಗೊಳಿಸಿದ ನಂತರ ಮೋದಿ ಮತ್ತು ಯುಪಿ ಸಿಎಂ ಸಂತ ಗುರು ರವಿದಾಸ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಸಂತ ಗುರು ರವಿದಾಸ್ ಅವರ 647ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ರವಿದಾಸ್ ಜಿ ನನ್ನನ್ನು ಮತ್ತೆ ಮತ್ತೆ ಅವರ ಜನ್ಮಭೂಮಿಗೆ ಕರೆಯುತ್ತಾರೆ. ಅವರ ಸಂಕಲ್ಪಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಅವಕಾಶ ಮತ್ತು ಅವರ ಲಕ್ಷಾಂತರ ಅನುಯಾಯಿಗಳ ಸೇವೆ ಮಾಡುವ ಅವಕಾಶವನ್ನು ನಾನು ಸ್ವೀಕರಿಸುತ್ತೇನೆ. ಗುರುಗಳ ಜನ್ಮತೀರ್ಥದಲ್ಲಿ, ಅವರ ಎಲ್ಲಾ ಅನುಯಾಯಿಗಳಿಗೆ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಪಾಲಿಗೆ ಭಾಗ್ಯವಿದು. ವಾರಣಾಸಿಯ ಸಂಸದನಾಗಿ, ವಾರಣಾಸಿಯ ಸಾರ್ವಜನಿಕ ಪ್ರತಿನಿಧಿಯಾಗಿ, ನಿಮ್ಮೆಲ್ಲರನ್ನು ವಾರಣಾಸಿಗೆ ಸ್ವಾಗತಿಸುವುದು ಮತ್ತು ನಿಮ್ಮ ಸೌಲಭ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ನನ್ನ ವಿಶೇಷ ಜವಾಬ್ದಾರಿ. ಇದು ನನ್ನ ಕರ್ತವ್ಯ, ಈ ಪವಿತ್ರ ದಿನದಂದು ನನ್ನ ಕರ್ತವ್ಯವನ್ನು ಪೂರೈಸುವ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ.

ವಾರಣಾಸಿಯ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯಲಿದೆ. ಇದು ಇಲ್ಲಿ ಭಕ್ತರ ಪ್ರಯಾಣವನ್ನು ಸುಲಭಗೊಳಿಸುತ್ತದೆ ಎಂದು  ಮೋದಿ  ಹೇಳಿದ್ದಾರೆ.

ಪ್ರತಿಮೆ ಅನಾವರಣ

ಸಂತ ರವಿದಾಸ್ ಅವರ ಜನ್ಮದಿನದ ಪುಣ್ಯ ಸಂದರ್ಭದಲ್ಲಿ, ನಾನು ನಿಮ್ಮೆಲ್ಲರನ್ನು ಅವರ ಜನ್ಮಸ್ಥಳಕ್ಕೆ ಸ್ವಾಗತಿಸುತ್ತೇನೆ. ಈ ಸಂದರ್ಭದಲ್ಲಿ ನೀವು ದೂರದ ಸ್ಥಳಗಳಿಂದ ಬಂದಿದ್ದೀರಿ, ವಿಶೇಷವಾಗಿ ಪಂಜಾಬ್‌ನ ನನ್ನ ಸಹೋದರ ಸಹೋದರಿಯರೇ… ವಾರಣಾಸಿಯು ಮಿನಿ ಪಂಜಾಬ್ ಆಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ಹೇಳಿದ್ದಾರೆ.  ತಮ್ಮ ಭಾಷಣದಲ್ಲಿ,  ವಿರೋಧ ಪಕ್ಷಗಳ ‘ಇಂಡಿಯಾ’ ಬ್ಲಾಕ್ ವಿರುದ್ಧ ಟೀಕಾ ಪ್ರಹಾರ ಮಾಡಿದ್ದು ಅದರ  ಸದಸ್ಯರು ಜಾತಿವಾದದ ಹೆಸರಿನಲ್ಲಿ ಜನರನ್ನು ಶೋಷಿಸುತ್ತಿದ್ದಾರೆ. ಅವರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಕಾಳಜಿ ವಹಿಸುತ್ತಾರೆ. ದಲಿತರು ಮತ್ತು ಬುಡಕಟ್ಟು ಜನಾಂಗದವರ ಕಲ್ಯಾಣದ ಬಗ್ಗೆ ಯೋಚಿಸುವುದಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕಾಶಿಯ ಸ್ವರೂಪ ಮತ್ತಷ್ಟು ಸುಂದರವಾಗಿದೆ, ಮಹಾದೇವನಿಗೆ ಖುಷಿಯಾಗಿದೆ: ವಾರಾಣಸಿಯಲ್ಲಿ ಪ್ರಧಾನಿ ಮೋದಿ ಹರ್ಷ

ಪ್ರಸ್ತುತ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ “ಪ್ರಧಾನಿ ಮೋದಿ ಅವರು ಸಂತ ಗುರು ರವಿದಾಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ನಾನು ಗುರು ರವಿದಾಸ್ ಅವರ ಎಲ್ಲಾ ಅನುಯಾಯಿಗಳನ್ನು ಅಭಿನಂದಿಸಲು ಬಯಸುತ್ತೇನೆ. ಕಾಶಿಯ ಜನರೇ ನಾವು ಕಾಶಿಯ ಹೊಸ ಮುಖವನ್ನು ನೋಡುತ್ತಿದ್ದಂತೆ ನಾವು ಪ್ರಧಾನಿ ಮೋದಿಯವರಿಗೆ ಕೃತಜ್ಞರಾಗಿರುತ್ತೇವೆ, ಹತ್ತು ವರ್ಷಗಳ ಹಿಂದೆ ಇದೆಲ್ಲವೂ ಕಾಲ್ಪನಿಕವಾಗಿತ್ತು. ಇಲ್ಲಿ ಸಂಘರ್ಷಗಳು ಇದ್ದವು. ರಸ್ತೆಗಳು ಕಿರಿದಾಗಿತ್ತು. ಆದರೆ ಅವರ ದೃಷ್ಟಿಕೋನ, ಮಾರ್ಗದರ್ಶನ ಮತ್ತು ನಾಯಕತ್ವವು ಈ ಸ್ಥಳದ ಅಭಿವೃದ್ಧಿಗೆ ಕಾರಣವಾಗಿದೆ. ಸದ್ಗುರು ರವಿದಾಸ್ ಅವರಿಗೆ ಸಮರ್ಪಿತವಾದ ಮ್ಯೂಸಿಯಂ ಅನ್ನು ಸಹ ಅವರು ಉದ್ಘಾಟಿಸಲಿದ್ದಾರೆ. ಜಗದ್ಗುರು ರಮಾನಂದ್ ಮತ್ತು ಸದ್ಗುರು ರವಿದಾಸ್ ಅವರ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಪ್ರಧಾನಿ ಮೋದಿ ಕೆಲಸ ಮಾಡುತ್ತಾರೆ. ಜೀವನದ ಎಲ್ಲಾ ಮೂಲಭೂತ ಅಗತ್ಯಗಳನ್ನು ಪೂರೈಸುವುದರೊಂದಿಗೆ, ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಂಚತೀರ್ಥಕ್ಕೆ ನೀಡಿದ ಗೌರವವನ್ನು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Fri, 23 February 24