AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಯಲ್ಲಿ ಬಡಿಗೆಯಿಂದ ಬಡಿದಾಡಿಕೊಂಡ ಪ್ರಿನ್ಸಿಪಾಲ್​ ಮತ್ತು ಪ್ಯೂನ್​; ಇವರಿಬ್ಬರ ಹೊಡೆದಾಟವನ್ನು ನಿಂತು ನೋಡಿದ ಶಿಕ್ಷಕರು !

ಘಟನೆ ನಡೆದ ಬಳಿಕ ಹಿಮಾಂಶು ಹೇಳಿದ್ದೇ ಬೇರೆ. ನಾನು ಪ್ರತಿದಿನ ಬೆಳಗ್ಗೆ ಆರು ಗಂಟೆಗೇ ಶಾಲೆಗೆ ಬರುತ್ತೇನೆ. ಆದರೆ ಪ್ರಿನ್ಸಿಪಾಲ್​ ಕರುಣಾಶಂಕರ್ ಅವರು ನನ್ನ ಮೇಲೆ ವೃಥಾ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಶಾಲೆಯಲ್ಲಿ ಬಡಿಗೆಯಿಂದ ಬಡಿದಾಡಿಕೊಂಡ ಪ್ರಿನ್ಸಿಪಾಲ್​ ಮತ್ತು ಪ್ಯೂನ್​; ಇವರಿಬ್ಬರ ಹೊಡೆದಾಟವನ್ನು ನಿಂತು ನೋಡಿದ ಶಿಕ್ಷಕರು !
ಹೊಡೆದಾಡಿಕೊಂಡ ಪ್ರಿನ್ಸಿಪಾಲ್​ ಮತ್ತು ಪ್ಯೂನ್​
Follow us
TV9 Web
| Updated By: Lakshmi Hegde

Updated on: May 01, 2022 | 12:24 PM

ಜಾರ್ಖಂಡ್​​ನ ಪಲಮು ಜಿಲ್ಲೆಯಲ್ಲಿರುವ ಮೇದಿನಿ ನಗರದ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್​ ಮತ್ತು ಪ್ಯೂನ್ (ಮುಖ್ಯ ಶಿಕ್ಷಕ ಮತ್ತು ಶಾಲೆಯ ಜವಾನ) ಹೊಡೆದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಕೋಲಲ್ಲಿ ಹೊಡೆದುಕೊಂಡ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪ್ರಿನ್ಸಿಪಾಲ್​ ಮತ್ತು ಪ್ಯೂನ್​ ಪರಸ್ಪರ ಅಶ್ಲೀಲ ಶಬ್ದಗಳಲ್ಲಿ ಬೈದಾಡಿಕೊಳ್ಳುತ್ತ, ಕೋಲಿನಲ್ಲಿ ಹೊಡೆದುಕೊಳ್ಳುತ್ತಿದ್ದರೆ ಉಳಿದ ಶಿಕ್ಷಕರು, ಶಾಲಾ ಸಿಬ್ಬಂದಿ ಅದನ್ನು ನೋಡುತ್ತ ನಿಂತಿದ್ದಾರೆ. ಅಂದಹಾಗೇ ಈ ಗಲಾಟೆಯಲ್ಲಿ ಪ್ಯೂನ್​ ಕೈಯಿಗೆ ಗಾಯಿಯಾಗಿದೆ ಎನ್ನಲಾಗಿದೆ.

ಶಾಲೆಯ ಪ್ರಿನ್ಸಿಪಾಲ್​ ಹೆಸರು ಕರುಣಾಶಂಕರ್​ ತಿವಾರಿ ಮತ್ತು ಪ್ಯೂನ್​ ಹೆಸರು ಹಿಮಾಂಶು ತಿವಾರಿ. ಹಿಮಾಂಶು ತಿವಾರಿ ಸರಿಯಾದ ಸಮಯಕ್ಕೆ ಶಾಲೆಗೆ ಕೆಲಸಕ್ಕೆ ಬರುತ್ತಿರಲಿಲ್ಲ. ಹೀಗೆ ಕೆಲವು ದಿನಗಳ ಕಾಲ ತಡವಾಗಿಯೇ ಬರುತ್ತಿದ್ದ ಹಿಮಾಂಶು ಬಳಿ, ಪ್ರಿನ್ಸಿಪಾಲ್​ ಕರುಣಾಶಂಕರ್​ ಅವರು ಕಾರಣ ಕೇಳಿದ್ದಾರೆ. ಹೀಗೆ ನಿತ್ಯವೂ ಕೆಲಸಕ್ಕೆ ತಡವಾಗಿ ಬಂದರೆ ಹೇಗೆ? ಇಲ್ಲಿನ ಕೆಲಸ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.  ಈ ಪ್ರಶ್ನೆಗೆ ಸಮಾಧಾನವಾಗಿ ಉತ್ತರಿಸಿದ ಪ್ಯೂನ್​, ಒಮ್ಮೆಲೇ ಸಿಟ್ಟುಮಾಡಿಕೊಂಡು ಪ್ರಿನ್ಸಿಪಾಲ್​ಗೆ ಬೈದಿದ್ದಾರೆ ಎನ್ನಲಾಗಿದೆ.. ಅದಕ್ಕೆ ಪ್ರತಿಯಾಗಿ ಪ್ರಿನ್ಸಿಪಾಲ್​ ಕೂಡ ಬೈದಿದ್ದಾರೆ. ಇವರಿಬ್ಬರ ನಡುವೆ ತುಂಬ ಹೊತ್ತಿನವರೆಗೆ ವಾಗ್ವಾದ ನಡೆದು, ಅದು ನಂತರ ಹೊಡೆದಾಟಕ್ಕೆ ತಿರುಗಿದೆ.

ಆದರೆ ಘಟನೆ ನಡೆದ ಬಳಿಕ ಹಿಮಾಂಶು ಹೇಳಿದ್ದೇ ಬೇರೆ. ನಾನು ಪ್ರತಿದಿನ ಬೆಳಗ್ಗೆ ಆರು ಗಂಟೆಗೇ ಶಾಲೆಗೆ ಬರುತ್ತೇನೆ. ಆದರೆ ಪ್ರಿನ್ಸಿಪಾಲ್​ ಕರುಣಾಶಂಕರ್ ಅವರು ನನ್ನ ಮೇಲೆ ವೃಥಾ ಆರೋಪ ಮಾಡಿದ್ದಾರೆ. ಒಮ್ಮೆಲೇ ನನ್ನೆಡೆಗೆ ಕೋಲು ಎಸೆದರು. ನಾವು ಜವಾನರು ಎಂಬ ಒಂದೇ ಕಾರಣಕ್ಕೆ, ಅಗೌರವಯುತವಾಗಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಪ್ರಿನ್ಸಿಪಾಲ್​ ವಿರುದ್ಧ ಗಂಭೀರವಾದ ಆರೋಪವನ್ನೂ ಹಿಮಾಂಶು ಮಾಡಿದ್ದಾರೆ. ಈ ಶಾಲೆಯ ಹಾಸ್ಟೆಲ್​ ನಿರ್ಮಾಣಕ್ಕೆಂದು ತರಲಾದ ಇಟ್ಟಿಗೆ, ಕಬ್ಬಿಣ, ಮರದ ಸಾಮಗ್ರಿಗಳನ್ನೆಲ್ಲ ಪ್ರಿನ್ಸಿಪಾಲ್ ಮಾರಾಟ ಮಾಡಿ, ದುಡ್ಡು ಪಡೆದಿದ್ದಾರೆ. ನಾನು ಅದನ್ನು ವಿರೋಧಿಸಿದೆ. ಅಂದಿನಿಂದಲೂ ನನಗೆ ಒಂದಲ್ಲ ಒಂದು ಕಷ್ಟ ಕೊಡುತ್ತಿದ್ದಾರೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಭಾಷಣದಲ್ಲಿ ಮುಸ್ಲಿಮರಿಗೆ ಅವಹೇಳನ; ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್​ ಪೊಲೀಸ್ ಕಸ್ಟಡಿಗೆ

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್