AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಯಲ್ಲಿ ಬಡಿಗೆಯಿಂದ ಬಡಿದಾಡಿಕೊಂಡ ಪ್ರಿನ್ಸಿಪಾಲ್​ ಮತ್ತು ಪ್ಯೂನ್​; ಇವರಿಬ್ಬರ ಹೊಡೆದಾಟವನ್ನು ನಿಂತು ನೋಡಿದ ಶಿಕ್ಷಕರು !

ಘಟನೆ ನಡೆದ ಬಳಿಕ ಹಿಮಾಂಶು ಹೇಳಿದ್ದೇ ಬೇರೆ. ನಾನು ಪ್ರತಿದಿನ ಬೆಳಗ್ಗೆ ಆರು ಗಂಟೆಗೇ ಶಾಲೆಗೆ ಬರುತ್ತೇನೆ. ಆದರೆ ಪ್ರಿನ್ಸಿಪಾಲ್​ ಕರುಣಾಶಂಕರ್ ಅವರು ನನ್ನ ಮೇಲೆ ವೃಥಾ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಶಾಲೆಯಲ್ಲಿ ಬಡಿಗೆಯಿಂದ ಬಡಿದಾಡಿಕೊಂಡ ಪ್ರಿನ್ಸಿಪಾಲ್​ ಮತ್ತು ಪ್ಯೂನ್​; ಇವರಿಬ್ಬರ ಹೊಡೆದಾಟವನ್ನು ನಿಂತು ನೋಡಿದ ಶಿಕ್ಷಕರು !
ಹೊಡೆದಾಡಿಕೊಂಡ ಪ್ರಿನ್ಸಿಪಾಲ್​ ಮತ್ತು ಪ್ಯೂನ್​
TV9 Web
| Updated By: Lakshmi Hegde|

Updated on: May 01, 2022 | 12:24 PM

Share

ಜಾರ್ಖಂಡ್​​ನ ಪಲಮು ಜಿಲ್ಲೆಯಲ್ಲಿರುವ ಮೇದಿನಿ ನಗರದ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್​ ಮತ್ತು ಪ್ಯೂನ್ (ಮುಖ್ಯ ಶಿಕ್ಷಕ ಮತ್ತು ಶಾಲೆಯ ಜವಾನ) ಹೊಡೆದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಕೋಲಲ್ಲಿ ಹೊಡೆದುಕೊಂಡ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪ್ರಿನ್ಸಿಪಾಲ್​ ಮತ್ತು ಪ್ಯೂನ್​ ಪರಸ್ಪರ ಅಶ್ಲೀಲ ಶಬ್ದಗಳಲ್ಲಿ ಬೈದಾಡಿಕೊಳ್ಳುತ್ತ, ಕೋಲಿನಲ್ಲಿ ಹೊಡೆದುಕೊಳ್ಳುತ್ತಿದ್ದರೆ ಉಳಿದ ಶಿಕ್ಷಕರು, ಶಾಲಾ ಸಿಬ್ಬಂದಿ ಅದನ್ನು ನೋಡುತ್ತ ನಿಂತಿದ್ದಾರೆ. ಅಂದಹಾಗೇ ಈ ಗಲಾಟೆಯಲ್ಲಿ ಪ್ಯೂನ್​ ಕೈಯಿಗೆ ಗಾಯಿಯಾಗಿದೆ ಎನ್ನಲಾಗಿದೆ.

ಶಾಲೆಯ ಪ್ರಿನ್ಸಿಪಾಲ್​ ಹೆಸರು ಕರುಣಾಶಂಕರ್​ ತಿವಾರಿ ಮತ್ತು ಪ್ಯೂನ್​ ಹೆಸರು ಹಿಮಾಂಶು ತಿವಾರಿ. ಹಿಮಾಂಶು ತಿವಾರಿ ಸರಿಯಾದ ಸಮಯಕ್ಕೆ ಶಾಲೆಗೆ ಕೆಲಸಕ್ಕೆ ಬರುತ್ತಿರಲಿಲ್ಲ. ಹೀಗೆ ಕೆಲವು ದಿನಗಳ ಕಾಲ ತಡವಾಗಿಯೇ ಬರುತ್ತಿದ್ದ ಹಿಮಾಂಶು ಬಳಿ, ಪ್ರಿನ್ಸಿಪಾಲ್​ ಕರುಣಾಶಂಕರ್​ ಅವರು ಕಾರಣ ಕೇಳಿದ್ದಾರೆ. ಹೀಗೆ ನಿತ್ಯವೂ ಕೆಲಸಕ್ಕೆ ತಡವಾಗಿ ಬಂದರೆ ಹೇಗೆ? ಇಲ್ಲಿನ ಕೆಲಸ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.  ಈ ಪ್ರಶ್ನೆಗೆ ಸಮಾಧಾನವಾಗಿ ಉತ್ತರಿಸಿದ ಪ್ಯೂನ್​, ಒಮ್ಮೆಲೇ ಸಿಟ್ಟುಮಾಡಿಕೊಂಡು ಪ್ರಿನ್ಸಿಪಾಲ್​ಗೆ ಬೈದಿದ್ದಾರೆ ಎನ್ನಲಾಗಿದೆ.. ಅದಕ್ಕೆ ಪ್ರತಿಯಾಗಿ ಪ್ರಿನ್ಸಿಪಾಲ್​ ಕೂಡ ಬೈದಿದ್ದಾರೆ. ಇವರಿಬ್ಬರ ನಡುವೆ ತುಂಬ ಹೊತ್ತಿನವರೆಗೆ ವಾಗ್ವಾದ ನಡೆದು, ಅದು ನಂತರ ಹೊಡೆದಾಟಕ್ಕೆ ತಿರುಗಿದೆ.

ಆದರೆ ಘಟನೆ ನಡೆದ ಬಳಿಕ ಹಿಮಾಂಶು ಹೇಳಿದ್ದೇ ಬೇರೆ. ನಾನು ಪ್ರತಿದಿನ ಬೆಳಗ್ಗೆ ಆರು ಗಂಟೆಗೇ ಶಾಲೆಗೆ ಬರುತ್ತೇನೆ. ಆದರೆ ಪ್ರಿನ್ಸಿಪಾಲ್​ ಕರುಣಾಶಂಕರ್ ಅವರು ನನ್ನ ಮೇಲೆ ವೃಥಾ ಆರೋಪ ಮಾಡಿದ್ದಾರೆ. ಒಮ್ಮೆಲೇ ನನ್ನೆಡೆಗೆ ಕೋಲು ಎಸೆದರು. ನಾವು ಜವಾನರು ಎಂಬ ಒಂದೇ ಕಾರಣಕ್ಕೆ, ಅಗೌರವಯುತವಾಗಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಪ್ರಿನ್ಸಿಪಾಲ್​ ವಿರುದ್ಧ ಗಂಭೀರವಾದ ಆರೋಪವನ್ನೂ ಹಿಮಾಂಶು ಮಾಡಿದ್ದಾರೆ. ಈ ಶಾಲೆಯ ಹಾಸ್ಟೆಲ್​ ನಿರ್ಮಾಣಕ್ಕೆಂದು ತರಲಾದ ಇಟ್ಟಿಗೆ, ಕಬ್ಬಿಣ, ಮರದ ಸಾಮಗ್ರಿಗಳನ್ನೆಲ್ಲ ಪ್ರಿನ್ಸಿಪಾಲ್ ಮಾರಾಟ ಮಾಡಿ, ದುಡ್ಡು ಪಡೆದಿದ್ದಾರೆ. ನಾನು ಅದನ್ನು ವಿರೋಧಿಸಿದೆ. ಅಂದಿನಿಂದಲೂ ನನಗೆ ಒಂದಲ್ಲ ಒಂದು ಕಷ್ಟ ಕೊಡುತ್ತಿದ್ದಾರೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಭಾಷಣದಲ್ಲಿ ಮುಸ್ಲಿಮರಿಗೆ ಅವಹೇಳನ; ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್​ ಪೊಲೀಸ್ ಕಸ್ಟಡಿಗೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ