AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕಾ ಗಾಂಧಿ ವಾದ್ರಾ-ಜಯಂತ್​ ಚೌಧರಿ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ; ರಾಜಕೀಯ ವಲಯದಲ್ಲಿ ಭರ್ಜರಿ ಕುತೂಹಲ

ಜಯಂತ್​ ಚೌಧರಿ ಅವರ ವಿಮಾನ 5.30ರ ಹೊತ್ತಿಗೆ ಅಲ್ಲಿಂದ ಹೋಗುವುದಿತ್ತು. ಅವರು 4ಗಂಟೆಗೇ ಅಲ್ಲಿದ್ದರು. 5ಗಂಟೆ ಹೊತ್ತಿಗೆ ಪ್ರಿಯಾಂಕಾ ಗಾಂಧಿ ಏರ್​ಪೋರ್ಟ್​ಗೆ ಹೋದರು. ತಾವು ಹೋಗಲಿರುವ ಫ್ಲೈಟ್​ನಲ್ಲೇ ಬರುವಂತೆ ಜಯಂತ್​ ಚೌಧರಿಗೆ ಅವರು ಆಹ್ವಾನ ನೀಡಿದರು.

ಪ್ರಿಯಾಂಕಾ ಗಾಂಧಿ ವಾದ್ರಾ-ಜಯಂತ್​ ಚೌಧರಿ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ; ರಾಜಕೀಯ ವಲಯದಲ್ಲಿ ಭರ್ಜರಿ ಕುತೂಹಲ
ಜಯಂತ್ ಚೌಧರಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ
TV9 Web
| Updated By: Lakshmi Hegde|

Updated on: Nov 02, 2021 | 4:24 PM

Share

ಲಖನೌ: ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಲಖನೌದ ಏರ್​ಪೋರ್ಟ್​​ನಲ್ಲಿ ಆರ್​ಎಲ್​ಡಿ (ರಾಷ್ಟ್ರೀಯ ಲೋಕ ದಳ) ಮುಖ್ಯಸ್ಥ ಜಯಂತ್​ ಚೌಧರಿ ಅವರನ್ನು ಭೇಟಿಯಾದರು. ಅದಾದ ಬಳಿಕ ಇಬ್ಬರೂ ಛತ್ತೀಸ್​ಗಢ್​ ಸರ್ಕಾರದ ಚಾರ್ಟರ್ಡ್​ ವಿಮಾನದಲ್ಲಿ ದೆಹಲಿಗೆ ತೆರಳಿದರು. ಈ ಹೊಸ ಬೆಳವಣಿಗೆ ಈಗಾಗಲೇ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.  

ಭಾನುವಾರ ಗೋರಖ್​ಪುರದಲ್ಲಿ ನಡೆದಿದ್ದ ಪ್ರತಿಜ್ಞಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿಗೆ ಹೋಗಲೆಂದು ಲಖನೌ ಏರ್​ಪೋರ್ಟ್​ಗೆ ಹೋಗಿದ್ದರು. ಅದೇ ಹೊತ್ತಿಗೆ ಜಯಂತ್​ ಚೌಧರಿ ಕೂಡ ಅಲ್ಲಿಗೆ ಆಗಮಿಸಿದ್ದಾರೆ.  ರಾಷ್ಟ್ರೀಯ ಲೋಕ ದಳ (ಆರ್​ಎಲ್​ಡಿ) ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್​ ಯಾದವ್​ ಅವರ ಸಮಾಜವಾದಿ ಪಕ್ಷ (SP)ದ ಮೈತ್ರಿ ಪಕ್ಷ. ಇದೀಗ ಆರ್​ಎಲ್​ಡಿ ಮತ್ತು ಕಾಂಗ್ರೆಸ್​ ಭೇಟಿ ಕುತೂಹಲ ಮೂಡಿಸಿದೆ.  ಮುಂದಿನ ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧ ಎಸ್​ಪಿ ಪಕ್ಷವನ್ನು ಹೆದರಿಸುವ ತಂತ್ರಗಾರಿಕೆಯಾ ಎಂಬಂಥ ಪ್ರಶ್ನೆಗಳೂ ಎದ್ದಿವೆ. ಈ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಮತ್ತು ಜಯಂತ್​ ಚೌಧರಿ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್​ಎಲ್​ಡಿ ಹಿರಿಯ ನಾಯಕರೊಬ್ಬರು, ಇವರಿಬ್ಬರದ್ದೂ ಶಿಷ್ಟಾಚಾರದ ಭೇಟಿಯಷ್ಟೇ. ಮೊದಲೆಲ್ಲ ಹೀಗೆ ಪ್ರತಿಪಕ್ಷಗಳ ನಾಯಕರು ಭೇಟಿಯಾಗುವುದು, ಒಟ್ಟಿಗೆ ಪ್ರಯಾಣ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆ ಸಂಸ್ಕೃತಿ ಮಾಯವಾಗಿದೆ. ಪ್ರತಿಪಕ್ಷಗಳ ನಾಯಕರು ಪರಸ್ಪರ ಶತ್ರುಗಳಂತೆ ವರ್ತಿಸುವಂತಾಗಿದೆ ಎಂದು ಹೇಳಿದ್ದಾರೆ.

ಜಯಂತ್​ ಚೌಧರಿ ಅವರ ವಿಮಾನ 5.30ರ ಹೊತ್ತಿಗೆ ಅಲ್ಲಿಂದ ಹೋಗುವುದಿತ್ತು. ಅವರು 4ಗಂಟೆಗೇ ಅಲ್ಲಿದ್ದರು. 5ಗಂಟೆ ಹೊತ್ತಿಗೆ ಪ್ರಿಯಾಂಕಾ ಗಾಂಧಿ ಏರ್​ಪೋರ್ಟ್​ಗೆ ಹೋದರು. ತಾವು ಹೋಗಲಿರುವ ಫ್ಲೈಟ್​ನಲ್ಲೇ ಬರುವಂತೆ ಜಯಂತ್​ ಚೌಧರಿಗೆ ಅವರು ಆಹ್ವಾನ ನೀಡಿದರು. ಆದರೆ ಮೊದಲು ಜಯಂತ್​ ಚೌಧರಿ ಒಪ್ಪಲಿಲ್ಲ. ಆದರೆ ಬಳಿಕ ಅವರ ವಿಮಾನ ವಿಳಂಬವಾಯಿತು. ಹೀಗಾಗಿ ಪ್ರಿಯಾಂಗಾ ಗಾಂಧಿಯವರು ದೆಹಲಿಗೆ ಹೋಗಲಿದ್ದ ವಿಮಾನಕ್ಕೆ ಹೋಗಿದ್ದಾರೆ. ಜಯಂತ್​ ಚೌಧರಿ ಜತೆ ಇನ್ನಿಬ್ಬರು ಆರ್​ಎಲ್​ಡಿ ನಾಯಕರೂ ಇದ್ದರು ಎಂದೂ ತಿಳಿಸಿದ್ದಾರೆ.

ಮೈತ್ರಿ ಬದಲಾಗಲಿದೆಯಾ? ಇದಿಷ್ಟು ಆಗಿದ್ದೇ ತಡ ಈಗ ಆರ್​ಎಲ್​ಡಿ ಮೈತ್ರಿ ಬದಲಾಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ. ರಾಜಕೀಯವಲಯದಲ್ಲಿ ಇದೇ ಗುಸುಗುಸು ಪ್ರಾರಂಭವಾಗಿದೆ. 2017ರ ಚುನಾವಣೆಯಲ್ಲಿ ಎಸ್​ಪಿ ಮೈತ್ರಿಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್​ ಈ ಬಾರಿ ಆರ್​ಎಲ್​ಡಿ ಸೆಳೆಯುವ ತಂತ್ರ ನಡೆಸುತ್ತಿದೆಯಾ ಎಂಬ ಪ್ರಶ್ನೆಯೂ ಎದ್ದಿದೆ. ಈ ಬಗ್ಗೆ ಆರ್​ಎಲ್​ಡಿಯ ಉತ್ತರ ಪ್ರದೇಶ ಅಧ್ಯಕ್ಷ ಮಸೂದ್​ ಅಹ್ಮದ್​ರನ್ನು ಪಿಟಿಐ ಸುದ್ದಿಸಂಸ್ಥೆ ಸಂಪರ್ಕಿಸಿದಾಗ, ಆರ್​ಎಲ್​ಡಿಯ ಚುನಾವಣಾ ಮೈತ್ರಿ ಎಂದಿಗೂ ಎಸ್​ಪಿ ಪಕ್ಷದೊಟ್ಟಿಗೆ. ಈ ಬಗ್ಗೆ ನಿರ್ಣಯವೂ ಆಗಿದೆ. ಸೀಟು ಹಂಚಿಕೆ ಕಾರ್ಯ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಳು ಮತ್ತು ನಗು ಎರಡೂ ಭಾವನೆಗಳೇ, ಅಳುವುದು ತಪ್ಪಲ್ಲ ಮತ್ತು ಬಲಹೀನತೆಯೂ ಅಲ್ಲ: ಡಾ ಸೌಜನ್ಯ ವಶಿಷ್ಠ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?