‘ಧೂಮಪಾನ ಹಾನಿಕಾರಕ ಆದ್ರೆ ಸರ್ಕಾರದ ಬೊಕ್ಕಸಕ್ಕೆ.. ಲಾಭದಾಯಕ!’

| Updated By: ಸಾಧು ಶ್ರೀನಾಥ್​

Updated on: Aug 25, 2020 | 12:02 PM

ದೆಹಲಿ: ಧೂಮಪಾನ ಮತ್ತು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಅದರಿಂದ ಕ್ಯಾನ್ಸರ್​ನಂಥ ಮಾರಕ ಕಾಯಿಲೆ ಉಂಟಾಗಿ ಸಾವು ಸಹ ಸಂಭವಿಸಬಹುದು. ಹೀಗಂತ ಪ್ರತಿ ಬೀಡಿ, ಸಿಗರೇಟ್​ ಮತ್ತು ತಂಬಾಕು ಪ್ಯಾಕೆಟ್​ ಮೇಲೆ ಬರೆದಿರುತ್ತದೆ. ಆದರೆ, ನಮ್ಮ ತಂಬಾಕು ಪ್ರಿಯರು ಈ ಮಾತು ಕೇಳಬೇಕಲ್ವೇ? ಹಾಗಾಗಿ, ಪ್ರತಿ ಪ್ಯಾಕೆಟ್​ ಮೇಲೆ ನಮೂದಿಸಲಾದ ಈ ಸಂದೇಶ ಏನೂ ಪ್ರಯೋಜನಕ್ಕೆ ಬರುತ್ತಿಲ್ಲ ಅನ್ನೋದು ಹಲವರ ಅಭಿಪ್ರಾಯ. ಹೀಗಾಗಿ, ಸಾರ್ವಜನಿಕ ಆರೋಗ್ಯ ತಜ್ಞರು, ವೈದ್ಯರು ಮತ್ತು ಆರ್ಥಿಕ ತಜ್ಞರು ಸೇರಿ ಕೇಂದ್ರ ಸರ್ಕಾರಕ್ಕೆ […]

‘ಧೂಮಪಾನ ಹಾನಿಕಾರಕ ಆದ್ರೆ ಸರ್ಕಾರದ ಬೊಕ್ಕಸಕ್ಕೆ.. ಲಾಭದಾಯಕ!’
Follow us on

ದೆಹಲಿ: ಧೂಮಪಾನ ಮತ್ತು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಅದರಿಂದ ಕ್ಯಾನ್ಸರ್​ನಂಥ ಮಾರಕ ಕಾಯಿಲೆ ಉಂಟಾಗಿ ಸಾವು ಸಹ ಸಂಭವಿಸಬಹುದು. ಹೀಗಂತ ಪ್ರತಿ ಬೀಡಿ, ಸಿಗರೇಟ್​ ಮತ್ತು ತಂಬಾಕು ಪ್ಯಾಕೆಟ್​ ಮೇಲೆ ಬರೆದಿರುತ್ತದೆ.

ಆದರೆ, ನಮ್ಮ ತಂಬಾಕು ಪ್ರಿಯರು ಈ ಮಾತು ಕೇಳಬೇಕಲ್ವೇ? ಹಾಗಾಗಿ, ಪ್ರತಿ ಪ್ಯಾಕೆಟ್​ ಮೇಲೆ ನಮೂದಿಸಲಾದ ಈ ಸಂದೇಶ ಏನೂ ಪ್ರಯೋಜನಕ್ಕೆ ಬರುತ್ತಿಲ್ಲ ಅನ್ನೋದು ಹಲವರ ಅಭಿಪ್ರಾಯ. ಹೀಗಾಗಿ, ಸಾರ್ವಜನಿಕ ಆರೋಗ್ಯ ತಜ್ಞರು, ವೈದ್ಯರು ಮತ್ತು ಆರ್ಥಿಕ ತಜ್ಞರು ಸೇರಿ ಕೇಂದ್ರ ಸರ್ಕಾರಕ್ಕೆ ಒಂದು ವಿನೂತನ ಐಡಿಯಾ ನೀಡಲು ಮುಂದಾಗಿದ್ದಾರೆ.

ಸಿಗರೇಟ್​, ಬೀಡಿ ಮತ್ತು ತಂಬಾಕು ಮೇಲೆ ತೆರಿಗೆ ವಿಧಿಸುವ GST ಸಭೆಗೆ ಮನವಿ ಸಲ್ಲಿಸಿರುವ ಈ ತಜ್ಞರು ಈಗಾಗಲೇ ಈ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಪರಿಹಾರ ಸೆಸ್​ನ (compensation cess) ಮೊತ್ತವನ್ನು ಬೀಡಿಯ ಮೇಲೆ ಒಂದು ರೂಪಾಯಿಯಷ್ಟು ಹಾಗೂ ಸಿಗರೇಟ್​ ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲೆ ಇನ್ನೂ ಹೆಚ್ಚು ಪ್ರಮಾಣದಲ್ಲಿ ಏರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ

ಇದರಿಂದ, ಜನರು ಈ ಉತ್ಪನ್ನಗಳ ಖರೀದಿಗೆ ಹಿಂದೇಟು ಹಾಕುತ್ತಾರೆ ಹಾಗೂ ಯುವಕರು ತಂಬಾಕು ಉತ್ಪನ್ನಗಳ ಕಡೆ ಒಲವು ತೋರುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಬಟ್​, ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ ಪಕ್ಷ 50 ಸಾವಿರ ಕೋಟಿ ವರಮಾನವಂತೂ ತಂದು ಕೊಡುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.