ವೀಕ್​​ ಎಂಡ್​​ ಮಸ್ತಿ! ಪಂಚತಾರಾ ಹೋಟೆಲಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ: ರೆಡ್​ ಹ್ಯಾಂಡ್​​ ಆಗಿ ಸಿಕ್ಕಿಬಿದ್ದ ನಟಿ, ಮಾಡೆಲ್ ಅರೆಸ್ಟ್​

ವೇಶ್ಯಾವಾಟಿಕೆ ನಡೆಯುತ್ತಿರುವ ವಿಷಯ ದೃಢಪಡುತ್ತಿದ್ದಂತೆ ಅಪರಾಧ ವಿಭಾಗದ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿದರು. ಈ ವೇಳೆ ವೇಶ್ಯಾವಾಟಿಕೆ ದಂಧೆಗೆ ಸಹಕರಿಸುತ್ತಿದ್ದ ಮೂವರು ವಿಟಪುರುಷರನ್ನೂ ಸಹ ಬಂಧಿಸಲಾಗಿದೆ

ವೀಕ್​​ ಎಂಡ್​​ ಮಸ್ತಿ! ಪಂಚತಾರಾ ಹೋಟೆಲಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ: ರೆಡ್​ ಹ್ಯಾಂಡ್​​ ಆಗಿ ಸಿಕ್ಕಿಬಿದ್ದ ನಟಿ, ಮಾಡೆಲ್ ಅರೆಸ್ಟ್​
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​

Updated on: May 14, 2023 | 12:44 PM

ಮಹಾರಾಷ್ಟ್ರದ ಪಂಚತಾರಾ ಹೋಟೆಲ್‌ವೊಂದರಲ್ಲಿ (Hotel) ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಧೆಯನ್ನು ಪುಣೆ ಪೊಲೀಸರು (Pune Police) ಬೇಧಿಸಿದ್ದಾರೆ. ಅತ್ಯಂತ ಗುಪ್ತ್​​ ಗುಪ್ತ್​​ ಆಗಿ ನಡೆಸುತ್ತಿದ್ದ ವ್ಯವಹಾರವನ್ನು ವಕಾಡ್ ಪ್ರದೇಶದಲ್ಲಿ ಪತ್ತೆಹಚ್ಚಿದ್ದಾರೆ. ವೇಶ್ಯಾವಾಟಿಕೆ ಗ್ಯಾಂಗ್ ದಂಧೆ ನಡೆಸುತ್ತಿ ವೇಳೆ ಪೊಲೀಸರು ದಾಳಿ ನಡೆಸಿದಾಗ ಭೋಜ್‌ಪುರಿ ನಟಿಯೂ (Bhojpuri Actress) ಆ ವೇಶ್ಯಾವಾಟಿಕೆಯಲ್ಲಿ (Prostitution) ಭಾಗಿಯಾಗಿರುವುದು ಪತ್ತೆಯಾಗಿದೆ. ಜೊತೆಗೆ ಮತ್ತೊಬ್ಬ ಮಾಡೆಲ್ ಮತ್ತು ಏಜೆಂಟ್ ನನ್ನು ಬಂಧಿಸಲಾಗಿದೆ. ವಾರಂತ್ಯಕ್ಕೆ ಶುಕ್ರವಾರ ಸಂಜೆ ಪಂಚತಾರಾ ಹೋಟೆಲ್‌ನಲ್ಲಿ ಕೆಲವು ಅಸಾಮಾಜಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅದರಂತೆ ನಟಿ ಮತ್ತು ಮಾಡೆಲ್ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ ರೆಡ್​ ಹ್ಯಾಂಡ್​​ಆಗಿ ಸಿಕ್ಕಿಬಿದ್ದರು ಎಂದು ವಕಾಡ್ ಪೊಲೀಸ್ ಠಾಣೆಯ ತನಿಖಾಧಿಕಾರಿ ದೇವೆನ್ ಚವಾಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ದೇವೆನ್ ಚವಾಣ್ “ಮೊದಲು ನಾವು ಗುಪ್ತ್​​ ಗುಪ್ತ್​​ ಆಗಿ ಆನ್‌ಲೈನ್‌ನಲ್ಲಿ ಸಂಪರ್ಕಿಸಿ ಹೋಟೆಲ್ ರೂಮ್ ಅನ್ನು ಬುಕ್ ಮಾಡಿದೆವು. ನಂತರ ನಾವು ಪೊಲೀಸ್ ಇಲಾಖೆಯಿಂದ ಡಮ್ಮಿ ಗ್ರಾಹಕರನ್ನು ಹೋಟೆಲಿಗೆ ಕಳುಹಿಸಿದ್ದೆವು. ಡಮ್ಮಿ ಗ್ರಾಹಕರು ಹೋಟೆಲಿಗೆ ಪ್ರವೇಶಿಸಿದ ನಂತರ ಅವರು ತಮ್ಮ ಸೆಲ್ ಫೋನ್‌ಗಳಲ್ಲಿ ನಟಿ ಮತ್ತು ಮಾಡೆಲ್‌ನ ಫೋಟೋಗಳನ್ನು ತೆಗೆದುಕೊಂಡು ನಮಗೆ ಕಳುಹಿಸಿದರು.

Also Read:  ಅಪಘಾತವಾಗಿ 1 ಗಂಟೆ ಕಳೆದರೂ ಬಾರದ ಆಂಬುಲೆನ್ಸ್: ನಡುರಸ್ತೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ ಯುವಕ

ವೇಶ್ಯಾವಾಟಿಕೆ ನಡೆಯುತ್ತಿರುವ ವಿಷಯ ದೃಢಪಡುತ್ತಿದ್ದಂತೆ ಅಪರಾಧ ವಿಭಾಗದ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿದರು. ಈ ವೇಳೆ ವೇಶ್ಯಾವಾಟಿಕೆ ದಂಧೆಗೆ ಸಹಕರಿಸುತ್ತಿದ್ದ ಮೂವರು ವಿಟಪುರುಷರನ್ನೂ ಸಹ ಬಂಧಿಸಲಾಗಿದೆ ಎಂದು ಚವಾಣ್ ಹೇಳಿದ್ದಾರೆ. ಆರೋಪಿಗಳನ್ನು ಪ್ರಬೀರ್ ಪಿ ಮಜುಂದಾರ್, ದಿನೇಶ್ ಯಾದವ್ ಮತ್ತು ವಿರಾಜ್ ಯಾದವ್ ಎಂದು ಪೊಲೀಸರು ಗುರುತಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us