AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಬಚಾವ್​ ಆಗಲು ಬಂತು ‘ಚಿನ್ನ’ದಂಥ​ ಮಾಸ್ಕ್​, ಇದರ ಬೆಲೆ ಎಷ್ಟು ಗೊತ್ತಾ..?

ಪುಣೆ: ಕೊರೊನಾ ಸೋಂಕು ಎಗ್ಗಿಲ್ಲದೆ ಹರಡುತ್ತಲೇ ಇದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜನರಿಗೆ ಮಾಸ್ಕ್​ ಧರಿಸುವಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಡ್ಡಾಯ ಮಾಡಿದೆ. ಹಾಗಾಗಿ ಮಾರುಕಟ್ಟೆಗೆ ವಿಧವಿಧವಾದ ಡಿಸೈನರ್​ ಮಾಸ್ಕ್​ಗಳು ಲಗ್ಗೆ ಇಟ್ಟಿವೆ. ಆದ್ರೆ, ಮಹಾರಾಷ್ಟ್ರದ ಪುಣೆಯ ನಿವಾಸಿಯೊಬ್ಬರು ಸ್ವಲ್ಪ ಸ್ಟೈಲಿಶ್​ ಆಗಿರೋ ಮಾಸ್ಕ್​ ಧರಿಸೋಕೆ ಮುಂದಾಗಿದ್ದಾರೆ. ಹೌದು, ಪುಣೆಯ ಪಿಂಪ್ರಿ-ಚಿಂಚವಾಡದ ನಿವಾಸಿ ಶಂಕರ್​ ಕುರಾಡೆ ತಮಗಾಗಿ ಅಪ್ಪಟ ಚಿನ್ನದಿಂದ ತಯಾರಿಸಲಾದ ಮಾಸ್ಕ್​ ಒಂದನ್ನು ಖರೀದಿಸಿದ್ದಾರೆ. […]

ಕೊರೊನಾದಿಂದ ಬಚಾವ್​ ಆಗಲು ಬಂತು ‘ಚಿನ್ನ’ದಂಥ​ ಮಾಸ್ಕ್​, ಇದರ ಬೆಲೆ ಎಷ್ಟು ಗೊತ್ತಾ..?
KUSHAL V
|

Updated on: Jul 04, 2020 | 8:12 AM

Share

ಪುಣೆ: ಕೊರೊನಾ ಸೋಂಕು ಎಗ್ಗಿಲ್ಲದೆ ಹರಡುತ್ತಲೇ ಇದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜನರಿಗೆ ಮಾಸ್ಕ್​ ಧರಿಸುವಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಡ್ಡಾಯ ಮಾಡಿದೆ. ಹಾಗಾಗಿ ಮಾರುಕಟ್ಟೆಗೆ ವಿಧವಿಧವಾದ ಡಿಸೈನರ್​ ಮಾಸ್ಕ್​ಗಳು ಲಗ್ಗೆ ಇಟ್ಟಿವೆ.

ಆದ್ರೆ, ಮಹಾರಾಷ್ಟ್ರದ ಪುಣೆಯ ನಿವಾಸಿಯೊಬ್ಬರು ಸ್ವಲ್ಪ ಸ್ಟೈಲಿಶ್​ ಆಗಿರೋ ಮಾಸ್ಕ್​ ಧರಿಸೋಕೆ ಮುಂದಾಗಿದ್ದಾರೆ. ಹೌದು, ಪುಣೆಯ ಪಿಂಪ್ರಿ-ಚಿಂಚವಾಡದ ನಿವಾಸಿ ಶಂಕರ್​ ಕುರಾಡೆ ತಮಗಾಗಿ ಅಪ್ಪಟ ಚಿನ್ನದಿಂದ ತಯಾರಿಸಲಾದ ಮಾಸ್ಕ್​ ಒಂದನ್ನು ಖರೀದಿಸಿದ್ದಾರೆ. ಇದರ ವಿನ್ಯಾಸ ಎಷ್ಟು ಅದ್ಭುತವಾಗಿದೆ ಎಂದರೆ ಇದನ್ನು ಬಂಗಾರದಿಂದ ಮಾಡಿದ್ರೂ ಮಾಸ್ಕ್​ನಲ್ಲಿ ಪುಟ್ಟ ಪುಟ್ಟ ರಂಧ್ರಗಳಿದೆ. ಹಾಗಾಗಿ ಉಸಿರಾಟಕ್ಕೆ ಯಾವುದೇ ತೊಂದರೆಯಾಗೋದಿಲ್ಲ ಅಂತಾ ಶಂಕರ್​ ಹೇಳಿಕೊಂಡಿದ್ದಾರೆ.

ಅಂದ ಹಾಗೆ, ಈ ಮಾಸ್ಕ್​ನ ಬೆಲೆ ಎಷ್ಟು ಗೊತ್ತಾ..? ಬರೋಬ್ಬರಿ 2.89 ಲಕ್ಷ. ಆದರೆ, ಶಂಕರ್​ಗೆ ಇದು ಹೆಚ್ಚು ಹೊರೆಯಾಗಿಲ್ಲವಂತೆ. ಬಂಗಾರಕ್ಕಿಂತ ಹೆಚ್ಚು ಬೆಲೆ ಬಾಳುವ ಜೀವದ ಎದುರು ಈ ಮಾಸ್ಕ್​ ದುಬಾರಿಯೇ? ಆದರೆ, ಇದು ನಿಜಕ್ಕೂ ರೋಗಾಣುವನ್ನು ತಡೆಯಲು ಎಷ್ಟರ ಮಟ್ಟಿಗೆ ಸಮರ್ಥವಾಗಿ ಕೆಲಸಮಾಡುತ್ತೆ ಅನ್ನೋದು ಎಲ್ಲರ ಸಂಶಯ.

Follow Us
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ