Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಹಾಲಿ ರಾಕೆಟ್ ದಾಳಿ: 5 ಪ್ರಮುಖ ಸಂಚುಕೋರರನ್ನು ಬಂಧಿಸಿದ ಪಂಜಾಬ್ ಪೊಲೀಸ್

ರಿಂಡಾ ಬಬ್ಬರ್, ಖಾಲ್ಸಾ ಮುಖ್ಯಸ್ಥ ವಾಧವಾ ಸಿಂಗ್ ಮತ್ತು ಐಎಸ್‌ಐ ಜೊತೆ ಸಮನ್ವಯ ಸಾಧಿಸಿದ್ದು, ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ಉನ್ನತ ಪೊಲೀಸ್ ತಿಳಿಸಿದ್ದಾರೆ.

ಮೊಹಾಲಿ ರಾಕೆಟ್ ದಾಳಿ: 5 ಪ್ರಮುಖ ಸಂಚುಕೋರರನ್ನು ಬಂಧಿಸಿದ ಪಂಜಾಬ್ ಪೊಲೀಸ್
ಪಂಜಾಬ್ ಪೊಲೀಸ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 13, 2022 | 9:14 PM

ದೆಹಲಿ: ನಾಲ್ಕು ದಿನಗಳ ಹಿಂದೆ ಮೊಹಾಲಿ (Mohali) ಕಚೇರಿಯ ಮೇಲೆ ನಡೆದ ರಾಕೆಟ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪಂಜಾಬ್ ಪೊಲೀಸರು (Punjab Police )ಶುಕ್ರವಾರ ಬಂಧಿಸಿದ್ದಾರೆ. ಪ್ರಮುಖ ಸಂಚುಕೋರ ಉಗ್ರಗಾಮಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಮತ್ತು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI)ಗೆ ನಿಕಟವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪ್ರಮುಖ ಸಂಚುಕೋರ ಲಖ್ಬೀರ್ ಸಿಂಗ್ ಲಾಂಡಾ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ವಿ.ಕೆ. ಭಾವ್ರಾ ಹೇಳಿದ್ದಾರೆ. 2017ರಲ್ಲಿ ತರನ್ ತಾರನ್​​ನ ದರೋಡೆಕೋರ ಕೆನಡಾಕ್ಕೆ ಸ್ಥಳಾಂತರಗೊಂಡಿದ್ದಾನೆ ಎಂದು ಅವರು ಹೇಳಿದರು. ಲಾಂಡಾ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ಅವರ ನಿಕಟ ಸಹಚರ ಎಂದು ಭಾವ್ರಾ ಹೇಳಿದ್ದಾರೆ. ರಿಂಡಾ ಬಬ್ಬರ್, ಖಾಲ್ಸಾ ಮುಖ್ಯಸ್ಥ ವಾಧವಾ ಸಿಂಗ್ ಮತ್ತು ಐಎಸ್‌ಐ ಜೊತೆ ಸಮನ್ವಯ ಸಾಧಿಸಿದ್ದು, ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ಉನ್ನತ ಪೊಲೀಸ್ ತಿಳಿಸಿದ್ದಾರೆ. ವಾಧವಾ ಸಿಂಗ್ ಕೂಡಾ ಪಾಕಿಸ್ತಾನದಲ್ಲಿ ಇದ್ದಾನೆ. ರಾಕೆಟ್ ಚಾಲಿತ ಗ್ರೆನೇಡ್ ಅನ್ನು ಲಾಂಡಾನ ಸಹವರ್ತಿ ನಿಶಾನ್ ಸಿಂಗ್ ಪಡೆದುಕೊಂಡು ದಾಳಿಕೋರರಿಗೆ ನೀಡಿದ್ದಾನೆ ಎಂದಿದ್ದಾರೆ ಪೊಲೀಸರು. ಸೋಮವಾರ ರಾತ್ರಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್‌ನ ಇಂಟೆಲಿಜೆನ್ಸ್ ವಿಂಗ್ ಪ್ರಧಾನ ಕಛೇರಿಯ ಮೇಲೆ ಗ್ರೆನೇಡ್ ಎಸೆದಿದ್ದು, ಒಂದು ಮಹಡಿಯಲ್ಲಿ ಕಿಟಕಿ ಗಾಜುಗಳು ಒಡೆದು ಹೋಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಇಬ್ಬರು ಕಾರಿನೊಳಗಿಂದ ದಾಳಿ ನಡೆಸಿದ್ದಾರೆ. ಗ್ರೆನೇಡ್ ಚಾವಣಿಗೆ ಬಡಿದು ಕುರ್ಚಿಯ ಮೇಲೆ ಬಿದ್ದಿತು.

ಜಗದೀಪ್ ಕಾಂಗ್ ಎಂಬ ಹೆಸರಿನ ಸ್ಥಳೀಯ ಸಂಪರ್ಕವನ್ನು ಸಿದ್ಧಪಡಿಸುವವ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದೆ ಎಂದು ಭಾವ್ರಾ ಹೇಳಿದರು. “ಜಗ್ದೀಪ್ ಕಾಂಗ್, ವೇವ್ ಎಸ್ಟೇಟ್ಸ್ ನಿವಾಸಿ, ಅವರ ಸ್ಥಳೀಯ ಸಂಪರ್ಕ. ಅವರು ಸ್ಥಳೀಯ ವ್ಯವಸ್ಥಾಪನಾ ಬೆಂಬಲವನ್ನು ಒದಗಿಸಿದವರು ಮತ್ತು ದಾಳಿಯ ಮೊದಲು ಮೇ 9 ರಂದು ಮಧ್ಯಾಹ್ನ ಗುಪ್ತಚರ ಪ್ರಧಾನ ಕಛೇರಿಯನ್ನು ನಡೆಸಲು ಸಹಾಯ ಮಾಡಿದರು, ”ಎಂದು ಭಾವ್ರಾ ಹೇಳಿದರು.

ತರನ್ ತಾರನ್​​ನ ಮೂವರು ನಿವಾಸಿಗಳು ಬಲ್ಜಿಂದರ್ ಸಿಂಗ್ ರಾಂಬೋ, ಬಲ್ಜಿತ್ ಕೌರ್ ಮತ್ತು ಕನ್ವರ್ ಬಾತ್  ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್‌ಪಿಜಿ ದಾಳಿ ನಡೆಸಿದ ಚರಣ್ ಸಿಂಗ್ ಮತ್ತು ಇತರ ಇಬ್ಬರು ಸಹಚರರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ ಪೊಲೀಸರು ಬಲ್ಜಿಂದರ್ ರಾಂಬೋ, ಬಲ್ಜಿತ್ ಕೌರ್, ಕನ್ವರ್ ಬಾತ್, ಜಗದೀಪ್ ಕಾಂಗ್ ಮತ್ತು ಆನಂದ್ ದೀಪ್ ಸಿಂಗ್ ಸೇರಿದಂತೆ ಐದು ಜನರನ್ನು ಬಂಧಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 9:10 pm, Fri, 13 May 22

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!