AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೈತ ನಾಯಕ’ ರಾಕೇಶ್ ಟಿಕಾಯತ್ ಹಾಗೂ ನರೇಶ್ ಟಿಕಾಯಿತ್ ಹೊರ ಹಾಕಿದ ಭಾರತೀಯ ಕಿಸಾನ್ ಯೂನಿಯನ್

ಕೃಷಿ ಕಾಯ್ದೆ ವಿರೋಧಿ ಹೋರಾಟದ ಮುಂದಾಳತ್ವ ವಹಿಸಿದ್ದ ಬಿಕೆಯು 'ರೈತ ನಾಯಕ' ರಾಕೇಶ್ ಟಿಕಾಯತ್ ಹಾಗೂ ಅವರ ಸಹೋದರ ನರೇಶ್ ಟಿಕಾಯಿತ್ ಉಚ್ಛಾಟನೆಗೊಂಡಿದ್ದಾರೆ. ಟಿಕಾಯತ್ ಸಹೋದರರು ರಾಜಕೀಯ ಮಾಡುತ್ತಿದ್ದಾರೆ ಮತ್ತು ರಾಜಕೀಯ ಪಕ್ಷದ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

'ರೈತ ನಾಯಕ' ರಾಕೇಶ್ ಟಿಕಾಯತ್ ಹಾಗೂ ನರೇಶ್ ಟಿಕಾಯಿತ್ ಹೊರ ಹಾಕಿದ ಭಾರತೀಯ ಕಿಸಾನ್ ಯೂನಿಯನ್
ರಾಕೇಶ್ ಟಿಕಾಯತ್
TV9 Web
| Updated By: ಆಯೇಷಾ ಬಾನು|

Updated on:May 15, 2022 | 8:10 PM

Share

ದೆಹಲಿ: ಭಾರತೀಯ ಕಿಸಾನ್ ಯೂನಿಯನ್ (BKU) ‘ರೈತ ನಾಯಕ’ ರಾಕೇಶ್ ಟಿಕಾಯತ್(Rakesh Tikait) ಅವರನ್ನು ಸಂಘಟನೆಯಿಂದ ಹೊರಹಾಕಿದೆ. 2020ರಲ್ಲಿ ದೇಶಾದ್ಯಂತ ನಡೆದ ಕೃಷಿ ಕಾಯ್ದೆ ವಿರೋಧಿ ಹೋರಾಟದ ಮುಂದಾಳತ್ವ ವಹಿಸಿದ್ದ ಬಿಕೆಯು ‘ರೈತ ನಾಯಕ’ ರಾಕೇಶ್ ಟಿಕಾಯತ್ ಸಹೋದರರನ್ನು ಹೊರಹಾಕಿದೆ. ರಾಕೇಶ್ ಟಿಕಾಯತ್ ಹಾಗೂ ಅವರ ಸಹೋದರ ನರೇಶ್ ಟಿಕಾಯಿತ್ ಕೂಡ ಬಿಕೆಯು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡಿದ್ದಾರೆ. ಟಿಕಾಯತ್ ಸಹೋದರರು ರಾಜಕೀಯ ಮಾಡುತ್ತಿದ್ದಾರೆ ಮತ್ತು ರಾಜಕೀಯ ಪಕ್ಷದ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಇನ್ನು ಸುಮಾರು ಒಂದು ವರ್ಷಗಳ ಕಾಲ ಮೂರು ರೈತ ಕಾನೂನುಗಳ ವಿರುದ್ಧ ಹೋರಾಡುವ ಜವಾಬ್ದಾರಿಯನ್ನು ಹೊತ್ತಿದ್ದ ಬಿಕೆಯು ರೈತ ಸಂಘಟನೆಯನ್ನು ಎರಡು ಬಣಗಳಾಗಿ ವಿಂಗಡಿಸಲಾಗಿದೆ. ನರೇಶ್ ಟಿಕಾಯತ್ರನ್ನು ಬದಲಿಸಿದ್ದು ಬಿಕೆಯು ಹೊಸ ಮುಖ್ಯಸ್ಥರಾಗಿ ರೈತ ನಾಯಕ ರಾಜೇಶ್ ಸಿಂಗ್ ಚೌಹಾಣ್ ಅವರನ್ನು ನೇಮಿಸಲಾಗಿದೆ. ಇನ್ನು ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಚೌಹಾಣ್, ರೈತರ ಹಿತಾಸಕ್ತಿಗಳನ್ನು ಪೂರೈಸಲು ರಚಿಸಲಾದ ಬಿಕೆಯು ಅನ್ನು ಟಿಕಾಯತ್ ಸಹೋದರರು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರೈತರ ಹಿತಾಸಕ್ತಿಗಳನ್ನು ಕಾಪಾಡಲು ನಿರ್ಮಿಸಲಾದ ಏಕೀಕೃತ ಭಾರತೀಯ ಕಿಸಾನ್ ಯೂನಿಯನ್ ರಚಿಸಲು ಸಾಕಷ್ಟು ಶ್ರಮ ವಹಿಸಲಾಗಿದೆ. ಹಾಗಿದ್ದರೂ, ಟಿಕಾಯತ್ಸ್ ಅಡಿಯಲ್ಲಿ ಸಂಘಟನೆಯು ‘ರಾಜಕೀಯ ವಲಯ’ವಾಗಿ ಬದಲಾಗುತ್ತಿತ್ತು. ರೈತ ಸಂಘಟನೆಯು ಯಾವುದೇ ‘ರಾಜಕೀಯ ಪಕ್ಷ’ಕ್ಕೆ ಕೆಲಸ ಮಾಡುವುದಿಲ್ಲ. ಭಾರತೀಯ ಕಿಸಾನ್ ಯೂನಿಯನ್ (ಅಪಾಲಿಟಿಕಲ್) ಎಂಬ ಹೊಸ ಬಣವನ್ನು ರಚಿಸುತ್ತೇವೆ ಎಂದು ರಾಜೇಶ್ ಸಿಂಗ್ ಚೌಹಾಣ್ ಹೊಸ ಬಣದ ಬಗ್ಗೆ ಘೋಷಿಸಿದ್ದಾರೆ.

ದೇಶದ ಇತರೆ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಇಂದು ನಮ್ಮ ಸಂಘಟನೆಯು ಸಭೆಯನ್ನು ನಡೆಸಿತು. ನಮ್ಮ ಹೊಸ ಸಂಘಟನೆಯ ಹೆಸರು ಭಾರತೀಯ ಕಿಸಾನ್ ಯೂನಿಯನ್ (ಅಪಾಲಿಟಿಕಲ್) ಆಗಿರುತ್ತದೆ. ರಾಕೇಶ್ ಟಿಕಾಯತ್ ಅಥವಾ ನರೇಶ್ ಟಿಕಾಯತ್ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೆ ಇಲ್ಲ, ಅವರು ಏನು ಮಾಡಬೇಕೆಂದು ಬಯಸುತ್ತಾರೋ ಅದನ್ನು ಮಾಡುತ್ತಲೇ ಇರುತ್ತಾರೆ. ಇದರಿಂದಾಗಿ ಬಿಕೆಯು ರಾಜಕೀಯ ವಲಯವಾಗಿ ಮಾರ್ಪಟ್ಟಿತು. ರಾಜಕೀಯ ಪ್ರೇರಿತ ನಿರ್ಧಾರಗಳು ಬರಲು ಆರಂಭಿಸಿದವು. ನಾವು ರಾಕೇಶ್ ಟಿಕಾಯತ್ ಅವರೊಂದಿಗೆ ಮಾತನಾಡಿ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ನಾವು ಬಿಕೆಯು ಅನ್ನು ರಚಿಸಲು ಸಾಕಷ್ಟು ಶ್ರಮಿಸಿದ್ದೇವೆ, ಆದರೆ ಅವರು ಒಂದು ಪಕ್ಷವನ್ನು ಬೆಂಬಲಿಸುವಂತೆ ಕೇಳಿದರು. ಅದಕ್ಕೆ ನಾವು ಆಕ್ಷೇಪಿಸುತ್ತೇವೆ. ನಮ್ಮ ಉದ್ದೇಶವು ರೈತರ ಸಮಸ್ಯೆಗಳನ್ನು ಪರಿಶೀಲಿಸುವುದು. ನಾವು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ.

ಮೂರು ಫಾರ್ಮ್ ಕಾನೂನುಗಳನ್ನು ರದ್ದುಗೊಳಿಸುವುದರೊಂದಿಗೆ ರೈತರ ಮುಕ್ತಾಯಗೊಂಡ ನಂತರ, ರಾಕೇಶ್ ಟಿಕಾಯತ್ ರಾಜಕೀಯ ಪಕ್ಷಗಳ ಪ್ರಚಾರದೊಂದಿಗೆ ಗುರುತಿಸಿಕೊಂಡಿದ್ದರು. ರೈತರ ಸಂಘಟನೆಯ ವಕ್ತಾರರಾಗಿ, ಟಿಕಾಯತ್ ಅವರ ರಾಜಕೀಯ ಸಂಬಂಧಗಳು ಅಚ್ಚರಿ ಮೂಡಿಸಿದ್ದವು ಎಂದು ಚೌಹಾಣ್ ತಿಳಿಸಿದರು.

Published On - 8:10 pm, Sun, 15 May 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?